11 Dec 2016

ಬಿದ್ಅತ್ ಎಂದರೆ ಏನು?

ಬಿದ್ಅತ್

ಸೋಷಿಯಲ್ ಮೀಡಿಯಾಗಳಲ್ಲಿ ಬಿದ್ಅತ್ ನ ವಿಷಯದಲ್ಲಿ ಹಲವು ರೀತಿಯಲ್ಲಿ ಚರ್ಚೆ ಮಾಡುವುದನ್ನು ನೋಡಿದ್ದೇವೆ. ಆದರೆ ಬಿದ್ಅತ್ ಎಂದರೆ ಏನು ಎಂಬುದನ್ನು ಸರಿಯಾಗಿ ಅರ್ಥ ಮಾಡದಂತಹ ಗೊಂದಲದ ವಾತಾವರಣ ಹಲವರಲ್ಲಿ ಕಾಣಲು ಸಾಧ್ಯ. ಈ ಗೊಂದಲ ವನ್ನು ನಿವಾರಿಸಲು ಚಿಕ್ಕ ಪ್ರಯತ್ನ ಮಾತ್ರ...

ಹಲವರಿಗೆ ಬಿದ್ಅತ್ ಎಂದ ತಕ್ಷಣ ಮನಸ್ಸಿಗೆ ತೋಚುವುದು ಸಲಫಿಗಳು ವಿರೋಧಿಸುವ ಪ್ರವಾದಿ ﷺ ರ ಜನ್ಮ ದಿನಾಚರಣೆ, ಕುತುಬಿಯ್ಯತ್, ಉರೂಸ್, ಆಂಡ್ ನೇರ್ಚೆ, ರಾತೀಬು, ಕುತ್ತು ರಾತೀಬು, ಮೊದಲಾದ ಅನಾಚಾರಗಳು ಎಂಬ ಭಾವನೆಯಾಗಿದೆ. ಇನ್ನೊಂದೆಡೆ ಸುನ್ನೀ ಮುಸ್ಲಿಯಾರ್ ಗಳು ಬಿದ್ಅತನ್ನು ಒಳ್ಳೆಯ ಬಿದ್ಅತ್, ಕೆಟ್ಟ ಬಿದ್ಅತ್ ಎಂದು ಎರಡಾಗಿ ವಿಂಗಡಿಸಿ ಇಮಾಮರುಗಳ  ಅಭಿಪ್ರಾಯಗಳನ್ನು ದುರ್ವ್ಯಾಖ್ಯಾನ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲೂ ತೊಡಗಿದ್ದಾರೆ. ಆದರೆ ನಿಜವಾಗಿಯೂ ಬಿದ್ಅತ್ ಎಂದರೆ ಏನು❓ ಎಂಬುದನ್ನು ಮೊದಲನೆಯದಾಗಿ ನಾವು ಕುರಾನಿಂದಲೇ ತಿಳಿಯುವ.

 ಆಕಾಶ, ಭೂಮಿಯ ನಿರ್ಮಾಣವನ್ನು ಭಾಷಾರ್ಥದಲ್ಲಿ ಬಿದ್ಅತ್ ಎಂದು ಹೇಳಬಹುದು.

ಉದಾಹರಣೆಗೆ :-

بَدِيعُ السَّمَاوَاتِ وَالْأَرْض  ۖ وَإِذَا قَضَىٰ أَمْرًا فَإِنَّمَا يَقُولُ لَهُ كُنْ فَيَكُونُ

ಯಾವುದೇ ಪೂರ್ವ ಮಾದರಿಯೂ ಇಲ್ಲದೆ ಆಕಾಶಗಳನ್ನು ಮತ್ತು ಭೂಮಿಯನ್ನು ನಿರ್ಮಿಸಿದವನು. ಅವನೊಂದು ವಿಷಯವನ್ನು ತೀರ್ಮಾನಿಸಿದರೆ ಅದರೊಂದಿಗೆ ‘ಉಂಟಾಗು’ ಎಂದು ಮಾತ್ರ ಹೇಳುವನು; ತಕ್ಷಣ ಅದುಂಟಾಗುವುದು!

[ಅಲ್-ಬಕರಃ : 117]

👆 ಇಲ್ಲಿ ಅಲ್ಲಾಹನು ಆಕಾಶ ಭೂಮಿಯ ಸೃಷ್ಟಿ ಯ ಬಗ್ಗೆ ಹೇಳುವುದು "ಬದೀವು ಸ್ಸಮಾವಾತಿ ವಲ್ ಅರ್ಲ್" ಎಂದಾಗಿದೆ. ಈ ವಚನದಲ್ಲಿ ಮುಂದೆ ಎಂದೂ ಇಲ್ಲದ ಹೊಸದಾಗಿ ನಿರ್ಮಿಸಿದ ಆಕಾಶ, ಭೂಮಿ ಎಂದು ತಿಳಿಯಲು ಸಾಧ್ಯ. ಇದು ಭಾಷಾರ್ಥದಲ್ಲಿ ಬಿದ್ಅತ್ ಎನ್ನುವುದಕ್ಕೆ ಒಂದು  ಉದಾಹರಣೆಯಾಗಿದೆ. ಆ ವಾಕ್ಯದಲ್ಲಿಯೇ 'ಬದೀವು' (ಬಿದ್ಅತ್) ಎನ್ನುವ ಪದ ಇದೆ. ಎಂದರೆ ಬಿದ್ಅತ್ ಎನ್ನುವುದು ಹೊಸದಾಗಿ ಉಂಟಾಗುವುದು ಎಂದಾಗಿದೆ. ಈ ವಿಷಯವನ್ನು ಇಬ್ನು ಕತೀರ್ (ರ) ತನ್ನ ತಫ್ಸೀರ್ ನಲ್ಲಿ ಸೂಚಿಸಿದ್ದಾರೆ.

ಅದೇ ರೀತಿ ಯಾವುದೇ ಪೂರ್ವ ಮಾದರಿಯೂ ಇಲ್ಲದೆ ಹೊಸದಾಗಿ ಸೃಷ್ಟಿಸಿದ ಅಥವಾ ಹೊಸದಾಗಿ ನಿರ್ಮಾಣವಾಗುವ ಎಲ್ಲವೂ ಭಾಷಾರ್ಥದಲ್ಲಿರುವ ಬಿದ್ಅತ್ ಗೆ ಉದಾಹರಣೆಗಳಾಗಿವೆ.

ಆದರೆ ಧರ್ಮದ ವಿಷಯದಲ್ಲಿ ಪ್ರವಾದಿ ﷺ ರು ಕಲಿಸಿ ಕೊಟ್ಟದ್ದನ್ನು, ಮತ್ತು ವೈಜ್ಞಾನಿಕ ಕಾರಣಗಳಿಂದ ಸೇರಿದವುಗಳನ್ನು ಹೊರತುಪಡಿಸಿ ತಮ್ಮ ಇಷ್ಟಕ್ಕನುಸಾರ ಪುಣ್ಯ ಕರ್ಮವೆಂದು ಭಾವಿಸಿ ಇಸ್ಲಾಮಿಗೆ ಏನಾದರೂ ಸೇರಿಸುವುದು (ಧರ್ಮದಲ್ಲಿ ಹೊಸತಾಗಿ ಉಂಟುಮಾಡುವುದು) ಹರಾಮ್ ಆಗಿದೆ.

ಇಮಾಮ್ ಶಾಫಿಈ (ರ) ಹೇಳುತ್ತಾರೆ:👇

قال الإمام الشافعي- رحمه الله: المحدثات من الأمور ضربان أحدهما ما أحدث يخالف كتابا أو سنة أو أثرا أو إجماعا فهذه البدعة الضلالة، والثاني ما أحدث من الخير لا خلاف فيه لواحد من هذا، فهذه محدثة غير مذمومة. رواه البيهقي في (مناقب الشافعي) (ج1/469)، وذكره الحافظ ابن حجر في (فتح الباري): (13/267).

ಇಮಾಮ್ ಶಾಫಿಈ (ರ) ಹೇಳುತ್ತಾರೆ : ಹೊಸದಾಗಿ ಉಂಟಾಗುವ ಕಾರ್ಯಗಳನ್ನು ಎರಡಾಗಿ ವಿಭಜಿಸಬಹುದು. 1). ಹೊಸದಾಗಿ ನಿರ್ಮಿಸಿದ ಕಾರ್ಯಗಳು ಕುರ್'ಆನ್, ಸ್ವಹೀಹ್ ಹದೀಸ್, ಸ್ವಹಾಬಿಗಳ ಅಸರ್, ಇಜ್ಮಾಅ್ ಇವುಗಳಿಗೆ ವಿರುದ್ಧವಾದರೆ ಅದು ಪಥಭ್ರಷ್ಟತೆಯ ಬಿದ್ಅತ್ ಆಗಿದೆ.
2). ಮೇಲೆ ಹೇಳಿದ ಪ್ರಮಾಣಗಳಿಗೆ ವಿರುದ್ಧವಲ್ಲದ ರೀತಿಯಲ್ಲಿ ಹೊಸದಾಗಿ ಉಂಟಾದ ಒಳ್ಳೆಯ ಕಾರ್ಯಗಳು ಆಕ್ಷೇಪಾರ್ಹವಲ್ಲದ ಕಾರ್ಯವಾಗಿದೆ.

[ಬೈಹಕಿ:1/469, ಫತುಹುಲ್ ಬಾರಿ:13/267]

👆ಇಮಾಮ್ ಶಾಫಿಈ (ರ) ಮೇಲೆ ಹೇಳಿದ ಒಳ್ಳೆಯ ಕಾರ್ಯಗಳಿಗೆ ಒಂದು ಉದಾಹರಣೆ:- ಉಮರ್ (ರ)ರವರು ತರಾವೀಹ್ ನಮಾಝ್ ಗಾಗಿ ಜನರನ್ನು ಒಂದು ಇಮಾಮರ ಹಿಂದೆ ಒಂದುಗೂಡಿಸಿ ಜಮಾಅತ್ ಆಗಿ ನಿರ್ವಹಿಸಲು ಕಲ್ಪಿಸಿದರು.  ಇದು ಧರ್ಮದಲ್ಲಿ ಹೊಸತಾಗಿ ನಿರ್ಮಿಸಿದ ಬಿದ್ಅತ್ ಗೆ ಒಳಪಡುವುದಿಲ್ಲ ಎಂದು ಈ ಕೆಳಗಿನ ಲಿಂಕ್ ನ ಮೂಲಕ ತಿಳಿಯಬಹುದು.

https://islaminkannada.blogspot.in/2016/11/blog-post_8.html?m=1

ಇಬ್ನು ಹಜರ್ ಹೈತಮಿ ಹಳುತ್ತಾರೆ:

وقول عمر رضي الله عنه في التراويح نعمت البدعة هي أراد البدعة اللغوية وهو ما فعل على غير مثال كما قال تعالى: (قل ما كنت بدعاً من الرسل) ، وليست بدعة شرعا ، فإن البدعة الشرعية ضلالة كما قال صلى الله عليه وسلم قال: ومن قسمها من العلماء إلى حسن وغير حسن ، فإنما قسم البدعة اللغوية ومن قال كل بدعة ضلالة فمعناه البدعة الشرعية ، ألا ترى أن الصحابة رضي الله عنهم والتابعين لهم بإحسان أنكروا فرضية لغير الصلوات الخمس كالعيدين ، وإن لم يكن فيه نهي ، وكرهوا استلام الركنين الشاميين والصلاة عقيب السعي بين الصفا والمروة قياساً على الطواف ، وكذا ما تركه صلى الله عليه وسلم مع قيام المقتضي فيكون تركه سنة ، وفعله بدعة مذمومة   (الفتاوى الحديثية ٢٨١)

ತರಾವೀಹ್ ಜಮಾಅತ್ ನ ಕುರಿತು ಉಮರ್ (ರ) ರು ಹೇಳಿರುವ ಉತ್ತಮವಾದ ಬಿದ್ಅತ್ ನಲ್ಲಿ ಉದ್ದೇಶಿಸಿರುವುದು ಪೂರ್ವ ಮಾದರಿಯಿಲ್ಲದೆ ಕಾರ್ಯ ನಿರ್ವಹಿಸಿದ ಭಾಷಾರ್ಥದಲ್ಲಿರುವ ಬಿದ್ಅತನ್ನಾಗಿದೆ. ಅಲ್ಲಾಹನು ಹೇಳುತ್ತಾನೆ "(ಹೇಳಿರಿ: ‘ನಾನು ಸಂದೇಶವಾಹಕರಲ್ಲಿ ಹೊಸಬನಲ್ಲ)".... ಈ ಕಾರಣದಿಂದಾಗಿ ಉಮರ್ (ರ) ರವರು ಹೇಳಿರುವ ಬಿದ್ಅತ್ ಶರಈ ಆದ ಬಿದ್ಅತ್ ಅಲ್ಲ. ಕಾರಣ ಶರಈ ಆದ ಬಿದ್ಅತ್ ಗಳೆಲ್ಲವೂ ಪಥಭ್ರಷ್ಟತೆಯಾಗಿದೆ. ಇದನ್ನೇ ಆಗಿದೆ ಪ್ರವಾದಿ (ಸಅ)ರು ಹೊಸತಾಗಿ ನಿರ್ಮಿಸಿದವುಗಳು ಎಲ್ಲವೂ ಪಥಭ್ರಷ್ಟತೆಯಾಗಿದೆ ಎಂದಿರುವುದು. ಕೆಲವು ಉಲಮಾಗಳು ಒಳ್ಳೆಯ ಬಿದ್ಅತ್ ಮತ್ತು ಕೆಟ್ಟ ಬಿದ್ಅತ್ ಎಂದು ಎರಡಾಗಿ ವಿಂಗಡಿಸಿರುವುದು ಭಾಷಾರ್ಥದಲ್ಲಿರುವ ಬಿದ್ಅತನ್ನಾಗಿದೆ. ಇಲ್ಲಿ ಪಥಭ್ರಷ್ಟತೆಯಾದ ಬಿದ್ಅತ್ ಎಂದಿರುವುದರ ಅರ್ಥ ಧರ್ಮದಲ್ಲಿ ಹೊಸದಾಗಿ ನಿರ್ಮಿಸುವ ಆಚಾರಗಳನ್ನಾಗಿದೆ. ಎರಡು ಈದ್ ನಮಾಝ್ ನಂತೆ ಐದು ಹೊತ್ತಿನ ನಮಾಝ್ ಅಲ್ಲದ ಇತರ ನಮಾಝ್ ಗಳು ಕಡ್ಡಾಯವಾಗಿದೆ ಎನ್ನುವುದನ್ನು ಸ್ವಹಾಬಿಗಳು, ತಾಬಿವುಗಳು ನಿಷೇಧಿಸಿರುವುದನ್ನು ನೋಡುವುದಿಲ್ಲವೇ?... ಯಾಕೆಂದರೆ ಪ್ರವಾದಿ (ಸಅ)ರು ಈದ್ ನಮಾಝ್ ಕಡ್ಡಾಯವಲ್ಲ ಅಥವಾ ಕಡ್ಡಾಯಗೊಳಿಸಬೇಡಿ ಎಂದು ಯಾವತ್ತೂ ಹೇಳಿಲ್ಲ. ಅದೇ ರೀತಿ ತವಾಫ್ ನ ವೇಳೆ ರುಕುನುಲ್ ಯಮನ್ ಮತ್ತು ಹಜರುಲ್ ಅಸ್ವದ್ ಇರುವಂತಹ ಮೂಲೆಯನ್ನು ಮುಟ್ಟುವುದು ಸುನ್ನತ್ತಾಗಿದೆ. ಆದರೆ (ಕಅಬಾಲಯದ) ಬಾಕಿ ಇರುವ ಎರಡು ಮೂಲೆಯನ್ನು ಪ್ರವಾದಿ (ಸಅ)ರು ಮುಟ್ಟದ ಕಾರಣ ಅದನ್ನು ಮುಟ್ಟುವುದನ್ನು ಮತ್ತು ಸಫಾ ಮರ್ವಾದಲ್ಲಿ ಸಈ ಕಳೆದ ಕೂಡಲೇ ತವಾಫ್ ಗೆ ಖಿಯಾಸ್ ಮಾಡಿ ನಮಾಝ್ ಮಾಡುವುದನ್ನೂ ನಿರಾಕರಿಸಿದರು. ಈ ಪ್ರಕಾರ ಒಂದು ಕಾರ್ಯವು ಎಷ್ಟೇ ಆವಶ್ಯಕತೆ ಇದ್ದರೂ ಪ್ರವಾದಿ (ಸಅ)ರು ಉಪೇಕ್ಷಿಸಿದವುಗಳನ್ನು ಉಪೇಕ್ಷಿಸುವುದು ಸುನ್ನತ್ತಾಗಿದೆ. ಪ್ರವಾದಿ (ಸಅ)ರು ಉಪೇಕ್ಷಿಸಿದವುಗಳನ್ನು ಮಾಡುವುದು ಆಕ್ಷೇಪಾರ್ಹ ಬಿದ್ಅತ್ ಆಗಿದೆ.

(ಫತಾವಾ ಅಲ್ ಹದೀಸಿಯ್ಯ 281)

ಇಮಾಮ್ ಮಾಲಿಕ್ (ರ)ರವರು ಧರ್ಮದಲ್ಲಿ ಹೊಸದಾಗಿ ನಿರ್ಮಿಸುವ ವಿಷಯದಲ್ಲಿ ಹೇಳುವುದನ್ನು ಗಮನಿಸಿ...👇

 ” مَنِ ابْتَدَعَ فِي الْإِسْلَامِ بِدْعَةً يَرَاهَا حَسَنَةً، زَعَمَ أَنَّ مُحَمَّدًا صَلَّى اللَّهُ عَلَيْهِ وَسَلَّمَ خَانَ الرِّسَالَةَ، لِأَنَّ اللَّهَ يَقُولُ: {الْيَوْمَ أَكْمَلْتُ لَكُمْ دِينَكُمْ} [المائدة: 3]، فَمَا لَمْ يَكُنْ يَوْمَئِذٍ دِينًا، فَلَا يَكُونُ الْيَوْمَ دِينًا.
الاعتصام ـ للشاطبى : ج 1 / ص 49

 ಸದಾಚಾರವೆಂದು (ಒಳ್ಳೆಯದೆಂದು) ಪರಿಗಣಿಸಿ ಯಾರಾದರೂ ಇಸ್ಲಾಮಿನಲ್ಲಿ ಒಂದು ಹೊಸ ಆಚಾರವನ್ನು ನಿರ್ಮಿಸಿದರೆ ವಾಸ್ತವದಲ್ಲಿ ಅವನು ಪ್ರವಾದಿ ﷺ ರು ತನ್ನ ದೌತ್ಯದಲ್ಲಿ ಮೋಸ ಮಾಡಿದ್ದಾರೆಂದು ಆರೋಪಿಸುವವನಾಗಿದ್ದಾನೆ. ಯಾಕೆಂದರೆ ಅಲ್ಲಾಹನು ಹೇಳುತ್ತಾನೆ...

"ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು". [ಅಲ್-ಮಾ'ಇದಃ : 3]

ಆದ್ದರಿಂದ ಪ್ರವಾದಿ ﷺ ಕಾಲದಲ್ಲಿ ಧರ್ಮದಲ್ಲಿ ಪುಣ್ಯಕರ್ಮವಲ್ಲದ ಒಂದು ಆಚಾರವು ಇಂದು ಧರ್ಮದಲ್ಲಿ ಪುಣ್ಯಕರ್ಮವಾಗಲಾರದು.

[ಇಮಾಮ್ ಮಾಲಿಕ್- ಅಲ್ ಇಅತಿಸಾಮ್ 1/48]

ಆಯಿಶಾ (ರ)ರಿಂದ ವರದಿ:

عن عايشة رضي الله عنها قالت :
"رسول الله صلى الله عليه وسلم:من أحدث في أمرنا هاذا ما ليس فيه فهو رد "
(صحيح البخاري :٢٦٩٧ صحيح مسلم :١٧١٨ )

ಪ್ರವಾದಿ ﷺ ರು ಹೇಳಿದರು : "ನಮ್ಮ ಧರ್ಮದಲ್ಲಿ ಯಾರಾದರೂ ಏನನ್ನಾದರೂ ನೂತನವಾಗಿ ನಿರ್ಮಿಸಿದರೆ ಅದು ತಿರಸ್ಕೃತವಾಗಿದೆ ."

[ಸಹೀಹ್ ಬುಖಾರಿ:2697 ಸಾಹೀಹ್ ಮುಸ್ಲಿಂ 1718]

ಪ್ರವಾದಿ ﷺ ಹೇಳಿದರು :
"كُلَّ بِدْعَةٍ ضَلاَلَةٌ وَكُلَّ ضَلاَلَةٍ فِي النَّارِ"

ಎಲ್ಲಾ ಬಿದ್ಅತ್ ಗಳೂ ಪಥ ಭ್ರಷ್ಟತೆ ಯಾಗಿದೆ, ಎಲ್ಲಾ ಪಥ ಭ್ರಷ್ಟತೆಯೂ ನರಕಕ್ಕೆ ತಲುಪುತ್ತದೆ.

[ನಸಾಯಿ :1578]

ಉಮರ್ (ರ)ಹೇಳುತ್ತಾರೆ :

كل بدعة ضلالة وان رآها الناس حسنة "(سنن الدارمي )

ಎಲ್ಲಾ ನವೀನಾಚಾರಗಳೂ ಪಥಭ್ರಷ್ಟತೆಯಾಗಿದೆ, ಜನರು ಅವುಗಳನ್ನು ಎಷ್ಟು ಉತ್ತಮವಾಗಿ ಕಂಡರೂ ಕೂಡಾ.
[ಸುನೆನ್ ದಾರಿಮಿ]

ವಿದ್ವಾಂಸರಾದ ಇಬ್ನು ಹಜರ್ ಹೈತಮಿ (ರ) ರವರು ಹೇಳುತ್ತಾರೆ:

ಎಲ್ಲಾ ಬಿದ್ಅತ್ ಗಳೂ ಪಥ ಭ್ರಷ್ಟತೆ ಯಾಗಿದೆ, ಎಲ್ಲಾ ಪಥ ಭ್ರಷ್ಟತೆಯೂ ನರಕಕ್ಕೆ ತಲುಪುತ್ತದೆ. ಎಂಬ ಪ್ರವಾದಿ ﷺ ಮಾತಿನ ಅರ್ಥವೇನೆಂದರೆ ಹರಾಮ್ ಆದ ಬಿದ್ಅತ್ ಎಂದಾಗಿದೆ."

[ಫತಾವಲ್ ಹದೀಸಿಯ್ಯ 151]

👆ಇಲ್ಲಿ ಹರಾಮ್ ಆದ ಬಿದ್ಅತ್ ಎಂದರೆ ಧರ್ಮದಲ್ಲಿ ಹೊಸದಾಗಿ ಸೃಷ್ಟಿಸುವ ನವೀನಾಚಾರಗಳಾಗಿವೆ.

ಇಮಾಮ್ ಇಬ್ನು ಹಜರ್ ಅಸ್ಖಲಾನಿ ಹೇಳುತ್ತಾರೆ:

وقال ابن حجر : " والمراد بقوله : ( كل بدعة ضلالة ) ما أحدث ولا دليل له من الشرع بطريق خاص ولا عام " فتح الباري (13/254)

ಸಾಮಾನ್ಯವಾಗಿಯೂ, ಪ್ರತ್ಯೇಕವಾಗಿಯೂ ಯಾವುದೇ ಪುರಾವೆಗಳಿಲ್ಲದ ರೀತಿಯಲ್ಲಿ ಧರ್ಮದಲ್ಲಿ ಹೊಸತಾಗಿ ನಿರ್ಮಿಸಿದವುಗಳು (ಪಥಭ್ರಷ್ಟವಾದ ಬಿದ್ಅತ್)ಆಗಿದೆ.

[ಫತ್'ಹುಲ್ ಬಾರಿ 13/254]

ಶರಈ ಆದ ಬಿದ್ಅತ್ ನ ವಿರುದ್ಧ ಇಷ್ಟೆಲ್ಲಾ ಪ್ರಮಾಣಗಳಿದ್ದರೂ ಬಿದ್ಅತ್ ಏನೆಂದು ಅರಿಯದ ಕೆಲವು ಮುಸ್ಲಿಯಾರ್ ಗಳ ವಾದ ಈ ರೀತಿಯಾಗಿದೆ...👇
ಒಂದು ಕಾರ್ಯವು ಇಸ್ಲಾಮಿಗೆ ಪ್ರಮಾಣವಾಗಬೇಕಾದರೆ ಅದನ್ನು ಪ್ರವಾದಿ ﷺ ರು ಕಲಿಸಿ ಕೊಡಬೇಕಿಲ್ಲವಂತೆ, ಇದಕ್ಕೆ ಈ ಮುಸ್ಲಿಯಾರ್ ಗಳು ನೀಡುವ ಉದಾಹರಣೆ...
LCD, Computer, Monitor, mobile... ಇತ್ಯಾದಿಗಳನ್ನು ಪ್ರವಾದಿ ﷺ ರು ಉಪಯೋಗಿಸಿಲ್ಲ. ಆದ್ದರಿಂದ ಇದೆಲ್ಲವೂ ಸಲಫಿಗಳಿಗೆ ಇದು ಬಿದ್ಅತ್ ಅಲ್ಲವೇ? ಎಂದಾಗಿದೆ ಈ ಮುಸ್ಲಿಯಾರ್ ಗಳ ಪ್ರಶ್ನೆ.

ಮುಸ್ಲಿಯಾರುಗಳೇ ಗಮನಿಸಿ... ಈ ಇಡೀ ಪ್ರಪಂಚದ ಸೃಷ್ಟಿಯೇ ಬಿದ್ಅತ್ ಆಗಿದೆ. ಆನಂತರವಾಗಿದೆ LCD, Computer, Monitor, mobile... ಇತ್ಯಾದಿ ಇತ್ಯಾದಿ... ಇಂತಹ ಮುಸ್ಲಿಯಾರುಗಳು ಮೊದಲು ಬಿದ್ಅತ್ ಏನೆಂಬುದನ್ನು ಚೆನ್ನಾಗಿ ಅರಿಯಬೇಕಾಗಿದೆ.

ಪ್ರವಾದಿತ್ವದ 23 ವರ್ಷಗಳಲ್ಲಿ ಪ್ರವಾದಿ ﷺ ರು ಕಲಿಸಿಕೊಟ್ಟಿರುವುದು ಮಾತ್ರ ಇಸ್ಲಾಮ್ ಆಗಿದೆ ಎಂಬ ಪರಮಸತ್ಯವನ್ನು ಪ್ರತಿಯೊಬ್ಬ ಮುಸಲ್ಮಾನ ಅರಿತಿರಲೇಬೇಕು. ಪ್ರವಾದಿ ﷺ ರು ಕಲಿಸಿ ಕೊಡದಂತಹ ಯಾವುದಾದರೂ ಒಂದನ್ನು ದೀನ್ ಎಂದು ಆಚರಣೆ ಮಾಡಿದರೆ ಅದು ಎಷ್ಟೇ ದೊಡ್ಡ ಆಲಿಮಿನ ಅಭಿಪ್ರಾಯವಾದರೂ ಸರಿ, ಇಸ್ಲಾಮ್ ಆಗಿರಲು ಖಂಡಿತವಾಗಿಯೂ ಸಾಧ್ಯವಿಲ್ಲ. ಯಾಕೆಂದರೆ ಪ್ರವಾದಿ  (ಸಅ)ರ ಬಗ್ಗೆ ಅಲ್ಲಾಹನು ಪರಿಶುದ್ಧ ಕುರ್'ಆನ್ ನಲ್ಲಿ ಹೇಳುತ್ತಾನೆ:

وَمَا يَنْطِقُ عَنِ الْهَوَىٰ
ಅವರು ತಮ್ಮಿಷ್ಟದಂತೆ ಮಾತನಾಡುವುದಿಲ್ಲ.

 ... إِنْ هُوَ إِلَّا وَحْيٌ يُوحَىٰ
ಅದು ಅವರಿಗೆ ದಿವ್ಯಸಂದೇಶವಾಗಿ ನೀಡಲಾಗುವ ಒಂದು ಸಂದೇಶ ಮಾತ್ರವಾಗಿದೆ.

[ಅನ್ನಜ್ಮ್ : 3 - 4]

ನಮ್ಮ ಹೆಸರಲ್ಲಿ ಅವರು (ಪ್ರವಾದಿಯವರು) ಯಾವು ದಾದರೂ ಮಾತುಗಳನ್ನು ಸ್ವತಃ ರಚಿಸಿ ಹೇಳಿರುತ್ತಿದ್ದರೆ. ನಾವು ಅವರನ್ನು ಬಲಗೈಯಿಂದ ಹಿಡಿಯು ತ್ತಿದ್ದೆವು. ತರುವಾಯ ಅವರ ಕಂಠನಾಡಿಯನ್ನು ನಾವು ಕತ್ತರಿಸಿ ಹಾಕುತ್ತಿದ್ದೆವು. ಆಗ ನಿಮ್ಮ ಪೈಕಿ ಯಾರಿಗೂ ಅವರಿಂದ (ಶಿಕ್ಷೆಯನ್ನು) ತಡೆಯಲಾಗದು. ಖಂಡಿತವಾಗಿಯೂ ಇದು (ಕುರ್ಆನ್) ಭಯ ಭಕ್ತಿ ಪಾಲಿಸುವವರಿಗೆ ಇರುವ ಒಂದು ಉಪದೇಶವಾಗಿದೆ.

[ಅಲ್-ಹಾಕ್ಕಃ : 44 - 48]

ಪ್ರವಾದಿ (ಸಅ)ರ ಮಾತನ್ನು ಗಮನಿಸಿ.👇

ಪ್ರವಾದಿ ﷺ ರು ಹೇಳಿದರು : "ನಿಮ್ಮನ್ನು ಸ್ವರ್ಗಕ್ಕೆ ಹತ್ತಿರಗೊಳಿಸುವ ಯಾವುದೇ ಕಾರ್ಯವನ್ನು ನಿಮಗೆ ನಾನು ತಿಳಿಸದೆ ಬಿಟ್ಟಿಲ್ಲ. ನಿಮ್ಮನ್ನು ನರಕದಿಂದ ದೂರೀಕರಿಸುವ ಯಾವುದೇ ಕಾರ್ಯವನ್ನೂ ನಾನು ನಿಮಗೆ ಹೇಳಿ ಕೊಡದೆ ಹೋಗಿಲ್ಲ.” [ತ್ವಬ್ರಾನಿ]

ಪ್ರವಾದಿ ﷺ ರ  ರವರ ಈ ಮಾತಿಗೆ ಕವಡೆ ಕಾಸಿನ ಬೆಲೆಯೂ ನೀಡದ ಮುಸ್ಲಿಯಾರ್ ಗಳು ಪ್ರವಾದಿ ﷺ ಕಲಿಸಿ ಕೊಡದ ಪ್ರವಾದಿ ﷺ ರ ಜನ್ಮದಿನಾಚರಣೆ, ಸ್ವಲಾತ್ ಮಜ್ಲಿಸ್, ದಿಕ್ರ್ ಹಲ್ಕಾ, ಕುತುಬಿಯ್ಯತ್, ಉರೂಸ್, ಆಂಡ್ ನೇರ್ಚೆ, ರಾತೀಬು, ಕುತ್ತು ರಾತೀಬು, ದಫ್ ರಾತೀಬು,  ಮೊದಲಾದ ಅನಾಚಾರಗಳನ್ನು ಮುಗ್ಧ ಜನರಿಗೆ ಪರಿಚಯಿಸಿ ಅವರ ಜೇಬು ಖಾಲಿ ಮಾಡಲು ಹೊರಟಿದ್ದಾರೆ.

ಮುಸ್ಲಿಯಾರುಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ. ದುಡ್ಡಿಗೋಸ್ಕರ ಜನರನ್ನು ವಂಚಿಸಿ ಪರಲೋಕದಲ್ಲಿ ಅಲ್ಲಾಹನ ಶಿಕ್ಷೆಗೆ ಗುರಿಯಾಗಬೇಡಿ.

ಪ್ರವಾದಿ ﷺ ರು ಪ್ರೀತಿಯ ಪುತ್ರಿ ಪಾತಿಮಾ (ರ) ರವರಲ್ಲಿ ಹೇಳಿದ ಮಾತನ್ನು ಗಮನಿಸಿ.👇

يا فاطمة ، أنقذي نفسك من النار ، فإني لا أملك لكم من الله شيئا

ಓ ಫಾತಿಮಾ ನಿನ್ನ ಶರೀರವನ್ನು ನೀನು ನರಕದಿಂದ ಸಂರಕ್ಷಿಸು, ಅಲ್ಲಾಹನಿಂದ ನಿನಗೆ ಯಾವುದನ್ನೂ ಕೊಡಲು ನನ್ನಿಂದ ಸಾಧ್ಯವಿಲ್ಲ.

ಪ್ರವಾದಿ ﷺ ರವರು ಸ್ವಂತ ಮಗಳನ್ನು ಕರೆದು ಈ ರೀತಿ ಹೇಳಬೇಕಾದರೆ ನಮ್ಮ ಅವಸ್ಥೆಯನ್ನು ಊಹಿಸಿ ನೋಡಿ.

ಅಲ್ಲಾಹನು ಎಲ್ಲಾ ತರದ ಶಿರ್ಕ್, ಬಿದ್ಅತ್, ಕುರಾಫಾತ್ ನಿಂದ ನಮ್ಮೆಲ್ಲರನ್ನೂ ರಕ್ಷಿಸಲಿ.

ಆಮೀನ್...

✍ Abu Muadh