ಈದ್ ಉಲ್ ಫಿತ್ರ್ ಹಬ್ಬದ ಶಿಷ್ಟಾಚಾರಗಳು...
ಅಬ್ದುಲ್ಲಾ ತಾಹಿರ್ ಫಲಾಹಿ
ಇಸ್ಲಾಮೀ ಯುನಿವರ್ಸಿಟಿ, ಮದೀನಾ
ಒಳಿತಿನ ಕಾರ್ಯಗಳಲ್ಲಿ ಪರಸ್ಪರ ಪೈಪೋಟಿ ನಡೆಸಲಾಗು ವಂತಹ, ಮನಸ್ಸು ಒಳಿತಿನ ಕಡೆಗೆ ವಾಲಿಕೊಂಡಿರುವಂತಹ, ಎಲ್ಲ ಒಳಿತುಗಳ ಮೇಲೆ ಪ್ರೀತಿ ಮತ್ತು ಕೆಡುಕುಗಳ ಮೇಲೆ ದ್ವೇಷ ಉಕ್ಕುವಂತಹ, ಪಾಪಗಳ ಆಟಾಟೋಪ ತಣ್ಣಗಾಗಿರು ವಂತಹ ಹಾಗೂ ಸತ್ಕರ್ಮಗಳೇ ಮೇಳೈಸಿರುವಂತಹ ಪರಿಶುದ್ಧ ಮಾಸಕ್ಕೆ ನಾವು ವಿದಾಯ ಕೋರುತ್ತಿದ್ದೇವೆ. ಈ ಮಾಸದಿಂದ ಸಾದ್ಯಂತ ಪ್ರಯೋಜನ ಪಡೆದ ಮತ್ತು ಇದರ ಸಮೃದ್ಧಿಗಳನ್ನು ತನ್ನ ಬಾಹುಗಳ ತುಂಬಾ ಬಾಚಿ ಪಡಕೊಂಡವನು ಅತ್ಯಂತ ಅದೃಷ್ಟವಂತನು. ಹಾಗೆಯೇ ಈ ಅಮೂಲ್ಯ ಅವಕಾಶವನ್ನು ಕಳೆದುಕೊಂಡ ಮತ್ತು ಕೇವಲ ತನ್ನ ವಿಶ್ವಾಸದ ದೌರ್ಬಲ್ಯ, ಆಲಸ್ಯ ಮತ್ತು ಅತ್ಯಾಸೆಯಿಂದಾಗಿ ಈ ಮಾಸದ ಪ್ರಯೋಜನ ಪಡೆಯುವಲ್ಲಿ ವಿಫಲನಾದವನು ಎಂತಹ ಹತಭಾಗಿ! ಪ್ರವಾದಿ ವರ್ಯರು(ಸ) ಹೀಗೆಂದಿರುವರು, “ನನ್ನ ಬಳಿಗೆ ಜಿಬ್ರೀಲ್(ಅ) ಬಂದು ‘ಯಾರಿಗೆ ರಮಝಾನ್ ತಿಂಗಳು ದೊರೆತೂ ತನ್ನ ಪಾಪ ವಿಮೋಚನೆಗೆ ಪ್ರಯತ್ನಿಸದವನು ನಾಶವಾಗಲಿ’ ಎಂದಾಗ ನಾನು ಅದಕ್ಕೆ ‘ಆಮೀನ್’ ಹೇಳಿದೆ (ಅಂದರೆ ಓ ಅಲ್ಲಾಹ್ ಈ ಪ್ರಾರ್ಥನೆಯನ್ನು ಸ್ವೀಕರಿಸು)” [ಅಲ್ ಅದಬುಲ್ ಮುಫರ್ರಿದ್ ಲಿಲ್ ಬುಖಾರಿ(ರ): 644, ಸಹೀಹ್]
ಈದ್ ಎಂಬುದು ಸಂತೋಷ ಆಚರಿಸುವ ಸುಸಂದರ್ಭ ವಾಗಿದೆ. ಜಗತ್ತಿನಲ್ಲಿ ಸತ್ಯವಿಶ್ವಾಸಿಗಳಿಗೆ ಎರಡು ರೀತಿಯ ಸಂತೋಷಗಳಿರುವುದು. ಒಂದು ತನ್ನ ಪ್ರಭುವಿನ ಅನುಸರಣೆಯ ಅವಕಾಶ ದೊರೆತಿರುವುದು, ಇನ್ನೊಂದು ಅದರ ಫಲವಾಗಿ ಪ್ರತಿಫಲದ ವಾಗ್ದಾನ ದೊರೆತಿರುವುದು ಆಗಿರುತ್ತದೆ. “ಓ ಪೈಗಂಬರರೇ, (ಹೀಗೆ) ಹೇಳಿರಿ: ಇದನ್ನು (ಕುರ್ಆನನ್ನು) ಅವತೀರ್ಣಗೊಳಿಸಿದುದು ಅಲ್ಲಾಹನ ಅನುಗ್ರಹ ಮತ್ತು ಕೃಪೆಯಾಗಿರುತ್ತದೆ. ಇದಕ್ಕಾಗಿ ಜನರು ಸಂತೋಷಪಡಬೇಕು. ಜನರು ಶೇಖರಿಸುತ್ತಿರುವ ಎಲ್ಲ ವಸ್ತುಗಳಿಗಿಂತಲೂ ಇದು ಉತ್ತಮವಾಗಿದೆ.” (ಪವಿತ್ರ ಕುರ್ಆನ್: 10: 58)
ಖಂಡಿತವಾಗಿಯೂ ಈದ್ನ ದಿನವು ಕೃತಜ್ಞತೆ ಮತ್ತು ಸಂತೋಷ ಪ್ರಕಟನೆಯ ದಿನವಾಗಿದೆ. ಆದರೆ ಈದ್ ಕೇವಲ ಹೊಸ ವಸ್ತ್ರ ಧರಿಸುವ ಮತ್ತು ತನ್ನ ಪ್ರತಿಷ್ಠೆಯನ್ನು ಮೆರೆಯು ವುದರ ಹೆಸರಲ್ಲ. ಈದ್ಗೂ ಕೆಲವು ಶಿಷ್ಟಾಚಾರಗಳಿರುತ್ತವೆ. ಈಗ ನಾವು ಈದುಲ್ ಫಿತ್ರ್ನ ನಿರೀಕ್ಷೆಯಲ್ಲಿರುವ ಈ ಸಂದರ್ಭದಲ್ಲಿ, ಈದ್ನ ಆದೇಶ-ಸಿದ್ಧಾಂತಗಳು ಮತ್ತು ಅದರ ಶಿಷ್ಟಾಚಾರ-ಸುನ್ನತ್ಗಳ ಕುರಿತು ಚರ್ಚಿಸುವುದು, ಶರೀಅತ್ಗೆ ವಿರುದ್ಧವಾದ ಸಂಗತಿಗಳು ಹಾಗೂ ನವೀನಾಚಾರ(ಬಿದ್ಅತ್)ಗಳ ಕುರಿತು ಎಚ್ಚರಿಸುವುದು ಅಗತ್ಯವೆಂದು ತಲೆದೋರುತ್ತಿದೆ.
ಈದ್ನ ಶಿಷ್ಟಾಚಾರಗಳು:
1. ಈದ್ನಂದು ತಕ್ಬೀರ್ ಹೇಳುವುದು: ಈದ್ನ ರಾತ್ರಿ ಸೂರ್ಯಾಸ್ತದ ಬಳಿಕದಿಂದ ಫಜ್ರ್ ನಮಾಝ್ನ ವರೆಗೆ ತಕ್ಬೀರ್ ಹೇಳುವುದು ಸುನ್ನತ್ ಆಗಿದೆ. ಅಲ್ಲಾಹ್ ಹೇಳುತ್ತಾನೆ, “ನೀವು ಉಪವಾಸದ ಸಂಖ್ಯೆಯನ್ನು ಪೂರ್ತಿ ಗೊಳಿಸಲು ಅನುಕೂಲವಾಗುವಂತೆಯೂ ಸನ್ಮಾರ್ಗದರ್ಶನದ ಮೂಲಕ ನಿಮ್ಮನ್ನು ಪ್ರತಿಷ್ಠಿತ ಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾ ಡುತ್ತಾ ಅವನಿಗೆ ಕೃತಜ್ಞರಾಗಿರಲಿ ಕ್ಕಾಗಿಯೂ ಈ ವಿಧಾನವನ್ನು ತೋರಿಸಿ ಕೊಡಲಾಗಿದೆ.”
(ಪವಿತ್ರ ಕುರ್ಆನ್: 2: 185)
ಪುರುಷರು ಮಾರುಕಟ್ಟೆ, ಮನೆ, ದಾರಿ, ಮಸೀದಿ ಮತ್ತು ಸಾಮಾನ್ಯ ಸಭೆಗಳಲ್ಲಿ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುವುದು ಮೆಚ್ಚುಗೆಯ ಕಾರ್ಯವಾಗಿದೆ. ಈ ಪ್ರಕಾರ ಪ್ರವಾದಿಚರ್ಯೆ ಯನ್ನು ಅನುಸರಿಸಿದಂತೆಯೂ ಆಗುತ್ತದೆ ಮತ್ತು ಸಲಫುಸ್ಸಾಲಿಹೀನ್ಗಳ ವಿಧಾನವನ್ನು ಜೀವಂತ ಇರಿಸಿದಂತೆಯೂ ಆಗುತ್ತದೆ. ಅದೇ ವೇಳೆ ಮಹಿಳೆಯರು ತಮ್ಮ ಸಭೆಯಲ್ಲಿ ಉಚ್ಚ ಸ್ವರದಲ್ಲಿಯೂ ಪರಿಸರದಲ್ಲಿ ಅಪರಿಚಿತ ಪುರುಷರಿದ್ದರೆ ಮೆಲುದನಿಯಲ್ಲೂ ತಕ್ಬೀರ್ ಹೇಳಬೇಕು. ಮೂಲ ಆದೇಶವು ಎಲ್ಲರೂ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುವುದಾಗಿದೆ. ಈ ಮೂಲಕ ಅಲ್ಲಾಹನ ಮಹಾನತೆಯನ್ನು ಬಹಿರಂಗವಾಗಿ ಘೋಷಿಸುವಂತಾಗಬೇಕು ಮತ್ತು ತಮ್ಮ ಜೀವನ ಹಾಗೂ ದೇವದಾಸ್ಯತನವನ್ನು ಸುವ್ಯಕ್ತವಾಗಿ ಪ್ರಕಟಿಸುವಂತಾಗಬೇಕು; ಅಂತೆಯೇ ಉಪವಾಸ ಮತ್ತು ತರಾವೀಹ್ಗಳ ರೂಪದಲ್ಲಿ ಅಲ್ಲಾಹನು ದಯಪಾಲಿಸಿರುವ ಅನುಗ್ರಹಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುವಂತಾಗಬೇಕು ಎಂಬುದೇ ಇದರ ಉದ್ದೇಶವಾಗಿದೆ.
ಇಮಾನ್ ಝಹ್ರೀ(ರ) ಹೇಳುತ್ತಾರೆ, “ಪ್ರವಾದಿವರ್ಯರು(ಸ) ಈದುಲ್ ಫಿತ್ರ್ನಂದು ಮನೆಯಿಂದ ತಕ್ಬೀರ್ ಹೇಳುತ್ತಾ ಹೊರಡುತ್ತಿದ್ದರು ಮತ್ತು ಈದ್ಗಾಹ್ ತಲುಪಿದ ಮೇಲೆ ನಮಾಝ್ ನಿರ್ವಹಿಸುತ್ತಿದ್ದರು. ನಮಾಝ್ನ ಬಳಿಕ ಅವರು(ಸ) ತಕ್ಬೀರ್ ಹೇಳುವುದನ್ನು ನಿಲ್ಲಿಸುತ್ತಿದ್ದರು.” [ಮುಸನ್ನಫ್ ಇಬ್ನು ಅಬೀ ಶೈಬಾ(ರ): 5621, ಸಹೀಹುಲ್ ಬಾಕೀ(ರ)]
ಈ ಹದೀಸ್ನಿಂದ ತಿಳಿದು ಬರುವಂತೆ, ದಾರಿಗಳಲ್ಲಿ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುತ್ತಾ ಈದ್ಗಾಹ್ ಹೋಗುವುದು ಸುನ್ನತ್ ಆಗಿದೆ. ಆದರೆ ದುರದೃಷ್ಟವಶಾತ್ ಇಂದು ಜನರು ಈ ಸುನ್ನತನ್ನು ಮರೆತು ಬಿಟ್ಟಿದ್ದಾರೆ. ಈ ವರ್ತನೆಯನ್ನು ಸುಧಾರಿಸುತ್ತಾ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುವ ಪರಿಪಾಠವನ್ನು ಬೆಳೆಸುವ ಅಗತ್ಯವಿದೆ.
ಇನ್ನು ಎಲ್ಲರೂ ಏಕಕಾಲದಲ್ಲಿ ತಕ್ಬೀರ್ ಮೊಳಗಿಸುತ್ತಿರಬೇಕು ಎಂಬ ಅಗತ್ಯವೇನೂ ಇಲ್ಲ. ಆದರೆ ಈ ತಕ್ಬೀರ್ ಮತ್ತು ತಹ್ಮೀದ್ನ ಉದ್ದೇಶವನ್ನು ತಮ್ಮ ದೃಷ್ಟಿಗಳ ಮುಂದೆ ಇರಿಸಬೇಕು ಮತ್ತು ಪ್ರವಾದಿ ವರ್ಯರು(ಸ) ಉಚ್ಚರಿಸುತ್ತಿದ್ದ ರೀತಿಯಲ್ಲಿಯೇ ತಕ್ಬೀರ್ ಹೇಳಬೇಕು ಮತ್ತು ಅದರಲ್ಲಿ ಯಾವುದೇ ಹೆಚ್ಚು ಕಮ್ಮಿ ಮಾಡಬಾರದು. ಅಬ್ದುಲ್ಲಾ ಇಬ್ನು ಮಸ್ಊದ್ರವರ(ರ) ಕುರಿತು ಹೀಗೆ ಹೇಳಲಾಗುತ್ತದೆ- ಅವರು ಈ ಪದಗಳಲ್ಲಿ ತಕ್ಬೀರ್ ಹೇಳುತ್ತಿದ್ದರು, “ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್; ಲಾ ಇಲಾಹ ಇಲ್ಲಲ್ಲಾಹು, ವಲ್ಲಾಹು ಅಕ್ಬರ್; ಅಲ್ಲಾಹು ಅಕ್ಬರ್, ವಲಿಲ್ಲಾಹಿಲ್ ಹಮ್ದ್” [ಮುಸನ್ನಫ್ ಇಬ್ನು ಅಬೀ ಶೈಬಾ(ರ): 5697, ಸಹೀಹ್]
ಅಂತೆಯೇ ಅಬ್ದುಲ್ಲಾ ಬಿನ್ ಅಬ್ಬಾಸ್ರ(ರ) ಕುರಿತು ಹೀಗೆ ಹೇಳಲಾಗುತ್ತದೆ- ಅವರು ಈ ಪದಗಳೊಂದಿಗೆ ತಕ್ಬೀರ್ ಹೇಳುತ್ತಿದ್ದರು, “ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರು, ಅಲ್ಲಾಹು ಅಕ್ಬರು, ವಲಿಲ್ಲಾಹಿಲ್ ಹಮ್ದ್, ಅಲ್ಲಾಹು ಅಕ್ಬರ್ ವ ಅಜಲ್ಲು, ವಲ್ಲಾಹು ಅಕ್ಬರ್ ಅಲಾ ಮಾ ಹದಾನಾ” [ಅಸ್ಸುನನಿಲ್ ಕಿಬ್ರೀ ಲಿಲ್ ಬೈಹಕೀ(ರ): 6074, ಸಹೀಹ್] ಹಾಗಾಗಿ ಈ ಎರಡು ವಿಧಾನಗಳ ಪೈಕಿ ಯಾವುದನ್ನೂ ಆಯ್ದುಕೊಳ್ಳಬಹುದು.
2. ಈದ್ಗಾಹ್ಗೆ ಹೋಗುವುದಕ್ಕೆ ಮುಂಚೆ ಏನನ್ನಾದರೂ ಸೇವಿಸುವುದು: ಅನಸ್(ರ) ಹೇಳುತ್ತಾರೆ, “ಪ್ರವಾದಿವರ್ಯರು(ಸ) ಈದುಲ್ ಫಿತ್ರ್ನಂದು ಖರ್ಜೂರಗಳನ್ನು ಸೇವಿಸದೆ ಈದ್ಗಾಹ್ಗೆ ತೆರಳುತ್ತಿರಲಿಲ್ಲ ಮತ್ತು ಅವರು ಬೆಸ ಸಂಖ್ಯೆಯಲ್ಲಿ ಖರ್ಜೂರ ಗಳನ್ನು ತಿನ್ನುತ್ತಿದ್ದರು.” [ಬುಖಾರಿ: 953]
ಬುರೈದಾ(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಈದುಲ್ ಫಿತ್ರ್ನಂದು ಏನನ್ನಾದರೂ ಸೇವಿಸದೆ ಈದ್ಗಾಹ್ಗೆ ಹೊರಡುತ್ತಿರಲಿಲ್ಲ ಮತ್ತು ಈದುಲ್ ಅಝ್ಹಾದಂದು ಈದ್ ನಮಾಝ್ ಮುಗಿಸುವ ವರೆಗೂ ಏನನ್ನೂ ಸೇವಿಸುತ್ತಿರಲಿಲ್ಲ.” [ಸುನನ್ ತಿರ್ಮಿದಿ(ರ): 542, ತಸ್ಹೀಹುಲ್ ಬಾಕೀ(ರ)]
3. ಈದ್ ನಮಾಝ್ಗಾಗಿ ಶೃಂಗರಿಸುವುದು: ಈದ್ನಂದು ಸುಂದರವಾಗಿ ಕಾಣುವುದು, ಅತ್ಯುತ್ತಮ ವಸ್ತ್ರ ಧರಿಸುವುದು, ಅತ್ಯುತ್ತಮ ಸುಗಂಧ ದ್ರವ್ಯವನ್ನು ಬಳಸುವುದು ಈದ್ನ ಐಚ್ಛಿಕ ಕಾರ್ಯ ಮತ್ತು ಶಿಷ್ಟಾಚಾರವಾಗಿದೆ. ಈ ಮೂಲಕ ದಾಸನ ಮೇಲೆ ಇರುವ ಅಲ್ಲಾಹನ ಅನಗ್ರಹಗಳ ಪ್ರಕಟನೆ ಯಾಗುತ್ತದೆ. ಇದನ್ನು ಅಲ್ಲಾಹ್ ಇಷ್ಟ ಪಡುತ್ತಾನೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿದ್ದಾರೆ, “ಅಲ್ಲಾಹನು ತನ್ನ ದಾಸರ ಮೇಲೆ ತನ್ನ ಅನುಗ್ರಹಗಳು ಪ್ರಕಟವಾಗುವುದನ್ನು ಇಷ್ಟಪಡುತ್ತಾನೆ.” [ಸುನನ್ ಅಬೂದಾವೂದ್(ರ): 4065, ಸುನನ್ ನಸಾಯೀ(ರ): 5224]
ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ಪ್ರವಾದಿ ವರ್ಯರು(ಸ) ಈದ್ನಂದು ಕೆಂಪು ಬಣ್ಣದ ಜುಬ್ಬಾ ಧರಿಸು ತ್ತಿದ್ದರು.” [ತಬ್ರಾನೀ(ರ): 7609]
ಇಮಾಮ್ ಬುಖಾರಿಯವರು(ರ) ಈದ್ಗೆ ಸಂಬಂಧಿಸಿ ‘ಬಾಬು ಫಿಲ್ ಈದೈನಿ ವಲ್ ತಜ್ಮಲ್ ಫೀಹಾ’ ಎಂಬ ಒಂದು ಅಧ್ಯಾಯವನ್ನೇ ರಚಿಸಿದ್ದಾರೆ. ಅದರಲ್ಲಿ ಉದ್ಧರಿಸಿರುವ ಹದೀಸ್ಗಳಿಂದ ತಿಳಿದು ಬರುವಂತೆ ಪ್ರವಾದಿವರ್ಯರು(ಸ) ಈದ್ನಂದು ಶೃಂಗರಿಸುವುದನ್ನು ನಿಷೇಧಿಸಿರಲಿಲ್ಲ. [ಸಹೀಹ್ ಬುಖಾರಿ(ರ): 948]
ನಾಫಿಅï(ರ) ಹೇಳುತ್ತಾರೆ, “ಅಬ್ದುಲ್ಲಾ ಬಿನ್ ಉಮರ್(ರ) ಈದ್ನಂದು ಈದ್ಗಾಹ್ಗೆ ಹೋಗುವುದಕ್ಕೆ ಮುಂಚೆ ಸ್ನಾನ ಮಾಡುತ್ತಿದ್ದರು.” [ಮೂಅತ್ತಾ ಇಮಾಮ್ ಮಾಲಿಕ್(ರ): 426]
ಇನ್ನೊಂದು ವರದಿಯಲ್ಲಿ ಈ ಹೆಚ್ಚುವರಿ ಪದಗಳಿವೆ, “ಅವರು(ರ) ಇಮಾಮರೊಂದಿಗೆ ಫಜ್ರ್ ನಮಾಝ್ ನಿರ್ವಹಿ ಸುತ್ತಿದ್ದರು, ಬಳಿಕ ಮನೆಗೆ ಮರಳುತ್ತಿದ್ದರು ಮತ್ತು ಸ್ನಾನ ಮಾಡುತ್ತಿದ್ದರು ಮತ್ತು ಉತ್ತಮ ವಸ್ತ್ರವನ್ನು ಆಯ್ದು ಧರಿಸು ತ್ತಿದ್ದರು. ಬಳಿಕ ಅತ್ಯುತ್ತಮ ಸುಗಂಧವನ್ನು ಹಚ್ಚುತ್ತಿದ್ದರು. ಆನಂತರ ಈದ್ಗಾಹ್ಗೆ ತೆರಳುತ್ತಿದ್ದರು.”
[ಮುಸ್ನದುಲ್ ಹಾರಿಸ್(ರ): 206]
ಅಲ್ಲಾಮಾ ಇಬ್ನು ಕುದಾಮಾ(ರ) ಹೇಳುತ್ತಾರೆ, “ಈದ್ನಂದು ಸ್ನಾನ ಮಾಡುವುದು ಮೆಚ್ಚುಗೆಯ ಕಾರ್ಯವಾಗಿದೆ. ಅಬ್ದುಲ್ಲಾ ಬಿನ್ ಉಮರ್(ರ) ಈದುಲ್ ಫಿತ್ರ್ನಂದು ಸ್ನಾನ ಮಾಡುತ್ತಿದ್ದರು. ಈ ಕಾರ್ಯವು ಅಲೀಯವರಿಂದಲೂ(ರ) ಉದ್ಧರಿಸಲ್ಪಟ್ಟಿದೆ.”
[ಅಲ್ ಮುಗ್ನೀ: 3/256-257]
4. ಈದ್ಗಳಲ್ಲಿ ನಮಾಝ್ನ ಆದೇಶ: ಈದ್ಗಳಲ್ಲಿ ನಮಾಝ್ ಮಾಡುವುದು ವಾಜಿಬುಲ್ ಐನ್ (ಪ್ರತಿಯೋರ್ವನ ಮೇಲೂ ವಾಜಿಬ್) ಆಗಿದೆ. ಪ್ರವಾದಿವರ್ಯರು(ಸ) ಅದಕ್ಕಾಗಿ ಹೊರಡ ಬೇಕೆಂದು ಜನರಿಗೆ ಆದೇಶಿಸಿದ್ದಾರೆ. ಎಲ್ಲಿಯ ವರೆಗೆಂದರೆ, ಅವರು(ಸ) ಹದಿಹರೆಯದ ಯುವತಿಯರಿಗೂ ಪರ್ದಾಧಾರಿ ಮಹಿಳೆಯರಿಗೂ ಈದ್ಗಾಹ್ಗೆ ಬರಲು ಆದೇಶಿಸುತ್ತಿದ್ದರು. ಉಮ್ಮು ಅತಿಯ್ಯ(ರ) ಹೇಳುತ್ತಾರೆ, “ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾದಂದು ಯುವತಿಯರನ್ನು, ಋತುಮತಿಯರನ್ನು ಮತ್ತು ಪರ್ದಾಧಾರಿ ಮಹಿಳೆಯರನ್ನು ಈದ್ಗಾಹ್ಗೆ ಕರೆ ತನ್ನಿ. ಆದರೆ ಋತುಮತಿಯರು ನಮಾಝ್ ನಿರ್ವಹಿಸಬಾರದು. ಬದಲಾಗಿ, ಮುಸ್ಲಿಮರ ಜತೆ ಒಳಿತಿನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳ ಬೇಕು” ಎಂದು ನಮಗೆ ಆದೇಶಿಸಿದರು. ನಾನು ಅರುಹಿದೆ, “ಅಲ್ಲಾಹನ ಸಂದೇಶ ವಾಹಕರೇ(ಸ)! ನಮ್ಮ ಪೈಕಿ ಯಾರ ಬಳಿ ಯಾದರೂ ಜಿಲ್ಬಾಬ್ (ಚದ್ದರ) ಇರದಿ ದ್ದರೆ?” ಅವರೆಂದರು, “ಅವಳ ಗೆಳತಿಯು ತನ್ನ ಜಿಲ್ಬಾಬ್ನಲ್ಲಿ ಅವಳನ್ನು ಸೇರಿಸಲಿ.” [ಸಹೀಹ್ ಮುಸ್ಲಿಮ್(ರ): 2093]
5. ಈದ್ ನಮಾಝ್ಗಳ ಜತೆಯಲ್ಲಿ ನಫಿಲ್ ನಮಾಝ್: ಈದ್ ನಮಾಝ್ಗೆ ಮುಂಚೆ ಅಥವಾ ಅದರ ನಂತರ ಯಾವುದೇ ನಫಿಲ್ ನಮಾಝ್ ನಿರ್ವಹಿ ಸಲಿಕ್ಕಿಲ್ಲ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹ ಕರು(ಸ) ಈದುಲ್ ಅಝ್ಹಾ ಅಥವಾ ಈದುಲ್ ಫಿತ್ರ್ನಂದು ಈದ್ಗಾಹ್ಗೆ ಬಂದರು ಮತ್ತು ಎರಡು ರಕಅತ್ (ಈದ್ನ) ನಮಾಝ್ ನಿರ್ವಹಿಸಿದರು. ಅವರು ಅದಕ್ಕೆ ಮೊದಲು ಮತ್ತು ನಂತರ ಯಾವುದೇ (ನಫಿಲ್) ನಮಾಝ್ ನಿರ್ವಹಿಸಲಿಲ್ಲ.” [ಸಹೀಹ್ ಮುಸ್ಲಿಮ್(ರ): 2096, ಬುಖಾರಿ(ರ): 989]
ಅಲ್ಲಾಮಾ ಇಬ್ನು ಕಯ್ಯಿಮ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹ ಕರು(ಸ) ಮತ್ತು ಅವರ ಸಹಾಬಿಗಳು(ರ) ಈದ್ಗಾಹ್ ತಲುಪಿದ ಮೇಲೆ ಈದ್ ನಮಾಝ್ಗೆ ಮುಂಚೆ ಅಥವಾ ಅದರ ನಂತರ ಯಾವುದೇ ನಮಾಝ್ ನಿರ್ವ ಹಿಸುತ್ತಿರಲಲಿಲ್ಲ.” [ಝಾದುಲ್ ಮುಆದ್: 1/425]
ಅಲ್ಲಾಮಾ ಇಬ್ನು ಹಜರ್(ರ) ಹೇಳು ತ್ತಾರೆ, “ಒಟ್ಟಿನಲ್ಲಿ ಈದ್ ನಮಾಝ್ಗೆ ಮುಂಚೆ ಮತ್ತು ಅದರ ಬಳಿಕ ಯಾವುದೇ ಸುನ್ನತ್ ನಮಾಝ್ ಸಾಬೀ ತಾಗಿಲ್ಲ. ಈ ನಮಾಝನ್ನು ಜುಮಾ ನಮಾಝ್ಗೆ ಸಮೀಕರಿಸಿದವರ ಹೊರತು.”
[ಫತ್ಹುಲ್ ಬಾರೀ: 3/418]
6. ಈದುಲ್ ಫಿತ್ರ್ ನಮಾಝ್ನ ಸಮಯ: ಸೂರ್ಯ ಒಂದು ಗೇಣಿನಷ್ಟು ಮೇಲಕ್ಕೇರಿದಾಗ ಅದರ ಸಮಯ ಆರಂಭ ವಾಗುತ್ತದೆ ಮತ್ತು ಸೂರ್ಯ ನಡುನೆತ್ತಿಯ ವರೆಗೆ ತಲುಪಿ ಇಳಿಮುಖವಾಗುವ ವರೆಗೆ ಅದರ ಸಮಯವಿರುತ್ತದೆ. ಅಲ್ಲಾಮಾ ಇಬ್ನು ಕಯ್ಯಿಮ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಈದುಲ್ ಫಿತ್ರ್ನ ನಮಾಝನ್ನು ಸ್ವಲ್ಪ ತಡವಾಗಿ ನಿರ್ವಹಿಸುತ್ತಿದ್ದರು ಮತ್ತು ಈದುಲ್ ಅಝ್ಹಾದ ನಮಾಝನ್ನು ಬೇಗ ನಿರ್ವಹಿಸುತ್ತಿದ್ದರು.” [ಝಾದುಲ್ ಮುಆದ್: 1/425] ಹಾಗಾಗಿ ಫಿತ್ರ್ ಝಕಾತನ್ನು ನೀಡಲು ಅವಕಾಶ ಪಡೆಯ ದವರು ಅದನ್ನು ನೀಡಿ ಬರುವಂತಾಗಲು ಇಮಾಮರು ಸ್ವಲ್ಪ ತಡವಾಗಿ ಈದ್ ನಮಾಝ್ ನಿರ್ವಹಿಸಬೇಕು.
7. ಈದ್ ನಮಾಝ್ನ ವಿಧಾನ: ಅಲ್ಲಾಹನ ಸಂದೇಶವಾಹಕರು(ಸ) ಈದ್ಗಾ ತಲುಪಿದ ಮೇಲೆ ಅದಾನ್ ಮತ್ತು ಇಕಾ ಮತ್ ಇಲ್ಲದೆಯೇ ನಮಾಝ್ ಪ್ರಾರಂಭಿ ಸುತ್ತಿದ್ದರು. ಆದ್ದರಿಂದ ಈದ್ ನಂದು ನಮಾಝ್ಗೆ ಅದಾನ್ ಮತ್ತು ಇಕಾಮತ್ ಹೇಳದಿರುವುದೇ ಸುನ್ನತ್ ಆಗಿದೆ.”
[ಝಾದುಲ್ ಮುಆದ್: 1/425]
ಜಾಬಿರ್ ಬಿನ್ ಸಮ್ರಃ(ರ) ಹೇಳು ತ್ತಾರೆ, “ನಾನು ಅಲ್ಲಾಹನ ಸಂದೇಶವಾಹ ಕರ(ಸ) ಜತೆಯಲ್ಲಿ ಹಲವು ಈದ್ಗಳಲ್ಲಿ ಅದಾನ್, ಇಕಾಮತ್ ಇಲ್ಲದೆಯೇ ನಮಾಝ್ ನಿರ್ವಹಿಸಿದ್ದೇನೆ.” [ಸಹೀಹ್ ಮುಸ್ಲಿಮ್(ರ): 2088]
ಈದ್ ನಮಾಝ್ನಲ್ಲಿ ಎರಡು ರಕಅತ್ಗಳಿರುತ್ತವೆ. ಉಮರ್(ರ) ಹೇಳು ತ್ತಾರೆ, “ಪ್ರಯಾಣದ ನಮಾಝ್ ಎರಡು ರಕಅತ್ಗಳಾಗಿವೆ, ಈದುಲ್ ಅಝ್ಹಾದ ನಮಾಝ್ ಎರಡು ರಕಅತ್ಗಳಾಗಿವೆ ಮತ್ತು ಇದುಲ್ ಫಿತ್ರ್ನ ನಮಾಝ್ ಎರಡು ರಕಅತ್ಗಳಾಗಿವೆ. (ಈ ಎರಡು ರಕಅತ್ಗಳು) ಸಂಪೂರ್ಣವಾದವುಗಳು. ಕಸ್ರ್ ಅಲ್ಲ.” [ಸುನನ್ ಇಬ್ನು ಮಾಜ(ರ): 1063, ತಸ್ಹೀಹುಲ್ ಬಾಕೀ(ರ)]
ಹನಫೀ ಕರ್ಮಶಾಸ್ತ್ರಜ್ಞರ ಪ್ರಕಾರ ಈದ್ ನಮಾಝನ್ನು ಆರು ಹೆಚ್ಚುವರಿ ತಕ್ಬೀರ್ಗಳೊಂದಿಗೆ ನಿರ್ವಹಿಸಲಾಗುತ್ತದೆ. ಮೊದಲ ರಕಅತ್ನಲ್ಲಿ ತಕ್ಬೀರ್ ತಹ್ರೀಮ ಮತ್ತು ಸನಾ ಪಠಿಸಿದ ಬಳಿಕ ಕಿರಅತ್ಗೆ ಮುಂಚೆ ಮೂರು ಹೆಚ್ಚುವರಿ ತಕ್ಬೀರ್ ಗಳನ್ನು ಹೇಳಲಾಗುತ್ತದೆ. ಹಾಗೆಯೇ ಎರಡನೆಯ ರಕಅತ್ನಲ್ಲಿ ಕಿರಅತ್ನ ಬಳಿಕ ರುಕೂಅïಗೆ ಹೋಗುವುದಕ್ಕೆ ಮುಂಚೆ ಮೂರು ಹೆಚ್ಚುವರಿ ತಕ್ಬೀರ್ ಹೇಳಲಾಗು ತ್ತದೆ. ಉಳಿದ ಕರ್ಮಗಳನ್ನು ಸಾಮಾನ್ಯ ನಮಾಝ್ಗಳಂತೆಯೇ ನಿರ್ವಹಿಸ ಲಾಗುತ್ತದೆ.
ಇತರೆಲ್ಲ ವಿದ್ವಾಂಸರ ಪ್ರಕಾರ ಈದ್ ನಮಾಝ್ಗಳನ್ನು ಹನ್ನೆರಡು ಹೆಚ್ಚುವರಿ ತಕ್ಬೀರ್ಗಳ ಜತೆಯಲ್ಲಿ ನಿರ್ವಹಿಸಲಾಗು ತ್ತದೆ. ಮೊದಲ ರಕಅತ್ನಲ್ಲಿ ಕಿರಅತ್ಗೆ ಮುಂಚೆ ಏಳು ಹೆಚ್ಚುವರಿ ತಕ್ಬೀರ್ ಹೇಳಲಾಗುತ್ತದೆ ಮತ್ತು ಎರಡನೆಯ ರಕಅತ್ನಲ್ಲಿ ಕಿರಅತ್ಗೆ ಮುಂಚೆ ಐದು ಹೆಚ್ಚುವರಿ ತಕ್ಬೀರ್ ಹೇಳಲಾಗುತ್ತದೆ.
8. ನಮಾಝ್ನ ಬಳಿಕ ಖುತ್ಬಾ: ಈದ್ಗಳ ಖುತ್ಬಾವನ್ನು ನಮಾಝ್ನ ಬಳಿಕ ನೀಡುವುದು ಸುನ್ನತ್ ಆಗಿದೆ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ನಾನು ಅಲ್ಲಾಹನ ಸಂದೇಶವಾಹಕರು(ಸ) ಮತ್ತು ಅಬುಬಕರ್(ರ), ಉಮರ್(ರ) ಮತ್ತು ಉಸ್ಮಾನ್ರ(ರ) ಜತೆಯಲ್ಲಿ ಈದ್ ನಮಾಝ್ ನಿರ್ವಹಿಸಿದ್ದೇನೆ. ಇವರೆಲ್ಲರೂ ಖುತ್ಬಕ್ಕಿಂತ ಮುಂಚೆ ನಮಾಝ್ ನಿರ್ವ ಹಿಸುತ್ತಿದ್ದರು.”
[ಸಹೀಹುಲ್ ಬುಖಾರಿ(ರ): 962]
ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹ ಕರು(ಸ) ಮತ್ತು ಅಬೂಬಕರ್(ರ), ಉಮರ್(ರ) ಇವರೆಲ್ಲ ಈದ್ ನಮಾಝನ್ನು ಖುತ್ಬಾಕ್ಕಿಂತ ಮುಂಚೆ ನಿರ್ವಹಿಸುತ್ತಿದ್ದರು.” [ಸಹೀಹ್ ಬುಖಾರಿ(ರ): 963]
ಖುತ್ಬಾ ಕೇಳಲು ಕುಳಿತುಕೊಳ್ಳುವುದು ಜನರ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಅಬ್ದುಲ್ಲಾ ಬಿನ್ ಸಾಯಿಬ್(ರ) ಹೇಳುತ್ತಾರೆ, “ನಾನು ಅಲ್ಲಾಹನ ಸಂದೇಶವಾಹಕರ(ಸ) ಜತೆಯಲ್ಲಿ ಈದ್ ನಮಾಝ್ಗೆ ನಿಂತೆ. ಅವರು(ಸ) ನಮಾಝ್ ಬಳಿಕ ಹೇಳಿದರು: ನಾನು ಖುತ್ಬಾ (ಪ್ರವಚನ) ನೀಡಲು ಹೊರಟಿದ್ದೇನೆ. ಖುತ್ಬಕ್ಕೆ ಕುಳಿತುಕೊಳ್ಳಲು ಇಚ್ಛಿಸುವವರು ಕುಳಿತುಕೊಳ್ಳಿರಿ ಮತ್ತು ಹೋಗಲಿಚ್ಛಿಸುವವರು ಹೋಗಬಹುದು.” [ಸುನನ್ ಅಬೂ ದಾವೂದ್(ರ): 1157, ತಸ್ಹೀಹುಲ್ ಬಾಕೀ(ರ)]
9. ಈದ್ನ ಶುಭ ಹಾರೈಕೆ: ಈದ್ನಂದು ತನ್ನ ಮುಸ್ಲಿಮ್ ಸಹೋದರರಿಗೆ ಶುಭ ಹಾರೈಸುವುದು ಈದ್ನ ಶಿಷ್ಟಾಚಾರವಾಗಿದೆ. ಮುಹಮ್ಮದ್ ಬಿನ್ ಝಿಯಾದ್(ರ) ಹೇಳುತ್ತಾರೆ, “ನಾನು ಅಬೂ ಉಮಾಮಾ ಬಾಹಿಲೀ(ರ) ಮತ್ತಿತರ ಸಹಾಬಿಗಳ ಜತೆಗಿದ್ದೆನು. ಇವರು ಈದ್ ನಮಾಝ್ ನಿರ್ವಹಿಸಿ ಮರಳುವಾಗ ಪರಸ್ಪರರೊಡನೆ ‘ತಕಬ್ಬಲುಲ್ಲಾಹು ಮಿನ್ನಾ ವ ಮಿನ್ಕುಮ್’ (ಅಲ್ಲಾಹ್ ನಮ್ಮ ಮತ್ತು ನಿಮ್ಮ ಆರಾಧನೆಗಳನ್ನು ಸ್ವೀಕರಿಸಲಿ) ಎಂದು ಹೇಳುತ್ತಿದ್ದರು.” [ಸುನನಿಲ್ ಕಿಬ್ರೀ ಲಿಲ್ ಬೈಹಕೀ(ರ), ಮಅ ತಹ್ಸೀನ್ ಇಬ್ನು ಹಜರ್(ರ) ವ ಬಾಕೀ(ರ)]
ಶೈಖುಲ್ ಇಸ್ಲಾಮ್ ಇಬ್ನು ತೀಮಿಯರೊಡನೆ(ರ) ಈದ್ನ ಶುಭ ಹಾರೈಸುವುದರ ಬಗ್ಗೆ ವಿಚಾರಿಸಲಾಯಿತು. ಆಗ ಅವರು ಹೇಳಿದರು, “ಈದ್ ನಮಾಝ್ನ ಬಳಿಕ ‘ತಕಬ್ಬಲುಲ್ಲಾಹು ಮಿನ್ನಾ ವಮಿನ್ಕುಮ್’ ಮತ್ತು ‘ಅಹಾಲುಲ್ಲಾಹು ಅಲೈಕುಮ್’ (ಅಲ್ಲಾಹ್ ನಿಮ್ಮ ಜೀವನದಲ್ಲಿ ಈ ಸಮೃದ್ಧ ದಿನವನ್ನು ಆಗಾಗ ತರಲಿ) ಎನ್ನುವ ಮೂಲಕ ಶುಭ ಹಾರೈಸುವುದು ಹಲವು ಸಹಾಬಿಗಳಿಂದ ಉದ್ಧರಿಸಲ್ಪಟ್ಟಿವೆ ಹಾಗೂ ಇಸ್ಲಾಮೀ ವಿದ್ವಾಂಸರು ಅದಕ್ಕೆ ಅನುಮತಿಯನ್ನು ನೀಡಿರುವರು.” ಈ ಪದಗಳಲ್ಲದೆ ಇನ್ನಿ ತರ ಪ್ರಾರ್ಥನೆಗಳು ಮತ್ತು ವಿಧಾನಗಳಿಂದಲೂ ಶುಭ ಹಾರೈಸ ಬಹುದಾಗಿದೆ. ಅದು ಶರೀಅತ್ಗೆ ವಿರುದ್ಧ ಆಗದಿದ್ದರೆ ಸಾಕು.
10. ಈದ್ಗಾಹ್ಗೆ ಹೋಗುವ ಮತ್ತು ಮರಳುವ ದಾರಿಯನ್ನು ಬದಲಿಸುವುದು: ಜಾಬಿರ್(ರ) ಹೇಳುತ್ತಾರೆ, “ಪ್ರವಾದಿವರ್ಯರು(ಸ) ಈದ್ನಂದು ಈದ್ಗಾಹ್ಗೆ ಹೋಗುವ ಮತ್ತು ಮರಳುವ ದಾರಿಯನ್ನು ಬದಲಿಸುತ್ತಿದ್ದರು.” [ಸಹೀಹ್ ಬುಖಾರಿ(ರ): 986] ವಿದ್ವಾಂಸರು ಪ್ರವಾದಿವರ್ಯರ(ಸ) ಈ ಕ್ರಿಯೆಯ ಹಲವು ಯುಕ್ತಿಗಳನ್ನು ಉಲ್ಲೇಖಿಸಿರುವರು. ಆ ಪೈಕಿ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ-
ಟ ಇಸ್ಲಾಮಿನ ಗುರುತುಗಳ ಪ್ರಚಾರಕ್ಕಾಗಿ.
ಟ ಆ ಎರಡೂ ದಾರಿಗಳು ಪುನರುತ್ಥಾನ ದಿನದಂದು ಆ ವ್ಯಕ್ತಿಯ ಪರ ಸಾಕ್ಷಿ ನುಡಿಯಲಿಕ್ಕಾಗಿ.
ಟ ದೇವಕೀರ್ತನೆಯನ್ನು ವ್ಯಕ್ತಪಡಿಸಲು.
ಟ ಇಸ್ಲಾಮ್ ಮತ್ತು ಇಸ್ಲಾಮಿಸ್ಟರ ಗೌರವ ಮತ್ತು ಶಕ್ತಿಯು ಕಪಟವಿಶ್ವಾಸಿಗಳು ಹಾಗೂ ಸತ್ಯನಿಷೇಧಿಗಳಿಗೆ ಅರೋಚಕವಾಗಿ ತೋರಲು.
ಟ ಉಭಯ ದಾರಿಗಳಲ್ಲಿರುವ ನಿವಾಸಿ ಗಳಿಗಾಗಿ ಶಾಂತಿ-ಸಮಾಧಾನದ ಪ್ರಾರ್ಥನೆ ಗೈಯಲು ಮತ್ತು ಈದ್ಗಳ ತಕ್ಬೀರ್ಗಳ ಶಿಕ್ಷಣವನ್ನು ವ್ಯಾಪಕಗೊಳಿಸಲು.
ಟ ಸದಕಾ (ದಾನ) ಮತ್ತು ಸದ್ವರ್ತನೆಗಾಗಿ.
11. ಮೋಡ ಮತ್ತಿತರ ಕಾರಣ ಗಳಿಂದಾಗಿ ಶವ್ವಾಲ್ನ ಚಂದ್ರ ಕಾಣದೆ ಉಪವಾಸ ವ್ರತಾಚರಿಸಿದ್ದು, ಬಳಿಕ ಚಂದ್ರ ದರ್ಶನವಾಗಿದೆ ಎಂದು ತಿಳಿದು ಬಂದರೆ ಉಪವಾಸವನ್ನು ತೊರೆಯಬೇಕು. ಒಂದು ವೇಳೆ ಮಧ್ಯಾಹ್ನ ಸೂರ್ಯ (ಝವಾಲ್) ಇಳಿಮುಖವಾಗುವುದಕ್ಕೆ ಮುಂಚೆ ಚಂದ್ರ ದರ್ಶನದ ವಿಷಯ ತಿಳಿದಾಗ ತಕ್ಷಣವೇ ಈದ್ ನಮಾಝನ್ನು ನಿರ್ವಹಿಸಬೇಕು. ಝವಾಲ್ ನಂತರ ವಿಷಯ ತಿಳಿದರೆ, ಮುಂದಿನ ದಿನ ಈದ್ ನಮಾಝ್ ನಿರ್ವಹಿಸ ಬೇಕು. ಅಬೂ ಉಮೈರ್ ಅಬ್ದುಲ್ಲಾ ಬಿನ್ ಅನಸ್ ಬಿನ್ ಮಾಲಿಕ್(ರ) ಹೇಳುತ್ತಾರೆ: ನನಗೆ ನನ್ನ ಅನ್ಸಾರಿ ಸಹಾಬಿ ಚಿಕ್ಕಪ್ಪಂದಿರು ಹೇಳಿದರು, “ನಮಗೆ ಶವ್ವಾಲ್ನ ಚಂದ್ರ (ಮೋಡ ಇತ್ಯಾದಿ ಕಾರಣದಿಂದ) ಕಾಣಲಿಲ್ಲ. ನಾವು ಮರುದಿನ ಉಪವಾಸ ವ್ರತಾಚರಿ ಸಿದೆವು. ದಿನದ ಕೊನೆಯ ಜಾವದಲ್ಲಿ ಒಂದು ಯಾತ್ರಾ ತಂಡವು ಆಗಮಿಸಿತು. ಅವರು ನಿನ್ನೆ ಚಂದ್ರದರ್ಶನವಾದುದರ ಬಗ್ಗೆ ಪ್ರವಾದಿವರ್ಯರ(ಸ) ಮುಂದೆ ಪ್ರಮಾಣ ಮಾಡಿ ಹೇಳಿದರು. ಆಗ ಪ್ರವಾದಿವರ್ಯರು(ಸ) ಜನರಿಗೆ, ಅವತ್ತಿನ ಉಪವಾಸವನ್ನು ತೊರೆಯಲು ಮತ್ತು ಮರುದಿನ ಈದ್ ನಮಾಝ್ಗಾಗಿ ಈದ್ಗಾಹ್ನೆಡೆಗೆ ಹೊರ ಡಲು ಆದೇಶಿಸಿದರು. [ಸುನನ್ ಇಬ್ನು ಮಾಜ(ರ): 1653, ತಸ್ಹೀಹುಲ್ ಬಾಕೀ(ರ)]
ಫಿತ್ರ್ ಝಕಾತ್ನ ಆದೇಶ:
1. ಫಿತ್ರ್ ಝಕಾತ್ ಕಡ್ಡಾಯ: ಫಿತ್ರ್ ಝಕಾತ್ ನೀಡುವುದು, ತನ್ನ ಮತ್ತು ತನ್ನ ಕುಟುಂಬಿಕರ ಆಹಾರ, ವಸ್ತ್ರ ಮತ್ತು ಮೂಲಭೂತ ಅಗತ್ಯಗಳಿಗಿಂತ ಹೆಚ್ಚು ಸಂಪತ್ತು ಇರುವ ಪ್ರತಿಯೋರ್ವ ಮುಸ್ಲಿಮನ ಮೇಲೆ ವಾಜಿಬ್ (ಕಡ್ಡಾಯ) ಆಗಿದೆ. ಹಾಗಾಗಿ ಇದು ಹಿರಿಯ-ಕಿರಿಯರು, ಸ್ತ್ರೀ-ಪುರುಷರು ಮತ್ತು ಸ್ವತಂತ್ರ-ಗುಲಾಮ ಎಲ್ಲರ ಮೇಲೂ ಕಡ್ಡಾಯವಾಗುತ್ತದೆ. ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ರಮಝಾನಿನ ಫಿತ್ರ್ ಝಕಾತ್ ಆಗಿ ಒಂದು ಸಾಅï ಖರ್ಜೂರ ಅಥವಾ ಒಂದು ಸಾಅï ಜೋಳವನ್ನು ಪ್ರತಿಯೋರ್ವ ಮುಸ್ಲಿಮ್ ಗುಲಾಮ-ಸ್ವತಂತ್ರ, ಸ್ತ್ರೀ-ಪುರುಷ ಮತ್ತು ಕಿರಿಯ-ಹಿರಿಯರ ಮೇಲೆ ಕಡ್ಡಾಯಗೊಳಿಸಿ ದ್ದಾರೆ.” [ಸಹೀಹ್ ಬುಖಾರಿ(ರ): 1503, ಸಹೀಹ್ ಮುಸ್ಲಿಮ್(ರ): 984]
ತನ್ನ ವತಿಯಿಂದ ಮತ್ತು ತನ್ನ ಪತ್ನಿ-ಮಕ್ಕಳ ಪರವಾಗಿಯೂ ತನ್ನ ಪೆÇೀಷಣೆಯಲ್ಲಿ ರುವವರ (ಅಂದರೆ ಸ್ವಯಂ ತಮ್ಮ ಫಿತ್ರ ನೀಡಲು ಶಕ್ತರಲ್ಲದ ಹೆತ್ತವರ) ಪರ ವಾಗಿಯೂ ಫಿತ್ರ್ ಝಕಾತನ್ನು ತೆಗೆಯಬೇಕಾದುದು ಮನೆಯ ಹೊಣೆಗಾರ ಪುರು ಷನ ಬಾಧ್ಯತೆಯಾಗಿದೆ. ಮನೆಯ ನೌಕರರ ಪರವಾಗಿ ಫತ್ರ್ ತೆಗೆಯುವುದು ಮಾಲಿಕನ ಹೊಣೆಯಾಗಿರುವುದಿಲ್ಲ. ಅದು ಸ್ವತಃ ನೌಕರರ ಹೊಣೆಯಾಗಿದೆ. ಆದರೆ ಮಾಲಿಕನು ಸ್ವಯಂ ಪ್ರೇರಣೆಯಿಂದ ಮತ್ತು ನೌಕರನ ಮೇಲೆ ಅನುಕಂಪದಿಂದ ಸ್ವತಃ ಫಿತ್ರ್ ಝಕಾತ್ ನೀಡಿದರೆ ಅದು ಅನುವದನೀಯವಾಗಿದೆ. ನೌಕರನಿಗೆ ಅದರ ಮಾಹಿತಿಯನ್ನು ನೀಡಬೇಕು.
ಯಾರಾದರೂ ಮಹಿಳೆಯ ಸ್ವಂತ ವ್ಯಾಪಾರ ಅಥವಾ ಉದ್ಯೋಗದ ಸಂಬಳ ವಿದ್ದರೆ ಆಕೆಯೂ ಫಿತ್ರ್ ಝಕಾತನ್ನು ತನ್ನ ಗಳಿಕೆಯಿಂದ ನೀಡಬೇಕಾಗುತ್ತದೆ. ಅದಿಲ್ಲದಿದ್ದರೆ, ಆಕೆಯ ಹೊಣೆಯು ಆಕೆಯ ಹೆತ್ತವರಾಗಿರುತ್ತಾರೆ ಮತ್ತು ಮದು ವೆಯ ಬಳಿಕ ಆಕೆಯ ಪತಿಯಾಗಿರುತ್ತಾನೆ.
ಗರ್ಭದಲ್ಲಿರುವ ಮಕ್ಕಳ ಪರವಾಗಿ ಫಿತ್ರ್ ಝಕಾತ್ ತೆಗೆಯುವ ಅಗತ್ಯವೇನಿಲ್ಲ. ಆದರೆ ತೆಗೆದರೆ ಉತ್ತಮ. ಉಸ್ಮಾನ್(ರ) ಬಿನ್ ಅಫ್ಫಾನ್ ಹಾಗೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. [ಬಿದಾಯತುಲ್ ಮುಜ್ತಹಿದ್, ಇಬ್ನು ರುಶ್ದ್ ಕುರ್ತುಬಿ(ರ): 2/266]
2. ಫಿತ್ರ್ ಝಕಾತ್ನ ಯುಕ್ತಿ: ಫಿತ್ರ್ ಝಕಾತ್ನ ಒಂದು ಉದ್ದೇಶವು ಉಪವಾಸದಲ್ಲಿ ಆಗಿರಬಹುದಾದ ಪ್ರಮಾದಗಳಿಗೆ ಪ್ರಾಯಶ್ಚಿತ್ತವಾಗಿದೆ. ಎರಡನೆಯದಾಗಿ, ಬಡವರು ಮತ್ತು ದೀನದಲಿತರನ್ನೂ ಈದ್ನ ಸಂತೋಷದಲ್ಲಿ ಶಾಮೀಲುಗೊಳಿಸುವುದಾಗಿದೆ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಫಿತ್ರ್ ಝಕಾತನ್ನು ಕಡ್ಡಾಯವನ್ನಾಗಿ ಮಾಡಿದ್ದಾರೆ. ಏಕೆಂದರೆ ಅದು ಉಪವಾಸದಲ್ಲಾಗಿರ ಬಹುದಾದ ನಿರರ್ಥಕ ಮತ್ತು ಕೆಟ್ಟ ವಿಚಾರ ಗಳ ಪಾಪವನ್ನು ತೊಳೆಯುತ್ತದೆ ಹಾಗೂ ಹೊಟ್ಟೆಗಿಲ್ಲದವರಿಗೆ ಆಹಾರವೊದಗಿಸುತ್ತದೆ.” [ಸುನನ್ ಅಬೂ ದಾವೂದ್(ರ): 1611, ತಸ್ಹೀಹುಲ್ ಬಾಕೀ(ರ). ಸುನನ್ ಇಬ್ನು ಮಾಜಃ(ರ): 1826]
3. ಫಿತ್ರ್ ಝಕಾತ್ ತೆಗೆಯುವ ಸಮಯ: ರಮಝಾನಿನ ಕೊನೆಯ ದಿನ ಸೂರ್ಯಾಸ್ತವಾದ ಸಮಯದಿಂದ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ. ಮತ್ತು ಈದ್ ನಮಾಝ್ಗೆ ಮುಂಚೆ ಅದನ್ನು ತೆಗೆಯುವುದು ಅಗತ್ಯವಾಗಿದೆ. ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಫಿತ್ರ್ ಝಕಾತನ್ನು ಈದ್ ನಮಾಝ್ಗೆ ಮುಂಚೆ ನೀಡಲು ಆದೇಶಿಸಿದ್ದಾರೆ.” [ಸಹೀಹ್ ಬುಖಾರಿ(ರ): 1503, ಸಹೀಹ್ ಮುಸ್ಲಿಮ್(ರ): 986]
ಅದೇ ವೇಳೆ, ರಮಝಾನಿನ ಆರಂಭ ದಿಂದಲೇ ಫಿತ್ರ್ ಝಕಾತನ್ನು ತೆಗೆಯ ಬಹುದಾಗಿದೆ. ವಿಶೇಷವಾಗಿ ಫಿತ್ರ್ ಝಕಾ ತನ್ನು ಯಾವುದಾದರೂ ಸಂಸ್ಥೆಗೆ ನೀಡ ಲಿಕ್ಕಿದ್ದರೆ. ಏಕೆಂದರೆ ನೈಜ ಅವಶ್ಯಾರ್ಥಿ ಗಳಿಗೆ ತಲುಪಿಸುವ ವ್ಯವಸ್ಥೆ ಅದರ ಮೂಲಕ ಆಗುತ್ತದೆ.
ಏನಿದ್ದರೂ ಈದ್ ನಮಾಝ್ನ ಬಳಿಕ ಫಿತ್ರ್ ಝಕಾತ್ ತೆಗೆಯುವುದು ಸರಿಯಲ್ಲ. ಒಂದು ವೇಳೆ ಯಾವುದೇ ಸೂಕ್ತ ಕಾರಣ ವಿಲ್ಲದೆ ಈದ್ ನಮಾಝ್ನ ಬಳಿಕ ಅದನ್ನು ನೀಡಿದರೆ ಅದು ಸಾಮಾನ್ಯ ದಾನವಾಗಿ ಪರಿಗಣಿಸಲ್ಪಡುತ್ತದೆ. ಅದು ಫಿತ್ರ್ ಝಕಾತ್ ಆಗಿ ಸ್ವೀಕೃತವಾಗದು. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ವರದಿ ಮಾಡಿರುವ ಹದೀಸ್ನಲ್ಲಿ ಹೀಗಿದೆ, “ಅದನ್ನು ಈದ್ ನಮಾಝ್ಗೆ ಮುಂಚೆ ನೀಡಿದರೆ ಅದು ಸ್ವೀಕೃತ ಝಕಾತ್ (ಅಂದರೆ ಫಿತ್ರ್ ಝಕಾತ್) ಆಗುತ್ತದೆ. ಅದನ್ನು ಈದ್ ನಮಾಝ್ನ ಬಳಿಕ ನೀಡಿದರೆ ಅದು ಇತರ ಸಾಮಾನ್ಯ ದಾನ ದಂತೆ ಪರಿಗಣಿಸಲ್ಪಡುವುದು.” [ಸುನನ್ ಅಬೂದಾವೂದ್(ರ): 1609, ತಸ್ಹೀಹುಲ್ ಬಾಕೀ(ರ). ಸುನನ್ ಇಬ್ನು ಮಾಜಃ(ರ): 1826]
4. ಫಿತ್ರ್ ಝಕಾತ್ನ ಪ್ರಮಾಣ: ಫಿತ್ರ್ ಝಕಾತ್ನ ಪ್ರಮಾಣವು ಒಂದು ಸಾಅï ಆಗಿದೆ. ಪ್ರಸಕ್ತ ಅಳತೆಯ ಮಾಪನದಲ್ಲಿ ಸುಮಾರು ಎರಡೂ ವರೆ ಕಿಲೋ ಗ್ರಾಂ ಆಗುತ್ತದೆ. ಫಿತ್ರ್ ಝಕಾತನ್ನು ಆಯಾ ಪ್ರದೇಶದ ಸಾಮಾನ್ಯ ಬಳಕೆಯ ಹಲಾಲ್ ಆಹಾರದ ರೂಪದಲ್ಲಿ ನೀಡಬೇಕು. ಉದಾ: ಖರ್ಜೂರ, ಜೋಳ, ಗೋಧಿ, ಅಕ್ಕಿ, ಗೋಧಿಹಿಟ್ಟು, ಬೇಳೆ ಇತ್ಯಾದಿ.
5. ಫಿತ್ರ್ ಝಕಾತನ್ನು ನಗದು ರೂಪದಲ್ಲಿ ನೀಡುವುದು: ಇಮಾಮ್ ಮಾಲಿಕ್(ರ), ಇಮಾಮ್ ಶಾಫಿಈ(ರ) ಮತ್ತು ಇಮಾಮ್ ಅಹ್ಮದ್ರ(ರ) ಅಭಿಪ್ರಾಯದಲ್ಲಿ ಫಿತ್ರ್ ಝಕಾತನ್ನು ನಗದು ರೂಪದಲ್ಲಿ ನೀಡಲಾಗದು. ಏಕೆಂದರೆ ಹದೀಸ್ನಲ್ಲಿ ಕೆಲವು ವಿಷಯಗಳನ್ನು ಸುವ್ಯಕ್ತವಾಗಿ ತಿಳಿಸ ಲಾಗಿರುತ್ತದೆ. ಆದ್ದರಿಂದ ಅವುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ತದ್ವಿರುದ್ಧವಾಗಿ ಇಮಾಮ್ ಅಬೂ ಹನೀಫಾ(ರ) ಮತ್ತವರ ಶಿಷ್ಯರು, ಇಮಾಮ್ ಸೌರೀ(ರ), ಉಮರ್ ಬಿನ್ ಅಬ್ದುಲ್ ಅಝೀಝ್(ರ), ಹಸನ್ ಬಸ್ರೀ(ರ) ಮತ್ತು ಅತಾಅï(ರ) ಮತ್ತಿತರರ ಪ್ರಕಾರ ನಗದು ರೂಪದಲ್ಲಿಯೂ ನೀಡ ಬಹುದಾಗಿದೆ. ಅವರಿಗೆ “ಈ ದಿನದಂದು (ಬಡವರನ್ನು) ಭಿಕ್ಷೆ ಬೇಡುವುದರಿಂದ ನಿರಪೇಕ್ಷರನ್ನಾಗಿಸಿರಿ” ಎಂಬ ಪ್ರವಾದಿ ವಚನವೇ ಆಧಾರವಾಗಿದೆ. ಈ ಹದೀಸ್ ನಲ್ಲಿ ಪ್ರಸ್ತುತ ಆದೇಶದ ಬದಲಿ ವ್ಯವಸ್ಥೆ ಯನ್ನು ಉಲ್ಲೇಖಿಸಲಾಗಿದೆ. ಅದೆಂದರೆ, ಈದ್ನಂದು ಬಡವರು ಮತ್ತು ನಿರ್ಗತಿಕ ರನ್ನು ಜನರ ಮುಂದೆ ಕೈಯೊಡ್ಡುವುದ ರಿಂದ ತಡೆಯುವುದಾಗಿದೆ. ಹಾಗೂ ಈ ಉದ್ದೇಶವು ನಗದು ರೂಪದಲ್ಲಿ ಫಿತ್ರ್ ಝಕಾತ್ ನೀಡುವುದರ ಮೂಲಕವೂ ಸಾಕಾರಗೊಳ್ಳುತ್ತದೆ. ಮಾತ್ರವಲ್ಲ, ಈ ಉದ್ದೇಶವನ್ನು ಈಡೇರಿಸಲು ಪ್ರಸ್ತುತ ವಿಧಾನವು ಹೆಚ್ಚು ಸೂಕ್ತವಾಗಿ ಕಾಣುತ್ತದೆ. ಏಕೆಂದರೆ, ಈ ರೂಪದಲ್ಲಿ ಬಡವರು ತಮ್ಮ ಆದ್ಯತೆಯಾಧಾರದಲ್ಲಿ ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬಹುದು. ಅಲ್ಲದೆ, ಎಲ್ಲೆಡೆಯಿಂದಲೂ ಅವರಿಗೆ ಆಹಾರ ಧಾನ್ಯವೇ ದೊರೆತರೆ ಅವರ ಇತರ ಅಗತ್ಯಗಳು ಈಡೇರದೆ ಹೋಗಬಹುದು. ಹಾಗಾಗಿ ಹದೀಸ್ನ ಆದೇಶದಲ್ಲಿ ಬದಲಿ ವ್ಯವಸ್ಥೆಯ ಸೂಚನೆ ಇರುವಾಗ ಅದನ್ನು ನಗದು ರೂಪದಲ್ಲಿ ನೀಡುವುದರ ಕುರಿತು ನಿಷೇಧಾತ್ಮಕ ಧೋರಣೆ ಇರಿಸುವುದು ಸರಿಯಲ್ಲ.
6. ಫಿತ್ರ್ ಝಕಾತನ್ನು ಬೇರೆ ಪ್ರದೇಶ ಗಳಿಗೆ ವರ್ಗಾಯಿಸುವುದು: ಒಂದು ವೇಳೆ ಇತರ ಪ್ರದೇಶದ ಜನರು ಹೆಚ್ಚು ಅವಶ್ಯಾರ್ಥಿಗಳಿದ್ದರೆ, ಅಲ್ಲಿಗೆ ಫಿತ್ರ್ ಝಕಾತನ್ನು ವರ್ಗಾಯಿಸಬಹುದಾಗಿದೆ. ಅಲ್ಲದೆ ಫಿತ್ರ್ ಝಕಾತ್ಗೆ ಅರ್ಹರಾದ ನಿಕಟವರ್ತಿಗಳು ಬೇರೆ ಪ್ರದೇಶದಲ್ಲಿದ್ದರೆ ಮತ್ತು ಅವರು ಅದಕ್ಕೆ ಹೆಚ್ಚು ಅರ್ಹರಾಗಿದ್ದರೆ, ಅವರ ಬಳಿಗೆ ಅದನ್ನು ತಲುಪಿಸಬಹುದಾಗಿದೆ. ಅದೇ ರೀತಿ ಫಿತ್ರ್ ಝಕಾತನ್ನು ಇತರ ಪ್ರದೇಶಗಳಿಗೆ ತಲುಪಿಸುವುದರಿಂದ ಹೆಚ್ಚಿನ ಮುಸ್ಲಿಮರಿಗೆ ಪ್ರಯೋಜನವಾಗುವುದಿದ್ದರೆ, ಹಾಗೆ ಮಾಡಬಹುದಾಗಿದೆ.
ಈದ್ನಂದು ಆಗಬಹುದಾದ ತಪ್ಪು ಗಳು ಮತ್ತು ನವೀನಾಚಾರಗಳು:
ದುರದೃಷ್ಟವಶಾತ್ ಹೆಚ್ಚಿನ ಮುಸ್ಲಿಮರು ಈದ್ ಆಗಮಿಸುತ್ತಲೇ ಶರಈ ಆದೇಶ ಗಳನ್ನು ಕಡೆಗಣಿಸಿ ಪಾಪಕಾರ್ಯ ಮತ್ತು ನವೀನಾಚಾರಗಳಲ್ಲಿ ತೊಡಗುತ್ತಾರೆ. ಆದ್ದ ರಿಂದ ಈ ಸಂದರ್ಭದಲ್ಲಿ ಆಗಬಹುದಾದ ಕೆಲವು ದುಷ್ಕøತ್ಯ ಮತ್ತು ನವೀನಾಚಾರಗಳ ಬಗ್ಗೆ ಎಚ್ಚರಿಸುವುದು ಅಗತ್ಯವೆಂದು ತೋರುತ್ತದೆ.
1. ಈದ್ನಂದು ಗೋರಿ ಸಂದರ್ಶನ: ಹೆಚ್ಚಿನವರು ಈದ್ಗಾಹ್ನಿಂದ ಹೊರಟು ಮೊತ್ತಮೊದಲು ಕಬರಸ್ಥಾನಕ್ಕೆ ಹೋಗುವ ರೂಢಿಯನ್ನು ಮಾಡಿರುತ್ತಾರೆ. ಈ ಕೃತ್ಯಕ್ಕೆ ಯಾವುದೇ ಆಧಾರವಿಲ್ಲ. ಧರ್ಮದ ಭಾಗವೆಂದು ಭಾವಿಸಲಾಗುವ ಪ್ರತಿ ಯೊಂದು ನೂತನ ವಿಷಯವು ಬಿದ್ಅತ್ ಆಗಿದೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿದ್ದಾರೆ, “ಯಾರಾದರೂ ನಮ್ಮ ಧರ್ಮದಲ್ಲಿ ಇಲ್ಲದಂತಹ ವಿಷಯವನ್ನು ಸ್ವತಃ ಸೇರಿಸಿದರೆ, ಅದು ತಿರಸ್ಕøತವಾಗಿದೆ.” [ಸಹೀಹ್ ಬುಖಾರಿ(ರ): 2697, ಸಹೀಹ್ ಮುಸ್ಲಿಮ್(ರ): 4589]
2. ಮಹಿಳೆಯರ ಪರ್ದಾರಾಹಿತ್ಯ: ಈ ಸಂದರ್ಭದಲ್ಲಿ ಮಹಿಳೆಯರು ಪರ್ದಾ ರಹಿತರಾಗಿ ಮಾರುಕಟ್ಟೆ, ಬೀದಿ ಮತ್ತು ಪಾರ್ಕು ಇತ್ಯಾದಿಗಳಲ್ಲಿ ತಿರುಗಾಡುತ್ತಾರೆ. ಇದು ಶರೀಅತ್ ಪ್ರಕಾರ ನಿಷಿದ್ಧವಾಗಿದೆ. ಅಲ್ಲಾಹ್ ಹೇಳುತ್ತಾನೆ, “ನಿಮ್ಮ ಮನೆಗಳಲ್ಲೇ ಇದ್ದುಕೊಳ್ಳಿರಿ. ಗತ ಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನ ಮಾಡುತ್ತ ತಿರುಗಾಡಬೇಡಿರಿ. ನಮಾಝನ್ನು ಸಂಸ್ಥಾಪಿ ಸಿರಿ, ಝಕಾತ್ ಕೊಡಿರಿ, ಅಲ್ಲಾಹ್ ಮತ್ತು ರಸೂಲರನ್ನು ಅನುಸರಿಸಿರಿ.” (ಅಲ್ ಅಹ್ಝಾಬ್: 33)
3. ಮುಹ್ರಿಮ್ ಅಲ್ಲದ ಪರಸ್ತ್ರೀಯರೊಡನೆ ಹಸ್ತಲಾಘವ: ನಮ್ಮ ಸಮಾಜದಲ್ಲಿ ಈ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿದ್ದಾರೆ, “ಧರ್ಮಸಮ್ಮತವಲ್ಲದ ಮಹಿಳೆಯನ್ನು ಸ್ಪರ್ಶಿಸುವುದಕ್ಕಿಂತ ನಿಮ್ಮ ತಲೆಗೆ ಲೋಹದ ಮೊಳೆಯನ್ನು ಹೊಡೆಸಿಕೊಳ್ಳುವುದು ಉತ್ತಮವಾಗಿದೆ.” [ಮುಅïಜಮ್ ಕಬೀರ್ ತಬ್ರಾನೀ(ರ): 20/211, ತಸ್ಹೀಹುಲ್ ಬಾಕೀ(ರ)]
4. ನಮಾಝ್ ತೊರೆಯುವುದು: ಹೆಚ್ಚಿನ ಮಂದಿ ರಮಝಾನ್ ಮುಗಿಯುತ್ತಲೇ ಈದ್ನಂದೇ ಯಾವುದೇ ಸೂಕ್ತ ಕಾರಣವಿಲ್ಲದೆ ನಮಾಝನ್ನು ತೊರೆಯುತ್ತಾರೆ ಮತ್ತು ಈದ್ ನಮಾಝ್ನ ಬಳಿಕ ಇಡೀ ದಿನ ಯಾವುದೇ ನಮಾಝನ್ನು ನಿರ್ವಹಿಸುವುದಿಲ್ಲ. ದುರದೃಷ್ಟವಶಾತ್ ಕೆಲವರಲ್ಲಿ ಈ ಗುಣವು ಮುಂದಿನ ರಮಝಾನ್ ವರೆಗೂ ಜಾರಿಯಲ್ಲಿರುತ್ತದೆ. ಮತ್ತೆ ರಮಝಾನ್ ಆಗಮಿಸುತ್ತಲೇ ಮಳೆಹಾತೆಗಳಂತೆ ಪುನಃ ನಮಾಝ್ ಮತ್ತು ಉಪವಾಸ ವ್ರತಗಳನ್ನು ಅನುಷ್ಠಾನಿಸಲು ತೊಡಗುತ್ತಾರೆ. ರಮಝಾನ್ ಮುಗಿಯುತ್ತಲೇ ತಮ್ಮ ಹಿಂದಿನ ವರ್ತನೆಯನ್ನು ಪುನರಾವರ್ತಿಸತೊಡಗುತ್ತಾರೆ. ಈ ವರ್ತನೆಯನ್ನು ತಿದ್ದಬೇಕಾದ ಅಗತ್ಯ ಬಹಳವಿದೆ. ಏಕೆಂದರೆ ಧರ್ಮದಲ್ಲಿ ನಮಾಝ್ಗೆ ಇತರೆಲ್ಲ ವಿಷಯಗಳಿಗಿಂತ ಹೆಚ್ಚು ಮಹತ್ವವಿದೆ. ಇದುವೇ ಇಸ್ಲಾಮ್ ಮತ್ತು ಕುಫ್ರನ್ನು ಪ್ರತ್ಯೇಕಿಸುವ ಸಾಧನವಾಗಿದೆ.
5. ಫಕೀರರು ಮತ್ತು ಮಿಸ್ಕೀನರ ಜತೆ ಕಠೋರ ಧೋರಣೆ: ಹೆಚ್ಚಿನ ಮಂದಿ ಸಂತೋಷಾಚರಣೆಯಲ್ಲಿ ಎಷ್ಟು ತಲ್ಲೀನರಾಗಿಬಿಡುತ್ತಾರೆಂದರೆ, ಅವರಲ್ಲಿ ದೇವಾನುಗ್ರಹಗಳಿಗೆ ಕೃತಜ್ಞತೆ ಮತ್ತು ಬಡವರ ಬಗ್ಗೆ ಮೃದು ಧೋರಣೆ ಹಾಗೂ ಸಹಾನುಭೂತಿಯ ಭಾವನೆಯೇ ಸತ್ತು ಹೋಗಿರುತ್ತದೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿರುವರು, “ನಿಮ್ಮ ಪೈಕಿ ತನಗಾಗಿ ಇಷ್ಟಪಡುವುದನ್ನು ತನ್ನ ದೀನೀ ಸಹೋದರನಿಗೂ ಇಷ್ಟಪಡದ ಹೊರತು ವಿಶ್ವಾಸಿಯಾಗಲಾರನು.” [ಸಹೀಹ್ ಬುಖಾರಿ(ರ): 13, ಸಹೀಹ್ ಮುಸ್ಲಿಮ್(ರ): 179]
ಈದ್ನಂದು ಸತ್ಯವಿಶ್ವಾಸಿಗಳ ವ್ಯವಹಾರ:
ಈದ್ ಸಂತೋಷದ ದಿನವಾಗಿದೆ. ಜನರು ಉತ್ತಮ ವಸ್ತ್ರ ಧರಿಸುತ್ತಾರೆ ಮತ್ತು ಎಲ್ಲ ರೀತಿಯ ಸಂತೋಷವನ್ನು ವ್ಯಕ್ತಪಡಿ ಸುತ್ತಾರೆ. ಈದ್ ವಸ್ತುತಃ ರಮಝಾನ್ ಮಾಸದ ಅನುಗ್ರಹ ಪಡೆಯುವ ಅವಕಾಶ ದೊರೆತುದಕ್ಕಾಗಿ ಕೃತಜ್ಞತೆ ಅರ್ಪಿಸುವ ದಿನವಾಗಿದೆ. ಆದ್ದರಿಂದ ರಮಝಾನ್ನಿಂದ ಪ್ರಯೋಜನ ಪಡೆ ದವನೇ ಈದ್ನ ಸಂತೋಷಕ್ಕೆ ಅರ್ಹನಾಗಿದ್ದಾನೆ. ಅದರೊಂದಿಗೇ ಈದ್ ಪಾರಿತೋಷಕಗಳನ್ನು ವಿತರಿಸುವ ದಿನವಾಗಿದೆ. ರಮ ಝಾನಿನ ಉಪವಾಸ ವ್ರತವನ್ನು ಈಮಾನ್ ಮತ್ತು ಸದುದ್ದೇಶದೊಂದಿಗೆ ಆಚರಿಸಿದ್ದರೆ ಅದಕ್ಕೆ ಪ್ರತಿಫಲವು ಮಹತ್ಯಶಸ್ಸಾ ಗಿರುವುದು. ಅಂತೆಯೇ ಉಪವಾಸ ವ್ರತಾಚರಿಸದವನಿಗೆ ಅಥವಾ ಅದರಲ್ಲಿ ಆಲಸ್ಯ ಮತ್ತು ಕೊರತೆಯನ್ನುಂಟು ಮಾಡಿದವನಿಗೆ ವೈಫಲ್ಯ ಮತ್ತು ದೌರ್ಭಾಗ್ಯವೇ ಪ್ರತಿಫಲವಾಗಿರುವುದು. ಆದ್ದ ರಿಂದಲೇ ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಈದ್ನಂದು ಜನರು ಈದ್ಗಾಹ್ನಿಂದ ಮರಳುವಾಗ ಅವರಲ್ಲಿ ಕೆಲವರು ಪ್ರತಿಫಲಾರ್ಹರಿರುವರು. ಅವರ ಪ್ರಯತ್ನಗಳೆಲ್ಲವೂ ಕೃತಜ್ಞಾರ್ಹ ಮತ್ತು ಪ್ರಶಂಸಾರ್ಹವಾಗಿರುತ್ತವೆ. ಇನ್ನು ಕೆಲವರನ್ನು ದೇವಕೃಪೆ ಯಿಂದ ದೂರವಿರಿಸಲಾಗುತ್ತದೆ. ಏಕೆಂದರೆ ಅವರ ಪಾಪಗಳು ಅವರನ್ನು ದೇವಾನುಗ್ರಹದಿಂದ ವಂಚಿತಗೊಳಿಸಿಬಿಟ್ಟಿರುತ್ತದೆ.”
[ಇಬ್ನು ಅಬೀ ಶೈಬಾ(ರ): 11822]
ಸಂತೋಷ ಪ್ರಕಟಿಸುವಾಗ ಪಾಪಕಾರ್ಯವನ್ನೆಸಗುವುದು ಮತ್ತು ನೈತಿಕ ಮೇರೆಗಳನ್ನು ಮೀರುವುದು ಓರ್ವ ಸತ್ಯವಿಶ್ವಾಸಿಯ ಮಟ್ಟಿಗೆ ಭೂಷಣವಲ್ಲ. ಮುಸ್ಲಿಮರ ಈದ್ಗಳು ಧರ್ಮಶಾಸ್ತ್ರ ಮತ್ತು ನೈತಿಕ ಮೇರೆ ಹಾಗೂ ಶರತ್ತುಗಳ ಪಾಲನೆಯೊಂದಿಗಿ ರಬೇಕು. ಈದ್ ಎಂಬುದು ಸಂಗೀತ-ನೃತ್ಯ, ವಿಹಾರ ಮತ್ತು ಆಟ-ವಿನೋದದ ಹೆಸರಲ್ಲ. ಬದಲಾಗಿ ನೈಜ ಆರಾಧ್ಯನ ಅನು ಗ್ರಹಗಳಿಗೆ ಕೃತಜ್ಞತೆ ಅರ್ಪಿಸುವ ದಿನವಾಗಿದೆ. ಇಸ್ಲಾಮೀ ಈದ್ ಗಳ ಈ ವಿಶೇಷತೆಯೇ ಮಿಥ್ಯ ಧರ್ಮಗಳ ಹಬ್ಬ ಮತ್ತು ಜಾತ್ರೆ ಗಳಿಂದ ಪ್ರತ್ಯೇಕಿಸುತ್ತದೆ. ಇದರಲ್ಲಿ ವಿಶ್ವಾಸಪರವಾದ ಸಂತೋಷಗಳು ಮೇಳೈಸಿರುತ್ತವೆ, ಶರೀಅತ್ ಮತ್ತು ನೈತಿಕ ನಿಯಮ-ಮೇರೆಗಳ ಪಾಲನೆಯಾಗುತ್ತದೆ, ಗೌರವ-ಮಾನ್ಯತೆಯ ವಾತಾವರಣ ಇರುತ್ತದೆ. ಓರ್ವ ಪ್ರಜ್ಞಾವಂತ ಸಮುದಾಯವು ಇಂತಹ ಸಂತೋಷದ ಸಂದರ್ಭದಲ್ಲಿ ತನ್ನ ಸಂಕಷ್ಟ ಮತ್ತು ಕಷ್ಟಪಾಡುಗಳನ್ನು ಸಂಪೂರ್ಣ ಕಡೆಗಣಿಸಬಾರದು. ಇಸ್ಲಾಮೀ ಈದ್ಗಳ ಒಂದು ವಿಶೇಷತೆ ಏನೆಂದರೆ ಅವುಗಳಲ್ಲಿ ಸಮಾಜದ ಹಿಂದುಳಿದ ವರ್ಗಗಳಾದ ಬಡವರು, ನಿರ್ಗತಿಕರು, ಅನಾಥರು ಮತ್ತು ವಿಧವೆಯರ ಯೋಗಕ್ಷೇಮವನ್ನು ವಿಚಾರಿಸಲಾಗುತ್ತದೆ. ಸಮಾಜದ ಹೆಚ್ಚೆಚ್ಚು ಮಂದಿಯೂ ಈ ಸಂತೋಷದ ಸಂದರ್ಭದಲ್ಲಿ ತಮ್ಮ ಮನೆ-ಮನಗಳನ್ನು ಆನಂದದಿಂದ ತುಂಬಿಕೊಳ್ಳುವಂತಾಗಲು ನಾವು ಕಾರಣಕರ್ತರಾದರೆ, ಅದುವೇ ಈದ್ನ ನೈಜ ಸಂತೋಷವಾಗಿದೆ.
ಪ್ರತಿಯೋರ್ವರೂ ಈದ್ನ ದಿನ ಸಹಾನುಭೂತಿ ತೋರಲು, ನೆರೆಕರೆ ಮತ್ತು ಸಂಬಂಧಿಕರನ್ನು ಸಂದರ್ಶಿಸಲು, ಜನರ ಹೃದಯಗಳಲ್ಲಿರಬಹುದಾದ ದ್ವೇಷ ಮತ್ತು ಅಸೂಯೆಯ ಭಾವನೆಗಳನ್ನು ನೀಗಿಸಲು ಹಾಗೂ ಪರಸ್ಪರ ಆದರಪೂರ್ವಕ ಭೇಟಿಯಾಗಲು ಪ್ರಯತ್ನಿಸಬೇಕು. ಬಡವರು ಮತ್ತು ನಿರ್ಗತಿಕರ ಬಗ್ಗೆ ಕಾಳಜಿಯನ್ನು ಹೊಂದಬೇಕು, ಅವರೊಡನೆ ಸದ್ವರ್ತನೆ ತೋರಬೇಕು ಮತ್ತು ಅವರನ್ನೂ ಈದ್ನ ಸಂತೋಷದಲ್ಲಿ ಭಾಗಿಗೊಳಿಸಬೇಕು. ಅಲ್ಲಾಹ್ ನಮ್ಮ ಆರಾಧನೆಗಳನ್ನು ಸ್ವೀಕರಿಸಲಿ- ಆಮೀನ್.
ಒಳಿತಿನ ಕಾರ್ಯಗಳಲ್ಲಿ ಪರಸ್ಪರ ಪೈಪೋಟಿ ನಡೆಸಲಾಗು ವಂತಹ, ಮನಸ್ಸು ಒಳಿತಿನ ಕಡೆಗೆ ವಾಲಿಕೊಂಡಿರುವಂತಹ, ಎಲ್ಲ ಒಳಿತುಗಳ ಮೇಲೆ ಪ್ರೀತಿ ಮತ್ತು ಕೆಡುಕುಗಳ ಮೇಲೆ ದ್ವೇಷ ಉಕ್ಕುವಂತಹ, ಪಾಪಗಳ ಆಟಾಟೋಪ ತಣ್ಣಗಾಗಿರು ವಂತಹ ಹಾಗೂ ಸತ್ಕರ್ಮಗಳೇ ಮೇಳೈಸಿರುವಂತಹ ಪರಿಶುದ್ಧ ಮಾಸಕ್ಕೆ ನಾವು ವಿದಾಯ ಕೋರುತ್ತಿದ್ದೇವೆ. ಈ ಮಾಸದಿಂದ ಸಾದ್ಯಂತ ಪ್ರಯೋಜನ ಪಡೆದ ಮತ್ತು ಇದರ ಸಮೃದ್ಧಿಗಳನ್ನು ತನ್ನ ಬಾಹುಗಳ ತುಂಬಾ ಬಾಚಿ ಪಡಕೊಂಡವನು ಅತ್ಯಂತ ಅದೃಷ್ಟವಂತನು. ಹಾಗೆಯೇ ಈ ಅಮೂಲ್ಯ ಅವಕಾಶವನ್ನು ಕಳೆದುಕೊಂಡ ಮತ್ತು ಕೇವಲ ತನ್ನ ವಿಶ್ವಾಸದ ದೌರ್ಬಲ್ಯ, ಆಲಸ್ಯ ಮತ್ತು ಅತ್ಯಾಸೆಯಿಂದಾಗಿ ಈ ಮಾಸದ ಪ್ರಯೋಜನ ಪಡೆಯುವಲ್ಲಿ ವಿಫಲನಾದವನು ಎಂತಹ ಹತಭಾಗಿ! ಪ್ರವಾದಿ ವರ್ಯರು(ಸ) ಹೀಗೆಂದಿರುವರು, “ನನ್ನ ಬಳಿಗೆ ಜಿಬ್ರೀಲ್(ಅ) ಬಂದು ‘ಯಾರಿಗೆ ರಮಝಾನ್ ತಿಂಗಳು ದೊರೆತೂ ತನ್ನ ಪಾಪ ವಿಮೋಚನೆಗೆ ಪ್ರಯತ್ನಿಸದವನು ನಾಶವಾಗಲಿ’ ಎಂದಾಗ ನಾನು ಅದಕ್ಕೆ ‘ಆಮೀನ್’ ಹೇಳಿದೆ (ಅಂದರೆ ಓ ಅಲ್ಲಾಹ್ ಈ ಪ್ರಾರ್ಥನೆಯನ್ನು ಸ್ವೀಕರಿಸು)” [ಅಲ್ ಅದಬುಲ್ ಮುಫರ್ರಿದ್ ಲಿಲ್ ಬುಖಾರಿ(ರ): 644, ಸಹೀಹ್]
ಈದ್ ಎಂಬುದು ಸಂತೋಷ ಆಚರಿಸುವ ಸುಸಂದರ್ಭ ವಾಗಿದೆ. ಜಗತ್ತಿನಲ್ಲಿ ಸತ್ಯವಿಶ್ವಾಸಿಗಳಿಗೆ ಎರಡು ರೀತಿಯ ಸಂತೋಷಗಳಿರುವುದು. ಒಂದು ತನ್ನ ಪ್ರಭುವಿನ ಅನುಸರಣೆಯ ಅವಕಾಶ ದೊರೆತಿರುವುದು, ಇನ್ನೊಂದು ಅದರ ಫಲವಾಗಿ ಪ್ರತಿಫಲದ ವಾಗ್ದಾನ ದೊರೆತಿರುವುದು ಆಗಿರುತ್ತದೆ. “ಓ ಪೈಗಂಬರರೇ, (ಹೀಗೆ) ಹೇಳಿರಿ: ಇದನ್ನು (ಕುರ್ಆನನ್ನು) ಅವತೀರ್ಣಗೊಳಿಸಿದುದು ಅಲ್ಲಾಹನ ಅನುಗ್ರಹ ಮತ್ತು ಕೃಪೆಯಾಗಿರುತ್ತದೆ. ಇದಕ್ಕಾಗಿ ಜನರು ಸಂತೋಷಪಡಬೇಕು. ಜನರು ಶೇಖರಿಸುತ್ತಿರುವ ಎಲ್ಲ ವಸ್ತುಗಳಿಗಿಂತಲೂ ಇದು ಉತ್ತಮವಾಗಿದೆ.” (ಪವಿತ್ರ ಕುರ್ಆನ್: 10: 58)
ಖಂಡಿತವಾಗಿಯೂ ಈದ್ನ ದಿನವು ಕೃತಜ್ಞತೆ ಮತ್ತು ಸಂತೋಷ ಪ್ರಕಟನೆಯ ದಿನವಾಗಿದೆ. ಆದರೆ ಈದ್ ಕೇವಲ ಹೊಸ ವಸ್ತ್ರ ಧರಿಸುವ ಮತ್ತು ತನ್ನ ಪ್ರತಿಷ್ಠೆಯನ್ನು ಮೆರೆಯು ವುದರ ಹೆಸರಲ್ಲ. ಈದ್ಗೂ ಕೆಲವು ಶಿಷ್ಟಾಚಾರಗಳಿರುತ್ತವೆ. ಈಗ ನಾವು ಈದುಲ್ ಫಿತ್ರ್ನ ನಿರೀಕ್ಷೆಯಲ್ಲಿರುವ ಈ ಸಂದರ್ಭದಲ್ಲಿ, ಈದ್ನ ಆದೇಶ-ಸಿದ್ಧಾಂತಗಳು ಮತ್ತು ಅದರ ಶಿಷ್ಟಾಚಾರ-ಸುನ್ನತ್ಗಳ ಕುರಿತು ಚರ್ಚಿಸುವುದು, ಶರೀಅತ್ಗೆ ವಿರುದ್ಧವಾದ ಸಂಗತಿಗಳು ಹಾಗೂ ನವೀನಾಚಾರ(ಬಿದ್ಅತ್)ಗಳ ಕುರಿತು ಎಚ್ಚರಿಸುವುದು ಅಗತ್ಯವೆಂದು ತಲೆದೋರುತ್ತಿದೆ.
ಈದ್ನ ಶಿಷ್ಟಾಚಾರಗಳು:
1. ಈದ್ನಂದು ತಕ್ಬೀರ್ ಹೇಳುವುದು: ಈದ್ನ ರಾತ್ರಿ ಸೂರ್ಯಾಸ್ತದ ಬಳಿಕದಿಂದ ಫಜ್ರ್ ನಮಾಝ್ನ ವರೆಗೆ ತಕ್ಬೀರ್ ಹೇಳುವುದು ಸುನ್ನತ್ ಆಗಿದೆ. ಅಲ್ಲಾಹ್ ಹೇಳುತ್ತಾನೆ, “ನೀವು ಉಪವಾಸದ ಸಂಖ್ಯೆಯನ್ನು ಪೂರ್ತಿ ಗೊಳಿಸಲು ಅನುಕೂಲವಾಗುವಂತೆಯೂ ಸನ್ಮಾರ್ಗದರ್ಶನದ ಮೂಲಕ ನಿಮ್ಮನ್ನು ಪ್ರತಿಷ್ಠಿತ ಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾ ಡುತ್ತಾ ಅವನಿಗೆ ಕೃತಜ್ಞರಾಗಿರಲಿ ಕ್ಕಾಗಿಯೂ ಈ ವಿಧಾನವನ್ನು ತೋರಿಸಿ ಕೊಡಲಾಗಿದೆ.”
(ಪವಿತ್ರ ಕುರ್ಆನ್: 2: 185)
ಪುರುಷರು ಮಾರುಕಟ್ಟೆ, ಮನೆ, ದಾರಿ, ಮಸೀದಿ ಮತ್ತು ಸಾಮಾನ್ಯ ಸಭೆಗಳಲ್ಲಿ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುವುದು ಮೆಚ್ಚುಗೆಯ ಕಾರ್ಯವಾಗಿದೆ. ಈ ಪ್ರಕಾರ ಪ್ರವಾದಿಚರ್ಯೆ ಯನ್ನು ಅನುಸರಿಸಿದಂತೆಯೂ ಆಗುತ್ತದೆ ಮತ್ತು ಸಲಫುಸ್ಸಾಲಿಹೀನ್ಗಳ ವಿಧಾನವನ್ನು ಜೀವಂತ ಇರಿಸಿದಂತೆಯೂ ಆಗುತ್ತದೆ. ಅದೇ ವೇಳೆ ಮಹಿಳೆಯರು ತಮ್ಮ ಸಭೆಯಲ್ಲಿ ಉಚ್ಚ ಸ್ವರದಲ್ಲಿಯೂ ಪರಿಸರದಲ್ಲಿ ಅಪರಿಚಿತ ಪುರುಷರಿದ್ದರೆ ಮೆಲುದನಿಯಲ್ಲೂ ತಕ್ಬೀರ್ ಹೇಳಬೇಕು. ಮೂಲ ಆದೇಶವು ಎಲ್ಲರೂ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುವುದಾಗಿದೆ. ಈ ಮೂಲಕ ಅಲ್ಲಾಹನ ಮಹಾನತೆಯನ್ನು ಬಹಿರಂಗವಾಗಿ ಘೋಷಿಸುವಂತಾಗಬೇಕು ಮತ್ತು ತಮ್ಮ ಜೀವನ ಹಾಗೂ ದೇವದಾಸ್ಯತನವನ್ನು ಸುವ್ಯಕ್ತವಾಗಿ ಪ್ರಕಟಿಸುವಂತಾಗಬೇಕು; ಅಂತೆಯೇ ಉಪವಾಸ ಮತ್ತು ತರಾವೀಹ್ಗಳ ರೂಪದಲ್ಲಿ ಅಲ್ಲಾಹನು ದಯಪಾಲಿಸಿರುವ ಅನುಗ್ರಹಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುವಂತಾಗಬೇಕು ಎಂಬುದೇ ಇದರ ಉದ್ದೇಶವಾಗಿದೆ.
ಇಮಾನ್ ಝಹ್ರೀ(ರ) ಹೇಳುತ್ತಾರೆ, “ಪ್ರವಾದಿವರ್ಯರು(ಸ) ಈದುಲ್ ಫಿತ್ರ್ನಂದು ಮನೆಯಿಂದ ತಕ್ಬೀರ್ ಹೇಳುತ್ತಾ ಹೊರಡುತ್ತಿದ್ದರು ಮತ್ತು ಈದ್ಗಾಹ್ ತಲುಪಿದ ಮೇಲೆ ನಮಾಝ್ ನಿರ್ವಹಿಸುತ್ತಿದ್ದರು. ನಮಾಝ್ನ ಬಳಿಕ ಅವರು(ಸ) ತಕ್ಬೀರ್ ಹೇಳುವುದನ್ನು ನಿಲ್ಲಿಸುತ್ತಿದ್ದರು.” [ಮುಸನ್ನಫ್ ಇಬ್ನು ಅಬೀ ಶೈಬಾ(ರ): 5621, ಸಹೀಹುಲ್ ಬಾಕೀ(ರ)]
ಈ ಹದೀಸ್ನಿಂದ ತಿಳಿದು ಬರುವಂತೆ, ದಾರಿಗಳಲ್ಲಿ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುತ್ತಾ ಈದ್ಗಾಹ್ ಹೋಗುವುದು ಸುನ್ನತ್ ಆಗಿದೆ. ಆದರೆ ದುರದೃಷ್ಟವಶಾತ್ ಇಂದು ಜನರು ಈ ಸುನ್ನತನ್ನು ಮರೆತು ಬಿಟ್ಟಿದ್ದಾರೆ. ಈ ವರ್ತನೆಯನ್ನು ಸುಧಾರಿಸುತ್ತಾ ಉಚ್ಚ ಸ್ವರದಲ್ಲಿ ತಕ್ಬೀರ್ ಹೇಳುವ ಪರಿಪಾಠವನ್ನು ಬೆಳೆಸುವ ಅಗತ್ಯವಿದೆ.
ಇನ್ನು ಎಲ್ಲರೂ ಏಕಕಾಲದಲ್ಲಿ ತಕ್ಬೀರ್ ಮೊಳಗಿಸುತ್ತಿರಬೇಕು ಎಂಬ ಅಗತ್ಯವೇನೂ ಇಲ್ಲ. ಆದರೆ ಈ ತಕ್ಬೀರ್ ಮತ್ತು ತಹ್ಮೀದ್ನ ಉದ್ದೇಶವನ್ನು ತಮ್ಮ ದೃಷ್ಟಿಗಳ ಮುಂದೆ ಇರಿಸಬೇಕು ಮತ್ತು ಪ್ರವಾದಿ ವರ್ಯರು(ಸ) ಉಚ್ಚರಿಸುತ್ತಿದ್ದ ರೀತಿಯಲ್ಲಿಯೇ ತಕ್ಬೀರ್ ಹೇಳಬೇಕು ಮತ್ತು ಅದರಲ್ಲಿ ಯಾವುದೇ ಹೆಚ್ಚು ಕಮ್ಮಿ ಮಾಡಬಾರದು. ಅಬ್ದುಲ್ಲಾ ಇಬ್ನು ಮಸ್ಊದ್ರವರ(ರ) ಕುರಿತು ಹೀಗೆ ಹೇಳಲಾಗುತ್ತದೆ- ಅವರು ಈ ಪದಗಳಲ್ಲಿ ತಕ್ಬೀರ್ ಹೇಳುತ್ತಿದ್ದರು, “ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್; ಲಾ ಇಲಾಹ ಇಲ್ಲಲ್ಲಾಹು, ವಲ್ಲಾಹು ಅಕ್ಬರ್; ಅಲ್ಲಾಹು ಅಕ್ಬರ್, ವಲಿಲ್ಲಾಹಿಲ್ ಹಮ್ದ್” [ಮುಸನ್ನಫ್ ಇಬ್ನು ಅಬೀ ಶೈಬಾ(ರ): 5697, ಸಹೀಹ್]
ಅಂತೆಯೇ ಅಬ್ದುಲ್ಲಾ ಬಿನ್ ಅಬ್ಬಾಸ್ರ(ರ) ಕುರಿತು ಹೀಗೆ ಹೇಳಲಾಗುತ್ತದೆ- ಅವರು ಈ ಪದಗಳೊಂದಿಗೆ ತಕ್ಬೀರ್ ಹೇಳುತ್ತಿದ್ದರು, “ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರು, ಅಲ್ಲಾಹು ಅಕ್ಬರು, ವಲಿಲ್ಲಾಹಿಲ್ ಹಮ್ದ್, ಅಲ್ಲಾಹು ಅಕ್ಬರ್ ವ ಅಜಲ್ಲು, ವಲ್ಲಾಹು ಅಕ್ಬರ್ ಅಲಾ ಮಾ ಹದಾನಾ” [ಅಸ್ಸುನನಿಲ್ ಕಿಬ್ರೀ ಲಿಲ್ ಬೈಹಕೀ(ರ): 6074, ಸಹೀಹ್] ಹಾಗಾಗಿ ಈ ಎರಡು ವಿಧಾನಗಳ ಪೈಕಿ ಯಾವುದನ್ನೂ ಆಯ್ದುಕೊಳ್ಳಬಹುದು.
2. ಈದ್ಗಾಹ್ಗೆ ಹೋಗುವುದಕ್ಕೆ ಮುಂಚೆ ಏನನ್ನಾದರೂ ಸೇವಿಸುವುದು: ಅನಸ್(ರ) ಹೇಳುತ್ತಾರೆ, “ಪ್ರವಾದಿವರ್ಯರು(ಸ) ಈದುಲ್ ಫಿತ್ರ್ನಂದು ಖರ್ಜೂರಗಳನ್ನು ಸೇವಿಸದೆ ಈದ್ಗಾಹ್ಗೆ ತೆರಳುತ್ತಿರಲಿಲ್ಲ ಮತ್ತು ಅವರು ಬೆಸ ಸಂಖ್ಯೆಯಲ್ಲಿ ಖರ್ಜೂರ ಗಳನ್ನು ತಿನ್ನುತ್ತಿದ್ದರು.” [ಬುಖಾರಿ: 953]
ಬುರೈದಾ(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಈದುಲ್ ಫಿತ್ರ್ನಂದು ಏನನ್ನಾದರೂ ಸೇವಿಸದೆ ಈದ್ಗಾಹ್ಗೆ ಹೊರಡುತ್ತಿರಲಿಲ್ಲ ಮತ್ತು ಈದುಲ್ ಅಝ್ಹಾದಂದು ಈದ್ ನಮಾಝ್ ಮುಗಿಸುವ ವರೆಗೂ ಏನನ್ನೂ ಸೇವಿಸುತ್ತಿರಲಿಲ್ಲ.” [ಸುನನ್ ತಿರ್ಮಿದಿ(ರ): 542, ತಸ್ಹೀಹುಲ್ ಬಾಕೀ(ರ)]
3. ಈದ್ ನಮಾಝ್ಗಾಗಿ ಶೃಂಗರಿಸುವುದು: ಈದ್ನಂದು ಸುಂದರವಾಗಿ ಕಾಣುವುದು, ಅತ್ಯುತ್ತಮ ವಸ್ತ್ರ ಧರಿಸುವುದು, ಅತ್ಯುತ್ತಮ ಸುಗಂಧ ದ್ರವ್ಯವನ್ನು ಬಳಸುವುದು ಈದ್ನ ಐಚ್ಛಿಕ ಕಾರ್ಯ ಮತ್ತು ಶಿಷ್ಟಾಚಾರವಾಗಿದೆ. ಈ ಮೂಲಕ ದಾಸನ ಮೇಲೆ ಇರುವ ಅಲ್ಲಾಹನ ಅನಗ್ರಹಗಳ ಪ್ರಕಟನೆ ಯಾಗುತ್ತದೆ. ಇದನ್ನು ಅಲ್ಲಾಹ್ ಇಷ್ಟ ಪಡುತ್ತಾನೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿದ್ದಾರೆ, “ಅಲ್ಲಾಹನು ತನ್ನ ದಾಸರ ಮೇಲೆ ತನ್ನ ಅನುಗ್ರಹಗಳು ಪ್ರಕಟವಾಗುವುದನ್ನು ಇಷ್ಟಪಡುತ್ತಾನೆ.” [ಸುನನ್ ಅಬೂದಾವೂದ್(ರ): 4065, ಸುನನ್ ನಸಾಯೀ(ರ): 5224]
ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ಪ್ರವಾದಿ ವರ್ಯರು(ಸ) ಈದ್ನಂದು ಕೆಂಪು ಬಣ್ಣದ ಜುಬ್ಬಾ ಧರಿಸು ತ್ತಿದ್ದರು.” [ತಬ್ರಾನೀ(ರ): 7609]
ಇಮಾಮ್ ಬುಖಾರಿಯವರು(ರ) ಈದ್ಗೆ ಸಂಬಂಧಿಸಿ ‘ಬಾಬು ಫಿಲ್ ಈದೈನಿ ವಲ್ ತಜ್ಮಲ್ ಫೀಹಾ’ ಎಂಬ ಒಂದು ಅಧ್ಯಾಯವನ್ನೇ ರಚಿಸಿದ್ದಾರೆ. ಅದರಲ್ಲಿ ಉದ್ಧರಿಸಿರುವ ಹದೀಸ್ಗಳಿಂದ ತಿಳಿದು ಬರುವಂತೆ ಪ್ರವಾದಿವರ್ಯರು(ಸ) ಈದ್ನಂದು ಶೃಂಗರಿಸುವುದನ್ನು ನಿಷೇಧಿಸಿರಲಿಲ್ಲ. [ಸಹೀಹ್ ಬುಖಾರಿ(ರ): 948]
ನಾಫಿಅï(ರ) ಹೇಳುತ್ತಾರೆ, “ಅಬ್ದುಲ್ಲಾ ಬಿನ್ ಉಮರ್(ರ) ಈದ್ನಂದು ಈದ್ಗಾಹ್ಗೆ ಹೋಗುವುದಕ್ಕೆ ಮುಂಚೆ ಸ್ನಾನ ಮಾಡುತ್ತಿದ್ದರು.” [ಮೂಅತ್ತಾ ಇಮಾಮ್ ಮಾಲಿಕ್(ರ): 426]
ಇನ್ನೊಂದು ವರದಿಯಲ್ಲಿ ಈ ಹೆಚ್ಚುವರಿ ಪದಗಳಿವೆ, “ಅವರು(ರ) ಇಮಾಮರೊಂದಿಗೆ ಫಜ್ರ್ ನಮಾಝ್ ನಿರ್ವಹಿ ಸುತ್ತಿದ್ದರು, ಬಳಿಕ ಮನೆಗೆ ಮರಳುತ್ತಿದ್ದರು ಮತ್ತು ಸ್ನಾನ ಮಾಡುತ್ತಿದ್ದರು ಮತ್ತು ಉತ್ತಮ ವಸ್ತ್ರವನ್ನು ಆಯ್ದು ಧರಿಸು ತ್ತಿದ್ದರು. ಬಳಿಕ ಅತ್ಯುತ್ತಮ ಸುಗಂಧವನ್ನು ಹಚ್ಚುತ್ತಿದ್ದರು. ಆನಂತರ ಈದ್ಗಾಹ್ಗೆ ತೆರಳುತ್ತಿದ್ದರು.”
[ಮುಸ್ನದುಲ್ ಹಾರಿಸ್(ರ): 206]
ಅಲ್ಲಾಮಾ ಇಬ್ನು ಕುದಾಮಾ(ರ) ಹೇಳುತ್ತಾರೆ, “ಈದ್ನಂದು ಸ್ನಾನ ಮಾಡುವುದು ಮೆಚ್ಚುಗೆಯ ಕಾರ್ಯವಾಗಿದೆ. ಅಬ್ದುಲ್ಲಾ ಬಿನ್ ಉಮರ್(ರ) ಈದುಲ್ ಫಿತ್ರ್ನಂದು ಸ್ನಾನ ಮಾಡುತ್ತಿದ್ದರು. ಈ ಕಾರ್ಯವು ಅಲೀಯವರಿಂದಲೂ(ರ) ಉದ್ಧರಿಸಲ್ಪಟ್ಟಿದೆ.”
[ಅಲ್ ಮುಗ್ನೀ: 3/256-257]
4. ಈದ್ಗಳಲ್ಲಿ ನಮಾಝ್ನ ಆದೇಶ: ಈದ್ಗಳಲ್ಲಿ ನಮಾಝ್ ಮಾಡುವುದು ವಾಜಿಬುಲ್ ಐನ್ (ಪ್ರತಿಯೋರ್ವನ ಮೇಲೂ ವಾಜಿಬ್) ಆಗಿದೆ. ಪ್ರವಾದಿವರ್ಯರು(ಸ) ಅದಕ್ಕಾಗಿ ಹೊರಡ ಬೇಕೆಂದು ಜನರಿಗೆ ಆದೇಶಿಸಿದ್ದಾರೆ. ಎಲ್ಲಿಯ ವರೆಗೆಂದರೆ, ಅವರು(ಸ) ಹದಿಹರೆಯದ ಯುವತಿಯರಿಗೂ ಪರ್ದಾಧಾರಿ ಮಹಿಳೆಯರಿಗೂ ಈದ್ಗಾಹ್ಗೆ ಬರಲು ಆದೇಶಿಸುತ್ತಿದ್ದರು. ಉಮ್ಮು ಅತಿಯ್ಯ(ರ) ಹೇಳುತ್ತಾರೆ, “ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾದಂದು ಯುವತಿಯರನ್ನು, ಋತುಮತಿಯರನ್ನು ಮತ್ತು ಪರ್ದಾಧಾರಿ ಮಹಿಳೆಯರನ್ನು ಈದ್ಗಾಹ್ಗೆ ಕರೆ ತನ್ನಿ. ಆದರೆ ಋತುಮತಿಯರು ನಮಾಝ್ ನಿರ್ವಹಿಸಬಾರದು. ಬದಲಾಗಿ, ಮುಸ್ಲಿಮರ ಜತೆ ಒಳಿತಿನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳ ಬೇಕು” ಎಂದು ನಮಗೆ ಆದೇಶಿಸಿದರು. ನಾನು ಅರುಹಿದೆ, “ಅಲ್ಲಾಹನ ಸಂದೇಶ ವಾಹಕರೇ(ಸ)! ನಮ್ಮ ಪೈಕಿ ಯಾರ ಬಳಿ ಯಾದರೂ ಜಿಲ್ಬಾಬ್ (ಚದ್ದರ) ಇರದಿ ದ್ದರೆ?” ಅವರೆಂದರು, “ಅವಳ ಗೆಳತಿಯು ತನ್ನ ಜಿಲ್ಬಾಬ್ನಲ್ಲಿ ಅವಳನ್ನು ಸೇರಿಸಲಿ.” [ಸಹೀಹ್ ಮುಸ್ಲಿಮ್(ರ): 2093]
5. ಈದ್ ನಮಾಝ್ಗಳ ಜತೆಯಲ್ಲಿ ನಫಿಲ್ ನಮಾಝ್: ಈದ್ ನಮಾಝ್ಗೆ ಮುಂಚೆ ಅಥವಾ ಅದರ ನಂತರ ಯಾವುದೇ ನಫಿಲ್ ನಮಾಝ್ ನಿರ್ವಹಿ ಸಲಿಕ್ಕಿಲ್ಲ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹ ಕರು(ಸ) ಈದುಲ್ ಅಝ್ಹಾ ಅಥವಾ ಈದುಲ್ ಫಿತ್ರ್ನಂದು ಈದ್ಗಾಹ್ಗೆ ಬಂದರು ಮತ್ತು ಎರಡು ರಕಅತ್ (ಈದ್ನ) ನಮಾಝ್ ನಿರ್ವಹಿಸಿದರು. ಅವರು ಅದಕ್ಕೆ ಮೊದಲು ಮತ್ತು ನಂತರ ಯಾವುದೇ (ನಫಿಲ್) ನಮಾಝ್ ನಿರ್ವಹಿಸಲಿಲ್ಲ.” [ಸಹೀಹ್ ಮುಸ್ಲಿಮ್(ರ): 2096, ಬುಖಾರಿ(ರ): 989]
ಅಲ್ಲಾಮಾ ಇಬ್ನು ಕಯ್ಯಿಮ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹ ಕರು(ಸ) ಮತ್ತು ಅವರ ಸಹಾಬಿಗಳು(ರ) ಈದ್ಗಾಹ್ ತಲುಪಿದ ಮೇಲೆ ಈದ್ ನಮಾಝ್ಗೆ ಮುಂಚೆ ಅಥವಾ ಅದರ ನಂತರ ಯಾವುದೇ ನಮಾಝ್ ನಿರ್ವ ಹಿಸುತ್ತಿರಲಲಿಲ್ಲ.” [ಝಾದುಲ್ ಮುಆದ್: 1/425]
ಅಲ್ಲಾಮಾ ಇಬ್ನು ಹಜರ್(ರ) ಹೇಳು ತ್ತಾರೆ, “ಒಟ್ಟಿನಲ್ಲಿ ಈದ್ ನಮಾಝ್ಗೆ ಮುಂಚೆ ಮತ್ತು ಅದರ ಬಳಿಕ ಯಾವುದೇ ಸುನ್ನತ್ ನಮಾಝ್ ಸಾಬೀ ತಾಗಿಲ್ಲ. ಈ ನಮಾಝನ್ನು ಜುಮಾ ನಮಾಝ್ಗೆ ಸಮೀಕರಿಸಿದವರ ಹೊರತು.”
[ಫತ್ಹುಲ್ ಬಾರೀ: 3/418]
6. ಈದುಲ್ ಫಿತ್ರ್ ನಮಾಝ್ನ ಸಮಯ: ಸೂರ್ಯ ಒಂದು ಗೇಣಿನಷ್ಟು ಮೇಲಕ್ಕೇರಿದಾಗ ಅದರ ಸಮಯ ಆರಂಭ ವಾಗುತ್ತದೆ ಮತ್ತು ಸೂರ್ಯ ನಡುನೆತ್ತಿಯ ವರೆಗೆ ತಲುಪಿ ಇಳಿಮುಖವಾಗುವ ವರೆಗೆ ಅದರ ಸಮಯವಿರುತ್ತದೆ. ಅಲ್ಲಾಮಾ ಇಬ್ನು ಕಯ್ಯಿಮ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಈದುಲ್ ಫಿತ್ರ್ನ ನಮಾಝನ್ನು ಸ್ವಲ್ಪ ತಡವಾಗಿ ನಿರ್ವಹಿಸುತ್ತಿದ್ದರು ಮತ್ತು ಈದುಲ್ ಅಝ್ಹಾದ ನಮಾಝನ್ನು ಬೇಗ ನಿರ್ವಹಿಸುತ್ತಿದ್ದರು.” [ಝಾದುಲ್ ಮುಆದ್: 1/425] ಹಾಗಾಗಿ ಫಿತ್ರ್ ಝಕಾತನ್ನು ನೀಡಲು ಅವಕಾಶ ಪಡೆಯ ದವರು ಅದನ್ನು ನೀಡಿ ಬರುವಂತಾಗಲು ಇಮಾಮರು ಸ್ವಲ್ಪ ತಡವಾಗಿ ಈದ್ ನಮಾಝ್ ನಿರ್ವಹಿಸಬೇಕು.
7. ಈದ್ ನಮಾಝ್ನ ವಿಧಾನ: ಅಲ್ಲಾಹನ ಸಂದೇಶವಾಹಕರು(ಸ) ಈದ್ಗಾ ತಲುಪಿದ ಮೇಲೆ ಅದಾನ್ ಮತ್ತು ಇಕಾ ಮತ್ ಇಲ್ಲದೆಯೇ ನಮಾಝ್ ಪ್ರಾರಂಭಿ ಸುತ್ತಿದ್ದರು. ಆದ್ದರಿಂದ ಈದ್ ನಂದು ನಮಾಝ್ಗೆ ಅದಾನ್ ಮತ್ತು ಇಕಾಮತ್ ಹೇಳದಿರುವುದೇ ಸುನ್ನತ್ ಆಗಿದೆ.”
[ಝಾದುಲ್ ಮುಆದ್: 1/425]
ಜಾಬಿರ್ ಬಿನ್ ಸಮ್ರಃ(ರ) ಹೇಳು ತ್ತಾರೆ, “ನಾನು ಅಲ್ಲಾಹನ ಸಂದೇಶವಾಹ ಕರ(ಸ) ಜತೆಯಲ್ಲಿ ಹಲವು ಈದ್ಗಳಲ್ಲಿ ಅದಾನ್, ಇಕಾಮತ್ ಇಲ್ಲದೆಯೇ ನಮಾಝ್ ನಿರ್ವಹಿಸಿದ್ದೇನೆ.” [ಸಹೀಹ್ ಮುಸ್ಲಿಮ್(ರ): 2088]
ಈದ್ ನಮಾಝ್ನಲ್ಲಿ ಎರಡು ರಕಅತ್ಗಳಿರುತ್ತವೆ. ಉಮರ್(ರ) ಹೇಳು ತ್ತಾರೆ, “ಪ್ರಯಾಣದ ನಮಾಝ್ ಎರಡು ರಕಅತ್ಗಳಾಗಿವೆ, ಈದುಲ್ ಅಝ್ಹಾದ ನಮಾಝ್ ಎರಡು ರಕಅತ್ಗಳಾಗಿವೆ ಮತ್ತು ಇದುಲ್ ಫಿತ್ರ್ನ ನಮಾಝ್ ಎರಡು ರಕಅತ್ಗಳಾಗಿವೆ. (ಈ ಎರಡು ರಕಅತ್ಗಳು) ಸಂಪೂರ್ಣವಾದವುಗಳು. ಕಸ್ರ್ ಅಲ್ಲ.” [ಸುನನ್ ಇಬ್ನು ಮಾಜ(ರ): 1063, ತಸ್ಹೀಹುಲ್ ಬಾಕೀ(ರ)]
ಹನಫೀ ಕರ್ಮಶಾಸ್ತ್ರಜ್ಞರ ಪ್ರಕಾರ ಈದ್ ನಮಾಝನ್ನು ಆರು ಹೆಚ್ಚುವರಿ ತಕ್ಬೀರ್ಗಳೊಂದಿಗೆ ನಿರ್ವಹಿಸಲಾಗುತ್ತದೆ. ಮೊದಲ ರಕಅತ್ನಲ್ಲಿ ತಕ್ಬೀರ್ ತಹ್ರೀಮ ಮತ್ತು ಸನಾ ಪಠಿಸಿದ ಬಳಿಕ ಕಿರಅತ್ಗೆ ಮುಂಚೆ ಮೂರು ಹೆಚ್ಚುವರಿ ತಕ್ಬೀರ್ ಗಳನ್ನು ಹೇಳಲಾಗುತ್ತದೆ. ಹಾಗೆಯೇ ಎರಡನೆಯ ರಕಅತ್ನಲ್ಲಿ ಕಿರಅತ್ನ ಬಳಿಕ ರುಕೂಅïಗೆ ಹೋಗುವುದಕ್ಕೆ ಮುಂಚೆ ಮೂರು ಹೆಚ್ಚುವರಿ ತಕ್ಬೀರ್ ಹೇಳಲಾಗು ತ್ತದೆ. ಉಳಿದ ಕರ್ಮಗಳನ್ನು ಸಾಮಾನ್ಯ ನಮಾಝ್ಗಳಂತೆಯೇ ನಿರ್ವಹಿಸ ಲಾಗುತ್ತದೆ.
ಇತರೆಲ್ಲ ವಿದ್ವಾಂಸರ ಪ್ರಕಾರ ಈದ್ ನಮಾಝ್ಗಳನ್ನು ಹನ್ನೆರಡು ಹೆಚ್ಚುವರಿ ತಕ್ಬೀರ್ಗಳ ಜತೆಯಲ್ಲಿ ನಿರ್ವಹಿಸಲಾಗು ತ್ತದೆ. ಮೊದಲ ರಕಅತ್ನಲ್ಲಿ ಕಿರಅತ್ಗೆ ಮುಂಚೆ ಏಳು ಹೆಚ್ಚುವರಿ ತಕ್ಬೀರ್ ಹೇಳಲಾಗುತ್ತದೆ ಮತ್ತು ಎರಡನೆಯ ರಕಅತ್ನಲ್ಲಿ ಕಿರಅತ್ಗೆ ಮುಂಚೆ ಐದು ಹೆಚ್ಚುವರಿ ತಕ್ಬೀರ್ ಹೇಳಲಾಗುತ್ತದೆ.
8. ನಮಾಝ್ನ ಬಳಿಕ ಖುತ್ಬಾ: ಈದ್ಗಳ ಖುತ್ಬಾವನ್ನು ನಮಾಝ್ನ ಬಳಿಕ ನೀಡುವುದು ಸುನ್ನತ್ ಆಗಿದೆ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ನಾನು ಅಲ್ಲಾಹನ ಸಂದೇಶವಾಹಕರು(ಸ) ಮತ್ತು ಅಬುಬಕರ್(ರ), ಉಮರ್(ರ) ಮತ್ತು ಉಸ್ಮಾನ್ರ(ರ) ಜತೆಯಲ್ಲಿ ಈದ್ ನಮಾಝ್ ನಿರ್ವಹಿಸಿದ್ದೇನೆ. ಇವರೆಲ್ಲರೂ ಖುತ್ಬಕ್ಕಿಂತ ಮುಂಚೆ ನಮಾಝ್ ನಿರ್ವ ಹಿಸುತ್ತಿದ್ದರು.”
[ಸಹೀಹುಲ್ ಬುಖಾರಿ(ರ): 962]
ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹ ಕರು(ಸ) ಮತ್ತು ಅಬೂಬಕರ್(ರ), ಉಮರ್(ರ) ಇವರೆಲ್ಲ ಈದ್ ನಮಾಝನ್ನು ಖುತ್ಬಾಕ್ಕಿಂತ ಮುಂಚೆ ನಿರ್ವಹಿಸುತ್ತಿದ್ದರು.” [ಸಹೀಹ್ ಬುಖಾರಿ(ರ): 963]
ಖುತ್ಬಾ ಕೇಳಲು ಕುಳಿತುಕೊಳ್ಳುವುದು ಜನರ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಅಬ್ದುಲ್ಲಾ ಬಿನ್ ಸಾಯಿಬ್(ರ) ಹೇಳುತ್ತಾರೆ, “ನಾನು ಅಲ್ಲಾಹನ ಸಂದೇಶವಾಹಕರ(ಸ) ಜತೆಯಲ್ಲಿ ಈದ್ ನಮಾಝ್ಗೆ ನಿಂತೆ. ಅವರು(ಸ) ನಮಾಝ್ ಬಳಿಕ ಹೇಳಿದರು: ನಾನು ಖುತ್ಬಾ (ಪ್ರವಚನ) ನೀಡಲು ಹೊರಟಿದ್ದೇನೆ. ಖುತ್ಬಕ್ಕೆ ಕುಳಿತುಕೊಳ್ಳಲು ಇಚ್ಛಿಸುವವರು ಕುಳಿತುಕೊಳ್ಳಿರಿ ಮತ್ತು ಹೋಗಲಿಚ್ಛಿಸುವವರು ಹೋಗಬಹುದು.” [ಸುನನ್ ಅಬೂ ದಾವೂದ್(ರ): 1157, ತಸ್ಹೀಹುಲ್ ಬಾಕೀ(ರ)]
9. ಈದ್ನ ಶುಭ ಹಾರೈಕೆ: ಈದ್ನಂದು ತನ್ನ ಮುಸ್ಲಿಮ್ ಸಹೋದರರಿಗೆ ಶುಭ ಹಾರೈಸುವುದು ಈದ್ನ ಶಿಷ್ಟಾಚಾರವಾಗಿದೆ. ಮುಹಮ್ಮದ್ ಬಿನ್ ಝಿಯಾದ್(ರ) ಹೇಳುತ್ತಾರೆ, “ನಾನು ಅಬೂ ಉಮಾಮಾ ಬಾಹಿಲೀ(ರ) ಮತ್ತಿತರ ಸಹಾಬಿಗಳ ಜತೆಗಿದ್ದೆನು. ಇವರು ಈದ್ ನಮಾಝ್ ನಿರ್ವಹಿಸಿ ಮರಳುವಾಗ ಪರಸ್ಪರರೊಡನೆ ‘ತಕಬ್ಬಲುಲ್ಲಾಹು ಮಿನ್ನಾ ವ ಮಿನ್ಕುಮ್’ (ಅಲ್ಲಾಹ್ ನಮ್ಮ ಮತ್ತು ನಿಮ್ಮ ಆರಾಧನೆಗಳನ್ನು ಸ್ವೀಕರಿಸಲಿ) ಎಂದು ಹೇಳುತ್ತಿದ್ದರು.” [ಸುನನಿಲ್ ಕಿಬ್ರೀ ಲಿಲ್ ಬೈಹಕೀ(ರ), ಮಅ ತಹ್ಸೀನ್ ಇಬ್ನು ಹಜರ್(ರ) ವ ಬಾಕೀ(ರ)]
ಶೈಖುಲ್ ಇಸ್ಲಾಮ್ ಇಬ್ನು ತೀಮಿಯರೊಡನೆ(ರ) ಈದ್ನ ಶುಭ ಹಾರೈಸುವುದರ ಬಗ್ಗೆ ವಿಚಾರಿಸಲಾಯಿತು. ಆಗ ಅವರು ಹೇಳಿದರು, “ಈದ್ ನಮಾಝ್ನ ಬಳಿಕ ‘ತಕಬ್ಬಲುಲ್ಲಾಹು ಮಿನ್ನಾ ವಮಿನ್ಕುಮ್’ ಮತ್ತು ‘ಅಹಾಲುಲ್ಲಾಹು ಅಲೈಕುಮ್’ (ಅಲ್ಲಾಹ್ ನಿಮ್ಮ ಜೀವನದಲ್ಲಿ ಈ ಸಮೃದ್ಧ ದಿನವನ್ನು ಆಗಾಗ ತರಲಿ) ಎನ್ನುವ ಮೂಲಕ ಶುಭ ಹಾರೈಸುವುದು ಹಲವು ಸಹಾಬಿಗಳಿಂದ ಉದ್ಧರಿಸಲ್ಪಟ್ಟಿವೆ ಹಾಗೂ ಇಸ್ಲಾಮೀ ವಿದ್ವಾಂಸರು ಅದಕ್ಕೆ ಅನುಮತಿಯನ್ನು ನೀಡಿರುವರು.” ಈ ಪದಗಳಲ್ಲದೆ ಇನ್ನಿ ತರ ಪ್ರಾರ್ಥನೆಗಳು ಮತ್ತು ವಿಧಾನಗಳಿಂದಲೂ ಶುಭ ಹಾರೈಸ ಬಹುದಾಗಿದೆ. ಅದು ಶರೀಅತ್ಗೆ ವಿರುದ್ಧ ಆಗದಿದ್ದರೆ ಸಾಕು.
10. ಈದ್ಗಾಹ್ಗೆ ಹೋಗುವ ಮತ್ತು ಮರಳುವ ದಾರಿಯನ್ನು ಬದಲಿಸುವುದು: ಜಾಬಿರ್(ರ) ಹೇಳುತ್ತಾರೆ, “ಪ್ರವಾದಿವರ್ಯರು(ಸ) ಈದ್ನಂದು ಈದ್ಗಾಹ್ಗೆ ಹೋಗುವ ಮತ್ತು ಮರಳುವ ದಾರಿಯನ್ನು ಬದಲಿಸುತ್ತಿದ್ದರು.” [ಸಹೀಹ್ ಬುಖಾರಿ(ರ): 986] ವಿದ್ವಾಂಸರು ಪ್ರವಾದಿವರ್ಯರ(ಸ) ಈ ಕ್ರಿಯೆಯ ಹಲವು ಯುಕ್ತಿಗಳನ್ನು ಉಲ್ಲೇಖಿಸಿರುವರು. ಆ ಪೈಕಿ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ-
ಟ ಇಸ್ಲಾಮಿನ ಗುರುತುಗಳ ಪ್ರಚಾರಕ್ಕಾಗಿ.
ಟ ಆ ಎರಡೂ ದಾರಿಗಳು ಪುನರುತ್ಥಾನ ದಿನದಂದು ಆ ವ್ಯಕ್ತಿಯ ಪರ ಸಾಕ್ಷಿ ನುಡಿಯಲಿಕ್ಕಾಗಿ.
ಟ ದೇವಕೀರ್ತನೆಯನ್ನು ವ್ಯಕ್ತಪಡಿಸಲು.
ಟ ಇಸ್ಲಾಮ್ ಮತ್ತು ಇಸ್ಲಾಮಿಸ್ಟರ ಗೌರವ ಮತ್ತು ಶಕ್ತಿಯು ಕಪಟವಿಶ್ವಾಸಿಗಳು ಹಾಗೂ ಸತ್ಯನಿಷೇಧಿಗಳಿಗೆ ಅರೋಚಕವಾಗಿ ತೋರಲು.
ಟ ಉಭಯ ದಾರಿಗಳಲ್ಲಿರುವ ನಿವಾಸಿ ಗಳಿಗಾಗಿ ಶಾಂತಿ-ಸಮಾಧಾನದ ಪ್ರಾರ್ಥನೆ ಗೈಯಲು ಮತ್ತು ಈದ್ಗಳ ತಕ್ಬೀರ್ಗಳ ಶಿಕ್ಷಣವನ್ನು ವ್ಯಾಪಕಗೊಳಿಸಲು.
ಟ ಸದಕಾ (ದಾನ) ಮತ್ತು ಸದ್ವರ್ತನೆಗಾಗಿ.
11. ಮೋಡ ಮತ್ತಿತರ ಕಾರಣ ಗಳಿಂದಾಗಿ ಶವ್ವಾಲ್ನ ಚಂದ್ರ ಕಾಣದೆ ಉಪವಾಸ ವ್ರತಾಚರಿಸಿದ್ದು, ಬಳಿಕ ಚಂದ್ರ ದರ್ಶನವಾಗಿದೆ ಎಂದು ತಿಳಿದು ಬಂದರೆ ಉಪವಾಸವನ್ನು ತೊರೆಯಬೇಕು. ಒಂದು ವೇಳೆ ಮಧ್ಯಾಹ್ನ ಸೂರ್ಯ (ಝವಾಲ್) ಇಳಿಮುಖವಾಗುವುದಕ್ಕೆ ಮುಂಚೆ ಚಂದ್ರ ದರ್ಶನದ ವಿಷಯ ತಿಳಿದಾಗ ತಕ್ಷಣವೇ ಈದ್ ನಮಾಝನ್ನು ನಿರ್ವಹಿಸಬೇಕು. ಝವಾಲ್ ನಂತರ ವಿಷಯ ತಿಳಿದರೆ, ಮುಂದಿನ ದಿನ ಈದ್ ನಮಾಝ್ ನಿರ್ವಹಿಸ ಬೇಕು. ಅಬೂ ಉಮೈರ್ ಅಬ್ದುಲ್ಲಾ ಬಿನ್ ಅನಸ್ ಬಿನ್ ಮಾಲಿಕ್(ರ) ಹೇಳುತ್ತಾರೆ: ನನಗೆ ನನ್ನ ಅನ್ಸಾರಿ ಸಹಾಬಿ ಚಿಕ್ಕಪ್ಪಂದಿರು ಹೇಳಿದರು, “ನಮಗೆ ಶವ್ವಾಲ್ನ ಚಂದ್ರ (ಮೋಡ ಇತ್ಯಾದಿ ಕಾರಣದಿಂದ) ಕಾಣಲಿಲ್ಲ. ನಾವು ಮರುದಿನ ಉಪವಾಸ ವ್ರತಾಚರಿ ಸಿದೆವು. ದಿನದ ಕೊನೆಯ ಜಾವದಲ್ಲಿ ಒಂದು ಯಾತ್ರಾ ತಂಡವು ಆಗಮಿಸಿತು. ಅವರು ನಿನ್ನೆ ಚಂದ್ರದರ್ಶನವಾದುದರ ಬಗ್ಗೆ ಪ್ರವಾದಿವರ್ಯರ(ಸ) ಮುಂದೆ ಪ್ರಮಾಣ ಮಾಡಿ ಹೇಳಿದರು. ಆಗ ಪ್ರವಾದಿವರ್ಯರು(ಸ) ಜನರಿಗೆ, ಅವತ್ತಿನ ಉಪವಾಸವನ್ನು ತೊರೆಯಲು ಮತ್ತು ಮರುದಿನ ಈದ್ ನಮಾಝ್ಗಾಗಿ ಈದ್ಗಾಹ್ನೆಡೆಗೆ ಹೊರ ಡಲು ಆದೇಶಿಸಿದರು. [ಸುನನ್ ಇಬ್ನು ಮಾಜ(ರ): 1653, ತಸ್ಹೀಹುಲ್ ಬಾಕೀ(ರ)]
ಫಿತ್ರ್ ಝಕಾತ್ನ ಆದೇಶ:
1. ಫಿತ್ರ್ ಝಕಾತ್ ಕಡ್ಡಾಯ: ಫಿತ್ರ್ ಝಕಾತ್ ನೀಡುವುದು, ತನ್ನ ಮತ್ತು ತನ್ನ ಕುಟುಂಬಿಕರ ಆಹಾರ, ವಸ್ತ್ರ ಮತ್ತು ಮೂಲಭೂತ ಅಗತ್ಯಗಳಿಗಿಂತ ಹೆಚ್ಚು ಸಂಪತ್ತು ಇರುವ ಪ್ರತಿಯೋರ್ವ ಮುಸ್ಲಿಮನ ಮೇಲೆ ವಾಜಿಬ್ (ಕಡ್ಡಾಯ) ಆಗಿದೆ. ಹಾಗಾಗಿ ಇದು ಹಿರಿಯ-ಕಿರಿಯರು, ಸ್ತ್ರೀ-ಪುರುಷರು ಮತ್ತು ಸ್ವತಂತ್ರ-ಗುಲಾಮ ಎಲ್ಲರ ಮೇಲೂ ಕಡ್ಡಾಯವಾಗುತ್ತದೆ. ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ರಮಝಾನಿನ ಫಿತ್ರ್ ಝಕಾತ್ ಆಗಿ ಒಂದು ಸಾಅï ಖರ್ಜೂರ ಅಥವಾ ಒಂದು ಸಾಅï ಜೋಳವನ್ನು ಪ್ರತಿಯೋರ್ವ ಮುಸ್ಲಿಮ್ ಗುಲಾಮ-ಸ್ವತಂತ್ರ, ಸ್ತ್ರೀ-ಪುರುಷ ಮತ್ತು ಕಿರಿಯ-ಹಿರಿಯರ ಮೇಲೆ ಕಡ್ಡಾಯಗೊಳಿಸಿ ದ್ದಾರೆ.” [ಸಹೀಹ್ ಬುಖಾರಿ(ರ): 1503, ಸಹೀಹ್ ಮುಸ್ಲಿಮ್(ರ): 984]
ತನ್ನ ವತಿಯಿಂದ ಮತ್ತು ತನ್ನ ಪತ್ನಿ-ಮಕ್ಕಳ ಪರವಾಗಿಯೂ ತನ್ನ ಪೆÇೀಷಣೆಯಲ್ಲಿ ರುವವರ (ಅಂದರೆ ಸ್ವಯಂ ತಮ್ಮ ಫಿತ್ರ ನೀಡಲು ಶಕ್ತರಲ್ಲದ ಹೆತ್ತವರ) ಪರ ವಾಗಿಯೂ ಫಿತ್ರ್ ಝಕಾತನ್ನು ತೆಗೆಯಬೇಕಾದುದು ಮನೆಯ ಹೊಣೆಗಾರ ಪುರು ಷನ ಬಾಧ್ಯತೆಯಾಗಿದೆ. ಮನೆಯ ನೌಕರರ ಪರವಾಗಿ ಫತ್ರ್ ತೆಗೆಯುವುದು ಮಾಲಿಕನ ಹೊಣೆಯಾಗಿರುವುದಿಲ್ಲ. ಅದು ಸ್ವತಃ ನೌಕರರ ಹೊಣೆಯಾಗಿದೆ. ಆದರೆ ಮಾಲಿಕನು ಸ್ವಯಂ ಪ್ರೇರಣೆಯಿಂದ ಮತ್ತು ನೌಕರನ ಮೇಲೆ ಅನುಕಂಪದಿಂದ ಸ್ವತಃ ಫಿತ್ರ್ ಝಕಾತ್ ನೀಡಿದರೆ ಅದು ಅನುವದನೀಯವಾಗಿದೆ. ನೌಕರನಿಗೆ ಅದರ ಮಾಹಿತಿಯನ್ನು ನೀಡಬೇಕು.
ಯಾರಾದರೂ ಮಹಿಳೆಯ ಸ್ವಂತ ವ್ಯಾಪಾರ ಅಥವಾ ಉದ್ಯೋಗದ ಸಂಬಳ ವಿದ್ದರೆ ಆಕೆಯೂ ಫಿತ್ರ್ ಝಕಾತನ್ನು ತನ್ನ ಗಳಿಕೆಯಿಂದ ನೀಡಬೇಕಾಗುತ್ತದೆ. ಅದಿಲ್ಲದಿದ್ದರೆ, ಆಕೆಯ ಹೊಣೆಯು ಆಕೆಯ ಹೆತ್ತವರಾಗಿರುತ್ತಾರೆ ಮತ್ತು ಮದು ವೆಯ ಬಳಿಕ ಆಕೆಯ ಪತಿಯಾಗಿರುತ್ತಾನೆ.
ಗರ್ಭದಲ್ಲಿರುವ ಮಕ್ಕಳ ಪರವಾಗಿ ಫಿತ್ರ್ ಝಕಾತ್ ತೆಗೆಯುವ ಅಗತ್ಯವೇನಿಲ್ಲ. ಆದರೆ ತೆಗೆದರೆ ಉತ್ತಮ. ಉಸ್ಮಾನ್(ರ) ಬಿನ್ ಅಫ್ಫಾನ್ ಹಾಗೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. [ಬಿದಾಯತುಲ್ ಮುಜ್ತಹಿದ್, ಇಬ್ನು ರುಶ್ದ್ ಕುರ್ತುಬಿ(ರ): 2/266]
2. ಫಿತ್ರ್ ಝಕಾತ್ನ ಯುಕ್ತಿ: ಫಿತ್ರ್ ಝಕಾತ್ನ ಒಂದು ಉದ್ದೇಶವು ಉಪವಾಸದಲ್ಲಿ ಆಗಿರಬಹುದಾದ ಪ್ರಮಾದಗಳಿಗೆ ಪ್ರಾಯಶ್ಚಿತ್ತವಾಗಿದೆ. ಎರಡನೆಯದಾಗಿ, ಬಡವರು ಮತ್ತು ದೀನದಲಿತರನ್ನೂ ಈದ್ನ ಸಂತೋಷದಲ್ಲಿ ಶಾಮೀಲುಗೊಳಿಸುವುದಾಗಿದೆ. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಫಿತ್ರ್ ಝಕಾತನ್ನು ಕಡ್ಡಾಯವನ್ನಾಗಿ ಮಾಡಿದ್ದಾರೆ. ಏಕೆಂದರೆ ಅದು ಉಪವಾಸದಲ್ಲಾಗಿರ ಬಹುದಾದ ನಿರರ್ಥಕ ಮತ್ತು ಕೆಟ್ಟ ವಿಚಾರ ಗಳ ಪಾಪವನ್ನು ತೊಳೆಯುತ್ತದೆ ಹಾಗೂ ಹೊಟ್ಟೆಗಿಲ್ಲದವರಿಗೆ ಆಹಾರವೊದಗಿಸುತ್ತದೆ.” [ಸುನನ್ ಅಬೂ ದಾವೂದ್(ರ): 1611, ತಸ್ಹೀಹುಲ್ ಬಾಕೀ(ರ). ಸುನನ್ ಇಬ್ನು ಮಾಜಃ(ರ): 1826]
3. ಫಿತ್ರ್ ಝಕಾತ್ ತೆಗೆಯುವ ಸಮಯ: ರಮಝಾನಿನ ಕೊನೆಯ ದಿನ ಸೂರ್ಯಾಸ್ತವಾದ ಸಮಯದಿಂದ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ. ಮತ್ತು ಈದ್ ನಮಾಝ್ಗೆ ಮುಂಚೆ ಅದನ್ನು ತೆಗೆಯುವುದು ಅಗತ್ಯವಾಗಿದೆ. ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ಫಿತ್ರ್ ಝಕಾತನ್ನು ಈದ್ ನಮಾಝ್ಗೆ ಮುಂಚೆ ನೀಡಲು ಆದೇಶಿಸಿದ್ದಾರೆ.” [ಸಹೀಹ್ ಬುಖಾರಿ(ರ): 1503, ಸಹೀಹ್ ಮುಸ್ಲಿಮ್(ರ): 986]
ಅದೇ ವೇಳೆ, ರಮಝಾನಿನ ಆರಂಭ ದಿಂದಲೇ ಫಿತ್ರ್ ಝಕಾತನ್ನು ತೆಗೆಯ ಬಹುದಾಗಿದೆ. ವಿಶೇಷವಾಗಿ ಫಿತ್ರ್ ಝಕಾ ತನ್ನು ಯಾವುದಾದರೂ ಸಂಸ್ಥೆಗೆ ನೀಡ ಲಿಕ್ಕಿದ್ದರೆ. ಏಕೆಂದರೆ ನೈಜ ಅವಶ್ಯಾರ್ಥಿ ಗಳಿಗೆ ತಲುಪಿಸುವ ವ್ಯವಸ್ಥೆ ಅದರ ಮೂಲಕ ಆಗುತ್ತದೆ.
ಏನಿದ್ದರೂ ಈದ್ ನಮಾಝ್ನ ಬಳಿಕ ಫಿತ್ರ್ ಝಕಾತ್ ತೆಗೆಯುವುದು ಸರಿಯಲ್ಲ. ಒಂದು ವೇಳೆ ಯಾವುದೇ ಸೂಕ್ತ ಕಾರಣ ವಿಲ್ಲದೆ ಈದ್ ನಮಾಝ್ನ ಬಳಿಕ ಅದನ್ನು ನೀಡಿದರೆ ಅದು ಸಾಮಾನ್ಯ ದಾನವಾಗಿ ಪರಿಗಣಿಸಲ್ಪಡುತ್ತದೆ. ಅದು ಫಿತ್ರ್ ಝಕಾತ್ ಆಗಿ ಸ್ವೀಕೃತವಾಗದು. ಅಬ್ದುಲ್ಲಾ ಬಿನ್ ಅಬ್ಬಾಸ್(ರ) ವರದಿ ಮಾಡಿರುವ ಹದೀಸ್ನಲ್ಲಿ ಹೀಗಿದೆ, “ಅದನ್ನು ಈದ್ ನಮಾಝ್ಗೆ ಮುಂಚೆ ನೀಡಿದರೆ ಅದು ಸ್ವೀಕೃತ ಝಕಾತ್ (ಅಂದರೆ ಫಿತ್ರ್ ಝಕಾತ್) ಆಗುತ್ತದೆ. ಅದನ್ನು ಈದ್ ನಮಾಝ್ನ ಬಳಿಕ ನೀಡಿದರೆ ಅದು ಇತರ ಸಾಮಾನ್ಯ ದಾನ ದಂತೆ ಪರಿಗಣಿಸಲ್ಪಡುವುದು.” [ಸುನನ್ ಅಬೂದಾವೂದ್(ರ): 1609, ತಸ್ಹೀಹುಲ್ ಬಾಕೀ(ರ). ಸುನನ್ ಇಬ್ನು ಮಾಜಃ(ರ): 1826]
4. ಫಿತ್ರ್ ಝಕಾತ್ನ ಪ್ರಮಾಣ: ಫಿತ್ರ್ ಝಕಾತ್ನ ಪ್ರಮಾಣವು ಒಂದು ಸಾಅï ಆಗಿದೆ. ಪ್ರಸಕ್ತ ಅಳತೆಯ ಮಾಪನದಲ್ಲಿ ಸುಮಾರು ಎರಡೂ ವರೆ ಕಿಲೋ ಗ್ರಾಂ ಆಗುತ್ತದೆ. ಫಿತ್ರ್ ಝಕಾತನ್ನು ಆಯಾ ಪ್ರದೇಶದ ಸಾಮಾನ್ಯ ಬಳಕೆಯ ಹಲಾಲ್ ಆಹಾರದ ರೂಪದಲ್ಲಿ ನೀಡಬೇಕು. ಉದಾ: ಖರ್ಜೂರ, ಜೋಳ, ಗೋಧಿ, ಅಕ್ಕಿ, ಗೋಧಿಹಿಟ್ಟು, ಬೇಳೆ ಇತ್ಯಾದಿ.
5. ಫಿತ್ರ್ ಝಕಾತನ್ನು ನಗದು ರೂಪದಲ್ಲಿ ನೀಡುವುದು: ಇಮಾಮ್ ಮಾಲಿಕ್(ರ), ಇಮಾಮ್ ಶಾಫಿಈ(ರ) ಮತ್ತು ಇಮಾಮ್ ಅಹ್ಮದ್ರ(ರ) ಅಭಿಪ್ರಾಯದಲ್ಲಿ ಫಿತ್ರ್ ಝಕಾತನ್ನು ನಗದು ರೂಪದಲ್ಲಿ ನೀಡಲಾಗದು. ಏಕೆಂದರೆ ಹದೀಸ್ನಲ್ಲಿ ಕೆಲವು ವಿಷಯಗಳನ್ನು ಸುವ್ಯಕ್ತವಾಗಿ ತಿಳಿಸ ಲಾಗಿರುತ್ತದೆ. ಆದ್ದರಿಂದ ಅವುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ತದ್ವಿರುದ್ಧವಾಗಿ ಇಮಾಮ್ ಅಬೂ ಹನೀಫಾ(ರ) ಮತ್ತವರ ಶಿಷ್ಯರು, ಇಮಾಮ್ ಸೌರೀ(ರ), ಉಮರ್ ಬಿನ್ ಅಬ್ದುಲ್ ಅಝೀಝ್(ರ), ಹಸನ್ ಬಸ್ರೀ(ರ) ಮತ್ತು ಅತಾಅï(ರ) ಮತ್ತಿತರರ ಪ್ರಕಾರ ನಗದು ರೂಪದಲ್ಲಿಯೂ ನೀಡ ಬಹುದಾಗಿದೆ. ಅವರಿಗೆ “ಈ ದಿನದಂದು (ಬಡವರನ್ನು) ಭಿಕ್ಷೆ ಬೇಡುವುದರಿಂದ ನಿರಪೇಕ್ಷರನ್ನಾಗಿಸಿರಿ” ಎಂಬ ಪ್ರವಾದಿ ವಚನವೇ ಆಧಾರವಾಗಿದೆ. ಈ ಹದೀಸ್ ನಲ್ಲಿ ಪ್ರಸ್ತುತ ಆದೇಶದ ಬದಲಿ ವ್ಯವಸ್ಥೆ ಯನ್ನು ಉಲ್ಲೇಖಿಸಲಾಗಿದೆ. ಅದೆಂದರೆ, ಈದ್ನಂದು ಬಡವರು ಮತ್ತು ನಿರ್ಗತಿಕ ರನ್ನು ಜನರ ಮುಂದೆ ಕೈಯೊಡ್ಡುವುದ ರಿಂದ ತಡೆಯುವುದಾಗಿದೆ. ಹಾಗೂ ಈ ಉದ್ದೇಶವು ನಗದು ರೂಪದಲ್ಲಿ ಫಿತ್ರ್ ಝಕಾತ್ ನೀಡುವುದರ ಮೂಲಕವೂ ಸಾಕಾರಗೊಳ್ಳುತ್ತದೆ. ಮಾತ್ರವಲ್ಲ, ಈ ಉದ್ದೇಶವನ್ನು ಈಡೇರಿಸಲು ಪ್ರಸ್ತುತ ವಿಧಾನವು ಹೆಚ್ಚು ಸೂಕ್ತವಾಗಿ ಕಾಣುತ್ತದೆ. ಏಕೆಂದರೆ, ಈ ರೂಪದಲ್ಲಿ ಬಡವರು ತಮ್ಮ ಆದ್ಯತೆಯಾಧಾರದಲ್ಲಿ ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬಹುದು. ಅಲ್ಲದೆ, ಎಲ್ಲೆಡೆಯಿಂದಲೂ ಅವರಿಗೆ ಆಹಾರ ಧಾನ್ಯವೇ ದೊರೆತರೆ ಅವರ ಇತರ ಅಗತ್ಯಗಳು ಈಡೇರದೆ ಹೋಗಬಹುದು. ಹಾಗಾಗಿ ಹದೀಸ್ನ ಆದೇಶದಲ್ಲಿ ಬದಲಿ ವ್ಯವಸ್ಥೆಯ ಸೂಚನೆ ಇರುವಾಗ ಅದನ್ನು ನಗದು ರೂಪದಲ್ಲಿ ನೀಡುವುದರ ಕುರಿತು ನಿಷೇಧಾತ್ಮಕ ಧೋರಣೆ ಇರಿಸುವುದು ಸರಿಯಲ್ಲ.
6. ಫಿತ್ರ್ ಝಕಾತನ್ನು ಬೇರೆ ಪ್ರದೇಶ ಗಳಿಗೆ ವರ್ಗಾಯಿಸುವುದು: ಒಂದು ವೇಳೆ ಇತರ ಪ್ರದೇಶದ ಜನರು ಹೆಚ್ಚು ಅವಶ್ಯಾರ್ಥಿಗಳಿದ್ದರೆ, ಅಲ್ಲಿಗೆ ಫಿತ್ರ್ ಝಕಾತನ್ನು ವರ್ಗಾಯಿಸಬಹುದಾಗಿದೆ. ಅಲ್ಲದೆ ಫಿತ್ರ್ ಝಕಾತ್ಗೆ ಅರ್ಹರಾದ ನಿಕಟವರ್ತಿಗಳು ಬೇರೆ ಪ್ರದೇಶದಲ್ಲಿದ್ದರೆ ಮತ್ತು ಅವರು ಅದಕ್ಕೆ ಹೆಚ್ಚು ಅರ್ಹರಾಗಿದ್ದರೆ, ಅವರ ಬಳಿಗೆ ಅದನ್ನು ತಲುಪಿಸಬಹುದಾಗಿದೆ. ಅದೇ ರೀತಿ ಫಿತ್ರ್ ಝಕಾತನ್ನು ಇತರ ಪ್ರದೇಶಗಳಿಗೆ ತಲುಪಿಸುವುದರಿಂದ ಹೆಚ್ಚಿನ ಮುಸ್ಲಿಮರಿಗೆ ಪ್ರಯೋಜನವಾಗುವುದಿದ್ದರೆ, ಹಾಗೆ ಮಾಡಬಹುದಾಗಿದೆ.
ಈದ್ನಂದು ಆಗಬಹುದಾದ ತಪ್ಪು ಗಳು ಮತ್ತು ನವೀನಾಚಾರಗಳು:
ದುರದೃಷ್ಟವಶಾತ್ ಹೆಚ್ಚಿನ ಮುಸ್ಲಿಮರು ಈದ್ ಆಗಮಿಸುತ್ತಲೇ ಶರಈ ಆದೇಶ ಗಳನ್ನು ಕಡೆಗಣಿಸಿ ಪಾಪಕಾರ್ಯ ಮತ್ತು ನವೀನಾಚಾರಗಳಲ್ಲಿ ತೊಡಗುತ್ತಾರೆ. ಆದ್ದ ರಿಂದ ಈ ಸಂದರ್ಭದಲ್ಲಿ ಆಗಬಹುದಾದ ಕೆಲವು ದುಷ್ಕøತ್ಯ ಮತ್ತು ನವೀನಾಚಾರಗಳ ಬಗ್ಗೆ ಎಚ್ಚರಿಸುವುದು ಅಗತ್ಯವೆಂದು ತೋರುತ್ತದೆ.
1. ಈದ್ನಂದು ಗೋರಿ ಸಂದರ್ಶನ: ಹೆಚ್ಚಿನವರು ಈದ್ಗಾಹ್ನಿಂದ ಹೊರಟು ಮೊತ್ತಮೊದಲು ಕಬರಸ್ಥಾನಕ್ಕೆ ಹೋಗುವ ರೂಢಿಯನ್ನು ಮಾಡಿರುತ್ತಾರೆ. ಈ ಕೃತ್ಯಕ್ಕೆ ಯಾವುದೇ ಆಧಾರವಿಲ್ಲ. ಧರ್ಮದ ಭಾಗವೆಂದು ಭಾವಿಸಲಾಗುವ ಪ್ರತಿ ಯೊಂದು ನೂತನ ವಿಷಯವು ಬಿದ್ಅತ್ ಆಗಿದೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿದ್ದಾರೆ, “ಯಾರಾದರೂ ನಮ್ಮ ಧರ್ಮದಲ್ಲಿ ಇಲ್ಲದಂತಹ ವಿಷಯವನ್ನು ಸ್ವತಃ ಸೇರಿಸಿದರೆ, ಅದು ತಿರಸ್ಕøತವಾಗಿದೆ.” [ಸಹೀಹ್ ಬುಖಾರಿ(ರ): 2697, ಸಹೀಹ್ ಮುಸ್ಲಿಮ್(ರ): 4589]
2. ಮಹಿಳೆಯರ ಪರ್ದಾರಾಹಿತ್ಯ: ಈ ಸಂದರ್ಭದಲ್ಲಿ ಮಹಿಳೆಯರು ಪರ್ದಾ ರಹಿತರಾಗಿ ಮಾರುಕಟ್ಟೆ, ಬೀದಿ ಮತ್ತು ಪಾರ್ಕು ಇತ್ಯಾದಿಗಳಲ್ಲಿ ತಿರುಗಾಡುತ್ತಾರೆ. ಇದು ಶರೀಅತ್ ಪ್ರಕಾರ ನಿಷಿದ್ಧವಾಗಿದೆ. ಅಲ್ಲಾಹ್ ಹೇಳುತ್ತಾನೆ, “ನಿಮ್ಮ ಮನೆಗಳಲ್ಲೇ ಇದ್ದುಕೊಳ್ಳಿರಿ. ಗತ ಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನ ಮಾಡುತ್ತ ತಿರುಗಾಡಬೇಡಿರಿ. ನಮಾಝನ್ನು ಸಂಸ್ಥಾಪಿ ಸಿರಿ, ಝಕಾತ್ ಕೊಡಿರಿ, ಅಲ್ಲಾಹ್ ಮತ್ತು ರಸೂಲರನ್ನು ಅನುಸರಿಸಿರಿ.” (ಅಲ್ ಅಹ್ಝಾಬ್: 33)
3. ಮುಹ್ರಿಮ್ ಅಲ್ಲದ ಪರಸ್ತ್ರೀಯರೊಡನೆ ಹಸ್ತಲಾಘವ: ನಮ್ಮ ಸಮಾಜದಲ್ಲಿ ಈ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿದ್ದಾರೆ, “ಧರ್ಮಸಮ್ಮತವಲ್ಲದ ಮಹಿಳೆಯನ್ನು ಸ್ಪರ್ಶಿಸುವುದಕ್ಕಿಂತ ನಿಮ್ಮ ತಲೆಗೆ ಲೋಹದ ಮೊಳೆಯನ್ನು ಹೊಡೆಸಿಕೊಳ್ಳುವುದು ಉತ್ತಮವಾಗಿದೆ.” [ಮುಅïಜಮ್ ಕಬೀರ್ ತಬ್ರಾನೀ(ರ): 20/211, ತಸ್ಹೀಹುಲ್ ಬಾಕೀ(ರ)]
4. ನಮಾಝ್ ತೊರೆಯುವುದು: ಹೆಚ್ಚಿನ ಮಂದಿ ರಮಝಾನ್ ಮುಗಿಯುತ್ತಲೇ ಈದ್ನಂದೇ ಯಾವುದೇ ಸೂಕ್ತ ಕಾರಣವಿಲ್ಲದೆ ನಮಾಝನ್ನು ತೊರೆಯುತ್ತಾರೆ ಮತ್ತು ಈದ್ ನಮಾಝ್ನ ಬಳಿಕ ಇಡೀ ದಿನ ಯಾವುದೇ ನಮಾಝನ್ನು ನಿರ್ವಹಿಸುವುದಿಲ್ಲ. ದುರದೃಷ್ಟವಶಾತ್ ಕೆಲವರಲ್ಲಿ ಈ ಗುಣವು ಮುಂದಿನ ರಮಝಾನ್ ವರೆಗೂ ಜಾರಿಯಲ್ಲಿರುತ್ತದೆ. ಮತ್ತೆ ರಮಝಾನ್ ಆಗಮಿಸುತ್ತಲೇ ಮಳೆಹಾತೆಗಳಂತೆ ಪುನಃ ನಮಾಝ್ ಮತ್ತು ಉಪವಾಸ ವ್ರತಗಳನ್ನು ಅನುಷ್ಠಾನಿಸಲು ತೊಡಗುತ್ತಾರೆ. ರಮಝಾನ್ ಮುಗಿಯುತ್ತಲೇ ತಮ್ಮ ಹಿಂದಿನ ವರ್ತನೆಯನ್ನು ಪುನರಾವರ್ತಿಸತೊಡಗುತ್ತಾರೆ. ಈ ವರ್ತನೆಯನ್ನು ತಿದ್ದಬೇಕಾದ ಅಗತ್ಯ ಬಹಳವಿದೆ. ಏಕೆಂದರೆ ಧರ್ಮದಲ್ಲಿ ನಮಾಝ್ಗೆ ಇತರೆಲ್ಲ ವಿಷಯಗಳಿಗಿಂತ ಹೆಚ್ಚು ಮಹತ್ವವಿದೆ. ಇದುವೇ ಇಸ್ಲಾಮ್ ಮತ್ತು ಕುಫ್ರನ್ನು ಪ್ರತ್ಯೇಕಿಸುವ ಸಾಧನವಾಗಿದೆ.
5. ಫಕೀರರು ಮತ್ತು ಮಿಸ್ಕೀನರ ಜತೆ ಕಠೋರ ಧೋರಣೆ: ಹೆಚ್ಚಿನ ಮಂದಿ ಸಂತೋಷಾಚರಣೆಯಲ್ಲಿ ಎಷ್ಟು ತಲ್ಲೀನರಾಗಿಬಿಡುತ್ತಾರೆಂದರೆ, ಅವರಲ್ಲಿ ದೇವಾನುಗ್ರಹಗಳಿಗೆ ಕೃತಜ್ಞತೆ ಮತ್ತು ಬಡವರ ಬಗ್ಗೆ ಮೃದು ಧೋರಣೆ ಹಾಗೂ ಸಹಾನುಭೂತಿಯ ಭಾವನೆಯೇ ಸತ್ತು ಹೋಗಿರುತ್ತದೆ. ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿರುವರು, “ನಿಮ್ಮ ಪೈಕಿ ತನಗಾಗಿ ಇಷ್ಟಪಡುವುದನ್ನು ತನ್ನ ದೀನೀ ಸಹೋದರನಿಗೂ ಇಷ್ಟಪಡದ ಹೊರತು ವಿಶ್ವಾಸಿಯಾಗಲಾರನು.” [ಸಹೀಹ್ ಬುಖಾರಿ(ರ): 13, ಸಹೀಹ್ ಮುಸ್ಲಿಮ್(ರ): 179]
ಈದ್ನಂದು ಸತ್ಯವಿಶ್ವಾಸಿಗಳ ವ್ಯವಹಾರ:
ಈದ್ ಸಂತೋಷದ ದಿನವಾಗಿದೆ. ಜನರು ಉತ್ತಮ ವಸ್ತ್ರ ಧರಿಸುತ್ತಾರೆ ಮತ್ತು ಎಲ್ಲ ರೀತಿಯ ಸಂತೋಷವನ್ನು ವ್ಯಕ್ತಪಡಿ ಸುತ್ತಾರೆ. ಈದ್ ವಸ್ತುತಃ ರಮಝಾನ್ ಮಾಸದ ಅನುಗ್ರಹ ಪಡೆಯುವ ಅವಕಾಶ ದೊರೆತುದಕ್ಕಾಗಿ ಕೃತಜ್ಞತೆ ಅರ್ಪಿಸುವ ದಿನವಾಗಿದೆ. ಆದ್ದರಿಂದ ರಮಝಾನ್ನಿಂದ ಪ್ರಯೋಜನ ಪಡೆ ದವನೇ ಈದ್ನ ಸಂತೋಷಕ್ಕೆ ಅರ್ಹನಾಗಿದ್ದಾನೆ. ಅದರೊಂದಿಗೇ ಈದ್ ಪಾರಿತೋಷಕಗಳನ್ನು ವಿತರಿಸುವ ದಿನವಾಗಿದೆ. ರಮ ಝಾನಿನ ಉಪವಾಸ ವ್ರತವನ್ನು ಈಮಾನ್ ಮತ್ತು ಸದುದ್ದೇಶದೊಂದಿಗೆ ಆಚರಿಸಿದ್ದರೆ ಅದಕ್ಕೆ ಪ್ರತಿಫಲವು ಮಹತ್ಯಶಸ್ಸಾ ಗಿರುವುದು. ಅಂತೆಯೇ ಉಪವಾಸ ವ್ರತಾಚರಿಸದವನಿಗೆ ಅಥವಾ ಅದರಲ್ಲಿ ಆಲಸ್ಯ ಮತ್ತು ಕೊರತೆಯನ್ನುಂಟು ಮಾಡಿದವನಿಗೆ ವೈಫಲ್ಯ ಮತ್ತು ದೌರ್ಭಾಗ್ಯವೇ ಪ್ರತಿಫಲವಾಗಿರುವುದು. ಆದ್ದ ರಿಂದಲೇ ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ಈದ್ನಂದು ಜನರು ಈದ್ಗಾಹ್ನಿಂದ ಮರಳುವಾಗ ಅವರಲ್ಲಿ ಕೆಲವರು ಪ್ರತಿಫಲಾರ್ಹರಿರುವರು. ಅವರ ಪ್ರಯತ್ನಗಳೆಲ್ಲವೂ ಕೃತಜ್ಞಾರ್ಹ ಮತ್ತು ಪ್ರಶಂಸಾರ್ಹವಾಗಿರುತ್ತವೆ. ಇನ್ನು ಕೆಲವರನ್ನು ದೇವಕೃಪೆ ಯಿಂದ ದೂರವಿರಿಸಲಾಗುತ್ತದೆ. ಏಕೆಂದರೆ ಅವರ ಪಾಪಗಳು ಅವರನ್ನು ದೇವಾನುಗ್ರಹದಿಂದ ವಂಚಿತಗೊಳಿಸಿಬಿಟ್ಟಿರುತ್ತದೆ.”
[ಇಬ್ನು ಅಬೀ ಶೈಬಾ(ರ): 11822]
ಸಂತೋಷ ಪ್ರಕಟಿಸುವಾಗ ಪಾಪಕಾರ್ಯವನ್ನೆಸಗುವುದು ಮತ್ತು ನೈತಿಕ ಮೇರೆಗಳನ್ನು ಮೀರುವುದು ಓರ್ವ ಸತ್ಯವಿಶ್ವಾಸಿಯ ಮಟ್ಟಿಗೆ ಭೂಷಣವಲ್ಲ. ಮುಸ್ಲಿಮರ ಈದ್ಗಳು ಧರ್ಮಶಾಸ್ತ್ರ ಮತ್ತು ನೈತಿಕ ಮೇರೆ ಹಾಗೂ ಶರತ್ತುಗಳ ಪಾಲನೆಯೊಂದಿಗಿ ರಬೇಕು. ಈದ್ ಎಂಬುದು ಸಂಗೀತ-ನೃತ್ಯ, ವಿಹಾರ ಮತ್ತು ಆಟ-ವಿನೋದದ ಹೆಸರಲ್ಲ. ಬದಲಾಗಿ ನೈಜ ಆರಾಧ್ಯನ ಅನು ಗ್ರಹಗಳಿಗೆ ಕೃತಜ್ಞತೆ ಅರ್ಪಿಸುವ ದಿನವಾಗಿದೆ. ಇಸ್ಲಾಮೀ ಈದ್ ಗಳ ಈ ವಿಶೇಷತೆಯೇ ಮಿಥ್ಯ ಧರ್ಮಗಳ ಹಬ್ಬ ಮತ್ತು ಜಾತ್ರೆ ಗಳಿಂದ ಪ್ರತ್ಯೇಕಿಸುತ್ತದೆ. ಇದರಲ್ಲಿ ವಿಶ್ವಾಸಪರವಾದ ಸಂತೋಷಗಳು ಮೇಳೈಸಿರುತ್ತವೆ, ಶರೀಅತ್ ಮತ್ತು ನೈತಿಕ ನಿಯಮ-ಮೇರೆಗಳ ಪಾಲನೆಯಾಗುತ್ತದೆ, ಗೌರವ-ಮಾನ್ಯತೆಯ ವಾತಾವರಣ ಇರುತ್ತದೆ. ಓರ್ವ ಪ್ರಜ್ಞಾವಂತ ಸಮುದಾಯವು ಇಂತಹ ಸಂತೋಷದ ಸಂದರ್ಭದಲ್ಲಿ ತನ್ನ ಸಂಕಷ್ಟ ಮತ್ತು ಕಷ್ಟಪಾಡುಗಳನ್ನು ಸಂಪೂರ್ಣ ಕಡೆಗಣಿಸಬಾರದು. ಇಸ್ಲಾಮೀ ಈದ್ಗಳ ಒಂದು ವಿಶೇಷತೆ ಏನೆಂದರೆ ಅವುಗಳಲ್ಲಿ ಸಮಾಜದ ಹಿಂದುಳಿದ ವರ್ಗಗಳಾದ ಬಡವರು, ನಿರ್ಗತಿಕರು, ಅನಾಥರು ಮತ್ತು ವಿಧವೆಯರ ಯೋಗಕ್ಷೇಮವನ್ನು ವಿಚಾರಿಸಲಾಗುತ್ತದೆ. ಸಮಾಜದ ಹೆಚ್ಚೆಚ್ಚು ಮಂದಿಯೂ ಈ ಸಂತೋಷದ ಸಂದರ್ಭದಲ್ಲಿ ತಮ್ಮ ಮನೆ-ಮನಗಳನ್ನು ಆನಂದದಿಂದ ತುಂಬಿಕೊಳ್ಳುವಂತಾಗಲು ನಾವು ಕಾರಣಕರ್ತರಾದರೆ, ಅದುವೇ ಈದ್ನ ನೈಜ ಸಂತೋಷವಾಗಿದೆ.
ಪ್ರತಿಯೋರ್ವರೂ ಈದ್ನ ದಿನ ಸಹಾನುಭೂತಿ ತೋರಲು, ನೆರೆಕರೆ ಮತ್ತು ಸಂಬಂಧಿಕರನ್ನು ಸಂದರ್ಶಿಸಲು, ಜನರ ಹೃದಯಗಳಲ್ಲಿರಬಹುದಾದ ದ್ವೇಷ ಮತ್ತು ಅಸೂಯೆಯ ಭಾವನೆಗಳನ್ನು ನೀಗಿಸಲು ಹಾಗೂ ಪರಸ್ಪರ ಆದರಪೂರ್ವಕ ಭೇಟಿಯಾಗಲು ಪ್ರಯತ್ನಿಸಬೇಕು. ಬಡವರು ಮತ್ತು ನಿರ್ಗತಿಕರ ಬಗ್ಗೆ ಕಾಳಜಿಯನ್ನು ಹೊಂದಬೇಕು, ಅವರೊಡನೆ ಸದ್ವರ್ತನೆ ತೋರಬೇಕು ಮತ್ತು ಅವರನ್ನೂ ಈದ್ನ ಸಂತೋಷದಲ್ಲಿ ಭಾಗಿಗೊಳಿಸಬೇಕು. ಅಲ್ಲಾಹ್ ನಮ್ಮ ಆರಾಧನೆಗಳನ್ನು ಸ್ವೀಕರಿಸಲಿ- ಆಮೀನ್.
ಕೃಪೆ; ಸನ್ಮಾರ್ಗ ವಾರಪತ್ರಿಕೆ