ಇಸ್ಲಾಮಿನ ಶರೀಅತ್ತಿನಲ್ಲಿ ಇಲ್ಲದ ಮೀಲಾದ್ ಆಚರಣೆ, ರಾತ್ರಿ ಬೆಳಕು ನಂದಿಸಿ ಮಾಡುವ ಕುತುಬಿಯ್ಯತ್, ಉರೂಸ್, ಆಂಡ್ ನೇರ್ಚೆ, ರಾತೀಬು, ಕುತ್ತು ರಾತೀಬು, ಮೊದಲಾದ ಅನಾಚಾರಗಳನ್ನು ಪ್ರೋತ್ಸಾಹಿಸಲು ಮುಸ್ಲಿಯಾರ್ ಗಳು ಕುರ್'ಆನಿನ ಆಯತ್ ಗಳನ್ನೂ, ಸ್ವಹಾಬಿಗಳ ಮಾತುಗಳನ್ನೂ, ಇಮಾಮರ ಅಭಿಪ್ರಾಯಗಳನ್ನೂ ದುರ್ವ್ಯಾಖ್ಯಾನ ಮಾಡುವುದನ್ನು ಕಾಣಬಹುದು.
ಮುಸ್ಲಿಯಾರುಗಳು ಮಾಡುವಂತಹ ಅನಾಚಾರಗಳನ್ನು ಜನಸಾಮಾನ್ಯರ ಮುಂದೆ ಎತ್ತಿ ಹೇಳುವಾಗ ಇವರು ಕೇಳುವ ಪ್ರಶ್ನೆ ತರಾವೀಹ್ ಜಮಾಅತ್ ಆಗಿ ನಿರ್ವಹಿಸುವುದು ಬಿದ್ಅತ್ ಅಲ್ಲವೇ ಎಂದಾಗಿದೆ.
ಇವರು ವಾದವನ್ನು ಸಮರ್ಥಿಸಲು ತರುವುದು ಅಲ್-ಬಕರ ಸೂರತ್ ನ 117 ನೇ ಆಯತ್ ಮತ್ತು ಇಬ್ನು ಕತೀರ್ ತಫ್ಸೀರಿನ ವಿವರಣೆಯಲ್ಲಿರುವ ಉಮರ್ (ರ)ರವರು ತರಾವೀಹ್ ಜಮಾಅತ್ ಆಗಿ ನಿರ್ವಹಿಸುವುದರ ಕುರಿತು ಹೇಳಿದಂತಹ ಮಾತನ್ನಾಗಿದೆ.
ತಫ್ಸೀರಿನ ವಿವರಣೆ ಈ ಕೆಳಗಿನಂತಿದೆ...
وقوله تعالى : ( بديع السماوات والأرض ) أي : خالقهما على غير مثال سبق ، قال مجاهد والسدي : وهو مقتضى اللغة ، ومنه يقال للشيء المحدث : بدعة . كما جاء في الصحيح لمسلم : " فإن كل محدثة بدعة [ وكل بدعة ضلالة ] " . والبدعة على قسمين : تارة تكون بدعة شرعية ، كقوله : فإن كل محدثة بدعة ، وكل بدعة ضلالة . وتارة تكون بدعة لغوية ، كقول أمير المؤمنين عمر بن الخطاب رضي الله عنه عن جمعه إياهم على صلاة التراويح واستمرارهم : نعمت البدعة هذه .
ಆಕಾಶ, ಭೂಮಿಯ ಸೃಷ್ಟಿಸಿರುವುದರ ಕುರಿತು ಹೇಳಿರುವುದು "ಬದೀವು ಸ್ಸಮಾವಾತಿ ವಲ್ ಅರ್ಲ್" ಯಾವುದೇ ಪೂರ್ವ ಮಾದರಿಯೂ ಇಲ್ಲದೇ ಆಕಾಶ ಭೂಮಿಯನ್ನು ಹೊಸದಾಗಿ ನಿರ್ಮಿಸಿದವನು ಎಂದಾಗಿದೆ. ಮುಜಾಹಿದ್ ಮತ್ತು ಸದೀಯ್ಯ್ (ರ)ರವರು ಹೇಳುತ್ತಾರೆ: ಇದು (ಬದೀವು) ಭಾಷೆಯಲ್ಲಿರುವ ಪದ ಪ್ರಯೋಗವಾಗಿದೆ. ಹೊಸದಾಗಿ ನಿರ್ಮಿಸುವುದೆಲ್ಲವೂ ಬಿದ್ಅತ್ ಗೆ ಸೇರಿದ್ದಾಗಿದೆ.
ಸ್ವಹೀಹ್ ಮುಸ್ಲಿಮ್ ನಲ್ಲಿ ಹೇಳಿದ ಹಾಗೆ ಹೊಸದಾಗಿ ನಿರ್ಮಿಸಿದವುಗಳು ಎಲ್ಲವೂ ಬಿದ್ಅತ್ ಆಗಿದೆ. ಎಲ್ಲಾ ಬಿದ್ಅತ್ ಗಳೂ ಕೆಟ್ಟದಾಗಿದೆ.
ಬಿದ್'ಅತ್ ಗಳಲ್ಲಿ ಎರಡು ವಿಧಗಳಿವೆ : ಕೆಲವೊಮ್ಮೆ ಬಿದ್ಅತ್ ಶರಈ ಆದ ಬಿದ್ಅತ್ ಆಗಿರುತ್ತದೆ. ಇದಾಗಿದೆ ಸ್ವಹೀಹ್ ಮುಸ್ಲಿಮ್ ನಲ್ಲಿ ಹೇಳಿರುವುದು. ಮತ್ತೊಂದು ಭಾಷಾರ್ಥದಲ್ಲಿರುವ ಬಿದ್ಅತ್. ಎಂದರೆ ಉಮರ್ (ರ) ತರಾವೀಹ್ ನಮಾಝ್ ಜಮಾಅತಿಗಾಗಿ ಜನರನ್ನು ಒಂದುಗೂಡಿಸಿರುವುದು ಭಾಷಾರ್ಥದ ಬಿದ್ಅತಿನಲ್ಲಿ ದೃಢಪಟ್ಟಿದೆ. ಇದಾಗಿದೆ ಉಮರ್ (ರ) "ಇದು ಒಳ್ಳೆಯಬಿದ್ಅತ್" ಎಂದು ಪದ ಪ್ರಯೋಗ ಮಾಡಿರುವುದು.
[ಇಬ್ನು ಕತೀರ್]
عن عبد الرحمن بن عبدٍ القاري : خرجت مع عمر بن الخطاب t ليلة في رمضان إلى المسجد فإذا الناس أوزاع متفرقون ، يصلي الرجل لنفسه ويصلي الرجل فيصلي بصلاته الرهط فقال عمر : إني أرى لو جمعت هؤلاء على قارئ واحد لكان أمثل ، ثم عزم فجمعهم على أبي ابن كعب ، ثم خرجت معه ليلة أخرى والناس يصلون بصلاة قارئهم قال عمر : نعم البدعة هذه ، والتي ينامون عنها أفضل من التي يقومون . يريد آخر الليل وكان الناس يقومون أوله
ಅಬ್ದುರ್ರಹ್ಮಾನ್ ಬಿನ್ ಅಬ್ದುಲ್ ಖಾರಿ (ರ) ಹೇಳುತ್ತಾರೆ: ನಾನು ರಮದಾನಿನ ಒಂದು ರಾತ್ರಿ ಉಮರ್ (ರ)ರೊಂದಿಗೆ ಮಸೀದಿಗೆ ಹೋದೆ. ಜನರು ಭಿನ್ನ ಭಿನ್ನರಾಗಿ ಹರಡಿಕೊಂಡಿದ್ದರು. ಕೆಲವರು ಒಂಟಿಯಾಗಿ ನಿಂತು ನಮಾಝ್ ನಿರ್ವಹಿಸುತ್ತಿದ್ದರೆ ಇನ್ನೂ ಕೆಲವರು ಇಮಾಮರ ಹಿಂದೆ ನಿಂತು ನಿರ್ವಹಿಸುತ್ತಿದ್ದರು. ಅದನ್ನು ಕಂಡು ಉಮರ್ (ರ) ಹೇಳಿದರು "ನನಗೆ ಅನಿಸುತ್ತೆ ನಾನು ಇವರನ್ನೆಲ್ಲಾ ಒಂದು ಖಾರಿಯ ಹಿಂದೆ ಒಗ್ಗೂಡಿಸಿದರೆ ಸಮಂಜಸವೆನಿಸಬಹುದು. ಅದೇ ಪ್ರಕಾರ ಅವರು ತನ್ನ ಇರಾದೆಯನ್ನು ಕಾರ್ಯ ರೂಪಕ್ಕೆ ತರಲು ಉಬೈದ್ ಬಿನ್ ಕಅಬ್ (ರ)ರನ್ನು ಇಮಾಮ್ ಆಗಿ ನಿಯುಕ್ತಿಗೊಳಿಸಿದರು. (ಅಬ್ದುರ್ರಹ್ಮಾನ್ ಹೇಳುತ್ತಾರೆ) ಇನ್ನೊಮ್ಮೆ ನಾನು ಉಮರ್ (ರ) ರೊಂದಿಗೆ ಮಸೀದಿಗೆ ಬಂದಾಗ ಜನರು ತಮ್ಮ ಇಮಾಮರ ಹಿಂದೆ ನಿಂತು ಜಮಾಅತ್ ಆಗಿ ನಮಾಝ್ ನಿರ್ವಹಿಸುತ್ತಿದ್ದರು. ಅದನ್ನು ಕಂಡು ಉಮರ್ (ರ) ಹೇಳಿದರು "ಈ ಹೊಸ ಕ್ರಮವು ಉತ್ತಮವಾಗಿದೆ ಮತ್ತು ಸಮಂಜಸವಾಗಿದೆ." ಇವರು ನಮಾಝ್ ನಿರ್ವಹಿಸುತ್ತಿರುವ ರಾತ್ರಿಯ ಈ ಅಂಶವು ಇವರು ಮಲಗಿ ನಿದ್ರಿಸುವ ಅಂಶಕ್ಕಿಂತ ಶ್ರೇಷ್ಠವಾಗಿದೆ. ಉಮರ್ (ರ)ರವರು ರಾತ್ರಿಯ ಅಂತಿಮ ಆಯಾಮದ ಶ್ರೇಷತೆಯನ್ನು ಉದ್ದೇಶಿಸಿ ಹೀಗೆ ಹೇಳಿದ್ದರು. ಏಕಂದರೆ ಜನರು ಈ ನಮಾಝನ್ನು ರಾತ್ರಿಯ ಮೊದಲ ಭಾಗದಲ್ಲಿ ನಿರ್ವಹಿಸುತ್ತಾರೆ.
☝ಇದಾಗಿದೆ ನಡೆದಿರುವ ವಿಷಯ. ಇದಕ್ಕೆ ಹದೀಸಿನ ಬೆಂಬಲವೂ ಇದೆ.
أن عائشة رضي الله عنها أخبرته أن رسول الله صلى الله عليه وسلم خرج ليلة من جوف الليل فصلى في المسجد وصلى رجال بصلاته فأصبح الناس فتحدثوا فاجتمع أكثر منهم فصلى فصلوا معه فأصبح الناس فتحدثوا فكثر أهل المسجد من الليلة الثالثة فخرج رسول الله صلى الله عليه وسلم فصلى فصلوا بصلاته فلما كانت الليلة الرابعة عجز المسجد عن أهله حتى خرج لصلاة الصبح فلما قضى الفجر أقبل على الناس فتشهد ثم قال أما بعد فإنه لم يخف علي مكانكم ولكني خشيت أن تفترض عليكم فتعجزوا عنها فتوفي رسول الله صلى الله عليه وسلم والأمر على ذلك
ಆಯಿಷಾ (ರ)ರಿಂದ ವರದಿ: "ಪ್ರವಾದಿ (ಸಅ)ರು ಒಂದು ರಾತ್ರಿ ಮಸೀದಿಯಲ್ಲಿ ನಮಾಝ್ ಮಾಡಿಸಿದರು. ಸ್ವಹಾಬಿಗಳು ಕೂಡ ಅವರೊಂದಿಗೆ ನಮಾಝ್ ನಿರ್ವಹಿಸಿದರು. ಎರಡನೇ ದಿನ ಪ್ರವಾದಿ (ಸಅ) ನಮಾಝ್ ಮಾಡಿಸುವಾಗ ಜನರ ಸಂಖ್ಯೆಯಲ್ಲಿ ಅಪಾರ ವೃದ್ಧಿಯಾಗಿತ್ತು. ಮೂರನೇ ಅಥವಾ ನಾಲ್ಕನೇ ದಿನ ಜನರು ದೊಡ್ಡ ಸಮೂಹವಾಗಿ ಬಂದು ನೆರೆದರು ಆದರೆ ಪ್ರವಾದಿ (ಸಅ) ನಮಾಝ್ ಮಾಡಿಸಲು ಮಸೀದಿಗೆ ಬರಲಿಲ್ಲ. ಬೆಳಗ್ಗೆ ಪ್ರವಾದಿ (ಸಅ)ರು ಹೇಳಿದರು "ನೀವು ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿರುವುದನ್ನು ನಾನು ಕಂಡಿದ್ದೆ ಆದರೆ ಈ ನಮಾಝ್ ನಿಮ್ಮ ಮೇಲೆ ಕಡ್ಡಾಯಗೊಳ್ಳದಿರಲಿ ಎಂಬ ಅಂಶ ನನ್ನನ್ನು ಇಲ್ಲಿಗೆ ಬರುವುದರಿಂದ ತಡೆಯಿತು". (ಹಾಗೆ ಆದರೆ ನೀವು ಆ ಕುರಿತು ಅಸಡ್ಡೆ ತೋರಬಹುದು ಎಂಬ ಭಯ) ಪ್ರವಾದಿ (ಸಅ)ರವರ ನಿಧನದ ತನಕವೂ ಅದೇ ಅವಸ್ಥೆ ನೆಲೆಗೊಂಡಿತು."
ಸಹೀಹ್ ಮುಸ್ಲಿಮ್ ನಲ್ಲಿರುವ ಉಲ್ಲೇಖದಲ್ಲಿ ಪ್ರವಾದಿ (ಸಅ) ಮೂರು ರಾತ್ರಿ ನಮಾಝ್ ಮಾಡಿಸಿದರು ನಾಲ್ಕನೇ ರಾತ್ರಿ ಬರಲಿಲ್ಲ..... (ಈ ಉಲ್ಲೇಖದ ಕೊನೆಯಲ್ಲಿ ಪ್ರವಾದಿ (ಸಅ) ರ ಈ ಮಾತನ್ನು ನೀಡಲಾಗಿದೆ.)
ولكني خشيت أن تفترض عليكم فتعجزوا عنها فتوفي رسول الله صلى الله عليه وسلم والأمر على ذلك
"ಆದರೆ ಈ ನಮಾಝ್ ನಿಮ್ಮ ಮೇಲೆ ಕಡ್ಡಾಯಗೊಳಿಸಲ್ಪಡುತ್ತದೋ, ಎಂಬ ಆತಂಕ ನನ್ನನ್ನು ತಡೆಯಿತು ಬಳಿಕ ಪ್ರವಾದಿ (ಸಅ)ರು ನಿಧನರಾದರು. ಅದೇ ಕ್ರಮ ಮುಂದುವರಿಯಿತು."
ಇಲ್ಲಿ ನಾವು ತಿಳಿಯಬೇಕಾದ ವಿಷಯ : ತರಾವೀಹ್ ನಮಾಝ್ ಮಸೀದಿಯಲ್ಲಿ ಜಮಾಅತ್ ಆಗಿ ನಿರ್ವಹಿಸುವುದು ಅತ್ಯುತ್ತಮವಾಗಿದೆ ಎನ್ನುವುದರಲ್ಲಿ ಪ್ರಬಲ ಅಭಿಪ್ರಾಯವಿದೆ. ಏಕಂದರೆ ಪ್ರವಾದಿ (ಸಅ)ರ ಸುನ್ನತ್ ನಲ್ಲಿ ಇದಕ್ಕೆ ಆಧಾರವಿದೆ. ಪ್ರವಾದಿ (ಸಅ) ಇದನ್ನು ಮಸೀದಿಯಲ್ಲಿ ಜಮಾಅತ್ ಆಗಿ ನಿರ್ವಹಿಸಿದ್ದರು. ಇದು ತನ್ನ ಸಮೂಹಕ್ಕೆ ಕಡ್ಡಾಯವಾಗಿ ಪರಿಣಮಿಸದಿರಲಿ ಎಂಬ ಭೀತಿಯಿಂದ ಜಮಾಅತ್ ಆಗಿ ನಿರ್ವಹಿಸುವುದನ್ನು ತೊರೆದರು. ಆದರೆ ಪ್ರವಾದಿ (ಸಅ)ರ ಮರಣದ ನಂತರ ಈ ಭೀತಿಗೆ ಅವಕಾಶವಿರಲಿಲ್ಲ. ಮರಣಾನಂತರ ಪ್ರವಾದಿ (ಸಅ)ರಿಗೆ "ವಹೀ" (ದಿವ್ಯ ಸಂದೇಶ) ಕೊನೆಗೊಂಡಿತು. ಪ್ರವಾದಿ (ಸಅ)ರು ಭಯಪಟ್ಟಿರುವ ವಿಷಯದ ಆತಂಕವು ನಿವಾರಣೆಯಾಯಿತು. ಆ ಸಂದರ್ಭದಲ್ಲಿ ಉಮರ್ (ರ) ಜನರನ್ನು ಒಂದು ಇಮಾಮ್ ರ ಹಿಂದೆ ಜನರನ್ನು ಒಂದುಗೂಡಿಸಿ ಜಮಾಅತ್ ಆಗಿ ನಿರ್ವಹಿಸಲು ಆದೇಶಿಸಿದರು. ಇಲ್ಲಿ ಉಮರ್ (ರ)ರವರ ಖಿಲಾಫತ್ ನ ಅವಧಿಯಲ್ಲಿ ಪ್ರವಾದಿ (ಸಅ) ರು ಜಮಾಅತ್ ಆಗಿ ನಿರ್ವಹಿಸಿ ತೋರಿಸಿದಂತಹ ನಮಾಝನ್ನಾಗಿದೆ ಯಥಾ ರೀತಿಯಲ್ಲಿ ಜಮಾಅತ್ ಆಗಿ ನಿರ್ವಹಿಸಲು ಆದೇಶ ನೀಡಿರುವುದು. ಇದನ್ನೇ ಆಗಿದೆ ಉಮರ್ (ರ) ರವರು ಒಳ್ಳೆಯ ಬಿದ್ಅತ್ ಎಂದಿರುವುದು.
ಇಲ್ಲಿ ಉಮರ್ (ರ)ರವರು ಬಿದ್ಅತ್ ಎಂಬ ಪದ ಪ್ರಯೋಗಿಸಿರುವುದು ಒಂದು ಸತ್ಕಾರ್ಯವನ್ನು ಹೊಸದಾಗಿ ನಿರ್ಮಿಸಿದ ಹಿನ್ನೆಲೆಯಲ್ಲ. ಬದಲಾಗಿ, ಒಂದು ಸತ್ಕಾರ್ಯವನ್ನು ಜೀವಂತಗೊಳಿಸಿ ಅದನ್ನು ಕಾರ್ಯರೂಪದಲ್ಲಿ ಕಂಡು ತೃಪ್ತಿಗೊಂಡ ನೆಲೆಯಲ್ಲಾಗಿದೆ. ಬಿದ್ಅತನ್ನು 'ಹಸನ' ಮತ್ತು 'ಸಯ್ಯಿಅ' ಎಂದು ವರ್ಗೀಕರಿಸುವ ಉದ್ದೇಶ ಖಂಡಿತ ಉಮರ್ (ರ)ರಿಗೆ ಇರಲಿಲ್ಲ. ವಾಸ್ತವದಲ್ಲಿ ಶರೀಅತ್ತಿಗೆ ಸಂಬಂಧಿಸಿದ ಎಲ್ಲಾ ಹೊಸ ಕಾರ್ಯಗಳೂ ಪಥಭ್ರಷ್ಟತೆಯ ಕಡೆಗೆ ಒಯ್ಯುವ 'ಬಿದ್ಅತ್ ಗಳಾಗಿವೆ.
ಬಿದ್ಅತ್ ನ ವಿಷಯದಲ್ಲಿ ಉಮರ್ (ರ)ರವರು ಹೇಳಿದ ಹದೀಸ್ ಈ ಕೆಳಗಿನಂತಿದೆ...
ಉಮರ್ (ರ)ಹೇಳುತ್ತಾರೆ :
كل بدعة ضلالة وين رآها الناس حسنة "(سنن الدارمي )
ಎಲ್ಲಾ ನವೀನಾಚಾರಗಳೂ ಪಥಭ್ರಷ್ಟತೆಯಾಗಿದೆ, ಜನರು ಅವುಗಳನ್ನು ಎಷ್ಟು ಉತ್ತಮವಾಗಿ ಕಂಡರೂ ಕೂಡಾ.
(ಸುನೆನ್ ದಾರಿಮಿ)
ಬಿದ್ಅತ್ ಎಂದರೆಏನು? 👇
https://islaminkannada.blogspot.in/2016/12/blog-post.html?m=1
✍ Abu Muadh