ಸಲಫಿ ಪಂಡಿತರಾದ ಇಬ್ನು ತೈಮಿಯ್ಯಾ (ರ) ರ ಹೆಸರಿನಲ್ಲಿ ಸಮಸ್ತ ಮುಸ್ಲಿಯಾರುಗಳು ಹಲವಾರು ವರ್ಷಗಳಿಂದ ಇಬ್ನು ತೈಮಿಯ (ರ) ರವರು ಪ್ರವಾದಿ (ಸಅ) ರ ಜನ್ಮದಿನವನ್ನು ಆಚರಿಸಿದರೆ ದೊಡ್ಡ ಪ್ರತಿಫಲ ಸಿಗುತ್ತದೆ ಎಂದು ಹೇಳಿದ್ದಾರೆ ಎಂಬ ಸುಳ್ಳನ್ನು ಪ್ರಚಾರಪಡಿಸಿ ಮುಗ್ದ ಸುನ್ನಿಗಳನ್ನು ಅನಾಚಾರದಲ್ಲಿಮುಳುಗಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಈ ವಿಷಯದಲ್ಲಿ ಇಬ್ನು ತೈಮಿಯ್ಯಾ (ರ) ರವರ ನಿಲುವನ್ನು ಪರಿಶೀಲಿಸಿ ಸಮಸ್ತ ಮುಸ್ಲಿಯಾರುಗಳ ಅಪಪ್ರಚಾರವನ್ನು ಕಸದ ಬುಟ್ಟಿಗೆ ಎಸೆಯೋಣ….
ಇಬ್ನು ತೈಮಿಯ್ಯಾ (ರ) ರವರು ಇಖ್ತಿದಾಉ ಸಿರಾತಲ್ ಮುಸ್ತಖೀಮ್ ಎಂಬ ತನ್ನ ಗ್ರಂಥದಲ್ಲಿ ವಿವರಿಸುವುದು ಈ ಕೆಳಗಿನಂತಾಗಿದೆ….
قد تقدم أن العيد يكون اسماً لنفس المكان، ولنفس الزمان، ولنفس الاجتماع. وهذه الثلاثة قد أحدث منها أشياء .
ಈದ್ ಅಥವಾ ಆಚರಣೆಗಳನ್ನು ಇಬ್ನು ತೈಮಿಯ (ರ) ರವರು 1.ಸ್ಥಳ, 2.ಕಾಲ, 3.ಸಂಗಮ ಎಂಬಂತೆ ಮೂರಾಗಿ ವಿಂಗಡಿಸಿದ್ದಾರೆ.
أما الزمان فثلاثة أنواع
ಇದರಲ್ಲಿರುವ ಝಮಾನ್ (ಕಾಲ) ಮೂರು ವಿಧಗಳು.
أحدها : يوم لم تعظمه الشريعة أصلاً ، ولم يكن له ذكر في السلف، ولا جرى فيه ما يوجب تعظيمه
ಮೊದಲನೆಯದಾಗಿ…
1.ಶರೀಅತ್ ನಲ್ಲಿ ಯಾವುದೇ ಗೌರವವೂ, ಪ್ರತ್ಯೇಕತೆಯೂ ಇಲ್ಲದ ದಿವಸಗಳು.
2.ಸಲಪ್ ಗಳ (ಪೂರ್ವಿಕರ) ಕಾಲದಲ್ಲಿ ಯಾವುದೇ ಉಲ್ಲೇಖವೂ ಇಲ್ಲದ ದಿವಸಗಳು.
3.ಯಾವುದೇ ಗೌರವವೂ, ಪ್ರತ್ಯೇಕತೆಯೂ ಸಂಭವಿಸದ ದಿವಸಗಳು.
ಉದಾಹರಣೆ:-
: مثل أول خميس من رجب، وليلة تلك الجمعة التي تسمى الرغائب
ಇಬ್ನು ತೈಮಿಯ (ರ) ಕಾಲದಲ್ಲಿ ಇದ್ದಂತಹ ರಜಬ್ ತಿಂಗಳ ಮೊದಲ ಗುರವಾರ ಮತ್ತು ಮೊದಲ ಶುಕ್ರವಾರ ರಾತ್ರಿಯ ಅನಾಚಾರ.
ಎರಡನೆಯದಾಗಿ…
النوع الثاني : ما جرى فيه حادثة كما كان يجري في غيره، من غير أن يوجب ذلك جعله موسماً، ولا كان السلف يعظمونه، كثامن عشر ذي الحجة الذي خطب النبي اللهفيه بغدير خم مرجعه من حجة الوداع، فإنه ﷺ خطب فيه خطبة وصى فيها باتباع كتاب الله، ووصى فيها بأهل بيته كما روى ذلك مسلم في صحيحه
ಕೆಲವು ಘಟನೆಗಳು ಸಂಭವಿಸಿದ ಯಾವುದೇ ಗೌರವವೂ ಪ್ರತ್ಯೇಕತೆಯೂ ಆಧರಣೆಯೂ ಇಲ್ಲದ ದಿವಸ. ಉದಾಹರಣೆಯಾಗಿ ದುಲ್ ಹಜ್ಜ್ ತಿಂಗಳ 18 ರಂದುಪ್ರವಾದಿ ಪ್ರಭಾಷಣ ಮಾಡಿದ ದಿವಸ,
ಅದೇ ರೀತಿ ಬದ್ರ್, ಹುನೈನ್, ಖಂದಕ್, ಮೆಕ್ಕಾ ವಿಜಯದ ದಿನ, ಹಿಜ್ರ, ಮದೀನಾ ಪ್ರವೇಶ ದಿನ. ಇದೇ ಸಾಲಿನಲ್ಲಾಗಿದೆ ಪ್ರವಾದಿ (ಸಅ) ಜನಿಸಿದ ದಿನವನ್ನುಇಬ್ನು ತೈಮಿಯ (ರ) ಸೇರಿಸಿರುವುದು.
وكذلك ما يحدثه بعض الناس، إما مضاهاة للنصارى في ميلاد عيسى عليه السلام، وإما محبة للنبي ﷺ وتعظيماً. والله قد يثيبهم (4) على هذه المحبة والاجتهاد، لاعلى البدع من اتخاذ مولد النبي ﷺ عيداً. مع اختلاف الناس في مولده. فإن هذا لم يفعله السلف مع قيام المقتضي له وعدم المانع منه لو كان خيراًولو كان هذا خيراً (٥) محضاً، أو راجحاً لكان السلف رضي الله عنهم أحق به منا، فإنهم كانوا أشد محبة الرسول الله ، وتعظيماً له منا، وهم على الخير أحرص. وإنما كمال محبته وتعظيمه فيمتابعته وطاعته واتباع أمره، وإحياء سنته باطناً وظاهراً، ونشر ما بعث به، والجهاد على ذلك بالقلب واليد واللسان. فإن هذه (1) طريقة السابقين الأولين من المهاجرينوالأنصار، والذين اتبعوهم بإحسان
ಅದೇ ರೀತಿ ಕೆಲವರು (ಈದ್ ಮೀಲಾದನ್ನು) ಕ್ರೈಸ್ತರು ಈಸಾ (ಅಸ) ರ ಜನ್ಮ ದಿನವನ್ನು ಆಚರಿಸುವುದನ್ನು ಅನುಕರಿಸಿ ಆಚರಿಸುತ್ತಿದ್ದರೆ, ಇನ್ನು ಕೆಲವರು ಪ್ರವಾದಿ(ಸಅ) ರೊಂದಿಗೆ ಇರುವ ಅಪಾರವಾದ ಪ್ರೀತಿಯಿಂದ ಆಚರಿಸುತ್ತಾರೆ. ಪ್ರವಾದಿ (ಸಅ) ರಲ್ಲಿರುವ ಪ್ರೀತಿ ಮತ್ತು ಪರಿಶ್ರಮಕ್ಕೆ ಅಲ್ಲಾಹನಿಂದ ಕೆಲವೊಮ್ಮೆ ಪುಣ್ಯಸಿಗಲೂ ಬಹುದು (ಸಿಗುತ್ತದೆ ಎಂದಿಲ್ಲ), ಆದರೆ ಪ್ರವಾದಿ (ಸಅ) ರ ಜನ್ಮ ದಿನಾಚರಣೆ ಎಂಬ ಬಿದ್ಅತ್ ಗೆ (ಅನಾಚಾರಕ್ಕೆ) ಪುಣ್ಯವಿಲ್ಲ. ಮಾತ್ರವಲ್ಲ ಪ್ರವಾದಿ(ಸಅ) ರು ಜನಿಸಿದ ದಿನದಲ್ಲಿ ಬಿನ್ನಾಭಿಪ್ರಾಯಗಳಿವೆ, ಪ್ರವಾದಿ (ಸಅ) ರ ಜನ್ಮ ದಿನವನ್ನು ಆಚರಿಸಲು ಯಾವುದೇ ಕೊರತೆಗಳು ಇಲ್ಲದಿದ್ದರೂ ಸ್ವಹಾಬಿಗಳುಅಥವಾ ಮುಂಗಾಮಿಗಳು ಯಾರೂ ಆಚರಿಸಲಿಲ್ಲ, ಇದೊಂದು ಒಳ್ಳೆಯ ಕಾರ್ಯವಾಗಿರುತಿದ್ದರೆ ನಮಗಿಂತಲೂ ಹೆಚ್ಚಾಗಿ ಸ್ವಹಾಬಿಗಳು ಆಚರಿಸುತ್ತಿದ್ದರು, ನಮಗಿಂತೂ ಹೆಚ್ಚಾಗಿ ಪ್ರವಾದಿ (ಸಅ)ರನ್ನು ಪ್ರೀತಿಸಿದವರು ಅವರಾಗಿದ್ದಾರೆ, ನಮಗಿಂತಲೂ ಹೆಚ್ಚಾಗಿ ಆಧರಿಸಿದವರೂ ಅವರಾಗಿದ್ದಾರೆ, ಅವರು ಎಲಾ ಒಳ್ಳೆಕಾರ್ಯಗಳಲ್ಲಿ ಅಪಾರವಾದ ಆಸಕ್ತಿ ಇರುವವರಾಗಿದ್ದರು, ಪ್ರವಾದಿ (ಸಅ) ಮೇಲಿರುವ ನಿಜವಾದ ಪ್ರೀತಿ ಎಂದರೆ ಅವರ ಚರ್ಯೆಯನ್ನು ಅನುಸರಿಸುವುದಾಗಿದೆ, ಸುನ್ನತ್ತನ್ನು ಪ್ರತ್ಯಕ್ಷವಾಗಿಯೂ ಅಪ್ರತ್ಯಕ್ಷವಾಗಿಯೂ ಸಜೀವಗೊಳಿಸುವುದಾಗಿದೆ, ಪ್ರವಾದಿ (ಸಅ) ರು ಯಾವ ಆಶಯಗಳಿಂದ ನಿಯೋಗಿಸಿದರೋ ಆಆಶಯವನ್ನು ಕೈಯಿಂದಲೂ, ನಾಲಗೆಯಿಂದಲೂ, ಹೃದಯದಿಂದಲೂ (ಜಿಹಾದ್) ಪ್ರಚಾರ ಮಾಡುವುದಾಗಿದೆ ನಿಜವಾದ ಪ್ರೀತಿ. ಇದಾಗಿದೆ ಮುಹಾಜಿರುಗಳೂ, ಅನ್ಸಾರಿಗಳೂ, ಮುಂಗಾಮಿಗಳಾದ ತಾಬಿವುಗಳ ಮಾರ್ಗ.
وأكثر هؤلاء الذين تجدهم حرصاً (۲) على أمثال هذه البدع، مع ما لهم من حسن القصد، والاجتهاد الذي (٣) يرجى لهم : بهما المثوبة، تجدهم فاترين في ) أمر الرسولعما أمروا بالنشاط فيه، وإنما هم بمنزلة من يحلي المصحف ولا يقرأ فيه، أو يقرأ فيه ولا يتبعه
ಅನಾಚಾರಗಳನ್ನು (ಬಿದ್ಅತನ್ನು) ಮಾಡುವ ಜನರಿಗೆ (ಇಬ್ನು ತೈಮಿಯಾಯಾ ರ ಕಾಲದ) ಒಳ್ಳೆಯ ಉದ್ದೇಶವಿದೆ, ಆದರೆ ಪ್ರವಾದಿ (ಸಅ) ಕಲ್ಪಿಸಿದವುಗಳನ್ನುಪಾಲಿಸಲು ಅವರು ತಯಾರಿಲ್ಲ. ಉದಾಹರಣೆಗೆ ಹೇಳುವುದಾದರೆ ಅವರು ಮುಸ್’ಹಫನ್ನು ಅಲಂಕರಿಸುವರು, ಆದರೆ ಪಾರಾಯಣ ಮಾಡುವುದಿಲ್ಲ, ಅಥವಾಅವರು ಪಾರಾಯಣ ಮಾಡುತ್ತಾರೆ ಅನುಸರಿಸುವುದಿಲ್ಲ.
فتعظيم المولد، واتخاذه موسماً، قد يفعله بعض الناس، ويكون له فيه (1) أجر عظيم لحسن قصده، وتعظيمه لرسول الله ، كما قدمته لك أنه يحسن من بعض الناس، مايستقبح من المؤمن المسدد. ولهذا قيل للإمام أحمد عن بعض الأمراء: إنه أنفق على مصحف ألف دينار، أو نحو ذلك فقال : دعهم فهذا أفضل ما أنفقوا فيه الذهب أو كماقال : مع أن مذهبه أن زخرفة المصاحف مكروهة. وقد تأول بعض الأصحاب أنه أنفقها في تجويد (۲) الورق والخط . وليس مقصود أحمد هذا، إنما قصده أن هذا العملفيه مصلحة، وفيه أيضاً مفسدة كره لأجلها
ಕೆಲವರು ಜನ್ಮ ದಿನವನ್ನು ಆಧರಿಸಿ, ಅದನ್ನು ಹಬ್ಬದ ದಿನವನ್ನಾಗಿ ಆಚರಿಸುತ್ತಾರೆ, ಅವರ ಒಳ್ಳೆಯ ಉದ್ದೇಶ ಮತ್ತು ಪ್ರವಾದಿ (ಸಅ) ರನ್ನು ಆಧರಿಸುವುದಕ್ಕಾಗಿಅವರಿಗೆ ದೊಡ್ಡ ಪ್ರತಿಫಲ ಸಿಗಲೂ ಬಹುದು. ಇದೇ ಕಾರ್ಯವನ್ನು ಈಮಾನ್ ಇರುವವರು ಆಚರಿಸುವಾಗ ಅದು ಅನಾಚಾರ (ಬಿದ್ಅತ್) ಆಗಿದೆ, ಎಂದರೆಕೆಲವರಿಗೆ ಅದನ್ನು (ಕಾರಣಾಂತರಗಳಿಂದ) ಅನುವು ಮಾಡಿ ಕೊಡಬೇಕಾಗುತ್ತದೆ. ಉದಾಹರಣೆಗೆ (ಇಮಾಮ್ ಆಹ್ಮದ್ ರ ಕಾಲದ) ರಾಜರು (ಚಿನ್ನದಿಂದ) ಸಾವಿರಾರು ದೀನಾರ್ ಖರ್ಚು ಮಾಡಿ ಮುಸ್’ಹಫನ್ನು ತಯಾರಿಸುತ್ತಿದ್ದರು ಎಂದು ಇಮಾಮ್ ಅಹ್ಮದ್ (ರ) ರೊಂದಿಗೆ (ಕೆಲವರಿಂದ) ಹೇಳಲಾಯಿತು. ಮುಸ್’ಹಫನ್ನು ಅಲಂಕರಿಸಬಾರದು ಅದು ಕರಾಅತ್ ಆಗಿದೆ ಎಂದು ಇಮಾಮ್ ಅಹ್ಮದ್ (ರ) ರ ನಿಲುವಾಗಿದ್ದರೂ ಅವರು ಹೇಳಿದರು “ಅವರನ್ನು ಅವರಪಾಡಿಗೆ ಬಿಟ್ಟು ಬಿಡಿ” ಅವರು ಆ ರೀತಿ ಖರ್ಚು ಮಾಡುವುದೇ ಉತ್ತಮ ಎಂದು ಇಮಾಮ್ ಅಹ್ಮದ್ (ರ) ರು ಹೇಳಿದರು. ಇಮಾಮ್ ಅಹ್ಮದ್ (ರ) ರ ಉದ್ದೇಶಅದರಲ್ಲಿ ಕೆಲವು ಪ್ರಯೊಜನವೂ ಇದೆ, ಕೆಲವು ದೋಷವೂ ಇದೆ ಎಂದಾಗಿದೆ (ಅದು ಸರಿಯಲ್ಲ ಎಂದರೆ ಅವರು ಆ ಚಿನ್ನವನ್ನು ಬೇರೆ ಯಾವುದೇ ರೀತಿಯಲ್ಲಿಅನಾವಶ್ಯಕ ಖರ್ಚು ಮಾಡಬಹುದು ಎಂಬ ಅರ್ಥದಲ್ಲಿ).
فهؤلاء إن لم يفعلوا هذا، وإلا اعتاضوا بفساد (۳) لا صلاح فيه، مثل أن ينفقها في كتاب من كتب الفجور من كتب الأسمار، أو الأشعار أو حكمة فارس والروم.
ಅಂತವರು ಅದನ್ನು ಮಾಡುವುದಿಲ್ಲ ಎಂದಾದರೆ ಅವರು ಒಂದು ಪ್ರಯೋಜನವೂ ಇಲ್ಲದ ಅನಾವಶ್ಯಕ ಬೇಡದ ಪುಸ್ತಕಗಳಿಗೆ ಖರ್ಚು ಮಾಡಿ ಅದಕ್ಕಿಂತಲೂಹೆಚ್ಚಿನ ಪಥಬ್ರಷ್ಟತೆಯಲ್ಲಿ ತೊಡಗಿರುತ್ತಾರೆ.
فتفطن لحقيقة الدين، وانظر ما اشتملت عليه الأفعال من المصالح الشرعية، والمفاسد؛ بحيث تعرف ما مراتب المعروف ومراتب المنكر، حتى تقدم أهمها عند الازدحام
ಆದ್ದರಿಂದ ಇಸ್ಲಾಮಿನ ಸತ್ಯಾವಸ್ಥೆಯನ್ನು ಅರಿತುಕೊಳ್ಳಿರಿ, ಶರೀಅದಲ್ಲಿರುವ ಒಳಿತು ಯಾವುದೆಂದೂ, ಅದಕ್ಕೆ ವಿರುದ್ಧವಾದ ಕೆಡುಕುಗಳು ಯಾವುದೆಂದೂಅರಿತುಕೊಳ್ಳಿರಿ. ಇದರಿಂದ ನೀವು ಒಳಿತು ಕೆಡುಕುಗಳನ್ನು ತಿಳಿಯುವಿರಿ.
ಇದಾಗಿದೆ ಇಸ್ಲಾಮಿನ ಶೈಖ್ ಎಂದು ಖ್ಯಾತಿ ಹೊಂದಿರುವ ಶೈಖುಲ್ ಇಸ್ಲಾಮ್ ಇಬ್ನು ತೈಮಿಯಾ (ರ) ರವರ ನಿಲುವು.
ಇದರಿಂದಾಗಿದೆ ಸಮಸ್ತ ಮುಸ್ಲಿಯಾರುಗಳು ಒಂದು ಭಾಗವನ್ನು ಕದ್ದು ಆ ಭಾಗವನ್ನು ದುರವ್ಯಾಖ್ಯಾನ ಮಾಡಿ ಜನ ಸಾಮಾನ್ಯರನ್ನು ತಪ್ಪಾದ ದಾರಿಗೆಎಳೆದೊಯ್ದು ತಮ್ಮ ಜೇಬನ್ನು ತುಂಬಿಸುತ್ತಿರುವುದು.
ಮುಗ್ದ ಜನರನ್ನು ಶಿರ್ಕ್, ಬಿದ್ಅತ್ ನೆಡೆಗೆ ಕೊಂಡೊಯ್ಯಲು ಕುರ್ಆನಿನ ಮೇಲೆಯೂ, ಪ್ರವಾದಿ (ಸಅ) ರ ಮೇಲೆಯೂ, ಇಮಾಮರ ಮೇಲೆಯೂ ಸುಳ್ಳುಹೇಳಲು ಸಮಸ್ತದ ಮುಸ್ಲಿಯಾರುಗಳು ಅಂಜದವರಾಗಿದ್ದಾರೆ ಎನ್ನುವುದಾಗಿದೆ ವಾಸ್ತವ.
ಇಂತವರ ಕೆಡುಕಿನಿಂದ ಅಲ್ಲಾಹನು ನಮ್ಮನ್ನು ರಕ್ಷಿಸಲಿ…
✍🏼 Abu Muadh