6 Oct 2016

ಕಬರ್ ಎತ್ತರಿಸಿ ಕಟ್ಟುವುದು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.

ಕಬರ್ ಎತ್ತರಿಸಿ ಕಟ್ಟುವುದು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.

حَدَّثَنَا يَحْيَى بْنُ يَحْيَى، وَأَبُو بَكْرِ بْنُ أَبِي شَيْبَةَ وَزُهَيْرُ بْنُ حَرْبٍ قَالَ يَحْيَى أَخْبَرَنَا وَقَالَ الآخَرَانِ، حَدَّثَنَا وَكِيعٌ، عَنْ سُفْيَانَ، عَنْ حَبِيبِ بْنِ أَبِي ثَابِتٍ، عَنْ أَبِي وَائِلٍ، عَنْ أَبِي، الْهَيَّاجِ الأَسَدِيِّ قَالَ قَالَ لِي عَلِيُّ بْنُ أَبِي طَالِبٍ أَلاَّ أَبْعَثُكَ عَلَى مَا بَعَثَنِي عَلَيْهِ رَسُولُ اللَّهِ صلى الله عليه وسلم أَنْ لاَ تَدَعَ تِمْثَالاً إِلاَّ طَمَسْتَهُ وَلاَ قَبْرًا مُشْرِفًا إِلاَّ سَوَّيْتَهُ ‏.‏ وَحَدَّثَنِيهِ أَبُو بَكْرِ بْنُ خَلاَّدٍ الْبَاهِلِيُّ، حَدَّثَنَا يَحْيَى، - وَهُوَ الْقَطَّانُ - حَدَّثَنَا سُفْيَانُ، حَدَّثَنِي حَبِيبٌ، بِهَذَا الإِسْنَادِ وَقَالَ وَلاَ صُورَةً إِلاَّ طَمَسْتَهَا ‏.‏

ಅಬು ಹಯ್ಯಾಜ್ (ರ)ರಿಂದ ವರದಿ :
ಅಲೀ (ರ) ನನ್ನಲ್ಲಿ ಹೇಳಿದರು: "ಪ್ರವಾದಿ ﷺ ರು ನನ್ನಲ್ಲಿ ನಿಯೋಗಿಸಿದ ಅದೇ ಕಾರ್ಯವನ್ನು ನಾನು ನಿಮಗೆ ನಿಯೋಗಿಸಲೇ? ಒಂದು ಚಿತ್ರವನ್ನೂ ನಾಶಗೊಳಿಸದೆ ಬಿಡಬಾರದು, ಎತ್ತರಿಸಿ ಕಟ್ಟಿರುವ ಒಂದು ಕಬರನ್ನೂ ನಾಶಗೊಳಿಸದೆ ಬಿಡಬಾರದು.

Reference : Sahih Muslim 969 a, 969 b
In-book reference : Book 11, Hadith 120

--------------------------------------

ಆದರೆ ಕಬರನ್ನು ಎತ್ತರಿಸಕೂಡದು ಎಂಬ ಪ್ರವಾದಿ ವಚನಗಳು ಕಾಫಿರರುಗಳ(ಅವಿಸ್ವಾಸಿಗಳ) ಕಬರ್'ನ ಕುರಿತಾಗಿದೆ ಎಂದು ಕೆಲವರು ದುರ್ವ್ಯಾಖ್ಯಾನಿಸುತ್ತಾರೆ. ಆದರೆ ಮುಸ್ಲಿಮರ ಗೋರಿಯಾದರೂ ಹೊಡೆದುರುಳಿಸಬೇಕೆಂಬ ನಿಯಮದಿಂದ ಹೊರಗಿಲ್ಲ ಎಂದು ಹದೀಸ್'ಗಳನ್ನು ಕೂಲಂಕುಷವಾಗಿ ಪರೀಕ್ಷಿಸಿದರೆ ಕಾಣಲು ಸಾಧ್ಯ. ಪೂರ್ವಿಕರು ತಿಳಿದ ರೀತಿಯೂ ಅದುವೇ. ಈ ಹದೀಸ್ ಗಮನವಿಟ್ಟು ಓದಿ:

عَنْ عَلِيًّ لِأَبِي الْحَيَّاجِ : أَبْعَثُكَ عَلَى مَا بَعَثَنِي عَلَيْهِ رَسُولُ اللَّهِ صَلَّى اللَّهُ عَلَيْهِ وَ سَلَّمَ لاَ تَدَعَ قَبْرًا مُشْرِفًا إِلَّا سَوَّيْتَهُ يَعْنِي قُبُورَ الْمُسْلِمِينَ وَلَا تِمْثَالًا فِي بَيْتٍ إِلَّا طَمَسْتَهُ (المصنف لعبد الرزاق رقم 6487)

ಅಬುಲ್ ಹಯ್ಯಾಝ್(ರ) ರವರಿಂದ ವರದಿ: ಅಲೀ(ರ) ರವರು ನನ್ನಲ್ಲಿ ಹೇಳಿದರು: "ಪ್ರವಾದಿ(ಸ.ಅ) ರವರು ನನ್ನನ್ನು ನಿಯೋಗಿಸಿದ ಅದೇ ಕಾರ್ಯದೆಡೆಗೆ ನಿನ್ನನ್ನು ನಿಯೋಗಿಸಲೇ? ಎತ್ತರಿಸಲ್ಪಟ್ಟ ಯಾವ ಕಬರನ್ನೂ ಕೆಡವದೆ ಬಿಡಬಾರದು. ಅಂದರೆ ಮುಸ್ಲಿಮರ ಕಬರ್ ಗಳನ್ನು. ಮನೆಯೊಳಗಿರುವ ಯಾವ ವಿಗ್ರಹವನ್ನೂ ನಾಶಗೊಳಿಸದೆ ಬಿಡಬಾರದು."
(ಮುಸನ್ನಫ್ ಅಬ್ದುರ್ರಝ್ಝಾಕ್ - 6487)



ಇಲ್ಲಿ ಮುಸ್ಲಿಮರ ಕಬರ್ ಎಂದು ಪ್ರತ್ಯೇಕವಾಗಿ ಹೇಳಲಾಗಿದೆ. ಹಾಗೆಯೇ ಎತ್ತರಿಸಲ್ಪಟ್ಟ ಕಬರನ್ನು ಕೆಡವಿ ಸಮತಟ್ಟುಗೊಳಿಸಲು ಉಸ್ಮಾನ್(ರ) ರವರು ಆಜ್ಞಾಪಿಸಿರುವುದು ಮತ್ತು ಕಾರ್ಯ ರೂಪಕ್ಕೆ ತಂದಿರುವುದನ್ನು ಮುಸನ್ನಫ್ ಅಬ್ದುರ್ರಝ್ಝಾಕ್, ಹದೀಸ್ - 6489 ರಲ್ಲಿ ಮತ್ತು ಫುದಾಲತ್ (ರ) ರವರು ಕಾರ್ಯರೂಪಕ್ಕೆ ತಂದಿರುವುದನ್ನು ಸಹೀಹ್ ಮುಸ್ಲಿಮ್ ಹದಿಸ್ - 968 ರಲ್ಲಿಯೂ ಕಾಣಬಹುದು.

ಎತ್ತರಿಸಲ್ಪಟ್ಟ ಗೊರಿಗಳನ್ನೆಲ್ಲವನ್ನೂ ನೆಲಸಮಗೊಳಿಸಬೇಕು ಎಂಬ ಪ್ರವಾದಿ(ಸ) ರವರ ವಚನ ವನ್ನು ವ್ಯಾಖ್ಯಾನಿಸುತ್ತಾ ಇಮಾಮ್ ಶೌಕಾನಿ(ರ) ಬರೆಯುತ್ತಾರೆ:

"ಗೋರಿಯನ್ನು ಹೆಚ್ಚು ಎತ್ತರವಾಗಿ ಎತ್ತರಿಸಿ  ಕಟ್ಟಬಾರದು ಎಂಬುವುದಾಗಿದೆ ಸುನ್ನತ್ ‌.ಇದರಲ್ಲಿ ಮಹಾತ್ಮ ರು ಅಥವಾ ಸಾದಾರಣ ಜನರು ಎಂಬ ವ್ಯತ್ಯಾಸವಿಲ್ಲ...."
( ನೈಲುಲ್ ಔತಾರ್ 4/95)

ಮಾತ್ರವಲ್ಲ, ಪ್ರವಾದಿ(ಸ.ಅ) ರವರ ಕಬರ್ ಭೂಮಿಯಿಂದ ಒಂದು ಗೇಣಿನಷ್ಟು ಮಾತ್ರ ಎತ್ತರಿಸಿರುವುದು ಎಂದು ಹದಿಸ್'ಗಳಲ್ಲಿ ಪ್ರತ್ಯೇಕವಾಗಿ ಹೇಳಲಾಗಿದೆ.

عَنْ جَابِرٍ قَالَ : وَرُفِعَ قَبْرُهُ مِنَ الْأَرْضِ نَحْوًا مِنْ شِبْرٍ (ابن حبان رقم : 2160, 6635)

ಜಾಬಿರ್(ರ) ರವರಿಂದ ವರದಿ: "ಪ್ರವಾದಿ(ಸ.ಅ) ರವರ ಕಬರ್ ಭೂಮಿಯಿಂದ ಸರಿಸುಮಾರು ಒಂದು ಗೇಣಿನಷ್ಟು ಎತ್ತರಿಸಲ್ಪಟ್ಟಿದೆ."
(ಇಬ್ನ್ ಹಿಬ್ಬಾನ್ ಹದೀಸ್ - 2160,6635)

ಇನ್ನು ನಮ್ಮ ಊರಿನಲ್ಲಿ ಅತೀ ಹೆಚ್ಚು ಜನರು ಅನುಸರಿಸುತ್ತಿದ್ದೇವೆ ಅನ್ನುವ ಶಾಫಿಈ ಮದ್'ಹಬ್ ಕೂಡ ಕಬರ್ ಎತ್ತರಿಸಿ ಕಟ್ಟುವುದನ್ನು ಪ್ರಬಲವಾಗಿ ವಿರೋಧಿಸುತ್ತದೆ. ಇಮಾಮ್ ಶಾಫಿಈ(ರ) ರವರು ಹೇಳಿದ್ದು ಈ ಪ್ರಕಾರವಾಗಿದೆ:

وَإِنَّمَا أُحِبُّ أَنْ يُشَخَّصَ عَلَى وَجْهِ الأَرْضِ شِبْرًا أَوْ نَحْوَهُ وَأُحِبُّ أَنْ لَا يُبْنَيى وَلَا يُجَصَّصَ فَإِنَّ ذَلِكَ يُشْبِهُ الزَّينَةَ وَالْخُيَلَاعَ وَلَيْسَ الْمَوْتُ مَوْضِعَ وَاحِدٍ مِنْهُمَا وَلَمْ أَرَ قُبُورَ الْمُهَاجِرينَ وَالْأَنْصَارِ مُجَصَّصَةً....(قَالَ الْشَّافِعِيُّ) وَقَدْ رَأَيْتُ مِنَ الْوُلَاةِ مَنْ يَهْدِمُ بِمَكَّةَ مَايُبْنَي فِيهَا فَلَمْ أَرَ الْفُقَهَاءَ يَعِيبُونَ ذَلِكَ

"ಕಬರನ್ನು ಭೂಮಿಯಿಂದ ಒಂದು ಗೇಣು ಅಥವಾ ಅದಕ್ಕೆ ಸಮಾನವಾಗಿ ಎತ್ತರಿಸುವುದನ್ನು ಮಾತ್ರ ನಾನು(ಇಮಾಮ್ ಶಾಫಿಈ) ಇಷ್ಟಪಡುತ್ತೇನೆ. ಕಬರಿನ ಮೇಲೆ ಏನಾನನ್ನಾದರೂ ಕಟ್ಟಿ ಎತ್ತರಿಸುವುದನ್ನು ಕಟ್ಟಿ ಎತ್ತರಿಸದಿರುವುದನ್ನು ಮತ್ತು ಗಾರೆ ಹಚ್ಚದಿರುವುದನ್ನು ನಾನು ಇಷ್ಟಪಡುತ್ತೇನೆ. ಯಾಕೆಂದರೆ ಅದು ಅಲಂಕಾರ ಮತ್ತು ಅಹಂಭಾವವನ್ನು ಹೋಲುತ್ತದೆ. ಆದರೆ ಮರಣವು ಅಲಂಕಾರ ಮತ್ತು ಅಹಂಭಾವದ ಸ್ಥಳವಲ್ಲ. ಮುಹಾಜಿರ್ ಮತ್ತು ಅನ್ಸಾರ್'ಗಳಾದ ಸಹಾಬಿಗಳ ಕಬರ್'ಗಳಿಗೆ ಗಾರೆ ಹಚ್ಚಿರುವುದಾಗಿ ನಾನು ಕಂಡಿಲ್ಲ. (ಇಮಾಮ್ ಶಾಫಿಈ ರವರು ಹೇಳುತ್ತಾರೆ:) ಮಕ್ಕಾದ ಆಡಳಿತಾಧಿಕಾರಿಗಳು ಅಲ್ಲಿ ಕಬರ್'ಗಳ ಮೇಲೆ ನಿರ್ಮಿಸಲಾದ ಕಟ್ಟಡಗಲನ್ನು ಕೆಡವುದನ್ನು ನಾನು ಕಂಡಿದ್ದೇನೆ. ಮಕ್ಕಾದ ಯಾವುದೇ ವಿದ್ವಾಂಸರು ಅದನ್ನು ಆಕ್ಷೇಪಿಸುವುದಾಗಿ ನಾನು ಕಂಡಿಲ್ಲ."
ನೋಡಿರಿ! ಇಲ್ಲಿ ಜಗತ್ತು ಕಂಡ ಅತಿದೊಡ್ಡ ಔಲಿಯಾಗಳೆಂದು ವಿಶ್ಲೇಷಿಸುವ ಪ್ರವಾದಿ(ಸ.ಅ) ರವರ ಸಹಾಬಿಗಳಾದ, ಅನ್ಸಾರ್ ಮತ್ತು ಮುಹಾಜಿರ್'ಗಳ ಕಬರ್'ಗಳನ್ನು ಕೂಡ ಎತ್ತರಿಸಲ್ಪಟ್ಟಿರಲಿಲ್ಲ ಮತ್ತು ಗಾರೆ ಹಚ್ಚಿರಲಿಲ್ಲ ಎಂದು ಸಾಕ್ಷಾತ್ ಇಮಾಮ್ ಶಾಫಿಈ (ರ) ರವರೇ ಸ್ಪಷ್ಟಪಡಿಸುತ್ತಾರೆ.
ಮೇಲಿನ ಇಮಾಮ್ ಶಾಫಿಈ(ರ) ರವರ ಮಾತಿನಲ್ಲಿ ಇನ್ನೊಂದು ಮುಖ್ಯವಾದ ವಿಷಯವನ್ನು ಗಮನಿಸಿ,
"ಕಬರ್'ಗಳನ್ನು ಕಟ್ಟಿ ಎತ್ತರಿಸದಿರುವುದನ್ನು ಮತ್ತು ಗಾರೆ ಹಚ್ಚದಿರುವುದನ್ನು ನಾನು ಇಷ್ಟಪಡುತ್ತೇನೆ. ಯಾಕೆಂದರೆ ಅದು ಅಲಂಕಾರ ಮತ್ತು ಅಹಂಭಾವವನ್ನು ಹೋಲುತ್ತದೆ. ಆದರೆ ಮರಣವು ಅಲಂಕಾರ ಮತ್ತು ಅಹಂಭಾವದ ಸ್ಥಳವಲ್ಲ."
ಕಬರ್ ಝಿಯಾರತ್ ಎರಡು ಉದ್ದೇಶಗಳಿಗೆ ಮಾತ್ರ ಒಂದು ನಮ್ಮ ಮರಣವನ್ನು ನೆನಪಿಸಲು, ಇನ್ನು ಎರಡನೇಯದು ಮರಣಹೊಂದಿದವರಿಗಾಗಿ ಅಲ್ಲಾಹನಲ್ಲಿ ಕ್ಷಮೆ ಬೇಡಲು.
ಹಾಗಾದರೆ ಮದುಮಗಳ ರೀತಿ ಶೃಂಗರಿಸ್ಪಟ್ಟ ದರ್ಗಾಗಳನ್ನು ನೋಡುವಾಗ ಮರಣದ ನೆನಪು ಮೂಡಲು ಸಾಧ್ಯವೇ...? ಖಂಡಿತಾ ಇಲ್ಲ.

ಎರಡನೇ ಶಾಫಿಈ ಎಂದೇ ಖ್ಯಾತರಾದ ಇಮಾಮ್ ನವವಿ(ರ) ಹೇಳುತ್ತಾರೆ:

فِيهِ أَنَّ سُنَّةَ أَنَّ الْقَبْرَ لَا يُرْفَعُ عَلَى الْأَرْضِ رَفْعًا كَثِيرًا وَلَا يُسَنَّمُ بَلْ يُرْفَعُ نَحْوَ شِبْرٍ وَيُسَطَّحُ وَهَذَا مَذْهَبُ الشَّافِعِيِّ وَمَنْ وَافَقَهُ

"ಪ್ರವಾದಿ(ಸ.ಅ) ರವರ ಚರ್ಯೆಯ ಪ್ರಕಾರ, ಕಬರನ್ನು ಭೂಮಿಯಿಂದ ಹೆಚ್ಚು ಎತ್ತರಿಸಬಾರದು. ಮೇಲ್ಭಾಗವನ್ನು ವೃತ್ತಾಕಾರಗೊಳಿಸಬಾರದು. ಒಂದು ಗೇಣು ಎತ್ತರಿಸಿದ ಬಳಿಕ ಸಮಗೊಳಿಸಬೇಕು. ಇಮಾಮ್ ಶಾಫಿಈ(ರ) ರವರ ಮತ್ತು ಅವರೊಂದಿಗೆ ಸಹಮತಿರುವವರ ಅಭಿಪ್ರಾಯ ಇದಾಗಿದೆ."
(ಶರಹ್ ಮುಸ್ಲಿಮ್: 4/42)

ಶಾಫಿಈ ಮದ್ ಹಬ್ ನ ಇನ್ನೊಬ್ಬ ಪ್ರಮುಖ ವಿದ್ವಾಂಸರಾದ ಇಬ್ನ್ ಹಜರುಲ್ ಹೈತಮಿ ಹೇಳುತ್ತಾರೆ:

وَتَجِبُ الْمُبَادَرَةُ لِهَدْمِهَا وَهَدْمِ الْقِبَابِ الَّتِي عَلَى الْقُبُورِ إِذْهِيَ أَضَرُّ مِنْ مَسْجِدِ الْضِّرَارِ لِأَنَّهَا أُسِّسَتْ عَلَى مَعْصِيَةِ رَسُولِ اللَّهِ صَلَّى اللَّهُ عَلَيْهِ وَسَلَّمَ لِأَنَّهُ نَهَي عَنْ ذَلِكَ

"ಎತ್ತರಿಸಿ ಕಟ್ಟಿರುವ ಕಬರ್'ಗಳನ್ನು ಮತ್ತು ಅದರ ಮೇಲಿರುವ ಗುಮ್ಮಟಗಳನ್ನು ಕೆಡವಲು ಮುನ್ನುಗ್ಗುವುದು ಕಡ್ಡಾಯವಾಗಿದೆ. ಕಾರಣವೇನೆಂದರೆ, ಅದು ಮುಸ್ಜಿದುಲ್ ದ್ದಿರಾರ್'ಗಿಂತಲೂ (ಕಪಟ ವಿಶ್ವಾಸಿಗಳು ನಿರ್ಮಿಸಿದ ಮಸೀದಿ) ಹೆಚ್ಚು ಅಪಾಯಕಾರಿಯಾಗಿದೆ. ಯಾಕೆಂದರೆ ಇವುಗಳು (ಇಂತಹ ದರ್ಗಾಗಳು ಮತ್ತು ಗುಮ್ಮಟಗಳು ನಿರ್ಮಿಸಲ್ಪಟ್ಟಿರುವುದು ಪ್ರವಾದಿ(ಸ.ಅ) ರವರ ಆಜ್ಞೆ ಉಲ್ಲಂಘನೆಯ ಮೇಲೆಯಾಗಿದೆ. ಕಾರಣ, ಪ್ರವಾದಿ(ಸ.ಅ) ರವರು ಅದನ್ನು ವಿರೋಧಿಸಿದ್ದಾರೆ."
(ಅಝ್ಝುವಾಜಿರ್ : 1/149)
ಒಟ್ಟಿನಲ್ಲಿ ಕಬರ್ ಎಷ್ಟೊಂದು ಮಹಾನ್ ವ್ಯಕ್ತಿಯದ್ದಾಗಿದ್ದರೂ, ಭೂಮಿಯ ಮೇಲೆ ಮೇಲ್ಭಾಗದಿಂದ ಒಂದು ಗೇಣು ಮಾತ್ರವೇ ಎತ್ತರಿಸಲು ಅನುಮತಿಯಿರುವುದು. ಅದಕ್ಕಿಂತ ಹೆಚ್ಚು ಎತ್ತರಿಸಿರುವ ಕಬರ್ ಗಳನ್ನು ಕೆಡವಿ ಸಮತಟ್ಟು ಗೊಳಿಸಬೇಕೆಂಬುವುದು ಸ್ವಹಾಬಿಗಳ ಆಹ್ವಾನವೂ ಆಗಿದೆ. ಶಾಫಿಈ ಮದ್ ಹಬ್ ಕೂಡ ಅದನ್ನೇ ಹೇಳಿದೆ. ಆದರೆ ವಿಪರ್ಯಾಸವೇನೆಂದರೆ ಈ ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳಿದವರು ನಮ್ಮ ಸಮಾಜದಲ್ಲಿ ನೂತನವಾದಿಯಾಗಿಯೂ, ಇನ್ನು ಇಲ್ಲದ್ದನ್ನು ಸೇರಿಸಿ ಅಥವಾ ಇರುವುದನ್ನು ದುರ್ವ್ಯಾಖ್ಯಾನಿಸಿ ಹೇಳುವವರು ಪುರಾತನವಾದಿಯಾಗಿಯೂ ತಮ್ಮನ್ನು ಹೆಸರಿಸುತ್ತಿರುವುದು ತುಂಬಾ ಖೇದಕರ ಸಂಗತಿ.

No comments:

Post a Comment