12 Sept 2018

ತಾಯತ ಅಥವಾ ಉರ್ಕು.


ತಾಯತ ಅಥವಾ ಉರ್ಕು...



ಪ್ರವಾದಿ  (ಸಅ) ರು ಹೇಳುತ್ತಾರೆ:

عن عقبة بن عامر الجهني أن رسول الله صلى الله عليه وسلم أقبل إليه رهط فبايع تسعة وأمسك عن واحد فقالوا : يا رسول الله بايعتَ تسعة وتركت هذا ، قال : إن عليه تميمة ، فأدخل يده فقطعها فبايعه وقال : من علق تميمة فقد أشرك .  رواه أحمد ( 16969 ) .
والحديث : صححه الشيخ الألباني في " السلسلة الصحيحة " ( 492 ) .


ಉಕ್'ಬಾ ಇಬ್ನು ಆಮಿರ್ ಜಹನೀ (ರ) ರಿಂದ ವರದಿ : ಪ್ರವಾದಿ (ಸಅ) ರು ಹೇಳಿದರು ಯಾರು ತಾಯತ (ಉರ್ಕು) ಧರಿಸುತ್ತಾನೋ ಅವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು.

(ಮುಸನ್ನದ್ ಅಹ್ಮದ್ :16969)

ಶೈಖ್ ಅಲ್ಬಾನಿಯವರು ತನ್ನ ಸಿಲ್'ಸಿಲತ್ ಸಹೀಹ್ (492) ನಲ್ಲಿ ಸ್ವಹೀಹ್ ಎಂದಿದ್ದಾರೆ.

ಜೀವನದಲ್ಲಿ ಏನಾದರೂ ತೊಂದರೆ ಬಂದರೆ ಅಲ್ಲಾಹನ ಮೇಲೆ ಭರವಸೆ ಇಡುವುದು ಒಬ್ಬ ಮುಸ್ಲಿಮನ ಈಮಾನಿನ ಭಾಗವಾಗಿದೆ. ಈ ಭರವಸೆಯನ್ನು ಇಲ್ಲದಾಗಿಸಲು ಶೈತಾನ್ ಪುರೋಹಿತರ ರೂಪದಲ್ಲಿ ಕಾರ್ಯಾಚರಿಸುತ್ತಾನೆ. ಅದರಲ್ಲಿ ಸೇರಿದ್ದಾಗಿದೆ ತಾಯತ ಅಥವ ತಾವೀಝ್ (ಉರ್ಕು) ಕಟ್ಟುವುದು ಮತ್ತು ನೂಲು ಕಟ್ಟುವುದು. ಇದು ಅಲ್ಲಾಹನ ಮೇಲಿರುವ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಮಾತ್ರವಲ್ಲ ಅಲ್ಲಾಹನಿಗೆ ಸಹಭಾಗಿತ್ವ (ಶಿರ್ಕ್) ಮಾಡಲು ಬಹು ಮುಖ್ಯ ಪಾತ್ರ ವಹಿಸುತ್ತದೆ.



ಅಲ್ಲಾಹೇತರರನ್ನು ಅವಲಂಭಿಸಿದ ಮೌಲೀದ್ ಕಿತಾಬ್.

ಅಲ್ಲಾಹೇತರರನ್ನು ಅವಲಂಭಿಸಿದ ಮೌಲೀದ್ ಕಿತಾಬ್.


عبدك المسكين يرجو, فضلك الجم الغفير
فيك قد أحسنت ظني, يا بشير يا نذير
أنت غأفر الخطاي,والذنوب الموبقات

ಅರ್ಥ :
ಪ್ರವಾಜಗರೇ ನಿಮ್ಮ ಸಾಧುವಾದ ಈ ದಾಸನ ಪಾಪಗಳೆಲ್ಲವನ್ನೂ ಕ್ಷಮಿಸಿ ಬಿಡಿ, ನಿಮ್ಮ ಔದಾರ್ಯವನ್ನು ನಾನು ಆಗ್ರಹಿಸುವೆನು, ನಾನು ನಿಮ್ಮಲ್ಲಿ ಶುಭ ಪ್ರತೀಕ್ಷೆ ಇಡುವೆನು, ಸಂತೋಷ ವಾರ್ತೆಯನ್ನೂ, ಮುನ್ನೆಚ್ಚರಿಕೆಯನ್ನೂ ನೀಡುವ ನೀವು ಎಲ್ಲಾ ಪಾಪಗಳನ್ನೂ ಕ್ಷಮಿಸುವವರಾಗಿರುವಿರಿ.


ಆದರೆ ಕುರಾನ್ ಹೇಳುವುದನ್ನು ನೋಡಿ.

قُلْ يَا عِبَادِيَ الَّذِينَ أَسْرَفُوا عَلَىٰ أَنْفُسِهِمْ لَا تَقْنَطُوا مِنْ رَحْمَةِ اللَّهِ ۚ إِنَّ اللَّهَ يَغْفِرُ الذُّنُوبَ جَمِيعًا ۚ إِنَّهُ هُوَ الْغَفُورُ الرَّحِيمُ

ಹೇಳಿರಿ: ‘ಸ್ವತಃ ತಮ್ಮ ಮೇಲೆಯೇ ಅತಿಕ್ರಮ ವೆಸಗಿರುವ ಓ ನನ್ನ ದಾಸರೇ! ಅಲ್ಲಾಹುವಿನ ಕಾರುಣ್ಯದ ಬಗ್ಗೆ ನೀವು ನಿರಾಶರಾಗದಿರಿ. ಖಂಡಿತವಾಗಿಯೂ ಅಲ್ಲಾಹು ಪಾಪಗಳೆಲ್ಲವನ್ನೂ ಕ್ಷಮಿಸುವನು. ಖಂಡಿತ ವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು’.


[ಅಝ್ಝುಮರ್ : 53]


"ನಾನು ನಿಮ್ಮ ಸಾಧುವಾದ ದಾಸನಾಗಿದ್ದೇನೆ" ಎಂದು ಮೌಲೀದ್ ಕಿತಾಬ್ ಪ್ರವಾದಿ ﷺ ರೊಂದಿಗೆ  ಹೇಳುತ್ತದೆ. ಆದರೆ ಪ್ರವಾದಿ ﷺ ರು ಹೇಳುತ್ತಾರೆ : ನಾನು ಅಲ್ಲಾಹನ ದಾಸನೂ, ದೂತನೂ ಆಗಿದ್ದೇನೆ. ಈಸಾ ಇಬ್ನು ಮರ್ಯಮರನ್ನು ಕ್ರೈಸ್ತರು ಹೊಗಳಿದಂತೆ ನೀವು ನನ್ನನ್ನು ಹೊಗಳಬೇಡಿ.

ಎಲ್ಲಾ ಪಾಪಗಳನ್ನು ವಿಮೋಚನೆ ಗೊಳಿಸುವವನು ಅಲ್ಲಾಹನಾಗಿದ್ದಾನೆ. ಆದರೆ ಮೌಲೀದ್ ಕಿತಾಬ್ ಅಲ್ಲಾಹೇತರರನ್ನು ಅವಲಂಭಿಸಿದೆ.

ಅಲ್ಲಾಹನೊಂದಿಗೆ ಇತರರನ್ನು  ಸಹಭಾಗಿಯನ್ನಾಗಿ ಮಾಡುವ ಈ ಮೌಲೀದ್ ಕಿತಾಬ್ ನಮಗೆ ಬೇಕೇ?

ಚಿಂತಿಸಿ...

ಇಸ್ತಿಗಾಸದ ಬಗ್ಗೆ ಇಮಾಮ್ ಸುಯೂತಿ (ರ) ರ 'ಅಲ್ ಅಂರು ಬಿಲ್ ಇತ್ತಿಬಾಅ್' ಗ್ರಂಥದಲ್ಲೇನಿದೆ?

ಪ್ರಖ್ಯಾತ ಇಮಾಮರಾದ ಹಾಫಿಳ್ ಜಲಾಲುದ್ದೀನ್ ಸುಯೂತಿ (ರ)ರವರು ತಮ್ಮ ಗ್ರಂಥವಾದ ಅಲ್ ಅಂರ್ ಬಿಲ್ ಇತ್ತಿಬಾಅ್ ಎಂಬ ಗ್ರಂಥದಲ್ಲಿ  ಮುಹಮ್ಮದ್ﷺ ರವರ ಕಬರಿನ ಬಳಿ ಯಾವ ಸ್ವಹಾಬಿಯೂ ಕೂಡ ಇಸ್ತಿಗಾಸ ನಡೆಸಲಿಲ್ಲ ಎಂಬ ಪುರಾವೆಯನ್ನು ಅವರ ಗ್ರಂಥದಿಂದಲೇ ಸಾಬಿತು ಪಡಿಸಿದಾಗ ಇದನ್ನು ಅರಗಿಸಿಕೊಳ್ಳಲಾರದೇ ಮುಸ್ಲಿಯಾರ್'ಗಳು ಅಲ್ಲಾಹೇತರರೊಂದಿಗೆ ಸಹಾಯ ಯಾಚಿಸಲು ಎಂಬ ಹೆಸರಿನ ಮರೆಯಲ್ಲಿ  ದರ್ಗಾ ವ್ಯಾಪಾರಕ್ಕೆ ಧಕ್ಕೆಯಾಗಬಹುದೆಂದು ಹೆದರಿ ಇಮಾಂ ಸುಯೂತಿ ರವರಿಗೆ ಅಂತಹ ಕಿತಾಬೇ ಇಲ್ಲ ಎಂದು ಅವರನ್ನೇ ಸುಳ್ಳಾಗಿಸಿ   ಬಿಟ್ಟರು..

ಆದರೆ ಈ ಮುಸ್ಲಿಯಾರ್ ಪಡೆಗಳು ಎಡವಿ ಬಿದ್ದದ್ದೇ ಅಲ್ಲಿ..
ಹೇಗೆಂದರೆ ಇವರ ಮುಫ್ತಿಯಾಗಿದ್ದ ಯೂಸುಫ್ ಇಸ್ಮಾಯಿಲ್ ನಬ್'ಹಾನಿ ಎಂಬವರು ಹಾಫಿಳ್ ಜಲಾಲುದ್ದೀನ್ ರವರಿಗೆ ಅಲ್ ಅಂರ್ ಬಿಲ್ ಇತ್ತಿಬಾಅ್... ಎಂಬ ಗ್ರಂಥ ಇದೆ ಎಂದು ನಬ್'ಹಾನಿಯವರ ಗ್ರಂಥದಲ್ಲೇ ಉಲ್ಲೇಖಿಸಿದ್ದಾರೆ.

دليل التجار إلى الأخلاق ألاحيار

ಎಂಬ ಗ್ರಂಥದಲ್ಲಿ ಹಾಫಿಳ್ ಜಲಾಲುದ್ದೀನ್ ಸುಯೂತಿ ರವರಿಗೆ ಇಂತಹ ಗ್ರಂಥವಿದೆ ಎಂದು ಸ್ಪಷ್ಟವಾಗಿ ಯೂಸುಫ್ ಇಸ್ಮಾಯಿಲ್ ನಬ್'ಹಾನಿ ಹೇಳಿದ ಮುಸ್ಲಿಯಾರ್ ಗಳು ಇಂಗು ತಿಂದ ಮಂಗರಂತಾಗಿದೆ..

ಇನ್ನು‌ ಆ ಗ್ರಂಥದಲ್ಲಿ ಸುಯೂತಿ ಹೇಳುತ್ತಾರೆ:

وان الصحابة وقد أجدبوا مرات

ಸ್ವಹಾಬಿಗಳಿಗೆ ಹಲವು ಬಾರಿ ಕ್ಷಾಮವನ್ನು  ಎದುರಿಸಿದರು
ودهتهم نواءب

 ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಿದರು

بعد موته  ﷺ

ಮುಹಮ್ಮದ್ﷺ ರವರ ವಫಾತಿನ ಬಳಿಕ

فهلا جاءوا

ಅವರು(ಸ್ವಹಾಬಿಗಳು) ಯಾರೂ ಕೂಡ ಬರಲಿಲ್ಲ
فاستسقوا

ಮಳೆಯನ್ನು ಕೇಳಲಿಲ್ಲ

أو استغاثوا

ಇಸ್ತಿಗಾಸ (ಸಹಾಯ ಯಾಚನೆ)ಕೇಳಲಿಲ್ಲ

عند قبره

ಮುಹಮ್ಮದ್ﷺ ರವರ ಕಬರಿನ‌ ಬಳಿ


➖➖➖➖➖➖➖
ಮೊದ ಮೊದಲು ಸುಯೂತಿಗೆ ಇಂತಹ ಗ್ರಂಥವೇ ಇಲ್ಲ ಎಂದು ವಾದಿಸುತ್ತಿದ್ದ ಮುಸ್ಲಿಯಾರ್ ಗಳು ನಂತರ ನಬ್'ಹಾನಿಯ ಕಿತಾಬಿನಿಂದ ಕಿತಾಬ್ ಇದೆ ಎಂದು ಸಾಬೀತು ಪಡಿಸಿದಾಗ ರಾಗ ಬದಲಾಯಿಸ ತೊಡಗಿದರು.

ಮೇಲಿನ ಸುಯೂತಿ ಯವರ ಈ ಇಬಾರತನ್ನು ನೋಡಿ ಸಹಿಸಲಾರದೆ ಮುಸ್ಲಿಯಾರ್ ಗಳು ಹೊಸ ಆರೋಪವನ್ನು ಸಲಫಿಗಳ ಮೇಲೆ ಆರೋಪಿಸಿದರು.
ಅದೇನೆಂದರೆ ಮೇಲಿನ ಈ ಭಾಗವು ಪ್ರಖ್ಯಾತ ಇಸ್ಲಾಮಿನ ವಿದ್ವಾಂಸರಾದ ಇಬ್ನ್ ತೈಮಿಯಾ (ರ)ರವರ ಗ್ರಂಥವಾದ ಇಖ್ತಿಳಾವ್ ಸ್ವಿರಾತಲ್ ಮುಸ್ತಕೀಮಿನ ಭಾಗವಾಗಿದೆ. ಅದು ಸಲಫಿಗಳು ಅದರ ಪ್ರತಿಯನ್ನು ಸುಯೂತಿ ಯವರ ಹೆಸರಿನಲ್ಲಿ ತುರುಕಿದ್ದಾರೆ ಎಂದು ರಾಗ ಬದಲಾಯಿಸಿದರು.

ಹೌದು  ಇಬ್ನ್ ತೈಮಿಯಾ ರವರ ಗ್ರಂಥದಿಂದ ಈ ಭಾಗವನ್ನು ಸುಯೂತಿ ಯವರ ಗ್ರಂಥದಲ್ಲಿ ಅಳವಡಿಸಿದ್ದಾರೆ .

ಅಳವಡಿಸಿದ್ದು ಯಾರು?

ಸ್ವತಃ ಹಾಫಿಳ್ ಜಲಾಲುದ್ದೀನ್ ಸುಯೂತಿರವರೇ ಆಗಿದ್ದಾರೆ..

ಇದು ಮಾತ್ರವಲ್ಲ ಇಬ್ನ್ ತೈಮಿಯಾ ರವರ ಗ್ರಂಥದಿಂದ ಹಲವು ವಿಷಯಗಳನ್ನು ಅವರ ಗ್ರಂಥಗಳಲ್ಲಿ ಇನ್ನೂ ಹಲವಾರು ವಿಷಯಗಳನ್ನು ಇಬ್ನ್ ತೈಮಿಯಾ ರವರ ಗ್ರಂಥಗಳ ಆಧಾರದಿಂದ ಸುಯೂತಿ ಬರೆದಿದ್ದಾರೆ...

ಇಬ್ನ್ ತೈಮಿಯಾ ರವರ ಹೆಸರು ಕೇಳುವಾಗಲೇ ಕೋಪ ನೆತ್ತಿಗೇರಿಸುವ ವಿಭಾಗವಾಗಿದ್ದಾರೆ  ಶಿಯಾಗಳು.

ಶಿಯಾಗಳ ವಿರುದ್ಧ ಪುರಾವೆ ಸಮೇತ ಅವರ ಎಲ್ಲಾ ವಿಶ್ವಾಸಗಳನ್ನು ಇಬ್ನ್ ತೈಮಿಯಾ(ರ) ಬುಡ ಸಮೇತ ಕಿತ್ತು ಬಿಸಾಡಿದ್ದಾರೆ..

ಅಂತಹ ವಿದ್ವಾಂಸರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಶಿಯಾಗಳು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ..

ಇಬ್ನ್ ತೈಮಿಯಾ ರವರನ್ನು ಹಿಯಾಳಿಸುವ ಇನ್ನೊಂದು ಭಾಗವೆಂದರೆ ಅದು ಸಮಸ್ತ ವಿಭಾಗ:-

ಇವರ ಆದರ್ಶವನ್ನು ಕುರ್'ಆನ್ ಮತ್ತು ಹದೀಸಿನ ಆಧಾರದಲ್ಲಿ ನೆಲಸಮ ಮಾಡಿದ ಕೀರ್ತಿ ಇಬ್ನ್ ತೈಮಿಯಾ ರವರಿಗೆ ಸಲ್ಲುತ್ತದೆ..

ಅವರ ವಾದದ ಮುಂದೆ ‌ನೆಲ ನಿಲ್ಲಲಾರದೇ ಅವರ ಬಗ್ಗೆ ಕೀಳುಮಟ್ಟದ ಮಾತನ್ನಾಡುತ್ತಾರೆ ಸಮಸ್ತ ವಿಭಾಗದವರು...

ಆದರೆ ಸಮಸ್ತ ವಿಭಾಗದವರು ದೊಡ್ಡ ಶೈಖ್ ಎಂದು ಕೊಂಡಾಡುತ್ತಿರುವ ಇದೇ ಜಲಾಲುದ್ದೀನ್ ಸುಯೂತಿ ರವರು ಇಬ್ನ್ ತೈಮಿಯಾ ರವರ ಬಗ್ಗೆ ಏನು ಹೇಳುತ್ತಾರೆ ಎಂದು ನೋಡುವ:

وقال الحافظ جلال الدين السيوطي – رحمه الله - :
ابن تيمية ، الشيخ ، الإمام ، العلامة ، الحافظ ، الناقد ، الفقيه ، المجتهد ، المفسر البارع ، شيخ الإسلام ، علَم الزهاد ، نادرة العصر ، تقي الدين أبو العباس أحمد المفتي شهاب الدين عبد الحليم بن الإمام المجتهد شيخ الإسلام مجد الدين عبد السلام بن عبد الله بن أبي القاسم الحراني .
أحد الأعلام ، ولد في ربيع الأول سنة إحدى وستين وستمائة ، وسمع ابن أبي اليسر ، وابن عبد الدائم ، وعدّة .
وعني بالحديث ، وخرَّج ، وانتقى ، وبرع في الرجال ، وعلل الحديث ، وفقهه ، وفي علوم الإسلام ، وعلم الكلام ، وغير ذلك .
وكان من بحور العلم ، ومن الأذكياء المعدودين ، والزهاد ، والأفراد ، ألَّف ثلاثمائة مجلدة ، وامتحن وأوذي مراراً .
مات في العشرين من ذي القعدة سنة ثمان وعشرين وسبعمائة .
" طبقات الحفاظ " ( ص 516 ، 517 ) .


ಇಬ್ನ್ ತೈಮಿಯಾ ರವರು ಇಸ್ಲಾಮಿನ ಶೈಖ್ ಆಗಿದ್ದಾರೆ, ದೊಡ್ಡ ಅಲ್ಲಾಮಾ ಆಗಿದ್ದಾರೆ, ನಮ್ಮ ಇಮಾಮಾರಾಗಿದ್ದಾರೆ, ಹಾಫಿಳ್ ಆಗಿದ್ದಾರೆ, ಮುಜ್ತಹಿದ್ ಆಗಿದ್ದಾರೆ


ಹೀಗೆ ಹಲವು ಗುಣಗಳನ್ನು ಸುಯೂತಿ ರವರೇ ಕೊಂಡಾಡುತ್ತಿದ್ದಾರೆ...

ಮಾತ್ರವಲ್ಲ ಶಾಫಿಈ ಮಝ್'ಹಬ್ ನ ದೊಡ್ಡ ವಿದ್ವಾಂಸರಾದ ,ಸಮಸ್ತ ಮುಸ್ಲಿಯಾರ್ ಗಳು ಅಂಗೀಕರಿಸುವ ಮುಲ್ಲಾ ಅಲಿಯ್ ಅಲ್ ಖಾರೀ (ರ)ರವರು ಇಬ್ನ್ ತೈಮಿಯಾ ರವರ ಬಗ್ಗೆ ಹೇಳುವುದು:

ಇಬ್ನ್ ತೈಮಿಯಾ ಹಾಗೂ ಇಬ್ನ್ ಖಯ್ಯಿಂ (ರ)ರವರು ಮುಸ್ಲಿಂ ಉಮ್ಮತ್ತಿನ ವಲಿಯ್ಯ್ ಆಗಿದ್ದಾರೆ ...
ಫಿತ್ನಾ ಮಾಡುವವರಿಂದ ಅಲ್ಲಾಹನು ಈ ಮಹಾತ್ಮರು ಗಳನ್ನು ರಕ್ಷಿಸಲಿ ಎಂದು.


ಇಬ್ನ್ ಅಬ್ದುರ್ರಹ್ಮಾನ್.