*ಬದರ್ ಸಂದೇಶ*
ನನ್ನ ಪ್ರೀತಿಯ ಸತ್ಯ ವಿಶ್ವಾಸಿ ಸಹೋದರ ಸಹೋದರಿಯರೆ,
ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವ ಬರಕಾತುಹು.
ಹಿಜಿರ 2ನೇ ವರ್ಷ ರಮಳಾನ್ 17ನೇ ದಿವಸ ಇಸ್ಲಾಮಿನ ಅಳಿವು ಉಳಿವಿನ ಬದರ್ ಯುದ್ಧ ನಡೆದ ದಿನ.
*ಯಾರ ನಡುವೆ ಯುದ್ಧ...?*
ಅಲ್ಲಾಹನನ್ನು ಮಾತ್ರ ಆರಾಧಿಸುತ್ತಿರುವುದಕ್ಕಾಗಿ, ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥನೆ ಮತ್ತು ಇಸ್ತಿಗಾಸ ನಡೆಸುತ್ತಿದ್ದಕ್ಕಾಗಿ ಮತ್ತು ಅಲ್ಲಾಹನೆಡೆಗೆ ಜನರನ್ನು ಕರೆಯುತ್ತಿರುವುದಕ್ಕಾಗಿ
ಅಮಾನವೀಯವಾಗಿ ಪೀಡಿಸಿದ ಮಕ್ಕಾದ ಕುರೈಷಿ ಮುಶ್ರಿಕ್ ಗಳ ಘೋರ ಪೀಡನೆಗಳನ್ನು ಸಹಿಸಲಾರದೆ ಮಕ್ಕಾದಿಂದ ಮದೀನಾಗೆ ವಲಸೆ ಹೋದ
ನಾಯಕ ಪ್ರವಾದಿ ಮಹಮ್ಮದ್ (ಸ.ಅ) ರವರು ಮತ್ತು ಅವರು ತಂದ ಅಲ್ಲಾಹನ ಆಜ್ಞೆ ಗಳನ್ನು ಶಿರಸಾವಹಿಸಿ ಪಾಲಿಸಿ ಜೀವಿಸುತ್ತಿದ್ದ ಮುವಹ್ಹಿದ್'ಗಳಾದ ಮುಹಾಜಿರ್ ಹಾಗೂ ಮದೀನಾದ ಅನ್ಸಾರಿಗಳಾದ ಸ್ವಹಾಬಿಗಳನ್ನೊಳಗೊಂಡ ಒಟ್ಟು 313ಮಂದಿಯ ಒಂದು ಸಣ್ಣ ಗುಂಪು ಒಂದು ಭಾಗದಲ್ಲೂ
ಹಾಗೂ
ಅಲ್ಲಾಹನಿಗೆ ಹತ್ತಿರವಾಗಲು ಇಬ್ರಾಹಿಂ(ಅ) ಮತ್ತು ಇಸ್ಮಾಯೀಲ್(ಅ) ಹಾಗೂ ಲಾತ, ಉಝ್ಝ, ಮನಾತ ಗಳಂತಹ ಮಹಾನ್ಗಳನ್ನು ಕರೆದು ಪ್ರಾರ್ಥಿಸುತ್ತಿದ್ದ ಅಮ್ರ್ ಇಬ್ನ್ ಹಿಶಾಮ್(ಅಬೂ ಜಹಲ್), ಉತ್ಬಾ ಬಿನ್ ರಬೀಅ, ಉಬಯ್ಯ್ ಇಬ್ನ್ ಖಲಫ್ ಮುಂತಾದ ದುರಹಂಕಾರಿ ನಾಯಕರನ್ನೊಳಗೊಂಡ ಮದಿರೆ ಮತ್ತು ಹೆಂಗಳೆಯರ ದಾಸರಾಗಿದ್ದ ಸುಮಾರು 950 ಮಂದಿ ಮಕ್ಕಾದ ಕುರೈಷ್ ಮುಶ್ರಿಕ್ಗಳು ಮತ್ತೊಂದು ಭಾಗದಲ್ಲಿ.
ಇವರ ನಡುವೆ ಆಗಿತ್ತು ಯುದ್ಧ.
*ಯಾಕಾಗಿ ಯುದ್ಧ...?*
*ಮುಸ್ಲಿಮರ ಪಕ್ಷದಲ್ಲಿ :*
ನೈಜ ಸೃಷ್ಟಿಕರ್ತನನ್ನು ಆರಾಧಿಸಿ ತೌಹೀದ್ ಅನುಸರಿಸಿ ಜೀವಿಸುವ ಹಕ್ಕುಗಳಿಗಾಗಿ ಮತ್ತು ವಿಶ್ವಾಸ ಸಂರಕ್ಷಣೆಗಾಗಿ.
*ಮುಶ್ರಿಕರ ಪಕ್ಷದಲ್ಲಿ :*
ಮಕ್ಕಾದಿಂದ ಹೊರದಬ್ಬಲ್ಪಟ್ಟು ನೆರೆಯ ಮದೀನಾದಲ್ಲಿ ಆಶ್ರಯ ಪಡೆದ ಒಂದು ಪೀಡಿತ ಸಮೂಹವನ್ನು ಮರ್ದಿಸಿ ತಮ್ಮ ದುರಹಂಕಾರಿ ನಾಯಕರ ಪ್ರತಿಷ್ಟೆ ಕಾಪಾಡಲು ಹಾಗೂ ಮಹಮ್ಮದರು(ಸ.ಅ) ಸುಳ್ಳಾಗಿಸಿದ ತಮ್ಮ ಆರಾಧ್ಯರ ಘನತೆಯನ್ನು ಸಂರಕ್ಷಿಸಲು.
*ಮಕ್ಕಾದ ಮುಶ್ರಿಕ್ ಗಳ ಸೇನಾಬಲ :*
- 100 ಕುದುರೆಗಳು
- 170 ಒಂಟೆಗಳು
*ಮುಸ್ಲಿಮರ ಸೇನಾ ಬಲ :*
- 2 ಕುದುರೆಗಳು
- 70 ಒಂಟೆಗಳು
*ಫಲಿತಾಂಶ :*
ಮುಸ್ಲಿಮರ ಅಭೂತಪೂರ್ವ ವಿಜಯ.
- 70 ಮುಶ್ರಿಕ್ ಗಳು ಕೊಲ್ಲಲ್ಪಟ್ಟರು ಅನೇಕರು ಯುದ್ಧ ಕೈದಿಗಳಾಗಿ ಬಂಧಿಸಲ್ಪಟ್ಟರು.
- ಮುಸ್ಲಿಮ್ ಪಕ್ಷದಲ್ಲಿ 14 ಸಹಾಬಿಗಳು ಹುತಾತ್ಮರಾದರು.
*ಯಾರು ಬದರಿಂಙಳು...?*
ಅಲ್ಲಾಹನ ದೀನ್ ಸಂರಕ್ಷಣೆಗಾಗಿ ನಾಯಕನ ಆಜ್ಞೆ ಯನ್ನು ಪಾಲಿಸಿ ಉಡಲು ಸರಿಯಾದ ವಸ್ತ್ರವಿಲ್ಲದ ಕೈಯಲ್ಲಿ ಆಯುಧವಿಲ್ಲದ ಸುಡುವ ಮರಳುಗಾಡಿನ ಹೊಯಿಗೆಯಲ್ಲಿ ಬರಿಗಾಲಲ್ಲಿ ಬರಿಹೊಟ್ಟೆಯಲ್ಲಿ ಪ್ರಯಾಣಿಸಿ ಯುದ್ಧ ಭೂಮಿಯನ್ನು ತಲುಪಿದವರು. ಇವರಲ್ಲಿ ಇದ್ದ ಆಯುಧ ಒಂದೇ ಅದು ತಖ್ವ. ಏನೇ ಆದರೂ ಅಲ್ಲಾಹನ ಮೇಲೆ ದೃಢವಿಶ್ವಾಸದಿಂದ ಭರವಸೆಯಿಟ್ಟು ಮುನ್ನುಗ್ಗುವ ಅಚಂಚಲ ಈಮಾನ್. ಇವರು ಮರಳಿ ತಮ್ಮ ತಮ್ಮ ಮನೆಗೆ ಹಿಂದಿರುಗುವ ಆಸೆ ಇಟ್ಟು ಹೊರಟು ಬಂದವರಲ್ಲ. ಇಸ್ಲಾಮಿಗಾಗಿ ತಮ್ಮ ಮನೆ, ತೋಟ, ಮಡದಿ, ಮಕ್ಕಳು ಹೀಗೆ ಲೋಕದ ಸರ್ವ ಸುಖಾಡಂಭರಗಳನ್ನು ತ್ಯಜಿಸಿ ಬಂದ ಮಕ್ಕಾದ ತ್ಯಾಗಿಗಳಾದ ಮುಹಾಜಿರ್'ಗಳು ಇವರಲ್ಲಿದ್ದರು. ಅದೇ ರೀತಿ ಮಕ್ಕಾದಿಂದ ಮದೀನಾಗೆ ವಲಸೆ ಬಂದವರಿಗೆ ತಮ್ಮ ಉಡುಪು, ಆಹಾರ, ಮನೆ, ತೋಟ ಮುಂತಾದ ಸೊತ್ತುಗಳನ್ನು ನೀಡಿ ಅವರ ಘನತೆ ಗೌರವಗಳನ್ನು ರಕ್ಷಿಸಿದ ತ್ಯಾಗಿಗಳಾದ ಮದೀನಾದ ಅನ್ಸಾರೀ ಸ್ವಹಾಬಿಗಳೂ ಕೂಡ ಈ ಪುಟ್ಟ ಸೇನೆಯ ಭಾಗವಾಗಿದ್ದರು. ಇವರ ತ್ಯಾಗ ಮತ್ತು ಸಹನೆಯಿಂದಾಗಿ ಅಲ್ಲಾಹನ ಸಹಾಯವು ಒದಗಿಬಂತು.
*ಅಲ್ಲಾಹನು ಪವಿತ್ರ ಕುರ್'ಆನಿ ನಲ್ಲಿ ಹೇಳುತ್ತಾನೆ,*
*ನೀವು ನಿಮ್ಮ ಪ್ರಭುವಿನೊಂದಿಗೆ ಸಹಾಯವನ್ನು ಬೇಡಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ಸಾವಿರ ಮಲಕ್ ಗಳನ್ನು ಎಡೆಬಿಡದೆ ಕಳುಹಿಸುವ ಮೂಲಕ ನಾನು ನಿಮಗೆ ಸಹಾಯ ಮಾಡುವೆನು ಎಂದು ಅವನು ನಿಮಗೆ ಉತ್ತರವಿತ್ತನು.*
*[ಅಲ್-ಅನ್ಫಾಲ್ : 9]*
*ಆದರೆ ಇವತ್ತು.....?*
ಅಲ್ಲಾಹನಿಗೆ ಹತ್ತಿರವಾಗಲು ಇಬ್ರಾಹೀಂ(ಅ), ಇಸ್ಮಾಯೀಲ್(ಅ), ಲಾತ, ಉಝ್ಝ , ಮನಾತ ಮುಂತಾದ ಮಧ್ಯವರ್ತಿಗಳನ್ನು ಕರೆದು ಪ್ರಾರ್ಥಿಸುತ್ತಿದ್ದ ಅಬೂಜಹಲ್, ಉತ್ಬತ್ ಮುಂತಾದ ಮಕ್ಕಾದ ಧಿಕ್ಕಾರಿ ನಾಯಕರ ವಿಶ್ವಾಸವನ್ನೇ ಹೋಲುವ ವಿಶ್ವಾಸದೊಂದಿಗೆ ಮುಸ್ಲಿಮ್ ಸಮುದಾಯದಲ್ಲಿ ಮಾಲೆ, ಮೌಲೂದ್, ಕುತ್ತುರಾತೀಬು, ರಸೂಲುಲ್ಲಾಹ್(ಸ.ಅ) ರ ವ್ಯಾಜ್ಯ ಕೂದಲು ತಂದು ವಂಚನೆ, ದರ್ಗಾದ ಹೆಸರಿನಲ್ಲಿ ಶಿರ್ಕ್ ಬಿದ'ಅತ್'ನ ಗಿಡ ನೆಟ್ಟು ಅದನ್ನು ಪೋಷಿಸುತ್ತಿರುವ ಕೇರಳ ಮೂಲಕ ವ್ಯಾಜ್ಯ ಅಹ್ಲುಸ್ಸುನ್ನತ್ ಜಮಾತ್ ಸಮಸ್ತವು ಈ ಬದರ್ ಯುದ್ಧದಲ್ಲಿ ಭಾಗವಹಿಸಿದ ಬದರಿಂಙಳನ್ನು ಅಲ್ಲಾಹನಿಗೆ ಮಧ್ಯವರ್ತಿಯಾಗಿ ಕರೆದು ಪ್ರಾರ್ಥಿಸುತ್ತಾ(ಕೆಲವೊಮ್ಮೆ ನೇರವಾಗಿ) ರಮದಾನ್ 17 ರಂದು
ಬದರಿಂಙಳೆ ಆಂಡ್(ವಾರ್ಷಿಕ) ಆಚರಣೆ ಮಾಡುತ್ತಿದೆ. ಬದರಿಂಙಳು ತ್ಯಾಗಗಳನ್ನು ಸಹಿಸಿ ಹೊಟ್ಟೆಗಿಲ್ಲದೆ ರಣಾಂಗಣಕ್ಕೆ ತೆರಳಿ ಯುದ್ಧ ಮಾಡಿ ತಮ್ಮ ವಿಶ್ವಾಸ ದಾರ್ಢ್ಯತೆಯನ್ನು ರಕ್ಷಿಸಿದ ಘಟನೆ ಇವರ ಪಾಲಿಗೆ ಹಬ್ಬದೂಟ ಮಾಡಿ ನಾಲಿಗೆ ಚಪಲ ತೀರಿಸಲು, ಪಳ್ಳಿಗೆ ಪತ್ತಿರ್ ಕೊಟ್ಟು ಇಸ್ಲಾಮಿನಲ್ಲಿ ನೂತವಾದವಾಗಿ ಸೇರಿಕೊಂಡ ಶಿರ್ಕ್ ಪ್ರಸರಿಸುವ ಬದರ್ ಮೌಲೂದ್ ಓದಲೂ ಹಾಗೂ ತಮ್ಮ ಪ್ರಾಣವನ್ನೇ ರಕ್ಷಿಸಲು ಅಸಹಾಯಕರಾಗಿದ್ದ ಬದರ್ ಶುಹದಾಗಳನ್ನು ಕರೆದು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿ ಪ್ರಾರ್ಥಿಸುವುದಕ್ಕೂ ಸೀಮಿತವಾಗಿದೆ.
ವಾಸ್ತವದಲ್ಲಿ ಇವರ ವಿಶ್ವಾಸ ಮಕ್ಕಾದ ಮುಶ್ರಿಕ್'ಗಳ ವಿಶ್ವಾಸಕ್ಕಿಂತಲೂ ಭೀಕರ ಶಿರ್ಕಿನದ್ದಾಗಿದೆ ಎಂಬುದು ಸತ್ಯ. ಅಬೂಜಹಲ್ ಕೂಡ ಯುದ್ಧಕ್ಕೆ ತೆರಳುವ ಮುನ್ನ ಪವಿತ್ರ ಕ'ಅಬಾಲಯದ ಹೊದಿಕೆ ಹಿಡಿದು ಈ ಎರಡು ಗುಂಪುಗಳಲ್ಲಿ ಸತ್ಯ ಎಲ್ಲಿದೆಯೋ ಅಲ್ಲಿಗೇ ವಿಜಯ ಒಳಿದು ಬರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರುವುದಾಗಿ ನಮಗೆ ಹದೀಸಿನಲ್ಲಿ ಕಾಣಬಹುದು. ಇನ್ನು ಮಕ್ಕಾ ಮುಶ್ರಿಕ್'ಗಳು ತಮ್ಮ ಕಷ್ಟಕಾಲದಲ್ಲಿ ಅಲ್ಲಾಹನೊಂದಿಗೆ ಸಹಾಯ ಅಭ್ಯರ್ಥಿಸಿದ್ದಾಗಿಯೂ ಆ ನಂತರ ಆ ಕಷ್ಟಗಳು ದೂರವಾಗಿ ಸುಖ ಬಂದಾಗ ತಮ್ಮ ಆರಾಧ್ಯರೆಡೆಗೆ ಮರಳಿದ್ದಾಗಿಯೂ ಕುರ್'ಆನ್ ಹೇಳುತ್ತೆ.
ಆದರೆ ಇಂದು ಬದರಿಂಙಳೆ ಆಂಡ್ ನೇರ್ಚೆ ಮಾಡುವ ಸಮಸ್ತದವರು ಇಡೀ ವರ್ಷ ಅಲ್ಲಾಹನಿಗೆ ಮಧ್ಯವರ್ತಿಗಳಾಗಿ ಅವುಲಿಯಾ, ಬದರಿಂಙಳು, ಮಹಮ್ಮದ್(ಸ.ಅ) , ಮುಹಯ್ಯಿದ್ಧಿ ಶೈಖ್(ರ) ಈ ರೀತಿ ಮಧ್ಯವರ್ತಿಗಳಿಲ್ಲದೆ ಈ ಜನ ಅಲ್ಲಾಹನೊಂದಿಗೆ ಪ್ರಾರ್ಥಿಸುವುದೇ ಇಲ್ಲ. ಇನ್ನು ಮಗುವಿಗೆ ತೊಟ್ಟಿಲು ತೂಗುವಾಗ "ಲಾಹಿ ಲಾಹ ಇಲ್ಲಲ್ಲಾಹು ಲಾಹಿ ಲಾಹ ಇಲ್ಲಲ್ಲಾಹ್" ಎಂಬ ತೌಹೀದಿನ ಗೀತೆ ಹಾಡುವ ತಾಯಂದಿರು ಮಗು ತೊಟ್ಟಿಲಿಂದ ಕೆಳಗೆ ಬಿದ್ದರೆ ಕರೆಯುವುದು "ಯಾ ಬದರಿಂಙಳೆ"
"ಯಾ ಮುಹಿಯ್ಯದ್ಧಿ ಶೈಖ್" ಎಂದಾಗಿದೆಯಲ್ಲವೇ..!!
ಇನ್ನು ನಮ್ಮಲ್ಲಿ ಕೆಲವರ ಮನೆಯ ಬಾಗಿಲಲ್ಲಿ ಬದರಿಂಙಳ 313 ಹೆಸರುಗಳನ್ನು ಒಂದು ಹಾಲೆಯಲ್ಲಿ ಬರೆದು ಅಂಟಿಸಿದ್ದು ಕಾಣಬಹುದು. ಇದು ಮನೆಯನ್ನು ಪಿಶಾಚಿ ಭಾದೆ, ಕಳ್ಳಕಾಕರ ಉಪಟಳದಿಂದ ಸಂರಕ್ಷಿಸುತ್ತೆ ಎಂದು ನಂಬಿಸಿ ಈ ರೀತಿಯ ವ್ಯಾಜ್ಯ ಸಾಧನಗಳನ್ನು ಮಾರಾಟ ಮಾಡುವ ಸಲುವಾಗಿ ಮನೆ ಮನೆಗೆ ತಿರುಗುವ ಮುಸ್ಲಿಯಾರ್'ಗಳ ದೊಡ್ಡ ತಂಡವೇ ಇದೆ.
ಈಗ ನೀವೇ ಯೋಚಿಸಿ ಈ ಸಮಸ್ತದವರ ವಿಶ್ವಾಸಕ್ಕೂ ಮಕ್ಕಾ ಮುಶ್ರಿಕ್'ಗಳ ವಿಶ್ವಾಸಕ್ಕೂ ವ್ಯತ್ಯಾಸವೇನು..?? ಉಪವಾಸ ವೃತ ಅನುಷ್ಠಿಸುವ ವ್ಯತ್ಯಾಸವೇ...? ಅಥವಾ ಮುಸ್ಲಿಮರ ಹಾಗೆ ಮಸೀದಿಗೆ ತೆರಳಿ ನಮಾಝ್ ನಿರ್ವಹಿಸುವ ವ್ಯತ್ಯಾಸವೇ...? ಇಸ್ಲಾಮಿನಲ್ಲಿ ಪ್ರವಾದಿ(ಸ.ಅ) ಯವರು ಕಲಿಸಿರದ ಸಹಾಬಿಗಳು ದೀನ್ ಆಗಿ ಪರಿಗಣಿಸದಂತಹ ಕಾರ್ಯಗಳನ್ನು ಇಸ್ಲಾಮಿನಲ್ಲಿ ಸೇರಿಸಿ ದೀನ್ ಎಂದು ಆಚರಿಸುವ ಜನರ ಅರ್ಥಾತ್ *ನೂತನವಾದಿಗಳ ಯಾವುದೇ ಫರ್ಳ್(ಕಡ್ಡಾಯ) ಅಥವಾ ಸುನ್ನತ್'ಆದ ಕರ್ಮಗಳನ್ನು ಅಲ್ಲಾಹನು ಸ್ವೀಕರಿಸಲಾರನು ಎಂದು ಹದೀಸಲ್ಲಿ ಬಂದಿದೆ.*
*[ಅಲ್ ಬುಖಾರಿ - 7300, ಅಲ್ ಮುಸ್ಲಿಮ್ - 1370]*
*ಅಲ್ಲಾಹನು ಪವಿತ್ರ ಕುರ್'ಆನಿನಲ್ಲಿ ಹೇಳುತ್ತಾನೆ;*
*مَا قَدَرُوا اللَّهَ حَقَّ قَدْرِهِ ۗ إِنَّ اللَّهَ لَقَوِيٌّ عَزِيزٌ*
*ಅವರು ಅಲ್ಲಾಹನನ್ನು ಗಣನೆ ಮಾಡಬೇಕಾದ ರೀತಿಯಲ್ಲಿ ಗಣನೆ ಮಾಡಲಿಲ್ಲ. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.*
*[ಅಲ್-ಹಜ್ಜ್ : 74]*
via ಪವಿತ್ರ ಕುರ್ ಆನ್ (Pavitra Qur'aan)
http://bit.ly/KanQuraan
ಬದರ್ ಯುದ್ಧದಲ್ಲಿ ಯುದ್ಧ ಮಾಡಿ ಹುತಾತ್ಮ(ಶಹೀದ್) ರಾದವರಿಗೋ ಇಲ್ಲವೇ ಯುದ್ಧಮಾಡಿದವರಿಗೋ ಯಾರಿಗೂ ಸ್ವತಃ ಅವರವರನ್ನೇ ರಕ್ಷೆ ಮಾಡಲು ಸಾಧ್ಯವಾಗಿಲ್ಲ. ಎಲ್ಲರೂ ಅಲ್ಲಾಹನ ಮೇಲೆ ಭರವಸೆ ಇಟ್ಟು ಜೀವದ ಹಂಗು ತೊರೆದು ಹೋರಾಡಿದರು. ಅವರ ಸಂತ್ಯಸಂಧತೆ ಮತ್ತು ನೇತೃತ್ವದ ಅನುಸರಣೆ ಹಾಗೂ ತಖ್ವ ಅವರಿಗೆ ವಿಜಯ ನೀಡಿತೇ ವಿನಃ ಅವರ ಪರಾಕ್ರಮವಂತೂ ಖಂಡಿತಾ ಅಲ್ಲ. ಎಲ್ಲರ ಸಂಕಷ್ಟಗಳನ್ನು ದೂರೀಕರಿಸಲು ಅಲ್ಲಾಹನಿಗೆ ಮಾತ್ರವೇ ಸಾಧ್ಯವಿರುವುದು.
ಇದರಿಂದ ನಾವು ಅಲ್ಲಾಹನ ಸಹಾಯವೊಂದಿದ್ದರೆ ಕಷ್ಟಗಳು ಸಮುದ್ರದಷ್ಟಿದ್ದರೂ ಈಜಿ ಬರಬಹುದು ಎಂಬ ಪಾಠವನ್ನು ಕಲಿಯಬೇಕೇ ಹೊರತು ಇಂದು ನಮ್ಮ ನಡುವೆ ಕೆಲವರು ಮಾಡುವಹಾಗೆ ಅಲ್ಲಾಹನ ಶಿಫತ್ ಗಳನ್ನು ಬದರಿಂಙಳ ಮೇಲೆ ಹೇಳುವುದಕ್ಕಲ್ಲ.
ಈ ಸಂಧರ್ಭದಲ್ಲಿ ಬದರಿಂಙಳ ವಾರ್ಷಿಕ (ಬದರಿಂಙಳೆ ಆಂಡ್) ಮಾಡುವುದಕ್ಕೆ ಇಸ್ಲಾಮಿನ ಪೂರ್ವಕಾಲದ ಉತ್ತಮ ತಲೆಮಾರಿನಲ್ಲಿ ಜೀವಿಸಿದ ಸಜ್ಜನರಾದ ಸಲಫುಸ್ಸಾಲಿಹೀನ್'ಗಳಲ್ಲಿ ನಮಗೆ ಯಾವುದೇ ಮಾದರಿಯಿಲ್ಲ ಬದಲಾಗಿ ಅದು ನಂತರದ ಕಾಲಘಟ್ಟದಲ್ಲಿ ಯಾವುದೋ ಹೊಟ್ಟೆ ಬಾಕ ಬಿದ'ಇಗಳಿಂದ ಸೇರ್ಪಡೆಗೊಂಡ ಒಂದು ನೂತನಾಚಾರವಾಗಿದೆ. ಇದನ್ನು ಇಂದು ಇಸ್ಲಾಮಿನ ಹೆಸರಿಟ್ಟು ಇಸ್ಲಾಮಿಗೆ ಕಳಂಕ ಹಚ್ಚುತ್ತಿರುವ ಗೋರಿ ಆರಾಧಕ ಕೇರಳ ಸಮಸ್ತದ ಸೂಫಿ ಸಮೂಹವು ಆಚರಿಸಿ ಕೊಂಡು ಬರುತ್ತಿದೆ.
ಆದರೆ ಬದರಿಂಙಳೋ ಅಥವಾ ಇವರಿಗಿಂತ ನಂತರ ಜೀವಿಸಿದ ಸ್ವಹಾಬಿಗಳೋ ಯಾರೂ ಕೂಡ ಈ ದಿವಸ ಬದರಿಂಙಳ ವಾರ್ಷಿಕ (ಬದರಿಂಙಳೆ ಆಂಡ್) ಮಾಡಿಲ್ಲ. ಇವರ ನಂತರ ಇವರ ಕುಟುಂಬಸ್ಥರು ತುಂಬಾ ಸಮಯ ಜೀವಿಸಿದ್ದರು ಅವರು ಯಾರೂ ಕೂಡ ಬದರಿಂಙಳೆ ಆಂಡ್ ಮಾಡಿಲ್ಲ. ಬದರ್ ಯುದ್ಧದಲ್ಲಿ ಪಾಲ್ಗೊಂಡ ಬದರಿಂಙಳಿಗೆ ಅಲ್ಲಾಹನ ಬಳಿ ತುಂಬಾ ಮಹತ್ವದ ಪದವಿಯಿದೆ. ಆದರೂ ಕೂಡ ಇವರ ನಂತರ ಬಂದವರು ಯಾರೂ ಕೂಡ ಬದರಿಂಙಳೊಂದಿಗೆ ಪ್ರಾರ್ಥಿಸಿಲ್ಲ, ಇಸ್ತಿಗಾಸ ನಡೆಸಿಲ್ಲ.
*قُلْ إِنَّمَا أَدْعُو رَبِّي وَلَا أُشْرِكُ بِهِ أَحَدًا*
*(ಓ ಪ್ರವಾದಿಯವರೇ!) ಹೇಳಿರಿ: ‘ನಾನು ನನ್ನ ಪ್ರಭುವನ್ನು ಮಾತ್ರ ಕರೆದು ಪ್ರಾರ್ಥಿಸುವೆನು. ಅವನೊಂದಿಗೆ ಯಾರನ್ನೂ ನಾನು ಸಹಭಾಗಿಯನ್ನಾಗಿ ಮಾಡಲಾರೆನು’.*
*[ಅಲ್-ಜಿನ್ನ್ : 20]*
via ಪವಿತ್ರ ಕುರ್ ಆನ್ (Pavitra Qur'aan)
http://bit.ly/KanQuraan
ಪವಿತ್ರ ಕುರ್'ಆನಿನ ಈ ಕರೆಗೆ ಓ...ಗೊಟ್ಟವರಾಗಿದ್ದಾರೆ ಬದರಿಂಙಳು. ಆದುದರಿಂದ ನಾವು ಅವರು ಬಿಟ್ಟುಹೋದ ಪಾದಹೆಜ್ಜೆಗಳನ್ನು ಅನುಸರಿಸಬೇಕಾಗಿದೆ.
ಕಷ್ಟದಲ್ಲೂ ಸುಖದಲ್ಲೂ ಸ್ತುತಿ
ಪ್ರಾರ್ಥನೆ ಗಳೆಲ್ಲವೂ ಕೂಡ ಸರಿಸಾಟಿ ಇಲ್ಲದ ಏಕ ಮಾತ್ರ ನಮ್ಮ ಸೃಷ್ಟಿಕರ್ತನಾದ ಅಲ್ಲಾಹನಿಗೆ ಮಾತ್ರ ಮೀಸಲಿಡಬೇಕಾಗಿದೆ. ಅಲ್ಲಾಹು ನಮ್ಮೆಲ್ಲರನ್ನು ಅನುಗ್ರಹಿಸಲಿ.
*✍🏽 ನೌಫಲ್ ಕೆರೀಂ*
ನನ್ನ ಪ್ರೀತಿಯ ಸತ್ಯ ವಿಶ್ವಾಸಿ ಸಹೋದರ ಸಹೋದರಿಯರೆ,
ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವ ಬರಕಾತುಹು.
ಹಿಜಿರ 2ನೇ ವರ್ಷ ರಮಳಾನ್ 17ನೇ ದಿವಸ ಇಸ್ಲಾಮಿನ ಅಳಿವು ಉಳಿವಿನ ಬದರ್ ಯುದ್ಧ ನಡೆದ ದಿನ.
*ಯಾರ ನಡುವೆ ಯುದ್ಧ...?*
ಅಲ್ಲಾಹನನ್ನು ಮಾತ್ರ ಆರಾಧಿಸುತ್ತಿರುವುದಕ್ಕಾಗಿ, ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥನೆ ಮತ್ತು ಇಸ್ತಿಗಾಸ ನಡೆಸುತ್ತಿದ್ದಕ್ಕಾಗಿ ಮತ್ತು ಅಲ್ಲಾಹನೆಡೆಗೆ ಜನರನ್ನು ಕರೆಯುತ್ತಿರುವುದಕ್ಕಾಗಿ
ಅಮಾನವೀಯವಾಗಿ ಪೀಡಿಸಿದ ಮಕ್ಕಾದ ಕುರೈಷಿ ಮುಶ್ರಿಕ್ ಗಳ ಘೋರ ಪೀಡನೆಗಳನ್ನು ಸಹಿಸಲಾರದೆ ಮಕ್ಕಾದಿಂದ ಮದೀನಾಗೆ ವಲಸೆ ಹೋದ
ನಾಯಕ ಪ್ರವಾದಿ ಮಹಮ್ಮದ್ (ಸ.ಅ) ರವರು ಮತ್ತು ಅವರು ತಂದ ಅಲ್ಲಾಹನ ಆಜ್ಞೆ ಗಳನ್ನು ಶಿರಸಾವಹಿಸಿ ಪಾಲಿಸಿ ಜೀವಿಸುತ್ತಿದ್ದ ಮುವಹ್ಹಿದ್'ಗಳಾದ ಮುಹಾಜಿರ್ ಹಾಗೂ ಮದೀನಾದ ಅನ್ಸಾರಿಗಳಾದ ಸ್ವಹಾಬಿಗಳನ್ನೊಳಗೊಂಡ ಒಟ್ಟು 313ಮಂದಿಯ ಒಂದು ಸಣ್ಣ ಗುಂಪು ಒಂದು ಭಾಗದಲ್ಲೂ
ಹಾಗೂ
ಅಲ್ಲಾಹನಿಗೆ ಹತ್ತಿರವಾಗಲು ಇಬ್ರಾಹಿಂ(ಅ) ಮತ್ತು ಇಸ್ಮಾಯೀಲ್(ಅ) ಹಾಗೂ ಲಾತ, ಉಝ್ಝ, ಮನಾತ ಗಳಂತಹ ಮಹಾನ್ಗಳನ್ನು ಕರೆದು ಪ್ರಾರ್ಥಿಸುತ್ತಿದ್ದ ಅಮ್ರ್ ಇಬ್ನ್ ಹಿಶಾಮ್(ಅಬೂ ಜಹಲ್), ಉತ್ಬಾ ಬಿನ್ ರಬೀಅ, ಉಬಯ್ಯ್ ಇಬ್ನ್ ಖಲಫ್ ಮುಂತಾದ ದುರಹಂಕಾರಿ ನಾಯಕರನ್ನೊಳಗೊಂಡ ಮದಿರೆ ಮತ್ತು ಹೆಂಗಳೆಯರ ದಾಸರಾಗಿದ್ದ ಸುಮಾರು 950 ಮಂದಿ ಮಕ್ಕಾದ ಕುರೈಷ್ ಮುಶ್ರಿಕ್ಗಳು ಮತ್ತೊಂದು ಭಾಗದಲ್ಲಿ.
ಇವರ ನಡುವೆ ಆಗಿತ್ತು ಯುದ್ಧ.
*ಯಾಕಾಗಿ ಯುದ್ಧ...?*
*ಮುಸ್ಲಿಮರ ಪಕ್ಷದಲ್ಲಿ :*
ನೈಜ ಸೃಷ್ಟಿಕರ್ತನನ್ನು ಆರಾಧಿಸಿ ತೌಹೀದ್ ಅನುಸರಿಸಿ ಜೀವಿಸುವ ಹಕ್ಕುಗಳಿಗಾಗಿ ಮತ್ತು ವಿಶ್ವಾಸ ಸಂರಕ್ಷಣೆಗಾಗಿ.
*ಮುಶ್ರಿಕರ ಪಕ್ಷದಲ್ಲಿ :*
ಮಕ್ಕಾದಿಂದ ಹೊರದಬ್ಬಲ್ಪಟ್ಟು ನೆರೆಯ ಮದೀನಾದಲ್ಲಿ ಆಶ್ರಯ ಪಡೆದ ಒಂದು ಪೀಡಿತ ಸಮೂಹವನ್ನು ಮರ್ದಿಸಿ ತಮ್ಮ ದುರಹಂಕಾರಿ ನಾಯಕರ ಪ್ರತಿಷ್ಟೆ ಕಾಪಾಡಲು ಹಾಗೂ ಮಹಮ್ಮದರು(ಸ.ಅ) ಸುಳ್ಳಾಗಿಸಿದ ತಮ್ಮ ಆರಾಧ್ಯರ ಘನತೆಯನ್ನು ಸಂರಕ್ಷಿಸಲು.
*ಮಕ್ಕಾದ ಮುಶ್ರಿಕ್ ಗಳ ಸೇನಾಬಲ :*
- 100 ಕುದುರೆಗಳು
- 170 ಒಂಟೆಗಳು
*ಮುಸ್ಲಿಮರ ಸೇನಾ ಬಲ :*
- 2 ಕುದುರೆಗಳು
- 70 ಒಂಟೆಗಳು
*ಫಲಿತಾಂಶ :*
ಮುಸ್ಲಿಮರ ಅಭೂತಪೂರ್ವ ವಿಜಯ.
- 70 ಮುಶ್ರಿಕ್ ಗಳು ಕೊಲ್ಲಲ್ಪಟ್ಟರು ಅನೇಕರು ಯುದ್ಧ ಕೈದಿಗಳಾಗಿ ಬಂಧಿಸಲ್ಪಟ್ಟರು.
- ಮುಸ್ಲಿಮ್ ಪಕ್ಷದಲ್ಲಿ 14 ಸಹಾಬಿಗಳು ಹುತಾತ್ಮರಾದರು.
*ಯಾರು ಬದರಿಂಙಳು...?*
ಅಲ್ಲಾಹನ ದೀನ್ ಸಂರಕ್ಷಣೆಗಾಗಿ ನಾಯಕನ ಆಜ್ಞೆ ಯನ್ನು ಪಾಲಿಸಿ ಉಡಲು ಸರಿಯಾದ ವಸ್ತ್ರವಿಲ್ಲದ ಕೈಯಲ್ಲಿ ಆಯುಧವಿಲ್ಲದ ಸುಡುವ ಮರಳುಗಾಡಿನ ಹೊಯಿಗೆಯಲ್ಲಿ ಬರಿಗಾಲಲ್ಲಿ ಬರಿಹೊಟ್ಟೆಯಲ್ಲಿ ಪ್ರಯಾಣಿಸಿ ಯುದ್ಧ ಭೂಮಿಯನ್ನು ತಲುಪಿದವರು. ಇವರಲ್ಲಿ ಇದ್ದ ಆಯುಧ ಒಂದೇ ಅದು ತಖ್ವ. ಏನೇ ಆದರೂ ಅಲ್ಲಾಹನ ಮೇಲೆ ದೃಢವಿಶ್ವಾಸದಿಂದ ಭರವಸೆಯಿಟ್ಟು ಮುನ್ನುಗ್ಗುವ ಅಚಂಚಲ ಈಮಾನ್. ಇವರು ಮರಳಿ ತಮ್ಮ ತಮ್ಮ ಮನೆಗೆ ಹಿಂದಿರುಗುವ ಆಸೆ ಇಟ್ಟು ಹೊರಟು ಬಂದವರಲ್ಲ. ಇಸ್ಲಾಮಿಗಾಗಿ ತಮ್ಮ ಮನೆ, ತೋಟ, ಮಡದಿ, ಮಕ್ಕಳು ಹೀಗೆ ಲೋಕದ ಸರ್ವ ಸುಖಾಡಂಭರಗಳನ್ನು ತ್ಯಜಿಸಿ ಬಂದ ಮಕ್ಕಾದ ತ್ಯಾಗಿಗಳಾದ ಮುಹಾಜಿರ್'ಗಳು ಇವರಲ್ಲಿದ್ದರು. ಅದೇ ರೀತಿ ಮಕ್ಕಾದಿಂದ ಮದೀನಾಗೆ ವಲಸೆ ಬಂದವರಿಗೆ ತಮ್ಮ ಉಡುಪು, ಆಹಾರ, ಮನೆ, ತೋಟ ಮುಂತಾದ ಸೊತ್ತುಗಳನ್ನು ನೀಡಿ ಅವರ ಘನತೆ ಗೌರವಗಳನ್ನು ರಕ್ಷಿಸಿದ ತ್ಯಾಗಿಗಳಾದ ಮದೀನಾದ ಅನ್ಸಾರೀ ಸ್ವಹಾಬಿಗಳೂ ಕೂಡ ಈ ಪುಟ್ಟ ಸೇನೆಯ ಭಾಗವಾಗಿದ್ದರು. ಇವರ ತ್ಯಾಗ ಮತ್ತು ಸಹನೆಯಿಂದಾಗಿ ಅಲ್ಲಾಹನ ಸಹಾಯವು ಒದಗಿಬಂತು.
*ಅಲ್ಲಾಹನು ಪವಿತ್ರ ಕುರ್'ಆನಿ ನಲ್ಲಿ ಹೇಳುತ್ತಾನೆ,*
*ನೀವು ನಿಮ್ಮ ಪ್ರಭುವಿನೊಂದಿಗೆ ಸಹಾಯವನ್ನು ಬೇಡಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ಸಾವಿರ ಮಲಕ್ ಗಳನ್ನು ಎಡೆಬಿಡದೆ ಕಳುಹಿಸುವ ಮೂಲಕ ನಾನು ನಿಮಗೆ ಸಹಾಯ ಮಾಡುವೆನು ಎಂದು ಅವನು ನಿಮಗೆ ಉತ್ತರವಿತ್ತನು.*
*[ಅಲ್-ಅನ್ಫಾಲ್ : 9]*
*ಆದರೆ ಇವತ್ತು.....?*
ಅಲ್ಲಾಹನಿಗೆ ಹತ್ತಿರವಾಗಲು ಇಬ್ರಾಹೀಂ(ಅ), ಇಸ್ಮಾಯೀಲ್(ಅ), ಲಾತ, ಉಝ್ಝ , ಮನಾತ ಮುಂತಾದ ಮಧ್ಯವರ್ತಿಗಳನ್ನು ಕರೆದು ಪ್ರಾರ್ಥಿಸುತ್ತಿದ್ದ ಅಬೂಜಹಲ್, ಉತ್ಬತ್ ಮುಂತಾದ ಮಕ್ಕಾದ ಧಿಕ್ಕಾರಿ ನಾಯಕರ ವಿಶ್ವಾಸವನ್ನೇ ಹೋಲುವ ವಿಶ್ವಾಸದೊಂದಿಗೆ ಮುಸ್ಲಿಮ್ ಸಮುದಾಯದಲ್ಲಿ ಮಾಲೆ, ಮೌಲೂದ್, ಕುತ್ತುರಾತೀಬು, ರಸೂಲುಲ್ಲಾಹ್(ಸ.ಅ) ರ ವ್ಯಾಜ್ಯ ಕೂದಲು ತಂದು ವಂಚನೆ, ದರ್ಗಾದ ಹೆಸರಿನಲ್ಲಿ ಶಿರ್ಕ್ ಬಿದ'ಅತ್'ನ ಗಿಡ ನೆಟ್ಟು ಅದನ್ನು ಪೋಷಿಸುತ್ತಿರುವ ಕೇರಳ ಮೂಲಕ ವ್ಯಾಜ್ಯ ಅಹ್ಲುಸ್ಸುನ್ನತ್ ಜಮಾತ್ ಸಮಸ್ತವು ಈ ಬದರ್ ಯುದ್ಧದಲ್ಲಿ ಭಾಗವಹಿಸಿದ ಬದರಿಂಙಳನ್ನು ಅಲ್ಲಾಹನಿಗೆ ಮಧ್ಯವರ್ತಿಯಾಗಿ ಕರೆದು ಪ್ರಾರ್ಥಿಸುತ್ತಾ(ಕೆಲವೊಮ್ಮೆ ನೇರವಾಗಿ) ರಮದಾನ್ 17 ರಂದು
ಬದರಿಂಙಳೆ ಆಂಡ್(ವಾರ್ಷಿಕ) ಆಚರಣೆ ಮಾಡುತ್ತಿದೆ. ಬದರಿಂಙಳು ತ್ಯಾಗಗಳನ್ನು ಸಹಿಸಿ ಹೊಟ್ಟೆಗಿಲ್ಲದೆ ರಣಾಂಗಣಕ್ಕೆ ತೆರಳಿ ಯುದ್ಧ ಮಾಡಿ ತಮ್ಮ ವಿಶ್ವಾಸ ದಾರ್ಢ್ಯತೆಯನ್ನು ರಕ್ಷಿಸಿದ ಘಟನೆ ಇವರ ಪಾಲಿಗೆ ಹಬ್ಬದೂಟ ಮಾಡಿ ನಾಲಿಗೆ ಚಪಲ ತೀರಿಸಲು, ಪಳ್ಳಿಗೆ ಪತ್ತಿರ್ ಕೊಟ್ಟು ಇಸ್ಲಾಮಿನಲ್ಲಿ ನೂತವಾದವಾಗಿ ಸೇರಿಕೊಂಡ ಶಿರ್ಕ್ ಪ್ರಸರಿಸುವ ಬದರ್ ಮೌಲೂದ್ ಓದಲೂ ಹಾಗೂ ತಮ್ಮ ಪ್ರಾಣವನ್ನೇ ರಕ್ಷಿಸಲು ಅಸಹಾಯಕರಾಗಿದ್ದ ಬದರ್ ಶುಹದಾಗಳನ್ನು ಕರೆದು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿ ಪ್ರಾರ್ಥಿಸುವುದಕ್ಕೂ ಸೀಮಿತವಾಗಿದೆ.
ವಾಸ್ತವದಲ್ಲಿ ಇವರ ವಿಶ್ವಾಸ ಮಕ್ಕಾದ ಮುಶ್ರಿಕ್'ಗಳ ವಿಶ್ವಾಸಕ್ಕಿಂತಲೂ ಭೀಕರ ಶಿರ್ಕಿನದ್ದಾಗಿದೆ ಎಂಬುದು ಸತ್ಯ. ಅಬೂಜಹಲ್ ಕೂಡ ಯುದ್ಧಕ್ಕೆ ತೆರಳುವ ಮುನ್ನ ಪವಿತ್ರ ಕ'ಅಬಾಲಯದ ಹೊದಿಕೆ ಹಿಡಿದು ಈ ಎರಡು ಗುಂಪುಗಳಲ್ಲಿ ಸತ್ಯ ಎಲ್ಲಿದೆಯೋ ಅಲ್ಲಿಗೇ ವಿಜಯ ಒಳಿದು ಬರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರುವುದಾಗಿ ನಮಗೆ ಹದೀಸಿನಲ್ಲಿ ಕಾಣಬಹುದು. ಇನ್ನು ಮಕ್ಕಾ ಮುಶ್ರಿಕ್'ಗಳು ತಮ್ಮ ಕಷ್ಟಕಾಲದಲ್ಲಿ ಅಲ್ಲಾಹನೊಂದಿಗೆ ಸಹಾಯ ಅಭ್ಯರ್ಥಿಸಿದ್ದಾಗಿಯೂ ಆ ನಂತರ ಆ ಕಷ್ಟಗಳು ದೂರವಾಗಿ ಸುಖ ಬಂದಾಗ ತಮ್ಮ ಆರಾಧ್ಯರೆಡೆಗೆ ಮರಳಿದ್ದಾಗಿಯೂ ಕುರ್'ಆನ್ ಹೇಳುತ್ತೆ.
ಆದರೆ ಇಂದು ಬದರಿಂಙಳೆ ಆಂಡ್ ನೇರ್ಚೆ ಮಾಡುವ ಸಮಸ್ತದವರು ಇಡೀ ವರ್ಷ ಅಲ್ಲಾಹನಿಗೆ ಮಧ್ಯವರ್ತಿಗಳಾಗಿ ಅವುಲಿಯಾ, ಬದರಿಂಙಳು, ಮಹಮ್ಮದ್(ಸ.ಅ) , ಮುಹಯ್ಯಿದ್ಧಿ ಶೈಖ್(ರ) ಈ ರೀತಿ ಮಧ್ಯವರ್ತಿಗಳಿಲ್ಲದೆ ಈ ಜನ ಅಲ್ಲಾಹನೊಂದಿಗೆ ಪ್ರಾರ್ಥಿಸುವುದೇ ಇಲ್ಲ. ಇನ್ನು ಮಗುವಿಗೆ ತೊಟ್ಟಿಲು ತೂಗುವಾಗ "ಲಾಹಿ ಲಾಹ ಇಲ್ಲಲ್ಲಾಹು ಲಾಹಿ ಲಾಹ ಇಲ್ಲಲ್ಲಾಹ್" ಎಂಬ ತೌಹೀದಿನ ಗೀತೆ ಹಾಡುವ ತಾಯಂದಿರು ಮಗು ತೊಟ್ಟಿಲಿಂದ ಕೆಳಗೆ ಬಿದ್ದರೆ ಕರೆಯುವುದು "ಯಾ ಬದರಿಂಙಳೆ"
"ಯಾ ಮುಹಿಯ್ಯದ್ಧಿ ಶೈಖ್" ಎಂದಾಗಿದೆಯಲ್ಲವೇ..!!
ಇನ್ನು ನಮ್ಮಲ್ಲಿ ಕೆಲವರ ಮನೆಯ ಬಾಗಿಲಲ್ಲಿ ಬದರಿಂಙಳ 313 ಹೆಸರುಗಳನ್ನು ಒಂದು ಹಾಲೆಯಲ್ಲಿ ಬರೆದು ಅಂಟಿಸಿದ್ದು ಕಾಣಬಹುದು. ಇದು ಮನೆಯನ್ನು ಪಿಶಾಚಿ ಭಾದೆ, ಕಳ್ಳಕಾಕರ ಉಪಟಳದಿಂದ ಸಂರಕ್ಷಿಸುತ್ತೆ ಎಂದು ನಂಬಿಸಿ ಈ ರೀತಿಯ ವ್ಯಾಜ್ಯ ಸಾಧನಗಳನ್ನು ಮಾರಾಟ ಮಾಡುವ ಸಲುವಾಗಿ ಮನೆ ಮನೆಗೆ ತಿರುಗುವ ಮುಸ್ಲಿಯಾರ್'ಗಳ ದೊಡ್ಡ ತಂಡವೇ ಇದೆ.
ಈಗ ನೀವೇ ಯೋಚಿಸಿ ಈ ಸಮಸ್ತದವರ ವಿಶ್ವಾಸಕ್ಕೂ ಮಕ್ಕಾ ಮುಶ್ರಿಕ್'ಗಳ ವಿಶ್ವಾಸಕ್ಕೂ ವ್ಯತ್ಯಾಸವೇನು..?? ಉಪವಾಸ ವೃತ ಅನುಷ್ಠಿಸುವ ವ್ಯತ್ಯಾಸವೇ...? ಅಥವಾ ಮುಸ್ಲಿಮರ ಹಾಗೆ ಮಸೀದಿಗೆ ತೆರಳಿ ನಮಾಝ್ ನಿರ್ವಹಿಸುವ ವ್ಯತ್ಯಾಸವೇ...? ಇಸ್ಲಾಮಿನಲ್ಲಿ ಪ್ರವಾದಿ(ಸ.ಅ) ಯವರು ಕಲಿಸಿರದ ಸಹಾಬಿಗಳು ದೀನ್ ಆಗಿ ಪರಿಗಣಿಸದಂತಹ ಕಾರ್ಯಗಳನ್ನು ಇಸ್ಲಾಮಿನಲ್ಲಿ ಸೇರಿಸಿ ದೀನ್ ಎಂದು ಆಚರಿಸುವ ಜನರ ಅರ್ಥಾತ್ *ನೂತನವಾದಿಗಳ ಯಾವುದೇ ಫರ್ಳ್(ಕಡ್ಡಾಯ) ಅಥವಾ ಸುನ್ನತ್'ಆದ ಕರ್ಮಗಳನ್ನು ಅಲ್ಲಾಹನು ಸ್ವೀಕರಿಸಲಾರನು ಎಂದು ಹದೀಸಲ್ಲಿ ಬಂದಿದೆ.*
*[ಅಲ್ ಬುಖಾರಿ - 7300, ಅಲ್ ಮುಸ್ಲಿಮ್ - 1370]*
*ಅಲ್ಲಾಹನು ಪವಿತ್ರ ಕುರ್'ಆನಿನಲ್ಲಿ ಹೇಳುತ್ತಾನೆ;*
*مَا قَدَرُوا اللَّهَ حَقَّ قَدْرِهِ ۗ إِنَّ اللَّهَ لَقَوِيٌّ عَزِيزٌ*
*ಅವರು ಅಲ್ಲಾಹನನ್ನು ಗಣನೆ ಮಾಡಬೇಕಾದ ರೀತಿಯಲ್ಲಿ ಗಣನೆ ಮಾಡಲಿಲ್ಲ. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.*
*[ಅಲ್-ಹಜ್ಜ್ : 74]*
via ಪವಿತ್ರ ಕುರ್ ಆನ್ (Pavitra Qur'aan)
http://bit.ly/KanQuraan
ಬದರ್ ಯುದ್ಧದಲ್ಲಿ ಯುದ್ಧ ಮಾಡಿ ಹುತಾತ್ಮ(ಶಹೀದ್) ರಾದವರಿಗೋ ಇಲ್ಲವೇ ಯುದ್ಧಮಾಡಿದವರಿಗೋ ಯಾರಿಗೂ ಸ್ವತಃ ಅವರವರನ್ನೇ ರಕ್ಷೆ ಮಾಡಲು ಸಾಧ್ಯವಾಗಿಲ್ಲ. ಎಲ್ಲರೂ ಅಲ್ಲಾಹನ ಮೇಲೆ ಭರವಸೆ ಇಟ್ಟು ಜೀವದ ಹಂಗು ತೊರೆದು ಹೋರಾಡಿದರು. ಅವರ ಸಂತ್ಯಸಂಧತೆ ಮತ್ತು ನೇತೃತ್ವದ ಅನುಸರಣೆ ಹಾಗೂ ತಖ್ವ ಅವರಿಗೆ ವಿಜಯ ನೀಡಿತೇ ವಿನಃ ಅವರ ಪರಾಕ್ರಮವಂತೂ ಖಂಡಿತಾ ಅಲ್ಲ. ಎಲ್ಲರ ಸಂಕಷ್ಟಗಳನ್ನು ದೂರೀಕರಿಸಲು ಅಲ್ಲಾಹನಿಗೆ ಮಾತ್ರವೇ ಸಾಧ್ಯವಿರುವುದು.
ಇದರಿಂದ ನಾವು ಅಲ್ಲಾಹನ ಸಹಾಯವೊಂದಿದ್ದರೆ ಕಷ್ಟಗಳು ಸಮುದ್ರದಷ್ಟಿದ್ದರೂ ಈಜಿ ಬರಬಹುದು ಎಂಬ ಪಾಠವನ್ನು ಕಲಿಯಬೇಕೇ ಹೊರತು ಇಂದು ನಮ್ಮ ನಡುವೆ ಕೆಲವರು ಮಾಡುವಹಾಗೆ ಅಲ್ಲಾಹನ ಶಿಫತ್ ಗಳನ್ನು ಬದರಿಂಙಳ ಮೇಲೆ ಹೇಳುವುದಕ್ಕಲ್ಲ.
ಈ ಸಂಧರ್ಭದಲ್ಲಿ ಬದರಿಂಙಳ ವಾರ್ಷಿಕ (ಬದರಿಂಙಳೆ ಆಂಡ್) ಮಾಡುವುದಕ್ಕೆ ಇಸ್ಲಾಮಿನ ಪೂರ್ವಕಾಲದ ಉತ್ತಮ ತಲೆಮಾರಿನಲ್ಲಿ ಜೀವಿಸಿದ ಸಜ್ಜನರಾದ ಸಲಫುಸ್ಸಾಲಿಹೀನ್'ಗಳಲ್ಲಿ ನಮಗೆ ಯಾವುದೇ ಮಾದರಿಯಿಲ್ಲ ಬದಲಾಗಿ ಅದು ನಂತರದ ಕಾಲಘಟ್ಟದಲ್ಲಿ ಯಾವುದೋ ಹೊಟ್ಟೆ ಬಾಕ ಬಿದ'ಇಗಳಿಂದ ಸೇರ್ಪಡೆಗೊಂಡ ಒಂದು ನೂತನಾಚಾರವಾಗಿದೆ. ಇದನ್ನು ಇಂದು ಇಸ್ಲಾಮಿನ ಹೆಸರಿಟ್ಟು ಇಸ್ಲಾಮಿಗೆ ಕಳಂಕ ಹಚ್ಚುತ್ತಿರುವ ಗೋರಿ ಆರಾಧಕ ಕೇರಳ ಸಮಸ್ತದ ಸೂಫಿ ಸಮೂಹವು ಆಚರಿಸಿ ಕೊಂಡು ಬರುತ್ತಿದೆ.
ಆದರೆ ಬದರಿಂಙಳೋ ಅಥವಾ ಇವರಿಗಿಂತ ನಂತರ ಜೀವಿಸಿದ ಸ್ವಹಾಬಿಗಳೋ ಯಾರೂ ಕೂಡ ಈ ದಿವಸ ಬದರಿಂಙಳ ವಾರ್ಷಿಕ (ಬದರಿಂಙಳೆ ಆಂಡ್) ಮಾಡಿಲ್ಲ. ಇವರ ನಂತರ ಇವರ ಕುಟುಂಬಸ್ಥರು ತುಂಬಾ ಸಮಯ ಜೀವಿಸಿದ್ದರು ಅವರು ಯಾರೂ ಕೂಡ ಬದರಿಂಙಳೆ ಆಂಡ್ ಮಾಡಿಲ್ಲ. ಬದರ್ ಯುದ್ಧದಲ್ಲಿ ಪಾಲ್ಗೊಂಡ ಬದರಿಂಙಳಿಗೆ ಅಲ್ಲಾಹನ ಬಳಿ ತುಂಬಾ ಮಹತ್ವದ ಪದವಿಯಿದೆ. ಆದರೂ ಕೂಡ ಇವರ ನಂತರ ಬಂದವರು ಯಾರೂ ಕೂಡ ಬದರಿಂಙಳೊಂದಿಗೆ ಪ್ರಾರ್ಥಿಸಿಲ್ಲ, ಇಸ್ತಿಗಾಸ ನಡೆಸಿಲ್ಲ.
*قُلْ إِنَّمَا أَدْعُو رَبِّي وَلَا أُشْرِكُ بِهِ أَحَدًا*
*(ಓ ಪ್ರವಾದಿಯವರೇ!) ಹೇಳಿರಿ: ‘ನಾನು ನನ್ನ ಪ್ರಭುವನ್ನು ಮಾತ್ರ ಕರೆದು ಪ್ರಾರ್ಥಿಸುವೆನು. ಅವನೊಂದಿಗೆ ಯಾರನ್ನೂ ನಾನು ಸಹಭಾಗಿಯನ್ನಾಗಿ ಮಾಡಲಾರೆನು’.*
*[ಅಲ್-ಜಿನ್ನ್ : 20]*
via ಪವಿತ್ರ ಕುರ್ ಆನ್ (Pavitra Qur'aan)
http://bit.ly/KanQuraan
ಪವಿತ್ರ ಕುರ್'ಆನಿನ ಈ ಕರೆಗೆ ಓ...ಗೊಟ್ಟವರಾಗಿದ್ದಾರೆ ಬದರಿಂಙಳು. ಆದುದರಿಂದ ನಾವು ಅವರು ಬಿಟ್ಟುಹೋದ ಪಾದಹೆಜ್ಜೆಗಳನ್ನು ಅನುಸರಿಸಬೇಕಾಗಿದೆ.
ಕಷ್ಟದಲ್ಲೂ ಸುಖದಲ್ಲೂ ಸ್ತುತಿ
ಪ್ರಾರ್ಥನೆ ಗಳೆಲ್ಲವೂ ಕೂಡ ಸರಿಸಾಟಿ ಇಲ್ಲದ ಏಕ ಮಾತ್ರ ನಮ್ಮ ಸೃಷ್ಟಿಕರ್ತನಾದ ಅಲ್ಲಾಹನಿಗೆ ಮಾತ್ರ ಮೀಸಲಿಡಬೇಕಾಗಿದೆ. ಅಲ್ಲಾಹು ನಮ್ಮೆಲ್ಲರನ್ನು ಅನುಗ್ರಹಿಸಲಿ.
*✍🏽 ನೌಫಲ್ ಕೆರೀಂ*