27 Sept 2018

ಉಮರ್ (ರ)ರವರ ಕಾಲದಲ್ಲಿ ಮಳೆಗಾಗಿ ಇಸ್ತಿಗಾಸ ನಡೆಸಿದ ಹದೀಸಿನ ನಿಜಸ್ಥಿತಿ ಏನು?

ಉಮರ್ (ರ)ರವರ ಕಾಲದಲ್ಲಿ ಮಳೆಗಾಗಿ ಇಸ್ತಿಗಾಸ ನಡೆಸಿದ ಹದೀಸಿನ ನಿಜಸ್ಥಿತಿ ಏನು?

ಮರಣ ಹೊಂದಿದ ಅಂಬಿಯಾ ಅವುಲಿಯಾಗಳೊಂದಿಗೆ ಸಹಾಯ ಯಾಚಿಸಬಹುದು ಎಂದು ವಾದಿಸುವ ಪುರೋಹಿತರು ಅವರ ವಾದಕ್ಕೆ  ಪುರಾವೆಯಾಗಿ ತೋರಿಸುವ ಒಂದು ವಾದವಾಗಿದೆ ಉಮರ್ (ರ)ರವರ ಕಾಲದಲ್ಲಿ ಓರ್ವ ಅಜ್ಞಾತ ವ್ಯಕ್ತಿ ಮುಹಮ್ಮದ್ﷺ ರವರ ಕಬರಿನ ಬಳಿ ಬಂದು ಮಳೆಗಾಗಿ ಮುಹಮ್ಮದ್ﷺ ರವರೊಂದಿಗೆ ಬೇಡಿದ ಘಟನೆ...

ಈ ವರದಿಯ ವಾಸ್ತವವೇನೆಂದು ಸತ್ಯಾನ್ವೇಷಿಗಳು ಸವಿವರವಾಗಿ ಅರಿಯುವ ಸಲುವಾಗಿ ಇಲ್ಲಿ ವ್ಯಕ್ತಪಡಿಸಲು ಇಚ್ಛಿಸುತ್ತೇನೆ.

ಸತ್ಯವನ್ನು ಅರಿಯುವ ಒಂದು ಮನಸ್ಸು ಅವರಿಗೆ ನೀಡಿ ಅನುಗ್ರಹಿಸಲಿ .. ಆಮೀನ್

ಇಬ್ನ್ ಹಜರ್ ಅಸ್ಖಲಾನಿ(ರ)ರವರ ಫತ್'ಹುಲ್ ಬಾರಿಯಲ್ಲಾಗಿದೆ ಈ ಘಟನೆ ವರದಿ ಮಾಡಿರುವುದು.

ಅದು ಹೀಗಿದೆ:

وَرَوَى ابْنُ أَبِي شَيْبَةَ بِإِسْنَادٍ صَحِيحٍ مِنْ رِوَايَةِ أَبِي صَالِحٍ السَّمَّانِ عَنْ مَالِكٍ الدَّارِيِّ - وَكَانَ خَازِنُ عُمَرَ - قَالَ : أَصَابَ النَّاسَ قَحْطٌ فِي زَمَنِ عُمَرَ فَجَاءَ رَجُلٌ إِلَى قَبْرِ النَّبِيِّ صَلَّى اللَّهُ عَلَيْهِ وَسَلَّمَ فَقَالَ : يَا رَسُولَ اللَّهِ اسْتَسْقِ لِأُمَّتِكَ فَإِنَّهُمْ قَدْ هَلَكُوا ، فَأَتَى الرَّجُلَ فِي الْمَنَامِ فَقِيلَ لَهُ : ائْتِ عُمَرَ " الْحَدِيثَ . وَقَدْ رَوَى سَيْفٌ فِي الْفُتُوحِ أَنَّ الَّذِي رَأَى الْمَنَامَ الْمَذْكُورَ هُوَ بِلَالُ بْنُ الْحَارِثِ الْمُزَنِيُّ أَحَدُ الصَّحَابَةِ


 :- "ಇಮಾಂ ಇಬ್ನ್ ಅಬೀ ಶೈಬರವರಿಂದ ವರದಿ: ಸ್ವಾಲಿಹ್ ಸಮ್ಮಾನ್ ರಿಂದ ಮಾಲಿಕ್ ದ್ದಾರ್ ರವರೆಗೆ ಇರುವ ಸನದ್ ಸ್ವಹೀಹಾದ ವರದಿ:

 ಅವರು ಹೇಳುತ್ತಾರೆ : ಉಮರ್(ರ) ರವರ ಕಾಲದಲ್ಲಿ ಜಲ ಕ್ಷಾಮದ ಸಂದರ್ಭದಲ್ಲಿ ಓರ್ವ ಅಜ್ಞಾತ ವ್ಯಕ್ತಿ ಬಂದು ಮುಹಮ್ಮದ್ﷺ ರವರ ಕಬರಿನ ಬಳಿ ಬಂದು ಹೀಗೆ ಹೇಳಿದ: ಯಾ ರಸೂಲುಲ್ಲಾಹ್! ಮಳೆಯಿಲ್ಲದೆ ನಿಮ್ಮ ಸಮುದಾಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಅವರಿಗಾಗಿ ಮಳೆ ಭರಿಸಲು ಪ್ರಾರ್ಥಿಸಿರಿ ಎಂದು ಹೇಳಿದ ,

  ಮುಹಮ್ಮದ್ﷺ ರವರು ಕನಸಿನಲ್ಲಿ ಬಂದು ಅವರೊಂದಿಗೆ ಹೇಳಿದರು: ನೀನು ಉಮರಿನ ಹತ್ತಿರ ಹೋಗಬೇಕು ಎಂದು..


ಇದನ್ನು ಸೈಫ್ ಎಂಬವರು ತನ್ನ "ಫುತೂಹ್ " ಎಂಬ ಗ್ರಂಥದಲ್ಲಿ
 ಕನಸು ಕಂಡ ವ್ಯಕ್ತಿ  ಸ್ವಹಾಬಿಗಳಲ್ಲಿ ಓರ್ವರಾದ ಬಿಲಾಲ್ ಬಿನ್ ಹಾರಿಸ್ ಮುಝ್ನಿ (ರ)ರವರಾಗಿದ್ದಾರೆ ಎಂದು ಹೇಳಿದ್ದಾರೆ.

 (ಫತ್'ಹುಲ್ ಬಾರಿ‐2:496)


ಮೇಲಿನ ಈ ವರದಿಯ ಬಗ್ಗೆ ಹೇಳುವುದಾದರೆ ಇದು ಪೂರ್ಣವಾಗಿ ಸ್ವಹೀಹಲ್ಲ ಎಂದಾಗಿದೆ.


ಅಬೂ ಸ್ವಾಲಿಹ್ ಸಮ್ಮಾನ್ (ರ)ರವರಿಂದ ಮಾಲಿಕ್ ದ್ದಾರ್ ವರೆಗೆ ಇರುವ ವರದಿ ಮಾತ್ರ ಸ್ವಹೀಹಾಗಿದೆ ಎಂದಾಗಿದೆ ಈ ವರದಿಯಿಂದ ನಮಗೆ ವ್ಯಕ್ತವಾಗುವುದು.

ಹಾಗಾದರೆ ಉಳಿದ ವರದಿಗಾರರು ?

ಈ ಪ್ರಶ್ನೆ ನಮಗೆ ಮೇಲಿನ ಹದೀಸಿನ ವರದಿ ನೋಡುವಾಗ ಉಧ್ಬವಿಸುತ್ತದೆ. ಆದ್ದರಿಂದ ಇದು ಪೂರ್ಣವಾಗಿ ಸ್ವಹೀಹಲ್ಲ..


ಇದಕ್ಕೆ ಕಾರಣವೇನು?


ಈ ಹದೀಸ್ ಪೂರ್ಣವಾಗಿ ಸ್ವಹೀಹಲ್ಲ ಸಲಫಿಗಳ ವತಿಯಿಂದ ಹೇಳುವುದೆಂದು ಭಾವಿಸಬೇಡಿ.

ಈ ಕನಸಿನ ಕಥೆಯಲ್ಲಿ ಅಜ್ಞಾತ ವ್ಯಕ್ತಿಯೊಬ್ಬರು  ಮುಹಮ್ಮದ್ﷺ ರವರ ಕಬರಿನ ಬಳಿ ಬಂದು ಬೇಡಿದರು, ನಂತರ ಅವರು ಕನಸು ಕಾಣುತ್ತಾರೆ.

ಕನಸು ಕಂಡ ವ್ಯಕ್ತಿಯೇ ಹೇಳಬೇಕು ನಾನು ಕನಸು ಕಂಡೆ ಎಂದು. ಇದನ್ನು ವರದಿ ಮಾಡಿದ ಮಾಲಿಕ್ ದ್ದಾರ್ ಘಟನೆಯ ಸಂದರ್ಭದಲ್ಲಿ ಇಲ್ಲ. ಇನ್ನು ಆ ಘಟನೆಯನ್ನು ಮಾಲಿಕ್ ದ್ದಾರ್ ರವರಿಗೆ ತಲುಪಿಸಿದ ವ್ಯಕ್ತಿ ಅಜ್ಞಾತರಾಗಿದ್ದಾರೆ. (ಅಸ್ಪಷ್ಟವಾಗಿದೆ).

ಮಾಲಿಕ್ ದ್ದಾರ್ ರವರು ಉಲ್ಲೇಖಿಸುವ ವರದಿಯಲ್ಲಿ ಅದು ಅವರು ಕಂಡದ್ದು ಅಥವಾ ಕೇಳಿದ್ದು ಎಂದು ಹೇಳುವುದಿಲ್ಲ.

ಇನ್ನು ಆ ಘಟನೆ ಸತ್ಯವೆಂದು ನಂಬಿದರೂ ಕೂಡ ಆ ಕನಸು ಕಂಡ ವ್ಯಕ್ತಿ ಅಜ್ಞಾತರಾಗಿದ್ದಾರೆ. ಇದು ಸ್ಪಷ್ಟವಾಗಿದೆ.

ಆ ಕಾರಣದಿಂದ ಅದರ ಸನದ್ ಮುರಿದು ಬಿದ್ದಿದೆ.

ಆ ಕಾರಣದಿಂದ ಆಗಿರಬಹುದು ವರದಿ ಮಾಡುವಾಗ

" ( بِإِسْنَادٍ صَحِيحٍ مِنْ رِوَايَةِ أَبِي صَالِحٍ السَّمَّانِ )  .


ಅಬೀ ಸ್ವಾಲಿಹ್ ಸಮ್ಮಾನ್ ರವರೆಗೆ ಇರುವ ಸನದ್ ಸ್ವಹೀಹ್ ಎಂದು ಹೇಳಿದ್ದು.

(note the point )



ಆದರೆ ಉಸೂಲುಲ್ ಹದೀಸಿನ ಪ್ರಕಾರ ಇಂತಹ ಪದ ಪ್ರಯೋಗ ಬಂದರೆ ಅದರ ಉದ್ದೇಶದ ಬಗ್ಗೆ ಗೊತ್ತಿಲ್ಲದೆಯೋ ? ಅಥವಾ ಗೊತ್ತಿದೆಯೋ ಅಥವಾ ಜನರನ್ನು ವಂಚಿಸುವ ಸಲುವಾಗಿಯೋ ಈ ಹದೀಸಿನ ಬಗ್ಗೆ ಪುರೋಹಿತರು (ಮುಸ್ಲಿಯಾರ್'ಗಳು) ಜನರೆಡೆಯಲ್ಲಿ ತಪ್ಪು ಕಲ್ಪನೆಯಲ್ಲಿ ಸಿಲುಕಿಸುತ್ತಿದ್ದಾರೆ.  (الله اعلم)  

ನಮ್ಮ ಉಸ್ತಾದರಿಗೆ ಬಹುಶಃ ಮಾಲ ,ಮೌಲಿದ್ ,ಕುತ್ತು ರಾತೀಬ್, ಕುತುಬಿಯ್ಯತ್ ಇದರ ಹಿಂದೆ ಬಿದ್ದಿರುವುದರಿಂದ ಉಸೂಲ್ ಅಲ್ ಹದೀಸ್ ಕಲಿಯಲು ಸಮಯ ಸಿಕ್ಕಿರಲಿಕ್ಕಿಲ್ಲ ಎಂದು ಅನಿಸುತ್ತದೆ.

ಏನಿದ್ದರೂ  “ಇಸ್ನಾದಿನ್ ಸ್ವಹೀಹಿನ್ ” ಎಂದು ಹೇಳಿದರೆ ಅದರ ಉದ್ದೇಶವನ್ನು ಕೂಡ ಉದೇ ಹಜರ್ ಅಸ್ಖಲಾನಿ (ರ)ರವರು ವಿವರಿಸುತ್ತಾರೆ.

 

قلت: لا نسلم أنَّ عدم العلّة هو الأصل إذ لو كان هو الأصل ما اشترط عدمه في شرط الصحيح فإذا كان قولهم: صحيح الإسناد يحتمل أن يكون مع وجود العلّة لم يتحقق عدم العلّة فكيف يحكم له بالصحة.

( النكت علي ابن الصلاح - 1 / 474 )

ಒಬ್ಬರು ವರದಿ ಮಾಡಿದ ಹದೀಸಿನಲ್ಲಿ " ಇಸ್ನಾದಿನ್ ಸ್ವಹೀಹ್ " ಎಂದು ಹೇಳಿದ ಬಳಿಕ ಅದರಲ್ಲಿ ನೂನ್ಯತೆ ಇದೆ ಎಂದು ಹೇಳದಿದ್ದರೆ ಅದು ಸ್ವಹೀಹಾಗಿದೆ ಎಂದು ಇಬ್ನ್ ಸಲಾಂ ಹೇಳಿದನ್ನು ನಾನು ಅಂಗೀಕರಿಸುವುದಿಲ್ಲ.

ಇಲ್ಲತ್ (ನೂನ್ಯತೆ) ಅಲ್ಲಿ ಹೇಳದಿರುವುದು ಅದರ ಮೂಲಭೂತ ವಾದ ವಾಗಿರುತ್ತಿದ್ದರೆ  ಸ್ವಹೀಹಿನ ಷರತ್ತಿನಲ್ಲಿ ಇಲ್ಲತ್ ಹೇಳದಿರುವುದು ಅಥವಾ ಬರೆಯದಿರುವುದು ಅದರ ಷರತ್ತಾಗಿ ಉಲಮಾಗಳು ದಾಖಲಿಸಲ್ಪಡುತ್ತಿದ್ದರು.

ಹಾಗಾದರೆ ಎಲ್ಲಾ ‌ಮುಹದ್ದಿಸ್'ಗಳ ಅಭಿಪ್ರಾಯಕ್ಕೆ ಅನುಸಾರವಾಗಿ ಸ್ವಹೀಹುಲ್ ಇಸ್ನಾದ್ ಎಂದು ಮಾತ್ರ ಹೇಳಿದರೂ ಇಲ್ಲತ್ (ನೂನ್ಯತೆ) ಅಲ್ಲಿ ಇರಬಹುದು (ಅಲ್ಲೆಗೆಳೆಯುವಂತಿಲ್ಲ) ಎಂದಾಗಿದೆ ಇದರಿಂದ ವ್ಯಕ್ತವಾಗುವುದು.

ಅದಲ್ಲದೆ ಅಲ್ಲಿ ಇಸ್ನಾದಿನ್ ಸ್ವಹೀಹ್ ಎಂದು ವರದಿಯಾದ ಕೂಡಲೇ ಅಲ್ಲಿ ಇಲ್ಲತ್ ಇಲ್ಲ ಎಂದು ತೀರ್ಮಾನಿಸುವುದು ಸರಿಯಲ್ಲ ಎಂದಾಗಿದೆ ಮಹಾನರಾದ ಹಾಫಿಳ್ ಇಬ್ನ್ ಹಜರ್ ಅಸ್ಖಲಾನಿ (ರ)ರವರ ವಾದ:


     ಹಾಗಾದರೆ ಅದು ಸ್ವಹೀಹಾಗಿದೆ ಎಂದು ನಾವು ಅರ್ಥ ಮಾಡುವುದು ಹೇಗೆ?



ಇಬ್ನ್ ಹಜರ್ ಅಸ್ಖಲಾನಿ ವಿವರಿಸುತ್ತಾರೆ:

 (ಮುಸ್ಲಿಯಾರ್'ಗಳಿಗೆ )

ಒಂದು ಹದೀಸ್ ಸ್ವಹೀಹಾಗಬೇಕಾದರೆ  ಕೆಳಗೆ ವಿವರಿಸುವ ಐದು  ನಿಬಂಧನೆಗಳನ್ನು ಪಾಲಿಸಬೇಕು.

 1. (اتصال السند )

 ನಿವೇದನೆ ಮಾಡಿದವರ ಪರಂಪರೆ ಆದಿಯಿಂದ ಅಂತಿಮವರೆಗೆ ಬೇರ್ಪಡದ ಒತ್ತು ಸೇರಿರಬೇಕು. ನಡುವಿನಲ್ಲಿ ಯಾರೂ ಬಿಟ್ಟು ಹೋಗಬಾರದು.


2. ( عدالة الراوي )

ಹದೀಸ್ ನಿವೇದನೆ ಮಾಡುವ ಪರಂಪರೆಯಲ್ಲಿರುವವರು ಎಲ್ಲರೂ ನೀತಿವಂತರಾಗಿರಬೇಕು.


3. ( تمام الضبط )  :-

ವರದಿಗಾರರಿಗೆ ತಪ್ಪು ಸಂಭವಿಸದ ಹಾಗೆ ಒಳ್ಳೆಯ ನೆನಪಿನ ಶಕ್ತಿ ಇರುವವರಾಗಿರಬೇಕು.


4. (شاذ )  :-
 ವರದಿಗಾರರಲ್ಲಿ ಅವರಿಗಿಂತ ಪ್ರಾಮಾಣಿಕರೂ ಪರಿಣಿತರೂ ಆದವರಿಗೆ ಎದುರಾಗದ ರೀತಿಯಲ್ಲಿರಬೇಕು.


5. (علة)

ಹದೀಸನ್ನು ಸ್ವೀಕರಿಸುವ ವಿಷಯದಲ್ಲಿ ಅದಕ್ಕೆ ಅಡ್ಡಿಪಡಿಸುವ ನೂನ್ಯತೆ ಗಳು ಇಲ್ಲದಾಗಿರಬೇಕು.





ಇನ್ನು ಆ ವರದಿಯಲ್ಲಿ ಮಾಲಿಕ್ ದ್ದಾರ್ ಎಂಬ ವರದಿಗಾರನ ಕುರಿತು ಉಲಮಾಗಳು ಹೇಳಿದ್ದೇನು ?

ಬನ್ನಿ ಪರಿಶೀಲಿಸುವ.

ಪ್ರಸಿದ್ಧ ಮುಹದ್ದಿಸ್ ಗಳಾದ ಇಮಾಂ ಮುಂದಿರ್ ಹಾಗೂ ಇಮಾಂ ಹೈಸಮಿ ಯವರು ಮಾಲಿಕ್ ದ್ದಾರ್ ಮಜ್'ಹೂಲಾಗಿದ್ದಾರೆ ಎಂದು ಹೇಳಿದ್ದಾರೆ.


قال الهيثمي في المجمع (3/125) والمنذري في الترغيب (2/41) ومالك الدار لا أعرفه


ಹದೀಸಿನ ಉಸೂಲ್ ಪ್ರಕಾರ ಮಜ್'ಹೂಲ್ ಆದ ಒಬ್ಬರ ವರದಿಗಳು ಸ್ವೀಕಾರ್ಹವಲ್ಲ.

ಉಮರ್ (ರ)ರವರ ಖಜಾನೆಯನ್ನು ರಕ್ಷಣೆ ಮಾಡುತ್ತಿದ್ದ ಮಾಲಿಕ್ ದ್ದಾರ್ ಹೇಗೆ ಮಜ್'ಹೂಲ್ ಆದರು ಎಂದು ಹದೀಸಿನ ಉಸೂಲ್ ಗೊತ್ತಿಲ್ಲದ ಕೆಲವು ಮುಸ್ಲಿಯಾರ್'ಗಳು ಕೇಳುತ್ತಾರೆ.

ಅದರಿಂದಲೇ ಗೊತ್ತಾಗುತ್ತದೆ ಇಸ್ಲಾಮಿನ ಬಗ್ಗೆ ಇರುವ ಅವರ ಜ್ಞಾನ..

ಹದೀಸಿನ ಉಸೂಲ್ ಕೇರಳದ ಸಲಫಿ ಮೌಲವಿಗಳು ಮಾಡಿದ ವ್ಯವಸ್ಥೆಯಲ್ಲ ಎಂದು ನೆನಪಿರಲಿ..

ಅದರ ಬದಲು ಪ್ರಸಿದ್ಧ ಅಹ್ಲ್ ಸುನ್ನಃದ ಉಲಮಾಗಳು ಮಾಡಿದ ಒಂದು ವ್ಯವಸ್ಥೆ ಯಾಗಿದೆ. ಒಂದು ಹದೀಸ್ ಸ್ವೀಕಾರ್ಹವಾಗಲು ರಾವಿಗಳಿಗೆ(ವರದಿಗಾರರು) ಕೆಲವು ಪ್ರಾಮಾಣಿಕವಾದ ನಿಬಂಧನೆಗಳನ್ನು ಇಟ್ಟಿದ್ದಾರೆ..

ಆ ನಿಬಂಧನೆಗಳನ್ನು ಪಾಲಿಸದಿದ್ದರೆ ಎಂದಿಗೂ ಆ ಹದೀಸ್ ಗಳು ಸ್ವೀಕೃತವಾಗುವುದಿಲ್ಲ.


ಜಲಕ್ಷಾಮ ಉಂಟಾದಾಗ ಮುಹಮ್ಮದ್ﷺ ರವರ ಕಬರಿನ ಬಳಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ  ಬಂದು   ಸಹಾಯ ಯಾಚಿಸಿದರು ಎಂಬ ಘಟನೆ ಅಹ್ಲ್ ಸುನ್ನಃ ದ ಯಾವ ಉಲಮಾಗಳೂ ಸಹ ಇದು ಮರಣ ಹೊಂದಿದ ಅಂಬಿಯಾ ಅವುಲಿಯಾಗಳೊಂದಿಗೆ ಸಹಾಯ ಯಾಚಿಸಲು ಪುರಾವೆ ಎಂದೋ, ಇದರ ಸನದ್ ಸ್ವಹೀಹ್ ಎಂದೋ ‌ಎಲ್ಲೂ ಹೇಳಲಿಲ್ಲ ಎಂದು ಕಳೆದ ಸಂಚಿಕೆಯಲ್ಲಿ ಬರೆದ ಬರಹದಲ್ಲಿ ಸ್ಪಷ್ಟವಾಗಿದೆ..

 ಈ ಹದೀಸಿನಲ್ಲಿ ಮುಸ್ಲಿಯಾರ್'ಗಳು ಇನ್ನೊಂದು ಕುಕೃತ್ಯವನ್ನು ಮಾಡಿದ್ದಾರೆ.

ಅದೇನೆಂದರೆ ಮುಹಮ್ಮದ್ﷺ ರವರ ಕಬರಿನ ಬಳಿ ಬಂದ ವ್ಯಕ್ತಿ  ಓರ್ವ ಸ್ವಹಾಬಿಯವರಾಗಿದ್ದಾರೆ ಎಂದೂ ಅವರ ಹೆಸರು ಬಿಲಾಲ್ ಬಿನ್ ಹಾರಿಸ್ ಮುಝ್ನಿ (ರ)ರವರೆಂದೂ ಹಸಿ ಸುಳ್ಳು ಮಹಾನರಾದ ಸ್ವಹಾಬಿಗಳ ಮೇಲೆ ಆರೋಪ ಹೊರಿಸುತ್ತಾರೆ..


ಇದರ ಬಗ್ಗೆ ಫತಹುಲ್ ಬಾರಿಯಲ್ಲಿರುವುದೇನು ಎಂದು ಪರಿಶೀಲಿಸುವ...

ಫತಹುಲ್ ಬಾರಿಯಲ್ಲಿ ಈ ಕಥೆಯ ಕೊನೆಯ ಭಾಗದಲ್ಲಿ ಹೀಗೆ ಇದೆ:

وَقَدْ رَوَى سَيْفٌ فِي الْفُتُوحِ أَنَّ الَّذِي رَأَى الْمَنَامَ الْمَذْكُورَ هُوَ بِلَالُ بْنُ الْحَارِثِ الْمُزَنِيُّ أَحَدُ الصَّحَابَةِ


 "ಈ ಕನಸು ಕಂಡ ವ್ಯಕ್ತಿ ಸ್ವಹಾಬಿಗಳಲ್ಲೋರ್ವರಾದ  ಬಿಲಾಲ್ ಬಿನ್ ಹಾರಿಸ್ ಮುಝ್ನಿ (ರ)ರವರಾಗಿದ್ದಾರೆ ಎಂದು "ಫುತೂಹ್ " ಎಂಬ ಗ್ರಂಥದಲ್ಲಿ ಸೈಫ್ ರವರು ಉಲ್ಲೇಖಿಸಿದ್ದಾರೆ.

(ಫತ್ ಹುಲ್ ಬಾರಿ‐2:496)


ಮೇಲೆ ತಿಳಿಸಿದ ಈ ಸೈಫ್ ಯಾರು ?

ಸೈಫ್ ಹೇಳುವುದು ಇಸ್ಲಾಮಿ ಲೋಕದಲ್ಲಿ ಸ್ವೀಕಾರ್ಹವೇ?


ಇಮಾಂ ಝಹಬಿ (ರ)ರವರು ಅವರ ಗ್ರಂಥವಾದ
 (  ميزان الاعتدال )
ಎಂಬ ಗ್ರಂಥದಲ್ಲಿ ವಿವರಿಸಿರುವುದು ನೋಡಿ :


قال الحافظ الذهبي، في ميزان الاعتدال /3ـ353/ في ترجمة سيف بن عمر: إن يحيى بن معين، قال فيه: فِلسٌ خيرٌ منه، وقال أبو داود: ليس بشيء، وقال أبو حاتم: متروك، وقال ابن حبان: اتهم بالزندقة، وقال ابن عدي: عامة حديثه منكر، وقال مكحول البيروتي: كان سيف يضع الحديث، وقد اتهم بالزندقة.


ಇಮಾಂ ಇಬ್ನ್ ಜೌಝಿ(ರ) :


وقال ابن الجوزي في كتابه، الضعفاء والمتروكين /2ـ35/ رقم: 1594: سيف بن عمر الضبي، قال

يحيى بن معين: ضعيف الحديث، فِلسٌ خير منه، وقال أبو حاتم الرازي: متروك الحديث،

وقال النسائي والدارقطني: ضعيف، وقال ابن حبان: يروي الموضوعات عن الأثبات، وقال

إنه يضع الحديث. اهـ


ಮೇಲೆ ತಿಳಿಸಿದ ಉಲಮಾಗಳ ಹೆಸರು ಕೇಳುವಾಗ ಕೆಲವು ಮುಸ್ಲಿಯಾರ್'ಗಳು ಹೇಳುವುದು ಇವರು ವಹ್ಹಾಬಿ ಉಲಮಾಗಳಾಗಿದ್ದಾರೆ ಎಂದು..

ಹಾಗಾದರೆ ಈ ಕೆಳಗೆ ಹೇಳುವ ಉಲಮಾಗಳನ್ನು ನೀವು ನಿಷೇಧಿಸುತ್ತೀರಾ?

ضعيف الحديث، فِلسٌ خير منه

"ಇಮಾಂ ಯಹ್ಯಾ ಇಬ್ನ್ ಮ'ಈನ್ (ರ) ಹೇಳುತ್ತಾರೆ: ಸೈಫ್ ದುರ್ಬಲನಾಗಿದ್ದಾನೆ .ಒಂದು ನಯಾ ಪೈಸೆಯಾಗಿದೆ .ಇವನಿಗಿಂತಲೂ ಬೆಲೆಯಿರುವ ವಸ್ತು..

(ನಮ್ಮ ಊರಿನ ಭಾಷೆಯಲ್ಲಿ ಹೇಳುವುದಾದರೆ ಐದು ಪೈಸೆ ಬೆಲೆಯಿಲ್ಲದವ)


و قال أبو داود : ليس بشىء

ಇಮಾಂ ಅಬೂ ದಾವೂದ್: ಒಂದು ವಸ್ತುವಿಗೂ ಅರ್ಹನಲ್ಲದ ವ್ಯಕ್ತಿ.


و قال أبو حاتم : متروك الحديث

ಇಮಾಂ ಅಬೂ ಹಾತಿಂ: ಸೈಫ್ ಯಾವುದಕ್ಕೂ ಪ್ರಯೋಜನ ಇಲ್ಲದವ.

قال ابن حبان: اتهم بالزندقة

ಇಮಾಂ ಇಬ್ನ್ ಹಿಬ್ಬಾನ್ (ರ):ಸೈಫನ್ನು ಧರ್ಮ ನಿಷೇಧಿ ಎಂದು ಸಂಶಯಪಡಬೇಕಾದ ವ್ಯಕ್ತಿ.



قال ابن عدي: عامة حديثه منكر

ಇಮಾಂ ಇಬ್ನ್ ಆದಿಯ್ಯ್ (ರ): ಸೈಫಿನ ಹದೀಸ್ ಗಳು ಒಟ್ಟಿನಲ್ಲಿ ಆಕ್ಷೇಪಾರ್ಹವಾಗಿದೆ.

وقال النسائي والدارقطني: ضعيف

ಇಮಾಂ ನಸಾಈ ಹಾಗೂ ದಾರು ಕುತ್ನೀ  ಒಟ್ಟಾಗಿ ಹೇಳಿದರು: ದುರ್ಬಲನಾಗಿದ್ದಾನೆ.


وقال مكحول البيروتي: كان سيف يضع الحديث، وقد اتهم بالزندقة.

ಇಮಾಂ ಮಕ್'ಹೂಲ್ (ರ) : ಸೈಫ್ ,ಹದೀಸ್ ಗಳನ್ನು ಕೃತಕವಾಗಿ ಸೃಷ್ಟಿಸುವವನಾಗಿದ್ದಾನೆ. ಜೊತೆಗೆ ಧರ್ಮ ನಿಷೇಧಿಯೆಂದು ಸಂಶಯ ಕ್ಕೊಳಪಟ್ಟವನಾಗಿದ್ದಾನೆ.


ಓ ಮುಸ್ಲಿಯಾರ್'ಗಳೇ,

ಇನ್ನು ನೀವೇ ಹೇಳಿ ಈ ಹದೀಸ್ ಹಾಗೂ ಕನಸಿನ ಕಥೆ ಪುರಾವೆಗೆ ಯೋಗ್ಯವೇ ಎಂದು..

ಆಗ ಸೈಫನ್ನು ಬಚಾವು ಮಾಡಲು ಮುಸ್ಲಿಯಾರ್'ಗಳು ಕೆಲವು ನೆಪವನ್ನೊಡ್ಡುತ್ತಾರೆ.

 ಅದೇನೆಂದರೆ

ಸೈಫ್ ಚರಿತ್ರೆಯಲ್ಲಿ ವಿಶ್ವಾಸಾರ್ಹ ನಾಗಿದ್ದಾನೆ ಎಂದು..

ಅಹ್ಲ್ ಸುನ್ನಃ ವಲ್ ಜಮಾಅತ್ ನ ಪ್ರಸಿದ್ಧ ಉಲಮಾಗಳು ಹೇಳಿದ್ದು

ನಯಾ ಪೈಸೆಗೆ ಯೋಗ್ಯವಿಲ್ಲ, ಅವನು ಕಾಪಟ್ಯನು, ಅವನು ಧರ್ಮ ನಿಷೇಧಿಯೆಂದು ಸಂಶಯ ಪಡಬೇಕು, ಕೃತಕ ಹದೀಸ್ ಉಂಟು ಮಾಡುವವ... ಇಷ್ಟೆಲ್ಲಾ ಹೇಳಿದ ಮೇಲೂ ಆಲಿಂಗಳ ಮಾತಿನಲ್ಲಿ ಭರವಸೆಯಿಲ್ಲದ ಮುಸ್ಲಿಯಾರ್ ಪಡೆಗಳು ಯಾವ ಸುನ್ನತ್ ಜಮಾಅತನ್ನು ಇಲ್ಲಿ ಪೋಷಿಸುತ್ತಾರೆ??


✍ ಇಬ್ನ್ ಅಬ್ದುರ್ರಹ್ಮಾನ್.