11 Oct 2016

ಬದರ್ ಸಂದೇಶ.

*ಬದರ್ ಸಂದೇಶ*

ನನ್ನ ಪ್ರೀತಿಯ ಸತ್ಯ ವಿಶ್ವಾಸಿ ಸಹೋದರ ಸಹೋದರಿಯರೆ,
ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹಿ ವ ಬರಕಾತುಹು.

ಹಿಜಿರ 2ನೇ ವರ್ಷ ರಮಳಾನ್ 17ನೇ ದಿವಸ ಇಸ್ಲಾಮಿನ ಅಳಿವು ಉಳಿವಿನ ಬದರ್ ಯುದ್ಧ ನಡೆದ ದಿನ.

*ಯಾರ ನಡುವೆ ಯುದ್ಧ...?*

ಅಲ್ಲಾಹನನ್ನು ಮಾತ್ರ ಆರಾಧಿಸುತ್ತಿರುವುದಕ್ಕಾಗಿ, ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥನೆ ಮತ್ತು ಇಸ್ತಿಗಾಸ ನಡೆಸುತ್ತಿದ್ದಕ್ಕಾಗಿ ಮತ್ತು ಅಲ್ಲಾಹನೆಡೆಗೆ ಜನರನ್ನು ಕರೆಯುತ್ತಿರುವುದಕ್ಕಾಗಿ
ಅಮಾನವೀಯವಾಗಿ ಪೀಡಿಸಿದ ಮಕ್ಕಾದ ಕುರೈಷಿ ಮುಶ್ರಿಕ್ ಗಳ ಘೋರ ಪೀಡನೆಗಳನ್ನು ಸಹಿಸಲಾರದೆ ಮಕ್ಕಾದಿಂದ ಮದೀನಾಗೆ ವಲಸೆ ಹೋದ
ನಾಯಕ ಪ್ರವಾದಿ ಮಹಮ್ಮದ್ (ಸ.ಅ) ರವರು ಮತ್ತು ಅವರು ತಂದ ಅಲ್ಲಾಹನ ಆಜ್ಞೆ ಗಳನ್ನು ಶಿರಸಾವಹಿಸಿ ಪಾಲಿಸಿ ಜೀವಿಸುತ್ತಿದ್ದ ಮುವಹ್ಹಿದ್'ಗಳಾದ ಮುಹಾಜಿರ್ ಹಾಗೂ ಮದೀನಾದ ಅನ್ಸಾರಿಗಳಾದ ಸ್ವಹಾಬಿಗಳನ್ನೊಳಗೊಂಡ ಒಟ್ಟು 313ಮಂದಿಯ ಒಂದು ಸಣ್ಣ ಗುಂಪು ಒಂದು  ಭಾಗದಲ್ಲೂ

ಹಾಗೂ

ಅಲ್ಲಾಹನಿಗೆ ಹತ್ತಿರವಾಗಲು ಇಬ್ರಾಹಿಂ(ಅ) ಮತ್ತು ಇಸ್ಮಾಯೀಲ್(ಅ) ಹಾಗೂ ಲಾತ, ಉಝ್ಝ, ಮನಾತ ಗಳಂತಹ ಮಹಾನ್‌ಗಳನ್ನು ಕರೆದು ಪ್ರಾರ್ಥಿಸುತ್ತಿದ್ದ ಅಮ್ರ್ ಇಬ್ನ್ ಹಿಶಾಮ್(ಅಬೂ ಜಹಲ್), ಉತ್ಬಾ ಬಿನ್ ರಬೀಅ, ಉಬಯ್ಯ್ ಇಬ್ನ್ ಖಲಫ್ ಮುಂತಾದ ದುರಹಂಕಾರಿ ನಾಯಕರನ್ನೊಳಗೊಂಡ ಮದಿರೆ ಮತ್ತು ಹೆಂಗಳೆಯರ ದಾಸರಾಗಿದ್ದ ಸುಮಾರು 950 ಮಂದಿ  ಮಕ್ಕಾದ ಕುರೈಷ್ ಮುಶ್ರಿಕ್‌ಗಳು ಮತ್ತೊಂದು ಭಾಗದಲ್ಲಿ.

ಇವರ ನಡುವೆ ಆಗಿತ್ತು ಯುದ್ಧ.

*ಯಾಕಾಗಿ ಯುದ್ಧ...?*

*ಮುಸ್ಲಿಮರ ಪಕ್ಷದಲ್ಲಿ :*

ನೈಜ ಸೃಷ್ಟಿಕರ್ತನನ್ನು ಆರಾಧಿಸಿ ತೌಹೀದ್ ಅನುಸರಿಸಿ ಜೀವಿಸುವ ಹಕ್ಕುಗಳಿಗಾಗಿ ಮತ್ತು ವಿಶ್ವಾಸ ಸಂರಕ್ಷಣೆಗಾಗಿ.

*ಮುಶ್ರಿಕರ ಪಕ್ಷದಲ್ಲಿ :*

ಮಕ್ಕಾದಿಂದ ಹೊರದಬ್ಬಲ್ಪಟ್ಟು ನೆರೆಯ ಮದೀನಾದಲ್ಲಿ ಆಶ್ರಯ ಪಡೆದ ಒಂದು ಪೀಡಿತ ಸಮೂಹವನ್ನು ಮರ್ದಿಸಿ ತಮ್ಮ ದುರಹಂಕಾರಿ ನಾಯಕರ ಪ್ರತಿಷ್ಟೆ ಕಾಪಾಡಲು ಹಾಗೂ ಮಹಮ್ಮದರು(ಸ.ಅ) ಸುಳ್ಳಾಗಿಸಿದ ತಮ್ಮ ಆರಾಧ್ಯರ ಘನತೆಯನ್ನು ಸಂರಕ್ಷಿಸಲು.

*ಮಕ್ಕಾದ ಮುಶ್ರಿಕ್ ಗಳ ಸೇನಾಬಲ :*

- 100 ಕುದುರೆಗಳು
- 170 ಒಂಟೆಗಳು

*ಮುಸ್ಲಿಮರ ಸೇನಾ ಬಲ :*

- 2 ಕುದುರೆಗಳು
- 70 ಒಂಟೆಗಳು

*ಫಲಿತಾಂಶ :*

ಮುಸ್ಲಿಮರ ಅಭೂತಪೂರ್ವ ವಿಜಯ.

- 70 ಮುಶ್ರಿಕ್ ಗಳು ಕೊಲ್ಲಲ್ಪಟ್ಟರು ಅನೇಕರು ಯುದ್ಧ ಕೈದಿಗಳಾಗಿ ಬಂಧಿಸಲ್ಪಟ್ಟರು.

- ಮುಸ್ಲಿಮ್ ಪಕ್ಷದಲ್ಲಿ 14 ಸಹಾಬಿಗಳು ಹುತಾತ್ಮರಾದರು.

*ಯಾರು ಬದರಿಂಙಳು...?*

ಅಲ್ಲಾಹನ ದೀನ್ ಸಂರಕ್ಷಣೆಗಾಗಿ ನಾಯಕನ ಆಜ್ಞೆ ಯನ್ನು ಪಾಲಿಸಿ ಉಡಲು ಸರಿಯಾದ ವಸ್ತ್ರವಿಲ್ಲದ ಕೈಯಲ್ಲಿ ಆಯುಧವಿಲ್ಲದ ಸುಡುವ ಮರಳುಗಾಡಿನ ಹೊಯಿಗೆಯಲ್ಲಿ ಬರಿಗಾಲಲ್ಲಿ ಬರಿಹೊಟ್ಟೆಯಲ್ಲಿ ಪ್ರಯಾಣಿಸಿ ಯುದ್ಧ ಭೂಮಿಯನ್ನು ತಲುಪಿದವರು. ಇವರಲ್ಲಿ ಇದ್ದ ಆಯುಧ ಒಂದೇ ಅದು ತಖ್ವ. ಏನೇ ಆದರೂ ಅಲ್ಲಾಹನ ಮೇಲೆ ದೃಢವಿಶ್ವಾಸದಿಂದ ಭರವಸೆಯಿಟ್ಟು ಮುನ್ನುಗ್ಗುವ ಅಚಂಚಲ ಈಮಾನ್. ಇವರು ಮರಳಿ ತಮ್ಮ ತಮ್ಮ ಮನೆಗೆ ಹಿಂದಿರುಗುವ ಆಸೆ ಇಟ್ಟು ಹೊರಟು ಬಂದವರಲ್ಲ. ಇಸ್ಲಾಮಿಗಾಗಿ ತಮ್ಮ ಮನೆ, ತೋಟ, ಮಡದಿ, ಮಕ್ಕಳು ಹೀಗೆ ಲೋಕದ ಸರ್ವ ಸುಖಾಡಂಭರಗಳನ್ನು ತ್ಯಜಿಸಿ ಬಂದ ಮಕ್ಕಾದ ತ್ಯಾಗಿಗಳಾದ ಮುಹಾಜಿರ್'ಗಳು ಇವರಲ್ಲಿದ್ದರು. ಅದೇ ರೀತಿ ಮಕ್ಕಾದಿಂದ ಮದೀನಾಗೆ ವಲಸೆ ಬಂದವರಿಗೆ ತಮ್ಮ ಉಡುಪು, ಆಹಾರ, ಮನೆ, ತೋಟ ಮುಂತಾದ ಸೊತ್ತುಗಳನ್ನು ನೀಡಿ ಅವರ ಘನತೆ ಗೌರವಗಳನ್ನು ರಕ್ಷಿಸಿದ ತ್ಯಾಗಿಗಳಾದ ಮದೀನಾದ ಅನ್ಸಾರೀ ಸ್ವಹಾಬಿಗಳೂ ಕೂಡ ಈ ಪುಟ್ಟ ಸೇನೆಯ ಭಾಗವಾಗಿದ್ದರು. ಇವರ ತ್ಯಾಗ ಮತ್ತು ಸಹನೆಯಿಂದಾಗಿ ಅಲ್ಲಾಹನ ಸಹಾಯವು ಒದಗಿಬಂತು.

*ಅಲ್ಲಾಹನು ಪವಿತ್ರ ಕುರ್'ಆನಿ ನಲ್ಲಿ ಹೇಳುತ್ತಾನೆ,*

*ನೀವು ನಿಮ್ಮ ಪ್ರಭುವಿನೊಂದಿಗೆ ಸಹಾಯವನ್ನು ಬೇಡಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ಸಾವಿರ ಮಲಕ್ ಗಳನ್ನು ಎಡೆಬಿಡದೆ ಕಳುಹಿಸುವ ಮೂಲಕ ನಾನು ನಿಮಗೆ ಸಹಾಯ ಮಾಡುವೆನು ಎಂದು ಅವನು ನಿಮಗೆ ಉತ್ತರವಿತ್ತನು.*

*[ಅಲ್-ಅನ್ಫಾಲ್ : 9]*

*ಆದರೆ ಇವತ್ತು.....?*

ಅಲ್ಲಾಹನಿಗೆ ಹತ್ತಿರವಾಗಲು ಇಬ್ರಾಹೀಂ(ಅ), ಇಸ್ಮಾಯೀಲ್(ಅ), ಲಾತ, ಉಝ್ಝ , ಮನಾತ ಮುಂತಾದ ಮಧ್ಯವರ್ತಿಗಳನ್ನು ಕರೆದು ಪ್ರಾರ್ಥಿಸುತ್ತಿದ್ದ ಅಬೂಜಹಲ್,  ಉತ್ಬತ್ ಮುಂತಾದ ಮಕ್ಕಾದ ಧಿಕ್ಕಾರಿ ನಾಯಕರ ವಿಶ್ವಾಸವನ್ನೇ ಹೋಲುವ ವಿಶ್ವಾಸದೊಂದಿಗೆ ಮುಸ್ಲಿಮ್ ಸಮುದಾಯದಲ್ಲಿ ಮಾಲೆ, ಮೌಲೂದ್, ಕುತ್ತುರಾತೀಬು, ರಸೂಲುಲ್ಲಾಹ್(ಸ.ಅ) ರ ವ್ಯಾಜ್ಯ ಕೂದಲು ತಂದು ವಂಚನೆ, ದರ್ಗಾದ ಹೆಸರಿನಲ್ಲಿ ಶಿರ್ಕ್ ಬಿದ'ಅತ್'ನ ಗಿಡ ನೆಟ್ಟು ಅದನ್ನು ಪೋಷಿಸುತ್ತಿರುವ ಕೇರಳ ಮೂಲಕ ವ್ಯಾಜ್ಯ ಅಹ್ಲುಸ್ಸುನ್ನತ್ ಜಮಾತ್ ಸಮಸ್ತವು ಈ ಬದರ್ ಯುದ್ಧದಲ್ಲಿ ಭಾಗವಹಿಸಿದ ಬದರಿಂಙಳನ್ನು ಅಲ್ಲಾಹನಿಗೆ ಮಧ್ಯವರ್ತಿಯಾಗಿ ಕರೆದು ಪ್ರಾರ್ಥಿಸುತ್ತಾ(ಕೆಲವೊಮ್ಮೆ ನೇರವಾಗಿ) ರಮದಾನ್ 17 ರಂದು
ಬದರಿಂಙಳೆ ಆಂಡ್(ವಾರ್ಷಿಕ) ಆಚರಣೆ ಮಾಡುತ್ತಿದೆ. ಬದರಿಂಙಳು ತ್ಯಾಗಗಳನ್ನು ಸಹಿಸಿ ಹೊಟ್ಟೆಗಿಲ್ಲದೆ ರಣಾಂಗಣಕ್ಕೆ ತೆರಳಿ ಯುದ್ಧ ಮಾಡಿ ತಮ್ಮ ವಿಶ್ವಾಸ ದಾರ್ಢ್ಯತೆಯನ್ನು ರಕ್ಷಿಸಿದ ಘಟನೆ ಇವರ ಪಾಲಿಗೆ ಹಬ್ಬದೂಟ ಮಾಡಿ ನಾಲಿಗೆ ಚಪಲ ತೀರಿಸಲು, ಪಳ್ಳಿಗೆ ಪತ್ತಿರ್ ಕೊಟ್ಟು ಇಸ್ಲಾಮಿನಲ್ಲಿ ನೂತವಾದವಾಗಿ ಸೇರಿಕೊಂಡ ಶಿರ್ಕ್ ಪ್ರಸರಿಸುವ ಬದರ್ ಮೌಲೂದ್ ಓದಲೂ ಹಾಗೂ ತಮ್ಮ ಪ್ರಾಣವನ್ನೇ ರಕ್ಷಿಸಲು ಅಸಹಾಯಕರಾಗಿದ್ದ ಬದರ್ ಶುಹದಾಗಳನ್ನು ಕರೆದು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿ ಪ್ರಾರ್ಥಿಸುವುದಕ್ಕೂ ಸೀಮಿತವಾಗಿದೆ.

ವಾಸ್ತವದಲ್ಲಿ ಇವರ ವಿಶ್ವಾಸ ಮಕ್ಕಾದ ಮುಶ್ರಿಕ್'ಗಳ ವಿಶ್ವಾಸಕ್ಕಿಂತಲೂ ಭೀಕರ ಶಿರ್ಕಿನದ್ದಾಗಿದೆ ಎಂಬುದು ಸತ್ಯ. ಅಬೂಜಹಲ್ ಕೂಡ ಯುದ್ಧಕ್ಕೆ ತೆರಳುವ ಮುನ್ನ ಪವಿತ್ರ ಕ'ಅಬಾಲಯದ ಹೊದಿಕೆ ಹಿಡಿದು ಈ ಎರಡು ಗುಂಪುಗಳಲ್ಲಿ ಸತ್ಯ ಎಲ್ಲಿದೆಯೋ ಅಲ್ಲಿಗೇ ವಿಜಯ ಒಳಿದು ಬರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರುವುದಾಗಿ ನಮಗೆ ಹದೀಸಿನಲ್ಲಿ ಕಾಣಬಹುದು. ಇನ್ನು ಮಕ್ಕಾ ಮುಶ್ರಿಕ್'ಗಳು ತಮ್ಮ ಕಷ್ಟಕಾಲದಲ್ಲಿ ಅಲ್ಲಾಹನೊಂದಿಗೆ ಸಹಾಯ ಅಭ್ಯರ್ಥಿಸಿದ್ದಾಗಿಯೂ ಆ ನಂತರ ಆ ಕಷ್ಟಗಳು ದೂರವಾಗಿ ಸುಖ ಬಂದಾಗ ತಮ್ಮ ಆರಾಧ್ಯರೆಡೆಗೆ ಮರಳಿದ್ದಾಗಿಯೂ ಕುರ್'ಆನ್ ಹೇಳುತ್ತೆ.

ಆದರೆ ಇಂದು ಬದರಿಂಙಳೆ ಆಂಡ್ ನೇರ್ಚೆ ಮಾಡುವ ಸಮಸ್ತದವರು ಇಡೀ ವರ್ಷ ಅಲ್ಲಾಹನಿಗೆ ಮಧ್ಯವರ್ತಿಗಳಾಗಿ ಅವುಲಿಯಾ, ಬದರಿಂಙಳು, ಮಹಮ್ಮದ್(ಸ.ಅ) , ಮುಹಯ್ಯಿದ್ಧಿ ಶೈಖ್(ರ) ಈ ರೀತಿ ಮಧ್ಯವರ್ತಿಗಳಿಲ್ಲದೆ ಈ ಜನ ಅಲ್ಲಾಹನೊಂದಿಗೆ ಪ್ರಾರ್ಥಿಸುವುದೇ ಇಲ್ಲ. ಇನ್ನು ಮಗುವಿಗೆ ತೊಟ್ಟಿಲು ತೂಗುವಾಗ "ಲಾಹಿ ಲಾಹ ಇಲ್ಲಲ್ಲಾಹು ಲಾಹಿ ಲಾಹ ಇಲ್ಲಲ್ಲಾಹ್" ಎಂಬ ತೌಹೀದಿನ ಗೀತೆ ಹಾಡುವ ತಾಯಂದಿರು ಮಗು ತೊಟ್ಟಿಲಿಂದ ಕೆಳಗೆ ಬಿದ್ದರೆ ಕರೆಯುವುದು "ಯಾ ಬದರಿಂಙಳೆ"
 "ಯಾ ಮುಹಿಯ್ಯದ್ಧಿ ಶೈಖ್" ಎಂದಾಗಿದೆಯಲ್ಲವೇ..!!

ಇನ್ನು ನಮ್ಮಲ್ಲಿ ಕೆಲವರ ಮನೆಯ ಬಾಗಿಲಲ್ಲಿ ಬದರಿಂಙಳ 313 ಹೆಸರುಗಳನ್ನು ಒಂದು ಹಾಲೆಯಲ್ಲಿ ಬರೆದು ಅಂಟಿಸಿದ್ದು ಕಾಣಬಹುದು. ಇದು ಮನೆಯನ್ನು ಪಿಶಾಚಿ ಭಾದೆ, ಕಳ್ಳಕಾಕರ ಉಪಟಳದಿಂದ ಸಂರಕ್ಷಿಸುತ್ತೆ ಎಂದು ನಂಬಿಸಿ ಈ ರೀತಿಯ ವ್ಯಾಜ್ಯ ಸಾಧನಗಳನ್ನು ಮಾರಾಟ ಮಾಡುವ ಸಲುವಾಗಿ ಮನೆ ಮನೆಗೆ ತಿರುಗುವ ಮುಸ್ಲಿಯಾರ್'ಗಳ ದೊಡ್ಡ ತಂಡವೇ ಇದೆ.

ಈಗ ನೀವೇ ಯೋಚಿಸಿ ಈ ಸಮಸ್ತದವರ ವಿಶ್ವಾಸಕ್ಕೂ ಮಕ್ಕಾ ಮುಶ್ರಿಕ್'ಗಳ ವಿಶ್ವಾಸಕ್ಕೂ ವ್ಯತ್ಯಾಸವೇನು..?? ಉಪವಾಸ ವೃತ ಅನುಷ್ಠಿಸುವ ವ್ಯತ್ಯಾಸವೇ...? ಅಥವಾ ಮುಸ್ಲಿಮರ ಹಾಗೆ ಮಸೀದಿಗೆ ತೆರಳಿ ನಮಾಝ್ ನಿರ್ವಹಿಸುವ ವ್ಯತ್ಯಾಸವೇ...? ಇಸ್ಲಾಮಿನಲ್ಲಿ ಪ್ರವಾದಿ(ಸ.ಅ) ಯವರು ಕಲಿಸಿರದ ಸಹಾಬಿಗಳು ದೀನ್ ಆಗಿ ಪರಿಗಣಿಸದಂತಹ ಕಾರ್ಯಗಳನ್ನು ಇಸ್ಲಾಮಿನಲ್ಲಿ ಸೇರಿಸಿ ದೀನ್ ಎಂದು ಆಚರಿಸುವ ಜನರ ಅರ್ಥಾತ್ *ನೂತನವಾದಿಗಳ ಯಾವುದೇ ಫರ್ಳ್(ಕಡ್ಡಾಯ) ಅಥವಾ ಸುನ್ನತ್'ಆದ ಕರ್ಮಗಳನ್ನು ಅಲ್ಲಾಹನು ಸ್ವೀಕರಿಸಲಾರನು ಎಂದು ಹದೀಸಲ್ಲಿ ಬಂದಿದೆ.*
*[ಅಲ್ ಬುಖಾರಿ - 7300, ಅಲ್ ಮುಸ್ಲಿಮ್ - 1370]*

*ಅಲ್ಲಾಹನು ಪವಿತ್ರ ಕುರ್'ಆನಿನಲ್ಲಿ ಹೇಳುತ್ತಾನೆ;*

*مَا قَدَرُوا اللَّهَ حَقَّ قَدْرِهِ ۗ إِنَّ اللَّهَ لَقَوِيٌّ عَزِيزٌ*

*ಅವರು ಅಲ್ಲಾಹನನ್ನು ಗಣನೆ ಮಾಡಬೇಕಾದ ರೀತಿಯಲ್ಲಿ  ಗಣನೆ ಮಾಡಲಿಲ್ಲ. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.*

*[ಅಲ್-ಹಜ್ಜ್ : 74]*
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ಬದರ್ ಯುದ್ಧದಲ್ಲಿ ಯುದ್ಧ ಮಾಡಿ ಹುತಾತ್ಮ(ಶಹೀದ್) ರಾದವರಿಗೋ ಇಲ್ಲವೇ ಯುದ್ಧಮಾಡಿದವರಿಗೋ ಯಾರಿಗೂ ಸ್ವತಃ ಅವರವರನ್ನೇ ರಕ್ಷೆ ಮಾಡಲು ಸಾಧ್ಯವಾಗಿಲ್ಲ. ಎಲ್ಲರೂ ಅಲ್ಲಾಹನ ಮೇಲೆ ಭರವಸೆ ಇಟ್ಟು ಜೀವದ ಹಂಗು ತೊರೆದು ಹೋರಾಡಿದರು. ಅವರ ಸಂತ್ಯಸಂಧತೆ ಮತ್ತು ನೇತೃತ್ವದ ಅನುಸರಣೆ ಹಾಗೂ ತಖ್ವ ಅವರಿಗೆ ವಿಜಯ ನೀಡಿತೇ ವಿನಃ ಅವರ ಪರಾಕ್ರಮವಂತೂ ಖಂಡಿತಾ ಅಲ್ಲ. ಎಲ್ಲರ ಸಂಕಷ್ಟಗಳನ್ನು ದೂರೀಕರಿಸಲು ಅಲ್ಲಾಹನಿಗೆ ಮಾತ್ರವೇ ಸಾಧ್ಯವಿರುವುದು.
ಇದರಿಂದ ನಾವು ಅಲ್ಲಾಹನ ಸಹಾಯವೊಂದಿದ್ದರೆ ಕಷ್ಟಗಳು ಸಮುದ್ರದಷ್ಟಿದ್ದರೂ ಈಜಿ ಬರಬಹುದು ಎಂಬ ಪಾಠವನ್ನು ಕಲಿಯಬೇಕೇ ಹೊರತು ಇಂದು ನಮ್ಮ ನಡುವೆ ಕೆಲವರು ಮಾಡುವಹಾಗೆ ಅಲ್ಲಾಹನ ಶಿಫತ್ ಗಳನ್ನು ಬದರಿಂಙಳ ಮೇಲೆ ಹೇಳುವುದಕ್ಕಲ್ಲ.

ಈ ಸಂಧರ್ಭದಲ್ಲಿ ಬದರಿಂಙಳ ವಾರ್ಷಿಕ (ಬದರಿಂಙಳೆ ಆಂಡ್) ಮಾಡುವುದಕ್ಕೆ ಇಸ್ಲಾಮಿನ ಪೂರ್ವಕಾಲದ ಉತ್ತಮ ತಲೆಮಾರಿನಲ್ಲಿ ಜೀವಿಸಿದ ಸಜ್ಜನರಾದ ಸಲಫುಸ್ಸಾಲಿಹೀನ್'ಗಳಲ್ಲಿ ನಮಗೆ ಯಾವುದೇ ಮಾದರಿಯಿಲ್ಲ ಬದಲಾಗಿ ಅದು ನಂತರದ ಕಾಲಘಟ್ಟದಲ್ಲಿ ಯಾವುದೋ ಹೊಟ್ಟೆ ಬಾಕ ಬಿದ'ಇಗಳಿಂದ ಸೇರ್ಪಡೆಗೊಂಡ ಒಂದು ನೂತನಾಚಾರವಾಗಿದೆ. ಇದನ್ನು ಇಂದು ಇಸ್ಲಾಮಿನ ಹೆಸರಿಟ್ಟು ಇಸ್ಲಾಮಿಗೆ ಕಳಂಕ ಹಚ್ಚುತ್ತಿರುವ ಗೋರಿ ಆರಾಧಕ ಕೇರಳ ಸಮಸ್ತದ ಸೂಫಿ ಸಮೂಹವು ಆಚರಿಸಿ ಕೊಂಡು ಬರುತ್ತಿದೆ.

ಆದರೆ ಬದರಿಂಙಳೋ ಅಥವಾ ಇವರಿಗಿಂತ ನಂತರ ಜೀವಿಸಿದ ಸ್ವಹಾಬಿಗಳೋ ಯಾರೂ ಕೂಡ ಈ ದಿವಸ ಬದರಿಂಙಳ ವಾರ್ಷಿಕ (ಬದರಿಂಙಳೆ ಆಂಡ್) ಮಾಡಿಲ್ಲ. ಇವರ ನಂತರ ಇವರ ಕುಟುಂಬಸ್ಥರು ತುಂಬಾ ಸಮಯ ಜೀವಿಸಿದ್ದರು ಅವರು ಯಾರೂ ಕೂಡ ಬದರಿಂಙಳೆ ಆಂಡ್ ಮಾಡಿಲ್ಲ. ಬದರ್ ಯುದ್ಧದಲ್ಲಿ ಪಾಲ್ಗೊಂಡ ಬದರಿಂಙಳಿಗೆ ಅಲ್ಲಾಹನ ಬಳಿ ತುಂಬಾ ಮಹತ್ವದ ಪದವಿಯಿದೆ. ಆದರೂ ಕೂಡ ಇವರ ನಂತರ ಬಂದವರು ಯಾರೂ ಕೂಡ ಬದರಿಂಙಳೊಂದಿಗೆ ಪ್ರಾರ್ಥಿಸಿಲ್ಲ, ಇಸ್ತಿಗಾಸ ನಡೆಸಿಲ್ಲ.

*قُلْ إِنَّمَا أَدْعُو رَبِّي وَلَا أُشْرِكُ بِهِ أَحَدًا*

*(ಓ ಪ್ರವಾದಿಯವರೇ!) ಹೇಳಿರಿ: ‘ನಾನು ನನ್ನ ಪ್ರಭುವನ್ನು ಮಾತ್ರ ಕರೆದು ಪ್ರಾರ್ಥಿಸುವೆನು. ಅವನೊಂದಿಗೆ ಯಾರನ್ನೂ ನಾನು ಸಹಭಾಗಿಯನ್ನಾಗಿ ಮಾಡಲಾರೆನು’.*

*[ಅಲ್-ಜಿನ್ನ್ : 20]*
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ಪವಿತ್ರ ಕುರ್'ಆನಿನ ಈ ಕರೆಗೆ ಓ...ಗೊಟ್ಟವರಾಗಿದ್ದಾರೆ ಬದರಿಂಙಳು. ಆದುದರಿಂದ ನಾವು ಅವರು ಬಿಟ್ಟುಹೋದ ಪಾದಹೆಜ್ಜೆಗಳನ್ನು ಅನುಸರಿಸಬೇಕಾಗಿದೆ.
ಕಷ್ಟದಲ್ಲೂ ಸುಖದಲ್ಲೂ ಸ್ತುತಿ
ಪ್ರಾರ್ಥನೆ ಗಳೆಲ್ಲವೂ ಕೂಡ ಸರಿಸಾಟಿ ಇಲ್ಲದ ಏಕ ಮಾತ್ರ ನಮ್ಮ ಸೃಷ್ಟಿಕರ್ತನಾದ ಅಲ್ಲಾಹನಿಗೆ ಮಾತ್ರ ಮೀಸಲಿಡಬೇಕಾಗಿದೆ. ಅಲ್ಲಾಹು ನಮ್ಮೆಲ್ಲರನ್ನು ಅನುಗ್ರಹಿಸಲಿ.

*✍🏽 ನೌಫಲ್ ಕೆರೀಂ*

ಕಬರ್ ನಲ್ಲಿರುವ ಪ್ರವಾದಿ ಮಹಮ್ಮದ್ (ﷺ)ಯವರನ್ನು ಯಾರಾದರೂ ಕರೆದರೆ ಅವರು ಆಲಿಸುತ್ತಾರೆಯೇ..?

ಕಬರ್ ನಲ್ಲಿರುವ ಪ್ರವಾದಿ ಮಹಮ್ಮದ್ (ﷺ)ಯವರನ್ನು ಯಾರಾದರೂ ಕರೆದರೆ ಅವರು ಆಲಿಸುತ್ತಾರೆಯೇ..?

ಪ್ರವಾದಿ (ﷺ) ಯವರು ಕಬರ್ ನಲ್ಲಿ ಬರ್ಝಕ್ ಜೀವನದ ಅರ್ಥದಲ್ಲಿ ಬದುಕಿದ್ದಾರೆ. ಅವರು ಇಹಲೋಕದಲ್ಲಿ ಮಾಡಿದ ಅವರ ಶ್ರೇಷ್ಠ ಕರ್ಮಕ್ಕೆ ಫಲವಾಗಿ ಬರ್ಝಕಿ ಜೀವನದಲ್ಲಿ ಅಲ್ಲಾಹನ ಅನುಗ್ರಹವನ್ನು ಅನುಭವಿಸುತ್ತಿದ್ದಾರೆ. ಆದರೆ ಕಬರ್ ಜೀವನ ಅಥವಾ ಬರ್ಝಕ್ ಜೀವನ ಇಹಲೋಕದ ಜೀವನದಂತೆ ಅಲ್ಲ ಅಥವಾ ಅದರ ನಂತರ ಬರಲಿರುವ ಪರಲೋಕದ ಜೀವನದಂತೆಯೂ ಅಲ್ಲ. ಇಹಲೋಕ ಮತ್ತು ಪರಲೋಕದ ಜೀವನದ ಮಧ್ಯೆ ಬರುವ ಜೀವನವಾಗಿದೆ ಬರ್ಝಕ್ ಜೀವನ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರವಾದಿ (ﷺ) ಯವರು ಅವರಿಗಿಂತ ಮೊದಲು ಮರಣ ಹೊಂದಿರುವ ಪ್ರವಾದಿಗಳು ಹಾಗೂ ಇತರ ಜನರ ಹಾಗೆ ಮರಣ ಹೊಂದಿದ್ದಾರೆ.

ಕುರ್ ಆನ್ ಹೇಳುತ್ತೆ;

وَمَا جَعَلْنَا لِبَشَرٍ مِنْ قَبْلِكَ الْخُلْدَ ۖ أَفَإِنْ مِتَّ فَهُمُ الْخَالِدُونَ

(ಓ ಪ್ರವಾದಿಯವರೇ!) ತಮಗಿಂತ ಮುಂಚೆ ಯಾವುದೇ ಮನುಷ್ಯನಿಗೂ ನಾವು ಶಾಶ್ವತತೆಯನ್ನು ನೀಡಿಲ್ಲ. ಹೀಗಿರುವಾಗ ತಾವು ಮರಣಹೊಂದಿದರೆ ಅವರು ಶಾಶ್ವತರಾಗಿ ಉಳಿಯುವರೇ?

[ಅಲ್-ಅಂಬಿಯಾ : 34]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

كُلُّ مَنْ عَلَيْهَا فَانٍ

ಅಲ್ಲಿ(ಭೂಮುಖದಲ್ಲಿ)ರುವ ಎಲ್ಲರೂ ನಾಶ ವಾಗುವರು.

 ... وَيَبْقَىٰ وَجْهُ رَبِّكَ ذُو الْجَلَالِ وَالْإِكْرَامِ

ಮಹತ್ವವುಳ್ಳವನೂ ಔದಾರ್ಯವುಳ್ಳವನೂ ಆದ ತಮ್ಮ ಪ್ರಭುವಿನ ಮುಖವು ಬಾಕಿಯುಳಿಯುವುದು.

[ಅರ್ರಹ್ಮಾನ್ : 26 - 27]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

إِنَّكَ مَيِّتٌ وَإِنَّهُمْ مَيِّتُونَ

ಖಂಡಿತವಾಗಿಯೂ ತಾವು ಮರಣಹೊಂದುವಿರಿ ಮತ್ತು ಅವರೂ ಮರಣಹೊಂದುವರು.

[ಅಝ್ಝುಮರ್ : 30]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ಇದಲ್ಲದೆ ಇನ್ನೂ ಕೆಲವು ಕುರ್ ಆನಿನ ವಚನಗಳಲ್ಲಿ ಅಲ್ಲಾಹನು ಪ್ರವಾದಿ (ﷺ) ಯವರಿಗೆ ಮರಣ ವಿರುವುದರ ಬಗ್ಗೆ ಸೂಚಿಸುತ್ತಾನೆ. ಮೇಲಾಗಿ, ಸಹಾಬಾಗಳು (رضى الله عنه) ಪ್ರವಾದಿ (ﷺ) ಯವರನ್ನು ಅವರು ಮರಣ ಹೊಂದಿದಾಗ ಅವರನ್ನು ತೊಳೆದಿದ್ದಾರೆ, ಅವರಿಗೆ ಕಫನ್ ತೊಡಿಸಿದ್ದಾರೆ, ಅವರ ಮೇಲೆ ಜನಾಝ ನಮಾಝ್ ನಿರ್ವಹಿಸಿದ್ದಾರೆ ಹಾಗೂ ಅವರನ್ನು ದಫನ ಮಾಡಿದ್ದಾರೆ. ಇಹಲೋಕದ ಅರ್ಥದಲ್ಲಿ ಅವರು ಜೀವಿಸಿರುವುದಾಗಿದ್ದೇ ಆದರೆ ಸಹಾಬಾಗಳು (رضى الله عنه) ಇತರ ಜನರು ಮರಣ ಹೊಂದಿದಾಗ ಮಾಡಿದ ಹಾಗೆ ಅವರಿಗೆ ಮಾಡುತ್ತಿದ್ದರೇನು..?

ಪ್ರವಾದಿ (ﷺ) ರವರ ಮಗಳಾದ ಫಾತಿಮಾ (رضي الله عنها) ರವರು ತಮ್ಮ ತಂದೆಯ ಉತ್ತರಾಧಿಕಾರಿ ಯಾರು ಎಂದು ಅಬೂಬಕರ್ (رضى الله عنه) ರವರಲ್ಲಿ ಕೇಳುತ್ತಾರೆ.ಯಾಕೆಂದರೆ ಪ್ರವಾದಿ (ﷺ) ಯವರು ಮರಣ ಹೊಂದಿದ್ದಾರೆ ಎಂದು ಅವರಿಗೆ ಮನವರಿಕೆ ಆಗಿತ್ತು. ಸಹಾಬಾ (رضى الله عنه) ಗಳು ಯಾರೂ ಫಾತಿಮಾ (رضي الله عنها) ರವರ ಈ ಮಾತಿಗೆ ವಿರೋಧ ವ್ಯಕ್ತ ಪಡಿಸಿರಲಿಲ್ಲ. ನಂತರ ಅಬೂಬಕರ್ (رضى الله عنه) ರವರು ಫಾತಿಮಾ (رضي الله عنها) ರವರ ಪ್ರಶ್ನೆಗೆ ಉತ್ತರಿಸುತ್ತಾ, ಪ್ರವಾದಿ (ﷺ) ಯಾರನ್ನೂ ಉತ್ತರಾಧಿಕಾರಿಯಾಗಿ ನೇಮಿಸಿಲ್ಲ ಎಂಬುದಾಗಿ ಹೇಳುತ್ತಾರೆ.

ನಂತರ ಸಹಾಬಾ (رضى الله عنه) ಗಳೆಲ್ಲರೂ ಸೇರಿ ಪ್ರವಾದಿ (ﷺ) ಯವರ ಅನುಯಾಯಿಗಳಲ್ಲೊಬ್ಬರನ್ನು ಖಲೀಫರಾಗಿ ನೇಮಿಸುವುದಾಗಿ ಸರ್ವಾನುಮತದಿಂದ ಅಂಗೀಕರಿಸುತ್ತಾರೆ. ಹಾಗೆ ಅಬೂಬಕರ್ (رضى الله عنه) ರವರನ್ನು ಇಸ್ಲಾಮೀ ರಾಷ್ಟ್ರದ ಖಲೀಫರನ್ನಾಗಿ ನೇಮಿಸುತ್ತಾರೆ. ಪ್ರವಾದಿ (ﷺ) ಯವರು ಲೌಕಿಕ ಅರ್ಥದಲ್ಲಿ ಜೀವಿಸಿರುವುದಾಗಿದ್ದಲ್ಲಿ ಈ ಎಲ್ಲ ಬೆಳವಣಿಗೆಗಲು ನಡೆಯುತ್ತಿರಲಿಲ್ಲ. ಇದು ಸಹಾಬಾ (رضى الله عنه) ಗಳೆಲ್ಲರೂ ಪ್ರವಾದಿ (ﷺ) ಯವರು ಮರಣಹೊಂದಿರುವುದನ್ನು ಅಂಗೀಕರಿಸಿರುವುದನ್ನು ಸೂಚಿಸುತ್ತದೆ.

ಉಸ್ಮಾನ್ ಹಾಗೂ ಅಲೀ (رضى الله عنه) ಯವರ ಕಾಲದಲ್ಲಿ ಕ್ಷೋಭೆಯು ಮಿತಿಮೀರಿದಾಗ, ಆಗ ಮತ್ತು ಅದಕ್ಕಿಂತ ಮೊದಲು ಅಥವಾ ನಂತರ ಸಹಾಬಾಗಳು (رضى الله عنه) ಈ ಸಮಸ್ಯೆಗಳಿಂದ ಹೊರ ಬರವ ಮಾರ್ಗ ಹೇಗೆ ಎಂದು ಸಲಹೆ ಕೇಳಲು ಪ್ರವಾದಿ (ﷺ) ಯವರ ಗೋರಿಯ ಬಳಿ ಹೋಗಿಲ್ಲ. ಪ್ರವಾದಿ (ﷺ) ಯವರು ಲೌಕಿಕಾರ್ಥದಲ್ಲಿ ಬದುಕಿದ್ದು ಅವರು ನಮ್ಮನ್ನು ನೋಡುತ್ತಿರುವುದಾಗಿದ್ದಲ್ಲಿ ಖಂಡಿತವಾಗಿಯೂ ಪ್ರವಾದಿ (ﷺ) ಯವರು ತನ್ನ ಸಹಾಬಾಗಳ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯೆ ಪ್ರವೇಶಿಸುತ್ತಿದ್ದರು.ಅಂದು ಇತರೆಲ್ಲರಿಗಿಂತ ಅವರ ಅಗತ್ಯತೆ ಅತೀ ಪ್ರಮುಖವಾಗಿದ್ದಿತು.

ಪ್ರವಾದಿ (ﷺ) ಯವರ ಆತ್ಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ಅತೀ ಶ್ರೇಷ್ಠವಾದ "ಇಲ್ಲಯ್ಯೀನ್" ಪದವಿಯಲ್ಲಿದೆ. ಯಾಕೆಂದರೆ ಪ್ರವಾದಿ (ﷺ) ಸೃಷ್ಠಿಗಳೆಲ್ಲೇ ಅತೀ ಶ್ರೇಷ್ಠರಾಗಿದ್ದಾರೆ. ಅವರಿಗೆ ಅಲ್ಲಾಹನು ಸ್ವರ್ಗದಲ್ಲಿ ಅತೀ ಶ್ರೇಷ್ಠ ಪದವಿಯಾದ "ಅಲ್- ವಸೀಲ" ವನ್ನು ನೀಡಿದ್ದಾನೆ.

ಬರ್ಝಕ್ ಜೀವನವು ವಿಶಿಷ್ಠವಾದ ಜೀವನವಾಗಿದೆ. ಪ್ರವಾದಿ (ﷺ) ಯವರಿಂದ ವರದಿಯಾದ ಈ ಹದೀಸಿನ ಆಧಾರದಲ್ಲಿ ಅಂಬಿಯಾಗಳು ಹಾಗೂ ಶುಹಾದಾಗಳು ಬರ್ಝಕ್ ನಲ್ಲಿ ಜೀವಂತವಿರುತ್ತಾರೆ.
ಪ್ರವಾದಿ (ﷺ) ಯವರು ಹೇಳುತ್ತಾರೆ; ಪ್ರವಾದಿಗಳು ತಮ್ಮ ಕಬರ್ ನಲ್ಲಿ ಜೀವಂತವಿರುತ್ತಾರೆ ಮತ್ತು ಅವರು ಅಲ್ಲಿ ನಮಾಝ್ ನಿರ್ವಹಿಸುತ್ತಾರೆ.
( ಅಲ್ - ಮುಂದಿರಿ ಹಾಗೂ ಅಲ್ - ಬೈಹಕಿ ಇದನ್ನು ಸಹೀಹ್ ಆಗಿ ಉಲ್ಲೇಖಿಸಿದ್ದಾರೆ.)

ಅಲ್ಲಾಹನು ಕುರ್ ಆನಿನಲ್ಲಿ ಹೇಳುತ್ತಾನೆ;

وَلَا تَقُولُوا لِمَنْ يُقْتَلُ فِي سَبِيلِ اللَّهِ أَمْوَاتٌ ۚ بَلْ أَحْيَاءٌ وَلَٰكِنْ لَا تَشْعُرُونَ

ಅಲ್ಲಾಹುವಿನ ಮಾರ್ಗದಲ್ಲಿ ಹತರಾದವರ ಬಗ್ಗೆ ನೀವು ‘ಮೃತಪಟ್ಟವರು’ ಎಂದು ಹೇಳದಿರಿ. ಅವರು ಜೀವಂತವಾಗಿರುವರು; ಆದರೆ, ನೀವು (ಅದರ ಬಗ್ಗೆ) ಗ್ರಹಿಸಲಾರಿರಿ.

[ಅಲ್-ಬಕರಃ : 154]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ಇದು ವಿಶಿಷ್ಠವಾದ ಜೀವನವಾಗಿದೆ. ಇದರ ಪ್ರಕೃತಿಯನ್ನು ಅಲ್ಲಾಹನೇ ಬಲ್ಲ. ಇದು ಆತ್ಮವು ದೇಹದಲ್ಲಿ ಅಡಗಿ ಕೊಂಡು ಜೀವಿಸುವ ಲೌಕಿಕ ಜೀವನದಂತಹ ಜೀವನ ಅಲ್ಲ.

ಮರಣ ಹೊಂದಿದವರಿಗೆ ಸಂಬಂಧ ಪಟ್ಟಂತೆ ಅವರು ಭೂಮಿಯ ಮೇಲೆ ಜೀವಂತವಿರುವ ಆದಮರ ಮಕ್ಕಳ ಮಾತನ್ನು ಆಲಿಸಲಾರರು.
ಏಕೆಂದರೆ ಅಲ್ಲಾಹನು ಕುರ್ ಆನಿ ನಲ್ಲಿ ಹೇಳುತ್ತಾನೆ;

ಗೋರಿಗಳಲ್ಲಿರುವವರನ್ನು ಆಲಿಸುವಂತೆ ಮಾಡಲು ತಮ್ಮಿಂದ ಸಾಧ್ಯವಿಲ್ಲ.

[ಫಾತಿರ್ :  22]

ಪ್ರವಾದಿ (ﷺ) ಯವರನ್ನು ಯಾರು ಕರೆಯುತ್ತಾರೋ, ಅವರ ಕರೆಯನ್ನು ಪ್ರವಾದಿ (ﷺ) ಯವರು ಕೇಳಿಸಲಾರರು ಎಂದು ಅಲ್ಲಾಹನೇ ದೃಢಪಡಿಸಿದ್ದಾನೆ. ಏಕೆಂದರೆ ಪ್ರವಾದಿ (ﷺ) ಯವರು ಮರಣ ಹೊಂದಿದ್ದಾರೆ. ಇಲ್ಲಿ ಪ್ರವಾದಿ (ﷺ) ಯವರು ಮನುಷ್ಯರ ಎಲ್ಲಾ ದುಆ ಮತ್ತು ಕರೆಯನ್ನು ಕೇಳಿಸುತ್ತಾರೆ ಎಂದು ಕುರ್ ಆನ್ ಮತ್ತು ಸಹೀಹ್ ಆಗಿ ಬಂದ ಯಾವ ಸುನ್ನತ್ ನಲ್ಲಿಯೂ ಇಲ್ಲ. ಬದಲಾಗಿ ಅವರ (ﷺ) ಮೇಲೆ ಯಾರು ಸ್ವಲಾತ್ ಸಲಾಮ್ ಗಳನ್ನು ಹೇಳುತ್ತಾರೋ ಅದನ್ನು ಅವರಿಗೆ (ﷺ) ತಲುಪಿಸಲಾಗುತ್ತದೆ ಎಂಬುದು ಸಹೀಹ್ ಹದೀಸ್ ಗಳಿಂದ ದೃಢಪಟ್ಟಿದೆ.

عَنْ أَبِي هُرَيْرَةَ، أَنَّ رَسُولَ اللَّهِ صلى الله عليه وسلم قَالَ ‏ "‏ مَا مِنْ أَحَدٍ يُسَلِّمُ عَلَىَّ إِلاَّ رَدَّ اللَّهُ عَلَىَّ رُوحِي حَتَّى أَرُدَّ عَلَيْهِ السَّلاَمَ

ಪ್ರವಾದಿ (ﷺ) ಹೇಳಿದ್ದಾರೆ ;
ನಿಮ್ಮಲ್ಲಿ ಯಾರಾದರೂ ನನಗೆ ಸಲಾಮ್ ಹೇಳಿದರೆ, ಅಲ್ಲಾಹನು ನನ್ನ ಆತ್ಮವನ್ನು ನನಗೆ ಹಿಂದಿರುಗಿಸುವನು. ಆಗ ನಾನು ಆ ಸಲಾಮ್ ಹೇಳಿದವನಿಗೆ ಪ್ರತ್ಯುತ್ತರ ನೀಡುವನು.

[ಅಬೂ ದಾವೂದ್ - 2041]

ಇದನ್ನು ಹಸನ್ ಇಸ್ ನಾದ್ ನೊಂದಿಗೆ ಅಬೂ ಹುರೈರಾ (رضى الله عنه) ರವರು ವರದಿ ಮಾಡಿದ್ದಾರೆ. ಇದರ ಅರ್ಥ ಸಲಾಮ್ ಹೇಳುವವನ ಸಲಾಮನ್ನು ಪ್ರವಾದಿ (ﷺ) ಯವರು ನೇರವಾಗಿ ಕೇಳಿಸುತ್ತಾರೆ ಎಂದಲ್ಲ. ಬದಲಾಗಿ ಯಾರಾದರೂ ಪ್ರವಾದಿ (ﷺ) ಯವರಿಗೆ ಸಲಾಮ್ ಹೇಳಿದರೆ ಅದನ್ನು ಮಲಕುಗಳ ಮುಖಾಂತರ ಪ್ರವಾದಿ (ﷺ) ಯವರಿಗೆ ಅಲ್ಲಾಹನು ತಲುಪಿಸುವ ಸಾಧ್ಯತೆ ಇದೆ. ಒಂದು ವೇಳೆ ಸಲಾಮ್ ಹೇಳುವವನ ಸ್ವರಗಳ ಶಬ್ದಗಳನ್ನು ಪ್ರವಾದಿ (ﷺ) ನೇರವಾಗಿ ಕೇಳಿಸಿಕೊಳ್ಳುತ್ತಾರೆ, ಎಂದು ನಾವು ಊಹಿಸಿ ಕೊಳ್ಳುವುದಾದರೂ ಇದು ಈ ವಿಷಯದಲ್ಲಿರುವ ಸಾಮಾನ್ಯ ನಿಯಮದ ಹೊರತಾಗಿಲ್ಲ ಎಂದಾಗಿದೆ. ಉದಾಹರಣೆಗೆ, ಮರಣಹೊಂದಿದವರು ತನ್ನ ಶವ ವಾಹನವನ್ನು ಹೊತ್ತುಕೊಂಡು ಹೋಗುವವರ ಪಾದ ಹೆಜ್ಜೆಗಳನ್ನು ಆಲಿಸುತ್ತಾರೆ ಎಂಬುದು. ಅಂತೆಯೇ ಬದರ್ ನ ದಿನ ಬಾವಿಯಲ್ಲಿ ಬಿದ್ದಿದ್ದ ಮುಶ್ರಿಕ್ ಗಳ ಕೊಳೆತ ಶವಗಳು ಪ್ರವಾದಿ (ﷺ) ಯವರ ಮಾತನ್ನು ಕೇಳಿಸಿದ ಹಾಗೆ. ಆಗ ಪ್ರವಾದಿ (ﷺ) ಯವರು ಅವರಲ್ಲಿ ಕೇಳಿದರು; ಈಗ ನಿಮ್ಮ ಪ್ರಭುವಿನ ಮಾತು ಸತ್ಯ ಎಂಬುದು ನಿಮಗೆ ಮನವರಿಕೆ ಆಯಿತೇ ಎಂದು. (ಇದು ಪ್ರವಾದಿ (ﷺ) ಯವರ
ಮುಅ್'ಜಿಝತ್(ಪವಾಡ) ಕೂಡ ಆಗಿದೆ.)

[ಫತ್ವ ಲಜಿನತುದ್ದಾಯಿಮಾ - 1/313, 318, 321]

ಇನ್ನು ಪ್ರವಾದಿ (ﷺ) ರನ್ನು ಕರೆಯುವುದು ಮತ್ತು ಅವರನ್ನು ಕರೆದು ಪ್ರಾರ್ಥಿಸುವುದು ಇದೆಲ್ಲ ಶಿರ್ಕ್ ನಲ್ಲಿ ಗಣಿಸಲ್ಪಡುತ್ತದೆ. ಇಂತಹ ಶಿರ್ಕ್ ಗಳನ್ನೇ ಪ್ರವಾದಿ (ﷺ) ಯವರು ತಮ್ಮ ಜನರಲ್ಲಿ ವಿರೋಧಿಸಿರುವುದು ಮತ್ತು ತಮ್ಮ ಜನರಲ್ಲಿ ಅದರ ವಿರುದ್ಧ ಜಾಗೃತಿ ಮೂಢಿಸಿರುವುದು. (ಯಾಕೆಂದರೆ ಪ್ರವಾದಿ (ﷺ) ಯವರ ಕಾಲದಲ್ಲೇ ಅಬೂ ಜಹಲ್ ಮುಂತಾದವರ ನೇತೃತ್ವದ ಮಕ್ಕಾ ಮುಶ್ರಿಕ್ ಗಳು ತಮ್ಮ ಪೂರ್ವಿಕರಾದ ಇಬ್ರಾಹಿಂ (ಅಲೈಹಿಸ್ಸಲಾಮ್), ಇಸ್ಮಾಯಿಲ್ (ಅಲೈಹಿಸ್ಸಲಾಮ್), ಲಾತ, ಉಝ್ಝ ಮುಂತಾದ ತಮ್ಮ ಪೂರ್ವಿಕರನ್ನು ಕರೆದು ಪ್ರಾರ್ಥಿಸುತ್ತಿದ್ದರು.)

ಮೂಲಃ ಶೈಖ್ ಮುಹಮ್ಮದ್ ಸಾಲಿಹ್ ಅಲ್ ಮುನಜ್ಜದ್ (ﺣﻔﻈﻪ ﺍﻟﻠﻪ)

ಕನ್ನಡಕ್ಕೆಃ ನೌಫಲ್ ಕೆರೀಂ.

ಮಾತೃಭಾಷೆಯಲ್ಲಿ ಖುತುಬಾ.

☝ಅಲ್ಲಾಹನಿಗೆ ಸರ್ವಸ್ತುತಿ☝

ಅರೇಬಿಕ್ ಖುತುಬಾ ಉತ್ತಮವೆಂಬ ವಿಷಯದಲ್ಲಿ ವಿದ್ವಾಂಸರಲ್ಲಿ ಒಮ್ಮತಾಭಿಪ್ರಾಯವಿದೆ. ಆದರೆ ಅದರ ಅಗತ್ಯತೆಯ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ.
ಈ ಬಗ್ಗೆ ಮೂರು ಅಂಶಗಳನ್ನು ನೋಡೋಣ;

1.) ಅರೇಬಿಕ್‌ನಲ್ಲಿ ಖುತುಬಾ ನಡೆಸುವುದು ಅವಶ್ಯವಾಗಿದೆ, ಕೇಳುಗರಿಗೆ ಅದು ಅರ್ಥವಾಗದಿದ್ದರೂ ಕೂಡ. ಇದು ಮಾಲಿಕೀ ಹಾಗೂ ಹಂಬಲಿ ಮದ್‌ಹಬ್‌ನ ವೀಕ್ಷಣೆಯಾಗಿದೆ.

📖-ಅಲ್ ಫವಾಕಿಹ್ ಅಲ್ ದಿವಾನಿ (1/306) ಮತ್ತು ಕಶ್ಶಫ್ ಅಲ್ ಖಿನಾ (2/34)

[ಟಿಪ್ಪಣಿ: ಬೇರೆ ಎಲ್ಲಾ ವಿಷಯದಲ್ಲೂ ಶಾಫೀ ಮದ್‌ಹಬ್‌ ಅಂತ ಬೊಬ್ಬೆ ಹೊಡೆಯುವ ಸಮಸ್ತದವರು ತಮ್ಮ ನಬಾತೀ ಅರೇಬಿಕ್ ಖುತುಬಾವನ್ನು ಸಮರ್ಥಿಸಲು ಸಲಫಿಗಳ ವಿರುದ್ಧ ಎತ್ತುವ ಅಸ್ತ್ರ ಇದಾಗಿದೆ. ಆದರೆ ಇವರು ಅನುಸರಿಸುವ ಶಾಫೀ ಮದ್‌ಹಬ್‌ನ ಅಭಿಪ್ರಾಯ ಈ ಹಂಬಲೀ ಮಾಲಿಕೀ ಅಭಿಪ್ರಾಯಕ್ಕೆ ತದ್ವಿರುದ್ಧವೂ ಸಲಫಿಗಳವಾದಕ್ಕೆ ಪೂರಕವೂ ಆಗಿದೆ ಅದನ್ನು ಮುಂದೆ ನೋಡೋಣ.]

2.) ಅರೇಬಿಕ್‌ನಲ್ಲಿ ಖುತುಬಾ ನಡೆಸುವುದು ಅವಶ್ಯವಾಗಿದೆ,  ಆದರೆ ಆಲಿಸುವವರಿಗೆ ಅರೇಬಿಕ್ ಅರ್ಥವಾಗದ ಸಂಧರ್ಭದಲ್ಲಿ ಅದನ್ನು ಅವರ ಭಾಷೆಯಲ್ಲೇ ನಿರ್ವಹಿಸಬೇಕು. ಇದು ಶಾಫೀ ಮದ್‌ಹಬ್‌ ವಾದಿಗಳು ಸರಿ ಎನ್ನುವ ಅಭಿಪ್ರಾಯವಾಗಿದೆ (ಟಿಪ್ಪಣಿ: ಸಮಸ್ತದ ಶಾಫೀ ಮದ್‌ಹಬ್‌ವಾದಿಗಳನ್ನು ಹೊರತು ಪಡಿಸಿ) ಹಾಗೂ ಇದು ಕೆಲವು ಹಂಬಲೀ ಮದ್‌ಹಬ್‌ವಾದಿಗಳ ವಾದವೂ ಆಗಿದೆ.

📖-ಅಲ್ ಮಜ್ಮೂಹ್ ಅನ್ನವವೀ ನೋಡಿರಿ - (4/522)

3.) ಅರೇಬಿಕ್ ಖುತುಬಾ ಮುಸ್ತಹಬ್ಬ್ ಆಗಿದೆ, ಆದರೆ ಅವಶ್ಯಕವೇನೂ ಅಲ್ಲ. ಖತೀಬರು ಅರೇಬಿಕ್‌ಗೆ ಬದಲಿಯಾಗಿ ಅವರ ಸ್ವ ಭಾಷೆಯಲ್ಲೇ ಖುತುಬಾ ನಿರ್ವಹಿಸಬಹುದಾಗಿದೆ. ಇದು ಇಮಾಮ್ ಅಬೂ ಹನೀಫಾ(ರಹಿಮಹುಲ್ಲಾಹ್) ಹಾಗೂ ಕೆಲವು ಶಾಫೀ ಮದ್‌ಹಬ್‌ವಾದಿಗಳ ಅಭಿಪ್ರಾಯವಾಗಿದೆ.

📖-ಅಲ್ ಮುಹ್ತಾರ್ (1/543) ಮತ್ತು ಅಲ್ ಮಹ್‌ಸೂಹಾ ಅಲ್ ಫಿಕ್‌ಹಿಯ್ಯಾ (19/180)

ಈ ಮೂರನೇ ಅಭಿಪ್ರಾಯ ಸರಿ ಎಂದು ನಮ್ಮ ಹಲವು ಸಮಕಾಲೀನ ವಿದ್ವಾಂಸರು ಅಭಿಪ್ರಾಯ ಪಟ್ಟಿರುತ್ತಾರೆ, ಯಾಕೆಂದರೆ ಖುತುಬಾ ಅರೇಬಿಕ್ ಭಾಷೆಯಲ್ಲೇ ಆಗಬೇಕು ಎಂಬುದಕ್ಕೆ ಯಾವುದೇ ಸರಿಯಾದ ಆಧಾರವಿಲ್ಲ. ಖುತುಬಾದ ಉದ್ದೇಶ ಉಪದೇಶ, ಭೋಧನೆ ಹಾಗೂ ಕೇಳುಗರು ಅದರಿಂದ ಲಾಭ ಪಡೆಯುವುದಾಗಿದೆ. ಈ ಉದ್ದೇಶ ಪೂರ್ತಿಯಾಗುವುದು ಜನರು ಅರಿಯುವ ಭಾಷೆಯಲ್ಲಿ ನಿರ್ವಹಿಸಿದಾಗ ಮಾತ್ರ. ಇದನ್ನು ಫಿಕ್ಃ ಕೌನ್ಸಿಲ್ ಆಫ್ ಮುಸ್ಲಿಮ್ ವಲ್ಡ್ ಲೀಗ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಅದು ತನ್ನ ಪ್ರಕಟನೆಯಲ್ಲಿ ಈ ರೀತಿ ತಿಳಿಸಿದೆ;
ಅರೇಬಿಕ್ ಭಾಷೆ ಮಾತನಾಡದಂತಹ ದೇಶಗಳಲ್ಲಿ ಈದ್ ಹಾಗೂ ಜುಮಾ ಖುತುಬಾಗಳು ಅರೆಬಿಕ್ ಭಾಷೆಯಲ್ಲೇ ಆಗಬೇಕು ಎಂಬ ನಿಯಮ ಸಮಂಜಸವಲ್ಲ, ಆದರೆ ಖುತುಬಾದ ಆರಂಭದಲ್ಲಿ ಹೇಳುವ ಕುರ್‌ಆನ್ ಆಯತ್‌ಗಳನ್ನು ಹಾಗೂ ಇತರ ಕಡೆಗಳಲ್ಲಿ ಹೇಳಬಯಸುವ ಕುರ್ ಆನ್ ಆಯತ್‌ಗಳನ್ನು ಅರೇಬಿಕ್ ನಲ್ಲೇ ಹೇಳುವುದು ಉತ್ತಮ. ಅರಬಿಯೇತರರೂ ಕೂಡ ಅರಬಿಕ್ ಭಾಷೆಯಲ್ಲೇ ಕುರ್ ಆನ್ ಆಲಿಸುತ್ತಾರೆ, ಕುರ್ ಆನ್ ಕಲಿಯಲು ಮತ್ತು ಓದಲು ಕುರ್ ಆನ್ ಅವತೀರ್ಣ ಗೊಂಡ ಅರೇಬಿಕ್ ಭಾಷೆ ಉತ್ತಮವಾಗಿದೆ. ಆದರೆ ನಂತರ ಖತೀಬರು ಆಲಿಸುವ ಜನರಿಗೆ ಅವರ ಭಾಷೆಯಲ್ಲಿ ಅದರ ಅರ್ಥ ವಿವರಣೆ ನೀಡಬೇಕು.


📖-ಕಿರಾಅತ್ ಅಲ್ ಮಜ್ಮಾ ಅಲ್ ಫಿಕ್‌ಹಿ  (Page. 99) (ಐದನೇ ಅಧಿವೇಶನ, ಐದನೇ ಪ್ರಕಟನೆ)

ಈ ವಿಷಯದಲ್ಲಿ ಉಲಮಾಗಳ ಸ್ಥಾಯೀ ಸಮಿತಿಯು ಒಂದು ಫತ್ವ ಹೊರಡಿಸಿದೆ;
ಪ್ರವಾದಿ(ಸ.ಅ)ರು ಜುಮಾ ಖುತುಬಾ ಅರೆಬಿಕ್ ಭಾಷೆಯಲ್ಲೇ ಆಗಬೇಕು ಎಂದು ಆಜ್ಞಾಪಿರುವ ಬಗ್ಗೆ ಯಾವುದೇ ಆಧಾರವಿಲ್ಲ, ಆದರೆ ಮಹಾನ್ ಪ್ರವಾದಿ(ಸ.ಅ)ರು ಅರೆಬಿ ಭಾಷೆಯಲ್ಲೇ ಖುತುಬಾ ನಿರ್ವಹಿಸಿದ್ದಾರೆ. ಏಕೆಂದರೆ ಅದು ಅವರ ಮತ್ತು ಅವರ ಜನತೆಯ ಭಾಷೆಯಾಗಿದೆ. ಅವರನ್ನು ಯಾರಾದರೂ ಅವರ ಭಾಷೆಯಲ್ಲೇ ಉದ್ದೇಶಿಸಿ ಮಾತನಾಡಿದರೆ ಮತ್ತು ಮಾರ್ಗದರ್ಶನ ಮಾಡಿದರೆ ಮಾತ್ರ ಅವರಿಗೆ ಅರ್ಥವಾಗುವುದು. ಪ್ರವಾದಿ(ಸ.ಅ)ರು ಯಾವುದೇ ದೇಶದ ರಾಜರಿಗೆ ಪತ್ರ ಬರೆಯುವಾಗ ಅರೆಬಿಕ್ ನಲ್ಲೇ ಬರೆಯುತ್ತಿದ್ದರು. ಆದರೆ ಅವರಿಗೆ ಗೊತ್ತಿತ್ತು ಆ ರಾಜರು ಮಾತನಾಡುವುದು ಅರಬಿಯೇತರ ಭಾಷೆ ಎಂದು, ಅವರು ಅದನ್ನು ಅವರ ಭಾಷೆಗೆ ಭಾಷಾಂತರ ಮಾಡಿ ಅರ್ಥೈಸುತ್ತಾರೆ ಎಂದೂ ಅವರಿಗೆ ಗೊತ್ತಿತ್ತು.

ಇದರ ಆಧಾರದಲ್ಲಿ, ಜನರ ಆಡು ಭಾಷೆಯಲ್ಲಿ ಅಥವಾ ಅಧಿಕ ಕೇಳುಗರು ಅರ್ಥೈಸುವ ಭಾಷೆಯಲ್ಲಿ ನಿರ್ವಹಿಸುವುದು ಸಮ್ಮತಾರ್ಹವಾಗಿದೆ. ಇದರಿಂದಾಗಿ ಅವರು ತಮ್ಮನ್ನು ಉದ್ದೇಶಿಸಿ ಮಾತನಾಡುವವರ(ಖುತುಬಾ ನಿರ್ವಹಿಸುವವರ) ಮಾರ್ಗದರ್ಶನವನ್ನು , ಸಲಹೆಯನ್ನು ಅರ್ಥೈಸಿ ಆ ಖುತುಬಾದ ಲಾಭ ಪಡೆಯಲು ಅವರಿಗೆ ಸಹಾಯವಾಗುತ್ತದೆ.

ಖತೀಬರು ಅರಬಿಯೇತರ ಭಾಷೆ ಮಾತನಾಡುವ ದೇಶದಲ್ಲಿ ಆ ದೇಶದ ಭಾಷೆಯಲ್ಲಿ ಖುತುಬಾ ನಿರ್ವಹಿಸಿದರೆ, ಖುತುಬಾದ ಉದ್ದೇಶವಾದ ಮಾರ್ಗದರ್ಶನ, ಭೋಧನೆ ಹಾಗೂ ಬುದ್ಧಿವಾದ ಇದನ್ನೆಲ್ಲ ನೆರವೇರಿಸಿದಂತಾಗುತ್ತದೆ.

ಮೊದಲು ಅರಬಿಯಲ್ಲಿ ಖುತುಬಾ ನಿರ್ವಹಿಸಿ ನಂತರ ಅದನ್ನು ಸ್ಥಳೀಯ ಭಾಷೆಗೆ ಭಾಷಾಂತರ ಮಾಡುವುದು ಉತ್ತಮವಾಗಿದೆ, ಪ್ರವಾದಿ(ಸ.ಅ)ರ ಖುತುಬಾ ಹಾಗೂ ಪತ್ರವನ್ನು ನಾವು ಮೇಲೆ ಚರ್ಚಿಸಿದಂತೆ ಇದೇ ರೀತಿ ಬಳಸಿ ಅದರ ಉದ್ದೇಶ ನೆರವೇರಿಸುತ್ತಿದ್ದರು.

📖-ಫತ್ವ ಅಲ್ ಲಜ್‌ನಾ ಅಲ್ ದಾಯಿಮಾ (8/253)


ಶೈಖ್ ಇಬ್ನ್ ಬಾಝ್ (ರಹಿಮಹುಲ್ಲಾಹ್) ಹೇಳಿದ್ದಾರೆ;
ಮಸೀದಿಯಲ್ಲಿ ಅರಬಿಯೇತರರು ಅಧಿಕವಿದ್ದು ಅವರಿಗೆ ಅರಬಿ ಅರ್ಥವಾಗದಂತಹ ಸಂಧರ್ಭದಲ್ಲಿ ಅರಬಿಯೇತರ ಭಾಷೆಯಲ್ಲಿ ಖುತುಬಾ ನಿರ್ವಹಿಸುವುದಕ್ಕೆ ಯಾವುದೇ ವಿರೋಧವಿಲ್ಲ. ಅಥವಾ ಅರಬಿಯಲ್ಲಿ ಹೇಳಿ ಅದನ್ನು ನಂತರ ಸ್ಥಳೀಯ ಭಾಷೆಗೆ ಭಾಷಾಂತರ ಮಾಡಬಹುದು.

ಆದರೆ ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಅಧಿಕ ಜನರು ಅರಬಿ ಭಾಷೆ ಕಲಿತು ಅರ್ಥೈಸುವವರಾಗಿದ್ದಾರೆ. ಅಂತಹ ಜನರೇ ಅಧಿಕವಿರುವಲ್ಲಿ ಅರಬಿಯಲ್ಲೇ ಖುತುಬಾ ನಿರ್ವಹಿಸುವುದು ಉತ್ತಮ. ಪ್ರಮುಖವಾಗಿ ಇತ್ತೀಚೆಗೆ ಸಲಫಿಗಳು ಅರಬೇತರರು ಹಾಜರಾಗುವ ಮಸೀದಿಯಲ್ಲಿ ಅರಬೇತರ ಭಾಷೆಯಲ್ಲಿ ಖುತುಬಾ ನಿರ್ವಹಿಸುತ್ತಿದ್ದಾರೆ.

ಆಧಾರಗಳ ಬೆಳಕಿನಲ್ಲಿ ಅವಶ್ಯಕತೆಗಾಗಿ ಈ ರೀತಿ ಮಾಡುವುದು ಅನುವದನೀಯವಾಗಿದೆ. ಕುರ್ ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ;

وَمَا أَرْسَلْنَا مِنْ رَسُولٍ إِلَّا بِلِسَانِ قَوْمِهِ لِيُبَيِّنَ لَهُمْ ۖ فَيُضِلُّ اللَّهُ مَنْ يَشَاءُ وَيَهْدِي مَنْ يَشَاءُ ۚ وَهُوَ الْعَزِيزُ الْحَكِيمُ

ನಾವು ಯಾವುದೇ ಸಂದೇಶವಾಹಕರನ್ನೂ ಅವರು ತಮ್ಮ ಜನತೆಗೆ (ಸಂಗತಿಗಳನ್ನು) ವಿವರಿಸುವ ಸಲುವಾಗಿ ಅವರ ಭಾಷೆಯಲ್ಲಿಯೇ (ಸಂದೇಶ ನೀಡಿದ) ಹೊರತು ಕಳುಹಿಸಿಲ್ಲ. ಅಲ್ಲಾಹು ಅವನಿಚ್ಛಿಸುವವರನ್ನು ಪಥಭ್ರಷ್ಟಗೊಳಿಸುವನು ಮತ್ತು ಅವನಿಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುವನು. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.


[ಇಬ್ರಾಹೀಮ್ : 4]
via ಪವಿತ್ರ ಕುರ್ ಆನ್ (Pavitra Qur'aan)
http://bit.ly/KanQuraan

ಉದಾಹರಣೆಗೆ ನೋಡುವುದಾದರೆ, ಸಹಾಬಾಗಳು ಅರಬೇತರ ಪ್ರದೇಶಗಳಾದ ಪರ್ಶಿಯ ಮತ್ತು ಬೈಝಂಟೇನಿಯಂಗಳನ್ನು ಜಯಿಸಿದಾಗ ವ್ಯಾಖ್ಯಾನಕಾರರ ಮೂಲಕ ಅವರ ಭಾಷೆಯಲ್ಲಿ ಇಸ್ಲಾಮನ್ನು ಅವರಿಗೆ ತಿಳಿಸಿ ಕೊಡದೆ ಅವರ ಮೇಲೆ ದಾಳಿ ಮಾಡಿಲ್ಲ.

📖-ಮಜ್ಮೂಹ್ ಫತ್ವಾ ಇಬ್ನ್ ಬಾಝ್ (12/372)

ಶೈಖ್ ಇಬ್ನ್ ಉಸೈಮೀನ್ (ರಹಿಮಹುಲ್ಲಾಹ್) ಹೇಳುತ್ತಾರೆ;
ಈ ವಿಷಯದಲ್ಲಿ ಹಾಜರಿರುವ ಜನರು ಅರಬಿಯೇತರರಾಗಿದ್ದು, ಅವರು ಅರಬಿ ಅರ್ಥ ಮಾಡದಂತಹವರಾಗಿದ್ದರೆ ಖತೀಬರು ಅವರ ಭಾಷೆಯಲ್ಲೇ ಜುಮಾ ಖುತುಬಾ ನಿರ್ವಹಿಸುವುದು ಅನುವದನೀಯವಾಗಿದೆ. ಯಾಕೆಂದರೆ ಖುತುಬಾದ ಉದ್ದೇಶ ಅಲ್ಲಾಹನ ದಾಸನಿಗೆ ಅಲ್ಲಾಹನ ಪಾವಿತ್ರ್ಯತೆಯ ಮಿತಿಯನ್ನು ಮನದಟ್ಟು ಮಾಡಿಕೊಡುವುದು, ಉಪದೇಶಿಸುವುದು ಹಾಗೂ ಮಾರ್ಗದರ್ಶನ ಮಾಡುವುದಾಗಿದೆ. ಆದರೆ ಕುರ್ ಆನಿನ ಸೂಕ್ತಿಗಳನ್ನು ಅರಬಿಯಲ್ಲೇ ಓದಬೇಕು, ನಂತರ ಜನರ ಭಾಷೆಯಲ್ಲಿ ಅದನ್ನು ಉಪದೇಶಿಸಬೇಕು.

وَمَا أَرْسَلْنَا مِنْ رَسُولٍ إِلَّا بِلِسَانِ قَوْمِهِ لِيُبَيِّنَ لَهُمْ ۖ فَيُضِلُّ اللَّهُ مَنْ يَشَاءُ وَيَهْدِي مَنْ يَشَاءُ ۚ وَهُوَ الْعَزِيزُ الْحَكِيمُ

ನಾವು ಯಾವುದೇ ಸಂದೇಶವಾಹಕರನ್ನೂ ಅವರು ತಮ್ಮ ಜನತೆಗೆ (ಸಂಗತಿಗಳನ್ನು) ವಿವರಿಸುವ ಸಲುವಾಗಿ ಅವರ ಭಾಷೆಯಲ್ಲಿಯೇ (ಸಂದೇಶ ನೀಡಿದ) ಹೊರತು ಕಳುಹಿಸಿಲ್ಲ. ಅಲ್ಲಾಹು ಅವನಿಚ್ಛಿಸುವವರನ್ನು ಪಥಭ್ರಷ್ಟಗೊಳಿಸುವನು ಮತ್ತು ಅವನಿಚ್ಛಿಸುವವರನ್ನು ಸನ್ಮಾರ್ಗಕ್ಕೆ ಸೇರಿಸುವನು. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.


[ಇಬ್ರಾಹೀಮ್ : 4]
via ಪವಿತ್ರ ಕುರ್ ಆನ್ (Pavitra Qur'aan)
 http://bit.ly/KanQuraan

ವಾಸ್ತವವಾಗಿ ಅಲ್ಲಾಹನ ಈ ವಚನವು ಇದನ್ನೇ ಸೂಚಿಸುತ್ತದೆ, ಖುತುಬಾವನ್ನು ಜನರ ಭಾಷೆಯಲ್ಲೇ ಹೇಳಬೇಕು.

ಅಲ್ಲಾಹನು ಈ ಸೂಕ್ತದಲ್ಲಿ ಜನರನ್ನು ಅವರು ಅರಿಯುವ ಭಾಷೆಯಲ್ಲಿ ಉಪದೇಶಿಸುದುದರ ಬಗ್ಗೆ ಹೇಳಿದ್ದಾನೆ, ಇದರ ಆಧಾರದಲ್ಲಿ ಅರಬಿಯೇತರ ಭಾಷೆಗಳಲ್ಲಿ ಖುತುಬಾ ನಿರ್ವಹಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ.

📖- ಫ಼ತಾವ ನೂರ್ ಅಲಾ ಅಲ್ ದರ್ಬ್.

ಶೈಖ್ ರಶೀದ್ ರಿದಾ(ರಹಿಮಹುಲ್ಲಾಹ್) ಹೇಳಿದ್ದಾರೆ;

ನಾವು ಹಲವು ಬಾರಿ ಹೇಳಿದ್ದೇವೆ, ಅರೇಬಿಕ್ ಭಾಷೆಯನ್ನು ಕಲಿಯುವುದು ಪ್ರತಿಯೊಬ್ಬ ಮುಸ್ಲಿಮನ ಮೇಲೂ ಕಡ್ಡಾಯವಾಗಿದೆ. ಯಾಕೆಂದರೆ ಇಸ್ಲಾಮ್ ಧರ್ಮವನ್ನು ಅರಿಯುವುದು, ಅದರ ಆಶಯ ಆದರ್ಶಗಳನ್ನು ಸ್ಥಾಪಿಸುವುದು, ಅದರ ಜವಾಬ್ದಾರಿಗಳನ್ನು ನೆರವೇರಿಸುವುದು ಎಲ್ಲವೂ ಈ ಭಾಷೆಯನ್ನು ಕಲಿತು ಅರ್ಥೈಸುವುದರ ಮೇಲೆ ನಿಂತಿದೆ, ಅಲ್ಲದೆ ಬೇರೆ ಮಾರ್ಗವಿಲ್ಲ. ಆದರೂ ಶುಕ್ರವಾರದ ಜುಮಾ ಖುತುಬಾ ಅರೆಬಿಕ್ ಭಾಷೆಯಲ್ಲೇ ಆಗಬೇಕು ಅಂತ ಯಾವುದೇ ನಿರ್ಬಂಧವಿಲ್ಲ.

📖 - ಮಜ್ಜಲತ್ ಅಲ್ ಮನಾರ್ 6/496.

ಆದರೆ ನಮ್ಮಲ್ಲಿ ಮುಸ್ಲಿಯಾರ್'ಗಳು  ಅರಬಿಯೇತರ ಖುತುಬಾ ನಿರ್ವಹಿಸುವ ಸಲಫಿಗಳ ಮಸೀದಿಯಲ್ಲಿ ಜುಮಾ ನಮಾಝ್'ಗೆ ಹೋಗಬೇಡಿ ಅದು ಬಾತಿಲ್(ಅಸಿಂಧು) ಅಂತ ಹೇಳುತ್ತಾರಲ್ಲ, ಆದರೆ ಇಮಾಮ್ ಶಾಫೀ(ರಹಿಮಹುಲ್ಲಾಹ್) ನಿಜಕ್ಕೂ ಈ ರೀತಿ ಖುತುಬಾದ ವಿಷಯದಲ್ಲಿ ಹೇಳಿದ್ದಾರ ಅಂತ ಸಾಮಾನ್ಯ ಮುಸ್ಲಿಮರಿಗೆ ಸಂಶಯ ಉಂಟಾಗಬಹುದು. ಹೌದು ಶಾಫೀ ಇಮಾಮ್(ರಹಿಮಹುಲ್ಲಾಹ್) ತಮ್ಮ ಅಲ್ ಉಮ್ಮ್ ಗ್ರಂಥದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅದನ್ನು ಅವರ ಶಿಷ್ಯ ಇಮಾಮ್ ನವವಿ(ರಹಿಮಹುಲ್ಲಾಹ್) ಸಮರ್ಥಿಸಿದ್ದಾರೆ ಕೂಡ, ಆದರೆ ಮುಸ್ಲಿಯಾರ್'ಗಳು ಈ ವಿಷಯದಲ್ಲಿ ತಮ್ಮ ಶಾಫೀ ಮದ್'ಹಬನ್ನು ಮಡಚಿಡುವುದಕ್ಕೆ ಮುಖ್ಯ ಕಾರಣ ಇವರು ಯಾವಾಗಲೋ ರಚಿಸಿಟ್ಟಿರುವ ನಬಾತಿ ಖುತುಬಾವನ್ನು ಜುಮಾ ಖುತುಬಾ ಎಂದು ಅಂಗೀಕರಿಸಿ ಆಗಿದೆ, ಈಗ ಇವರು ಮುಕ್ಕಾಲುಗಂಟೆ ಎಂದು ಜರೆಯುವ ಸಲಫಿಗಳು ಅದನ್ನು ಜನರಿಗೆ ತಿಳಿಸಿ ಕೊಟ್ಟಾಗ ಇವರು ನೂತನವಾದಿಗಳು ಎಂದು ಜನರಿಗೆ ಮನದಟ್ಟಾಗಬಹುದು ಎಂಬ ಭಯ ಹಾಗೂ ಅಹಂಕಾರದಿಂದ ಕೂಡಿದ ವನಪ್ರತಿಷ್ಟೆಯಲ್ಲದೆ ಬೇರೇನೂ ಅಲ್ಲ..!! ಈ ಮುಸ್ಲಿಯಾರ್'ಗಳ ಅಹಂಕಾರದಿಂದಾಗಿ ಇವರ ಅನುಯಾಯಿಗಳು ಇಂದು ವಾರಕ್ಕೊಮ್ಮೆ ಅಲ್ಲಾಹನ ದೀನ್ ಕಲಿಯಲು ಸಿಗುವ ಅವಕಾಶ ದಿಂದ ವಂಚಿತರಾಗಿದ್ದಾರೆ. ಅಲ್ಲಾಹನು ನಮಗೆ ದೀನಿನ ಪ್ರಮಾಣವನ್ನು ಪ್ರಮಾಣವಾಗಿ ಅಂಗೀಕರಿಸಿ ಅದನ್ನು ಜನರಿಗೆ ಬೋಧಿಸುವ ಉಲೆಮಾಗಳಿಂದ ಇಲ್ಮ್ ಕಲಿಯಲು  ತೌಫೀಕ್ ನೀಡಲಿ.

📶ಈ ಲೇಖನವನ್ನು ಅತ್ಯಧಿಕ ಶೇರ್ ಮಾಡಿರಿ ಇಂ ಶಾ ಅಲ್ಲಾಹ್.

ಸರಳ ವಿವಾಹ.



ಸರಳ ವಿವಾಹ.

"ﻗﺎﻝ ﺍﻟﻨﺒﻲ ﺻَﻠَّﻰ ﺍﻟﻠَّﻪُ ﻋَﻠَﻴْﻪِ ﻭَﺳَﻠَّﻢَ : ‏"ﺧﻴﺮ ﺍﻟﻨﻜﺎﺡ ﺃﻳﺴﺮﻩ‏

 (ﺭﻭﺍﻩ ﺍﺑﻦ ﺣﺒﺎﻥ. ﻭﺻﺤﺤﻪ ﺍﻷﻟﺒﺎﻧﻲ ﻓﻲ ﺻﺤﻴﺢ ﺍﻟﺠﺎﻣﻊ ‏٣٣٠٠)

ಪ್ರವಾದಿ ﷺ ರು ಹೇಳಿದರು : ನಿಮ್ಮ ಪೈಕಿ ಅತೀ ಕಡಿಮೆ ಶ್ರಮ ಇರುವ ವಿವಾಹವೇ ಅತೀ ಶ್ರೇಷ್ಠ ವಿವಾಹ.

(ಅಬೂ ದಾವೂದ್ : 2117, ಸ್ವಹೀಹ್ ಜಾಮಿಅ್ : 3300)

ತವಸ್ಸುಲ್ ಇಸ್ಲಾಮಿನಲ್ಲಿ.

ತವಸ್ಸುಲ್

ಸೃಷ್ಟಿಗಳು, ತಮ್ಮ ಮತ್ತು ಅಲ್ಲಾಹನ ನಡುವೆ ಓರ್ವ ವ್ಯಕ್ತಿಯನ್ನು ಅಥವಾ ಒಂದು ವಸ್ತುವನ್ನು ಮಧ್ಯವರ್ತಿಯನ್ನಾಗಿಸಿ ಆ ಮೂಲಕ ಅಲ್ಲಾಹನಿಗೆ ನಿಕಟವಾಗುವುದಕ್ಕೆ ಇಸ್ಲಾಮಿನಲ್ಲಿ 'ತವಸ್ಸುಲ್' ಎನ್ನಲಾಗುತ್ತದೆ. ಇಂದು ಮುಸ್ಲಿಸಮುದಾಯದಲ್ಲಿ ಹೆಚ್ಚಿನ ಜನರೂ ಇಂತಹ ಮಧ್ಯವರ್ತಿಗಳನ್ನಾಗಿ ಮಾಡಿಕೊಂಡಿರುವುದು ಮೃತಪಟ್ಟ ಮಹಾತ್ಮರು ಮತ್ತು ಜೀವಿಸುತ್ತಿರುವ ಮಹಾತ್ಮರ ಹಕ್ಕ್, ಜಾಹ್, ಬರ್ಕತ್ ಇತ್ಯಾದಿಗಳನ್ನಾಗಿದೆ.

ಇಂದು ನಮ್ಮ ಸಮುದಾಯದಲ್ಲಿರುವ ಜನ ಸಾಮಾನ್ಯರ ಪೈಕಿ ಹೆಚ್ಚಿನವರ ವಿಶ್ವಾಸ ಪ್ರಕಾರ ನಮ್ಮಲ್ಲಿ ಯಾರೂ ಕೂಡ ಅಲ್ಲಾಹನೆಡೆಗೆ ನೇರವಾಗಿ ನಿಕಟವಾಗಲು ಸಾಧ್ಯವಿಲ್ಲದವರಾಗಿದ್ದೇವೆ ಎಂದಾಗಿದೆ. ಏಕೆಂದರೆ ನಾವು ಅಲ್ಲಾಹನ ಸಾಮೀಪ್ಯವನ್ನು ಗಳಿಸಿದವರಲ್ಲ. ನಾವು ದಿನನಿತ್ಯ ಹಲವಾರು ಪಾಪಗಳಲ್ಲಿ ನಿರತರಾಗುತ್ತೇವೆ. ಆದುದರಿಂದ ಅವನೆಡೆಗೆ ಹೆಚ್ಚು ನಿಕಟವಾಗಿರುವ ಅವನ ಇಷ್ಟದಾಸರಾದ ಅಂಬಿಯಾ- ಔಲಿಯಾಗಳ ಮೂಲಕ ಮಾತ್ರವೇ ನಮ್ಮಿಂದ ಅವನೆಡೆಗೆ ನಿಕಟವಾಗಲು ಸಾಧ್ಯ. ಅವರು ನಮ್ಮ ವಿಷಯವನ್ನು ಅಲ್ಲಾಹನಲ್ಲಿ ಹೇಳುವರು; ಆಗ ಅಲ್ಲಾಹನು ಅದನ್ನೆಂದೂ ನಿರಾಕರಿಸಲಾರನು.
ಉದಾಹರಣೆಗೆ ನಿಮಗೆ ಗೊತ್ತಿರುವ ಹಾಗೆ ನಮ್ಮ ಊರಲ್ಲಿ ನಮಾಝ್ ಮಾಡದ, ಹಲ್ಲುಜ್ಜದ, ಕೂದಲು ಬಾಚದ ಕೊಳಕು ಕೊಳಕಾಗಿ ಮೈ ಮೇಲೆ ಯಾವುದೋ ಅದೃಶ್ಯ ಶಕ್ತಿ ಪ್ರವೇಶ ಗೊಂಡಂತೆ ನಟಿಸುವ ಕೆಲವು ಮುರೀದುಗಳನ್ನು ನೀವು ಗಮನಿಸಿರಬಹುದು, ಆ ತರ ವ್ಯಕ್ತಿಗಳು ಹೆಚ್ಚಾಗಿ ಹೆಂಡದ ದಾಸರಾಗಿರುತ್ತಾರೆ. ಅವರು ನೀನು ಯಾಕೆ ಆರಾಧನೆ ಮಾಡಲ್ಲ ಎಂದು ಕೇಳಿದರೆ ಹೇಳುವ ಉತ್ತರ; ನಾವು ಯಾರ ಮುರೀದುಗಳಾಗಿರುತ್ತೇವೆಯೋ ಆ ತಂಘಳ್ ಅಥವಾ ಬಾಬಾಗಳೊಟ್ಟಿಗೆ ನಮಗೆ ಸ್ವರ್ಗ ಪ್ರವೇಶವಿದೆ ಎಂದಾಗಿದೆ. ಆ ಬಾಬಾಗಳ ಮುರೀದು ಆಗಿರುವ ಕಾರಣ ಅವರು ಮಾಡಿರುವ ಇಬಾದತ್ ನಿಂದ ಇವರು ಸ್ವರ್ಗಕ್ಕೆ ಹೋಗುತ್ತಾರಂತೆ ನೋಡಿ ಎಷ್ಟು ಭೀಕರವಾದ ಶಿರ್ಕಿನ ವಿಶ್ವಾಸ ಈ ಸಮುದಾಯಕ್ಕೆ.

ಅದೇನೇ ಇರಲಿ ಆದರೆ ಇಸ್ಲಾಮ್ ಪರಿಚಯಿಸುವ ಅಲ್ಲಾಹ್ (ಸೃಷ್ಟಿಕರ್ತ) ಮಧ್ಯವರ್ತಿಗಳಿಲ್ಲದವನೂ, ಅವನ ದಾಸರಿಗೆ ನೇರವಾಗಿ ನಿಕಟವಾಗಲು ಸಾಧ್ಯವಿರುವ ಪರಮ ಕಾರುಣ್ಯದ ಒಡೆಯನೂ ಆಗಿದ್ದಾನೆ. ಅವನ ವಿಶೇಷಣಗಳಾಗಿ ಕುರ್ ಆನ್ ಅತ್ಯಧಿಕವಾಗಿ ಪರಿಚಯಿಸುವುದು 'ರಹ್ಮಾನ್' (ಪರಮ ದಯಾಳು) 'ರಹೀಂ'(ಕರುಣಾನಿಧಿ) ಎಂಬವುಗಳನ್ನಾಗಿದೆ. ಕುರ್ ಆನಿನಲ್ಲಿ ಅಲ್ಲಾಹನು ಸೃಷ್ಟಿಗಳೊಂದಿಗಿರುವ ತನ್ನ ಸಾಮೀಪ್ಯದ ಕುರಿತು ಈ ರೀತಿ ಸ್ವತಃ ಘೋಷಿಸಿಕೊಂಡಿದ್ದಾನೆ.

وَلَقَدْ خَلَقْنَا الْإِنْسَانَ وَنَعْلَمُ مَا تُوَسْوِسُ بِهِ نَفْسُهُ ۖ وَنَحْنُ أَقْرَبُ إِلَيْهِ مِنْ حَبْلِ الْوَرِيدِ

ಖಂಡಿತವಾಗಿಯೂ ನಾವು ಮನುಷ್ಯನನ್ನು ಸೃಷ್ಟಿಸಿರುವೆವು. ಅವನ ಮನಸ್ಸು ಪಿಸುಗುಟ್ಟುವುದನ್ನು ನಾವು ಅರಿಯುವೆವು. ನಾವು (ಅವನ) ಕಂಠನಾಡಿಗಿಂತಲೂ ಅವನಿಗೆ ಹೆಚ್ಚು ನಿಕಟವಾಗಿರುವೆವು.

[ಕ್ವಾಫ್ : 16]

وَإِذَا سَأَلَكَ عِبَادِي عَنِّي فَإِنِّي قَرِيبٌ ۖ أُجِيبُ دَعْوَةَ الدَّاعِ إِذَا دَعَانِ ۖ فَلْيَسْتَجِيبُوا لِي وَلْيُؤْمِنُوا بِي لَعَلَّهُمْ يَرْشُدُونَ

ನನ್ನ ದಾಸರು ತಮ್ಮೊಂದಿಗೆ ನನ್ನ ಬಗ್ಗೆ ಕೇಳಿದರೆ ಖಂಡಿತವಾಗಿಯೂ ನಾನು (ಅವರಿಗೆ ಅತಿ) ನಿಕಟವಾಗಿರುವೆನು (ಎಂದು ಹೇಳಿರಿ). ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ ನಾನು ಆ ಪ್ರಾರ್ಥನೆಗೆ ಉತ್ತರವನ್ನು ನೀಡುವೆನು.[44]ಆದ್ದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ. ಅವರು ಸನ್ಮಾರ್ಗ ಪಡೆದವರಾಗಲೂ ಬಹುದು.

[ಅಲ್-ಬಕರಃ : 186]

ಈ ಮೇಲಿನ ಪವಿತ್ರ ಕುರ್ ಆನಿನ ಎರಡು ಆಯತ್ ಗಳನ್ನು ಗಮನಿಸಿ, ಅಲ್ಲಾಹನು ಅದೆಂತಹ ದಯಾಳು! ಅವನು ನಮಗೆ ಅತ್ಯಂತ ನಿಕಟನಾಗಿರುವನು ಎಂದೂ ಪಾಪ ಮತ್ತು ಕೆಡುಕುಗಳಲ್ಲಿ ನಿರತರಾಗಿರುವವರು ಕೂಡ ನಿರಾಶರಾಗಬೇ ಕಾಗಿಲ್ಲ; ಅವರಿಗೆ ಕ್ಷಮೆನೀಡಲು ನಾನು ಸದಾ ಸನ್ನದ್ಧನಿದ್ದೇನೆ ಎಂದು ಸ್ವತಃ ಅವನೇ ತಿಳಿಸುತ್ತಾನೆ. ಹೀಗಿರುವಾಗ ಆ ಪ್ರಭುವಿನೆಡೆಗೆ ನಿಕಟಗೊಳಿಸಲಿಕ್ಕಾಗಿ ಇತರ ಯಾವುದಾದರೂ ಮಧ್ಯವರ್ತಿಗಳ ಅಗತ್ಯವಿದೆಯೇ...? ನಮ್ಮನ್ನು ಅವನಿಗೆ ಇತರ ಯಾರಾದರೂ ಪರಿಚಯಿಸಿಕೊಡಬೇಕಾದ ಮತ್ತು ನಿಕಟಗೊಳಿಸಬೇಕಾದ ಅಗತ್ಯವಿದೆಯೇ..?! ಈ ಪ್ರಶ್ನೆಗಳಿಗೆ ಪಥಭ್ರಷ್ಟನಲ್ಲದೆ ಇನ್ಯಾರೂ ಹೌದು ಎಂಬ ಉತ್ತರ ಕೊಡಲಾರ. ಇದೊಂದು ವಿಚಿತ್ರ ವಿಶ್ವಾಸವೇ ಆಗಿದೆ! ನಮಗೆ ನಿಕಟನಾಗಿರುವ,  ನಮ್ಮ ರಹಸ್ಯ-ಬಹಿರಂಗಗಳನ್ನು ಬಲ್ಲ, ನಮ್ಮನ್ನು ಅತೀವವಾಗಿ ಪ್ರೀತಿಸುವ ಅಲ್ಲಾಹನನ್ನು ಭೌತಿಕವಾದ ವ್ಯವಸ್ಥೆಗಳೊಂದಿಗೆ ಹೋಲಿಸುವುದು ಸರಿಯಲ್ಲ. ಇವರು ಅಲ್ಲಾಹನ ಕುರಿತು ಅರಿತಿರುವುದು ಕುರ್ ಆನಿನಿಂದಾಗಲೀ ಪ್ರವಾದಿ ಚರ್ಯೆ ಯಿಂದಾಗಲೀ ಅಲ್ಲ. ಬದಲಾಗಿ ಕೆಲವು ದಂತಕಥೆಗಳ ಮತ್ತು ಕಟ್ಟು ಕಥೆಗಳ ಮೂಲಕವಾಗಿದೆ. ಇವರ ತವಸ್ಸುಲ್'ಗೂ ಇಸ್ಲಾಮಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಅದು ಅನ್ಯಧರ್ಮೀಯರಿಂದ ಎರವಲು ಪಡೆದ ಅನಾಚಾಗಳಾಗಿವೆ. ಆದರೆ ಶರೀಅತ್ತಿನಲ್ಲಿ ಅನುಮತಿಸಲಾಗಿರುವ ಕೆಲವು ತವಸ್ಸುಲ್ ಗಳಿವೆ. ಅವುಗಳು ಈ ರೀತಿಯಾಗಿದೆ.

1. ನಾವು ಮಾಡುವ ಸತ್ಕರ್ಮಗಳ ಮೂಲಕ ಮಾಡಲಾಗುವ ತವಸ್ಸುಲ್:-
••• ಅಲ್ಲಾಹ್ ಮತ್ತು ಅವನ ರಸೂಲರನ್ನು(ಸ.ಅ) ಅನುಸರಿಸುತ್ತಾ, ಅಲ್ಲಾಹ್ ಮತ್ತು ರಸೂಲ್(ಸ.ಅ) ಆದೇಶಿಸಿರುವುದನ್ನು ನಿರ್ವಹಿಸಿ ವಿರೋಧಿಸಿರುವುದನ್ನು ವರ್ಜಿಸಿ ಬದುಕುವ ಮೂಲಕ ಸತ್ಕರ್ಮಗಳನ್ನು ಮಾಡುವುದು ಇದರಲ್ಲಿ ಪ್ರಮುಖವಾಗಿದೆ. ಕುರ್ ಆನ್ ಹೀಗೆ ನುಡಿಯುತ್ತದೆ.

يَا أَيُّهَا الَّذِينَ آمَنُوا اتَّقُوا اللَّهَ وَابْتَغُوا إِلَيْهِ الْوَسِيلَةَ وَجَاهِدُوا فِي سَبِيلِهِ لَعَلَّكُمْ تُفْلِحُونَ

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಅವನೆಡೆಗೆ ಸಮೀಪಗೊಳ್ಳಲಿರುವ ಮಾರ್ಗವನ್ನು ಹುಡುಕಿರಿ ಹಾಗೂ ಅವನ ಮಾರ್ಗದಲ್ಲಿ ಹೋರಾಡಿರಿ. (ತನ್ಮೂಲಕ) ನಿಮಗೆ ಯಶಸ್ವಿಯಾಗಲು ಸಾಧ್ಯವಾಗಬಹುದು.

[ಅಲ್-ಮಾ'ಇದಃ : 35]

ಈ ಸೂಕ್ತಿಯನ್ನು ಕೆಲವು ಉರೂಸ್ ವಾದಿ ದುರ್ವ್ಯಾಖ್ಯಾನ ವೀರರು ದುರ್ವ್ಯಾಖ್ಯಾನ ಮಾಡುತ್ತಾರೆ. ಮತ್ತು ಅವರು ಹೇಳುತ್ತಾರೆ ಅಲ್ಲಾಹನೆಡೆಗೆ ಹತ್ತಿರ ಗೊಳಿಸುವ ಮಾರ್ಗ ಅವನ ಇಷ್ಟ ದಾಸರಾಗಿದ್ದಾರೆ ಎಂದು. ಆದರೆ ಈ ಸೂಕ್ತದಲ್ಲಿ ಹೇಳಿರುವುದು ಸ್ವಂತ ಸತ್ಕರ್ಮಗಳ ಮೂಲಕ ಅಲ್ಲಾಹನಿಗೆ ನಿಕಟಗೊಳ್ಳುವುದರ ಕುರಿತಾಗಿದೆ. ಈ ವಿಷಯದಲ್ಲಿ ಕುರ್ ಆನ್ ವ್ಯಾಖ್ಯಾನಕಾರರ ನಡುವೆ ಭಿನ್ನಾಭಿಪ್ರಾಯವಿಲ್ಲವೆಂದು ತಫ್ಸೀರ್ ಇಬ್ನ್ ಕಸೀರ್'ನಲ್ಲಿ ಪ್ರತ್ಯೇಕವಾಗಿ ಹೇಳಲಾಗಿದೆ.

(ತಫ್ಸೀರ್ ಇಬ್ನ್ ಕಸೀರ್ 2/53)

ಗುಹೆಯಲ್ಲಿ ಸಿಲುಕಿದ ಮೂವರ ಕುರಿತು ವಿವರಿಸುವ ಪ್ರಸಿದ್ಧವಾದ ಹದೀಸ್ ಸತ್ಕರ್ಮಗಳ ಮೂಲಕ ಮಾಡಬಹುದಾದ ತವಸ್ಸುಲ್'ಗಿರುವ ಉದಾಹರಣೆ ಯಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರತಿಯೊಬ್ಬರಿಗೂ ತಾವೆಸಗಿದ ಇಬಾದತ್(ಸತ್ಕರ್ಮ) ಗಳ ಮೂಲಕ ತವಸ್ಸುಲ್ ಮಾಡುವುದು ಸಮ್ಮತಾರ್ಹವಾಗಿದೆ.

2. ಜೀವಂತವಿರುವವರ ಪ್ರಾರ್ಥನೆಯ ಮೂಲಕ ತವಸ್ಸುಲ್ ಮಾಡುವುದು:-
••• ಇದು ತವಸ್ಸುಲ್ ಮಾಡುವ ವ್ಯಕ್ತಿ, ಇಂತಹ ಕಾರ್ಯಕ್ಕಾಗಿ ತನಗೋಸ್ಕರ ಅಲ್ಲಾಹನಲ್ಲಿ ಪ್ರಾರ್ಥಿಸಬೇಕೆಂದು ಇನ್ನೋರ್ವನಲ್ಲಿ ಅಪೇಕ್ಷಿಸುವುದು.

ಓರ್ವ ಅಹ್'ರಾಬಿ(ಗ್ರಾಮೀಣ ಅರಬಿ) ಪ್ರವಾದಿ(ಸ.ಅ) ರ ಬಳಿ ಆಗಮಿಸಿ ಮಳೆಗಾಗಿ ಪ್ರಾರ್ಥಿಸಲು ಅಪೇಕ್ಷಿಸಿದ್ದು  ಇದಕ್ಕೊಂದು ಉದಾಹರಣೆಯಾಗಿದೆ. ಇದು ಮುತ್ತಫಕುನ್ ಅಲೈಹಿಯ ವರದಿಯಾಗಿದೆ.  ಇದೇ ರೀತಿ ನಮಗೂ ಜೀವಂತವಿರುವ ಸಜ್ಜನರಲ್ಲಿ ಪ್ರಾರ್ಥಿಸಲು ಅಪೇಕ್ಷಿಸಬಹುದು. ಉಮರ್ ಬಿನ್ ಖತ್ತಾಬ್ (ರ) ರವರು ಉಮ್ರಾ ನಿರ್ವಹಿಸಲು ಮಕ್ಕಾಗೆ ತೆರಳುವಾಗ ಪ್ರವಾದಿ(ಸ.ಅ) ರವರು ಅವರೊಂದಿಗೆ: "ಗೆಳೆಯಾ! ನಿನ್ನ ಪ್ರಾರ್ಥನೆಯಲ್ಲಿ ನಮ್ಮನ್ನೂ ಸೇರಿಸು" ಎಂದಿರುವುದು ಇದಕ್ಕಿರುವ ಇನ್ನೊಂದು ಪುರಾವೆಯಾಗಿದೆ.

ಆದರೆ ತವಸ್ಸುಲ್ ಮಾಡಲಾಗುವ ವ್ಯಕ್ತಿ ಜೀವಂತವಿರುವ ಕಾಲದಲ್ಲಿ ಮಾತ್ರ ಈ ತವಸ್ಸುಲ್ ಸಮ್ಮತಾರ್ಹವಾಗುತ್ತದೆ. ಅದು ಪ್ರವಾದಿ ಚರ್ಯೆಯೂ ಕೂಡ. ಯಾಕೆಂದರೆ ಪೂರ್ವಿಕ ಪ್ರವಾದಿಗಳಲ್ಲಿ ನಮ್ಮ ಮುತ್ತು ಮುಹಮ್ಮದ್ ರಸೂಲುಲ್ಲಾಹಿ(ಸ ಅ) ರವರು ತವಸ್ಸುಲ್ ಮಾಡಿಲ್ಲ. ಆದರೆ ಕೆಲವು ಅರ್ಧ ಕಲಿತ ಹಾಗೆ ವರ್ತಿಸುವ ಮುಲ್ಲಾಗಳು ಇಸ್ರಾ ಮಿಅರಾಜ್ ನ ರಾತ್ರಿ ಮೂಸ(ಅ) ರವರೊಂದಿಗೆ ನಮ್ಮ ನೆಬಿ(ಸ.ಅ) ಯವರು ತವಸ್ಸುಲ್ ಮಾಡಿದ್ದಾರೆ ಎಂದು ಪ್ರವಾದಿ(ಸ.ಅ) ರ ಮೇಲೆ ಶಿರ್ಕ್ ಆರೋಪ ಹೊರಿಸುವುದು ನಡೆಯುತ್ತಾ ಇದೆ. ಅದೇನೇ ಆರೋಪ ಮಾಡಲಿ ಪ್ರವಾದಿ(ಸ.ಅ) ರ ಮೇಲೆ ಆರೋಪ ಹೊರಿಸುವ ಸುಳ್ಳು ಪ್ರಚಾರ ಮಾಡುವವರನ್ನು ಅಲ್ಲಾಹ್ ನೋಡಿಕೊಳ್ಳುವನು.

3. ಅಲ್ಲಾಹನ ನಾಮ-ವಿಶೇಷಣಗಳ ಮೂಲಕ ಮಾಡಲಾಗುವ ತವಸ್ಸುಲ್:-
••• ಇದು ಅನುಮತಿಸಲಾದ ತವಸ್ಸುಲ್ ನ ಇನ್ನೊಂದು ವಿಧವಾಗಿದೆ. ಅಲ್ಲಾಹನನ್ನು ಸ್ತುತಿಸಿ, ಅವನನ್ನು ಮಹತ್ವೀಕರಿಸಿ, ಅವನ ಮಹತ್ವವಾದ ನಾಮಗಳ ಮತ್ತು ಉನ್ನತವಾದ ಗುಣ - ವಿಶೇಷಣಗಳ ಮೂಲಕ ಅವನ ಕೀರ್ತನೆ ಮಾಡಿ,  ತರುವಾಯ ಅವನಲ್ಲಿ ತಾನಿಚ್ಚಿಸುವ ಕಾರ್ಯಕ್ಕಾಗಿ ಪ್ರಾರ್ಥಿಸಬೇಕು. ಇದಾಗಿದೆ ಅದರ ವಿಧಾನ. ಸೂರಃ ಅಹ್'ರಾಫ್ ನ 180 ನೇ ವಚನದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಹೇಳಿದೆ.

وَلِلَّهِ الْأَسْمَاءُ الْحُسْنَىٰ فَادْعُوهُ بِهَا ۖ وَذَرُوا الَّذِينَ يُلْحِدُونَ فِي أَسْمَائِهِ ۚ سَيُجْزَوْنَ مَا كَانُوا يَعْمَلُونَ

ಅಲ್ಲಾಹುವಿಗೆ ಅತ್ಯುತ್ತಮವಾದ ನಾಮಗಳಿವೆ. ಆದ್ದರಿಂದ ನೀವು ಅವನನ್ನು ಆ ನಾಮಗಳಿಂದ ಕರೆಯಿರಿ. ಅವನ ನಾಮಗಳಲ್ಲಿ ಕೃತ್ರಿಮವನ್ನು ತೋರಿಸುವವ ರಾರೋ ಅವರನ್ನು ಬಿಟ್ಟುಬಿಡಿರಿ. ಅವರು ಮಾಡಿಕೊಂಡಿರುವುದರ ಫಲವನ್ನು ತರುವಾಯ ಅವರಿಗೆ ನೀಡಲಾಗುವುದು.

[ಅಲ್-ಅ'ಅರಾಫ್ : 180]

ಸಂಕ್ಷಿಪ್ತವಾಗಿ ಹೇಳುವುದಾದರೆ, ಇಸ್ಲಾಮ್ ತವಸ್ಸುಲನ್ನು ಪೂರ್ಣವಾಗಿ ನಿರಾಕರಿಸುವುದಿಲ್ಲ ಮತ್ತು ಅದರಲ್ಲಿ ಅನುಮತಿಸಲಾದವುಗಳೂ ಇವೆ ಎಂದು ಈ ಮೇಲಿನ ವಿವರಣೆಯಲ್ಲಿ ಸ್ಪಷ್ಟವಾಯಿತಲ್ಲವೇ.... ಆದರೆ ಇಂದು ನಮ್ಮ ಸಮೂಹದಲ್ಲಿ ಅತಿಹೆಚ್ಚಾಗಿ ರೂಢಿಯಲ್ಲಿರುವ ತವಸ್ಸುಲ್ ಈ ಮೇಲೆ ವಿವರಿಸಿದ ರೀತಿಯಲ್ಲಿ ಅಲ್ಲ, ಬದಲಾಗಿ ಮರಣ ಹೊಂದಿದ ಮಹಾತ್ಮರ ಮತ್ತು ಅವರ ಹಕ್ಕ್, ಜಾಹ್, ಬರ್ಕತ್'ಗಳ ಮೂಲಕವಾಗಿವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇದೆಲ್ಲವೂ ಇಸ್ಲಾಮ್ ಕಲಿಸದವುಗಳೂ ಅನ್ಯ ಧರ್ಮೀಯರಿಂದ ನಮ್ಮ ಸಮುದಾಯದೊಳಗೆ ನುಸುಳಿ ಬಂದಂತವುಗಳಾಗಿವೆ. ಅದು ಇಸ್ಲಾಮಿನಲ್ಲಿ ಸೇರಿದ್ದಾಗಿದೆ ಎಂದು ಸಾಬೀತು ಪಡಿಸಲು ಅದನ್ನು ಆಚರಿಸುವವರಿಗೆ ಎಂದಿಗೂ ಸಾಧ್ಯವಿಲ್ಲ. ಕುರ್ ಆನಿನಲ್ಲಿ ಹದೀಸಿನಲ್ಲಿ ಹಲವು ರೀತಿಯ ಪ್ರಾರ್ಥನೆಗಳಿವೆ, ಆದರೆ ಅವುಗಳಲ್ಲಿ ಯಾವುದೇ ಒಂದು ಪ್ರಾರ್ಥನೆಯೂ ಕೂಡ ಗತಿಸಿ ಹೋದ ಪ್ರವಾದಿಗಳು ಅಥವಾ ಸಜ್ಜನರನ್ನು ಕರೆದು ಆ ಮೂಲಕ ಅಲ್ಲಾಹನಲ್ಲಿ ಪ್ರಾರ್ಥಿಸುವ ಒಂದೇ ಒಂದು ಪ್ರಾರ್ಥನೆ ಇಲ್ಲ ಎಂಬುದು ಗಮನಾರ್ಹವಾಗಿದೆ.