3 Jun 2017

ಇಸ್ಲಾಮಿನಲ್ಲಿ ಹಂದಿಮಾಂಸ ನಿಷಿದ್ಧವೇಕೆ?

ಇಸ್ಲಾಮಿನಲ್ಲಿ ಹಂದಿಮಾಂಸ ನಿಷಿದ್ಧವೇಕೆ?

July 13, 2011 — Satya Sarathi

ಇಸ್ಲಾಮ್ ಹಂದಿ ಮಾಂಸ (Pork) ಸೇವನೆಯನ್ನು ನಿಷಿದ್ಧಗೊಳಿಸಿದೆ ಎಂಬುದು ಎಲ್ಲರೂ ತಿಳಿದಿರುವ ವಿಚಾರವಾಗಿದೆ. ಹಂದಿ ಮಾಂಸವು ತ್ಯಾಜ್ಯ ಯೋಗ್ಯವೇ ಸರಿ ಎಂಬುದನ್ನು ಈ ಕೆಳಗಿನ ಅಂಶಗಳು ಸ್ಪಷ್ಟಪಡಿಸುತ್ತವೆ.

1. ಕುರ್‌ಆನ್‌ನಲ್ಲಿ ಹಂದಿ ಮಾಂಸ ನಿಷೇಧ:
ಕುರ್‌ಆನ್ ನಾಲ್ಕು ಸ್ಥಳಗಳಲ್ಲಿ ಹಂದಿ ಮಾಂಸ ಸೇವನೆಯನ್ನು ನಿಷಿದ್ಧಗೊಳಿಸಿದೆ.
ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರ ಹೆಸರಿನಲ್ಲಿ ಕೊಯ್ಯಲ್ಪಟ್ಟ ಪ್ರಾಣಿ ನಿಮಗೆ ನಿಷಿದ್ಧವಾಗಿದೆ. (5/3)
ಒಬ್ಬ ಮುಸ್ಲಿಮನಿಗೆ ಒಂದು ವಸ್ತು ಅಥವಾ ವಿಷಯವನ್ನು ತೊರೆಯಲು ಕುರ್‌ಆನ್‌ನ ಚಿಕ್ಕದೊಂದು ಸೂಕ್ತಿಯೇ ಧಾರಾಳ ಸಾಕು. ಕುರ್‌ಆನ್ ಹೇಳಿತೆಂದರೆ ಮುಗಿಯಿತು.
ನಿಷೇಧವನ್ನು ವಿಧಿಸುವ ಕುರ್‌ಆನ್‌ನ ಇತರ ಸೂಕ್ತಿಗಳು: 2/173; 6/145; 16/115.

2. ಹಂದಿ ಮಾಂಸವನ್ನು ನಿಷೇಧಿಸುವ ಬೈಬಲ್:
ಈ ಬಗ್ಗೆ ಓರ್ವ ಕ್ರೈಸ್ತನಿಗೆ ಬೈಬಲ್ ಮೂಲಕ ಮನವರಿಕೆ ಮಾಡಿಕೊಟ್ಟರೆ ಅದುವೇ ಧಾರಾಳವಾಗಬಹುದು ಎಂದು ನನ್ನ ಅನಿಸಿಕೆ. ಈ ಕೆಳಗಿನ ಸ್ಥಳಗಳಲ್ಲಿ ಬೈಬಲ್ ಕೂಡಾ ಹಂದಿ ಮಾಂಸವನ್ನು ನಿಷೇಧಿಸುತ್ತದೆ.
ಹಂದಿಯ ಗೊರಸು ಸೀಳಿಯದೆ; ಆದರೂ ಅದು ಮೆಲುಕುಹಾಕುವದಿಲ್ಲವಾದದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು; ಇವುಗಳನ್ನು ಅಶುದ್ಧವೆಂದೆಣಿಸಬೇಕು. (ಯಾಜಕಕಾಂಡ 11/7-8)
ಹಂದಿಯ ಗೊರಸು ಸೀಳಿದ್ದರೂ ಅದು ಮೆಲುಕುಹಾಕುವದಿಲ್ಲವಾದದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಕೂಡದು; ಇವುಗಳ ಹೆಣವನ್ನು ಮುಟ್ಟಕೂಡದು. (ಧರ್ಮೋಪದೇಶಕಾಂಡ 14/8)
ಯೆಶಾಯ ಪುಸ್ತಕದ 65ನೇ ಅಧ್ಯಾಯದ 2, 3 ವಚನಗಳಲ್ಲೂ ಹಂದಿ ಮಾಂಸ ನಿಷೇಧಿಸಲ್ಪಟ್ಟಿದೆ.

3. ಹಂದಿ ಮಾಂಸದಿಂದ ಹಲವು ರೋಗಗಳು:
ಇಲ್ಲಿ ತಿಳಿಸಿದ ಕುರ್‌ಆನ್ ಹಾಗೂ ಬೈಬಲ್‌ನ ಸೂಕ್ತಿಗಳು ಮುಸ್ಲಿಮ್ ಹಾಗೂ ಕ್ರೈಸ್ತ ಸಹೋದರರಿಗೆ ಸಾಕಾಗಬಹುದಾದರೂ ಅನ್ಯ ಧರ್ಮೀಯರು ಹಾಗೂ ನಿರೀಶ್ವರವಾದಿಗಳು ಇದನ್ನು ಒಪ್ಪಲಾರರು. ಇವರಿಗೆ ಮನವರಿಕೆ ಮಾಡಬೇಕಾದಲ್ಲಿ ಯುಕ್ತಿ ಹಾಗೂ ವಿಜ್ಞಾನದ ನೆರವು ಬೇಕಾಗುತ್ತದೆ. ಹಂದಿ ಮಾಂಸ ಸೇವನೆಯಿಂದ ಸುಮಾರು ಎಪ್ಪತ್ತು ವಿಧದ ರೋಗಗಳು ಬಾಧಿಸುವ ಸಾಧ್ಯತೆಗಳಿವೆ. ಮನುಷ್ಯ ದೇಹವು Round worm, Pin worm, Hook worm ಮುಂತಾದ ರೋಗಕಾರಕ ಕ್ರಿಮಿಗಳ ತಾಣಗಳಾಗಿ ಮಾರ್ಪಡಬಹುದು. Taenia Solium ಎಂಬುದು ಅತ್ಯಂತ ಅಪಾಯಕಾರಿಯಾಗಿದ್ದು ಇದನ್ನು ಆಡುಭಾಷೆಯಲ್ಲಿ Tape worm ಎನ್ನಲಾಗುತ್ತದೆ. ಅತ್ಯಂತ ಉದ್ದವಾಗಿರುವ ಇದರ ತಾಣವೇ ಕರುಳು. ರಕ್ತಪ್ರವಾಹವನ್ನು ಪ್ರವೇಶಿಸುವ ಇದರ ಮೊಟ್ಟೆಗಳು ದೇಹದ ಎಲ್ಲಾ ಅಂಗಗಳನ್ನೂ ಸೇರಬಲ್ಲುದು. ಇದು ಮೆದುಳನ್ನು ಪ್ರವೇಶಿಸಿದಲ್ಲಿ ಜ್ಞಾಪಕಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹೃದಯವನ್ನು ಪ್ರವೇಶಿಸಿದಲ್ಲಿ ಹೃದಯಾಘಾತವೂ, ಕಣ್ಣುಗಳನ್ನು ಪ್ರವೇಶಿಸಿದಲ್ಲಿ ಅಂಧತ್ವ ಮತ್ತು ಪಿತ್ತಕೋಶವನ್ನು ಪ್ರವೇಶಿಸಿದಲ್ಲಿ ಅದನ್ನೂ ಘಾಸಿಗೊಳಿಸುವ ಸಾಧ್ಯತೆಗಳಿವೆ. ಹೀಗೆ ಇದು ದೇಹದ ಎಲ್ಲಾ ಅಂಗಗಳನ್ನೂ ಬಾಧಿಸುವ ಅಪಾಯವಿದೆ.
Trichura tichurasis ಎಂಬುದು ಹಂದಿ ಮಾಂಸದ ಮೂಲಕ ಹರಡುವ ಇನ್ನೊಂದು ಅತ್ಯಂತ ಅಪಾಯಕಾರೀ ಹುಳವಾಗಿದೆ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿದಲ್ಲಿ ಇಂತಹ ಹುಳಗಳಿಂದ ಮುಕ್ತಿ ಹೊಂದಬಹುದು ಎಂದು ಬಹಳಷ್ಟು ಜನರು ಭಾವಿಸಿಕೊಂಡಿರುವರು. ವಾಸ್ತವಿಕವಾಗಿ ಇದೊಂದು ತಪ್ಪು ತಿಳುವಳಿಕೆ ಮಾತ್ರ. ಅಮೇರಿಕಾದ ಸಂಶೋಧನಾ ಶಿಬಿರಗಳಲ್ಲಿ ನಡೆದ ಸಂಶೋಧನೆಗಳು ಬೇಯಿಸಿ ಬಚಾವಾಗುವ ತಂತ್ರಗಳ ಪೊಳ್ಳುತನವನ್ನು ಬಯಲಿಗೆಳೆದಿವೆ. Trichura tichurasis ಪೀಡಿತರಾದ 24 ರೋಗಿಗಳಲ್ಲಿ 20 ಮಂದಿ ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿಯೇ ತಿಂದಿದ್ದರು. ಇದು ಹಂದಿ ಮಾಂಸದಲ್ಲಿರುವ ರೋಗಾಣು ಮೊಟ್ಟೆಗಳು (ova) ಕುದಿಯುವ ಉಷ್ಣತೆಯಲ್ಲಿ ನಾಶ ಹೊಂದಲಾರವು ಎಂಬುದನ್ನು ಸ್ಪಷ್ಟಪಡಿಸುತ್ತದೆ.

4. ಕೊಬ್ಬು ಶೇಖರಣಾ ಅಂಶ ಹಂದಿ ಮಾಂಸದಲ್ಲಿ ಅತ್ಯಧಿಕ:
ಹಂದಿ ಮಾಂಸದಲ್ಲಿ ಸ್ನಾಯುವರ್ಧಕ ಅಂಶಗಳು ಅತ್ಯಲ್ಪ ಮತ್ತು ಕೊಬ್ಬಿನಾಂಶಗಳು ಅತ್ಯಧಿಕವಾಗಿವೆ. ಕೊಬ್ಬಿನ ಅಂಶಗಳು ರಕ್ತನಾಳಗಳಲ್ಲಿ ಶೇಖರಿಸಲ್ಪಟ್ಟು ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತಕ್ಕೆ ಕಾರಣವಾಗುತ್ತವೆ. ಅಮೇರಿಕಾದ 50 ಶೇಕಡಕ್ಕಿಂತಲೂ ಅಧಿಕ ಮಂದಿಗೆ ಅಧಿಕ ರಕ್ತದೊತ್ತಡ (hypertension) ಇರುವುದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ.

5. ಹಂದಿ ಪ್ರಾಣಿಗಳಲ್ಲೇ ಅತ್ಯಂತ ಕೊಳಕು:
ಹಂದಿಯು ಜಗತ್ತಿನ ಅತ್ಯಂತ ಕೊಳಕು ಪ್ರಾಣಿಗಳ ಪೈಕಿ ಒಂದಾಗಿದೆ. ಇದು ಕೊಳಕಿನಲ್ಲಿಯೇ ಜೀವಿಸಿ ಬೆಳೆಯುವ ಪ್ರಾಣಿಯಾಗಿದೆ. ನನ್ನ ಅನಿಸಿಕೆಯಂತೆ ಹಂದಿಯು ದೇವನು ಸೃಷ್ಟಿಸಿದ ಅತ್ಯುತ್ತಮ ಜಾಡಮಾಲಿಯಾಗಿದೆ. ಸುಸಜ್ಜಿತ ಪಾಯಿಖಾನೆಗಳಿಲ್ಲದ ಹಳ್ಳಿಗರು ತೆರೆದ ಮೈದಾನದಲ್ಲೇ ಪ್ರಕೃತಿಯ ಕರೆಗೆ ಓಗೊಡುವರು. ಹಂದಿಗಳು ಕ್ಷಣಾರ್ಧದಲ್ಲೇ ಅದನ್ನು ತಿಂದು ಸ್ವಚ್ಛ ಮಾಡುತ್ತವೆ.
ಮುಂದುವರಿದ ರಾಷ್ಟ್ರಗಳಾದ ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಹಂದಿಗಳನ್ನು ಸುವ್ಯವಸ್ಥಿತ ರೀತಿಯಲ್ಲಿ, ಶುದ್ಧ ಪರಿಸರದಲ್ಲಿ ಸಾಕುತ್ತಾರೆ ಎಂಬ ವಾದ ಕೆಲವರಿಗಿದೆ. ಆದರೆ ಅವುಗಳನ್ನು ಶುದ್ಧವಾಗಿಡಲು ನೀವೆಷ್ಟೇ ಪ್ರಯತ್ನ ಮಾಡಿದರೂ ಅದು ತನ್ನ ಪ್ರಕೃತಿದತ್ತ ಕೊಳಕುತನವನ್ನು ಬಿಡಲಾರದು. ತನ್ನ ಸಂಗಾತಿಯ ಮ್ಲೇಚ್ಛವನ್ನು, ಅದೂ ಸಿಗದಿದ್ದಲ್ಲಿ ತನ್ನ ಸ್ವಂತದ್ದನ್ನೇ ಸ್ವಾಹಾ ಮಾಡಿ ಮುಗಿಸುತ್ತದೆ!

6. ಹಂದಿಯು ಅತ್ಯಂತ ಲಜ್ಜಾಹೀನ ಪ್ರಾಣಿ:
ಹಂದಿಯು ಜಗತ್ತಿನ ಅತ್ಯಂತ ಲಜ್ಜಾಹೀನ ಪ್ರಾಣಿಯೂ ಆಗಿದೆ. ತನ್ನ ಸಂಗಾತಿಯ ಜೊತೆ ಕಾಮಕೇಳಿ ನಡೆಸಲು ತನ್ನ ಗೆಳೆಯರನ್ನೇ ಅಹ್ವಾನಿಸಿ ಖುಷಿಪಡುವ ಏಕೈಕ ಪ್ರಾಣಿಯಾಗಿದೆ. ಅಮೇರಿಕನ್ನರ ಪೈಕಿ ಹೆಚ್ಚಿನವರು ಹಂದಿ ಮಾಂಸ ಪ್ರಿಯರು. ಇವರಲ್ಲಿ ಚಾಲ್ತಿಯಲ್ಲಿರುವ ನೃತ್ಯಕೂಟಗಳ ಬಳಿಕ ಪತ್ನಿಯರ ವಿನಿಮಯ (swapping) ಎಂಬ ಕಾರ್ಯಕ್ರಮವೂ ಇರುತ್ತದೆ. ಈ ರಾತ್ರಿ ನಿನ್ನ ಪತ್ನಿ ನನಗೆ, ನನ್ನ ಪತ್ನಿ ನಿನಗೆ ಎಂದಾಗಿದೆ ಇದು. ಸೇವಿಸುವ ಆಹಾರವು ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ ಎಂಬ ಇವರ ಸಂಶೋಧನೆಯು ಇವರಿಗೇ ತಿರುಮಂತ್ರವಾಗಿದೆ. ಹಂದಿ ಮಾಂಸ ತಿನ್ನುವವರಿಗೆ ಅದರದೇ ಸ್ವಭಾವವೂ ಅಂಟಿಕೊಂಡಿದೆ. ಅಮೇರಿಕದವರನ್ನು ಉನ್ನತರೆಂದು ಭ್ರಮಿಸಿಕೊಂಡಿರುವ ಭಾರತೀಯರಾದ ನಾವು ಕೆಲವು ವರ್ಷಗಳ ಬಳಿಕ ಅವರ ಬೆನ್ನು ಹತ್ತುತ್ತೇವೆ. Island Magazine ಒಂದರ ವರದಿಯಂತೆ ಮುಂಬಯಿಯ ಶ್ರೀಮಂತ ವರ್ತುಲಗಳಲ್ಲಿ swapping ಪದ್ಧತಿಯು ಸಾಮಾನ್ಯವಾಗಿದೆ.

30 May 2017

ಕುರ್‌ಆನ್ ಸಂಗ್ರಹದ ಇತಿಹಾಸ.


ಕುರ್‌ಆನ್ ಸಂಗ್ರಹದ ಇತಿಹಾಸ; ಕುರ್‌ಆನಿಗಿಂತ ಹಿಂದೆ ಮಾನವ ಸಮಾಜಕ್ಕೆ ನೀಡಲಾಗಿದ್ದ ದಿವ್ಯ ಗ್ರಂಥಗಳೆಲ್ಲಾ,ಪುರೋಹಿತರು, ಆಡಳಿತಗಾರರು ಮತ್ತಿತರ ಹಲವರ ಇಚ್ಛಾನುಸಾರ, ಹಲವು ಹಸ್ತಕ್ಷೇಪಗಳಿಗೆ ಹಾಗೂ ವಿವಿಧ ವಿಕೃತಿಗಳಿಗೆ ತುತ್ತಾಗಿ, ಕಾಲಕ್ರಮೇಣ ತಮ್ಮ ಮೂಲಸ್ವರೂಪವನ್ನೇ ಕಳೆದುಕೊಂಡವು.ಅದರೆ ಪವಿತ್ರ ಕುರ್‌ಆನ್ ಇಂತಹ ಯಾವುದೇ ದುರಂತಕ್ಕೆ ತುತ್ತಾಗಲಿಲ್ಲ,ಮಾತ್ರವಲ್ಲ, ಅದು ಯಾವ ಕಾಲದಲ್ಲೂ ಅಂತಹ ಯಾವುದೇ ವಿಕೃತಿಗೆ ಒಳಗಾಗುವ ಸಾಧ್ಯತೆ ಕೂಡಾ ಇಲ್ಲ. ಏಕೆಂದರೆ, ಇದು ಮಾನವಕುಲದ ಮಾರ್ಗದರ್ಶನಕ್ಕಿರುವ ಅಂತಿಮ ಮೂಲವಾಗಿದ್ದು, ಇದನ್ನು ಕಳಿಸಿರುವ ಅಲ್ಲಾಹನೇ ಇದನ್ನು ಸಂರಕ್ಷಿಸುವ ಹೊಣೆಹೊತ್ತಿರುವನು. ಪ್ರವಾದಿ ಮುಹಮ್ಮದ್(ಸ)ರಿಗೆ ಅಲ್ಲಾಹನ ಕಡೆಯಿಂದ ಪ್ರಥಮ ದಿವ್ಯ ಸಂದೇಶವು ಕ್ರಿ.ಶ. 610ರಲ್ಲಿ ಪ್ರಾಪ್ತವಾಗಿತ್ತು. ಅನಂತರದ 23 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಕುರ್‌ಆನಿನ ಭಾಗಗಳು ಅವರಿಗೆ ಪ್ರಾಪ್ತವಾಗುತ್ತಲೇ ಇದ್ದವು. ಪ್ರವಾದಿವರ್ಯ(ಸ)ರ ನಿಧನಕ್ಕೆ ಕೆಲವೇ ದಿನ ಮುನ್ನ ಕ್ರಿ.ಶ.632ರಲ್ಲಿ ಈ ಸರಣಿ ಪರಿಪೂರ್ಣಗೊಂಡಿತು.

ಈ ರೀತಿ, ಕುರ್‌ಆನಿನ ಅನಾವರಣದ ಪ್ರಕ್ರಿಯೆಯು ಪೂರ್ಣವಾಗುತ್ತಿದ್ದಂತೆಯೇ,ಅದನ್ನು ಸಂರಕ್ಷಿಸುವ ಪ್ರಕ್ರಿಯೆಯ ಒಂದು ನಿರ್ಣಾಯಕ ಹಂತವೂ ಪೂರ್ಣಗೊಂಡಿತ್ತು. ಪ್ರವಾದಿವರ್ಯ(ಸ)ರ ಬದುಕಿನ ಅವಧಿಯಲ್ಲೇ, ಎರಡೆರಡು ವಿಧಾನಗಳಿಂದ ಕುರ್‌ಆನನ್ನು ಸುರಕ್ಷಿತವಾಗಿ ದಾಖಲಿಸಲಾಗಿತ್ತು; 1. ದಿವ್ಯ ಸಂದೇಶವನ್ನು ಕಂಠ ಪಾಠ ಮಾಡುವ ಮೂಲಕ ಮತ್ತು 2.ಅದನ್ನು ಲಿಖಿತವಾಗಿ ದಾಖಲಿಸುವ ಮೂಲಕ. ಅಂದರೆ ಪ್ರಥಮವಾಗಿ, ಮಾನವ ಮಸ್ತಿಷ್ಕಗಳಲ್ಲೇ ಕುರ್‌ಆನನ್ನು ಸಂರಕ್ಷಿಸಲಾಯಿತು. ಸಾಕ್ಷಾತ್ ಪ್ರವಾದಿ ಮುಹಮ್ಮದ್(ಸ) ಪವಿತ್ರ ಕುರ್‌ಆನಿನ ಪ್ರಥಮ ‘ಹಾಫಿಝ್’ ಆಗಿದ್ದರು. (ಹಾಫಿಝ್ ಎಂದರೆ ಸಂರಕ್ಷಕ. ಕುರ್‌ಆನನ್ನು ಸಂಪೂರ್ಣ ಕಂಠಪಾಠ ಮಾಡಿಕೊಂಡವರನ್ನು ಹಾಫಿಝ್‌ಗಳೆಂದು ಗುರುತಿಸಲಾಗುತ್ತದೆ). ಪ್ರವಾದಿವರ್ಯ(ಸ)ರ ಸಂಗಾತಿ (ಸಹಾಬಿ)ಗಳ ಪೈಕಿ, ಅಬೂಬಕರ್(ರ), ಉಮರ್(ರ),ಉಸ್ಮಾನ್(ರ), ಅಲೀ(ರ), ತಲ್ಹಾ (ರ),ಸಅದ್(ರ), ಇಬ್ನು ಮಸ್‌ವೂದ್(ರ), ಅಬೂ ಹುರೈರ(ರ), ಅಬ್ದುಲ್ಲಾಹ್‌ಬಿನ್ ಉಮರ್(ರ),ಇಬ್ನು ಅಬ್ಬಾಸ್(ರ),ಅನಸ್‌ಬಿನ್‌ಮಾಲಿಕ್(ರ)ಮುಂತಾದ ಖ್ಯಾತ ನಾಮರ ಸಹಿತ ನೂರಾರು ಮಂದಿ ಹಾಫಿಝ್‌ಗಳಾಗಿದ್ದರು. ಇದರ ಜೊತೆಗೆ, ದಿವ್ಯ ಸಂದೇಶವನ್ನು ಬರೆದು ದಾಖಲಿಸಿಡುವ ಏರ್ಪಾಡನ್ನೂ ಮಾಡಲಾಗಿತ್ತು. ನಾಲ್ವರು ಖಲೀಫರ ಸಹಿತ ಸುಮಾರು 40 ಸಹಾಬಿಗಳು ಅಧಿಕೃತವಾಗಿ ಪ್ರವಾದಿವರ್ಯ(ಸ)ರ ನಿರ್ದೇಶಾನುಸಾರ ದಿವ್ಯ ಸಂದೇಶವನ್ನು ಬರೆದಿಡುತ್ತಿದ್ದರು. ಪ್ರವಾದಿವರ್ಯ(ಸ)ರಿಗೆ ಕುರ್‌ಆನಿನ ಯಾವುದಾದರೂ ಭಾಗವು ಪ್ರಾಪ್ತವಾದಾಗ ಅವರು ತಮ್ಮ ಸಂಗಾತಿಗಳನ್ನು ಕರೆದು ಆ ಭಾಗವನ್ನು, ಈ ಹಿಂದೆ ದಾಖಲಿಸಲಾದ ಯಾವ ಭಾಗದ ಮುನ್ನ ಅಥವಾ ಯಾವ ಭಾಗದ ನಂತರ ಬರೆದಿಡಬೇಕೆಂದು ಸೂಚಿಸುತ್ತಿದ್ದರು. ಆ ಪ್ರಕಾರ ಸಹಾಬಿಗಳು ಅದನ್ನು ಕಲ್ಲಿನ ಫಲಕಗಳಲ್ಲಿ, ಚರ್ಮದಲ್ಲಿ, ಖರ್ಜೂರದ ಎಲೆಗಳ ಹಾಳೆಗಳಲ್ಲಿ, ಬಿದಿರಿನ ತುಂಡುಗಳಲ್ಲಿ ಹೀಗೆ ವಿವಿಧ ವಸ್ತುಗಳಲ್ಲಿ ಬರೆದಿಡುತ್ತಿದ್ದರು. ಇವರಲ್ಲದೆ ಕುರ್‌ಆನಿನ ಭಾಗಗಳನ್ನು ಕಂಠಪಾಠ ಮಾಡಿಕೊಂಡಿದ್ದ ಇತರ ಅನೇಕ ಸಂಗಾತಿಗಳೂ ತಮಗೆ ನೆನಪಿರುವ ಭಾಗಗಳನ್ನು ಬರೆದಿಡುತ್ತಿದ್ದರು. ಹಾಗೆಯೇ,ಪ್ರತಿದಿನ, ಕಡ್ಡಾಯ ಹಾಗೂ ಐಚ್ಛಿಕ ನಮಾಝ್‌ಗಳಲ್ಲಿ ಕುರ್‌ಆನನ್ನು ಓದುವ ಹಾಗೂ ಮುಸ್ಲಿಮರು ಒಟ್ಟುಸೇರುವ ಸಂದರ್ಭಗಳಲ್ಲೆಲ್ಲಾ ಪರಸ್ಪರರಿಗೆ ಕುರ್‌ಆನನ್ನು ಓದಿ ಕೇಳಿಸುವ ಸಂಪ್ರದಾಯವು ಪ್ರವಾದಿವರ್ಯ(ಸ)ರ ಕಾಲದಿಂದಲೇ ಅನುಷ್ಠಾನದಲ್ಲಿದ್ದು,ಕುರ್‌ಆನಿನ ಸಂರಕ್ಷಣೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ಪ್ರವಾದಿವರ್ಯ(ಸ)ರ ಕಾಲದಲ್ಲಿ ಪವಿತ್ರ ಕುರ್‌ಆನನ್ನು ಬರೆದಿಡಲಾಗಿದ್ದ ಕೆಲವು ಕೃತಿಗಳು ಪೂರ್ಣವಾಗಿದ್ದರೆ, ಹೆಚ್ಚಿನ ಸಂಗ್ರಹ ಕೃತಿಗಳು ಅಪೂರ್ಣವಾಗಿದ್ದವು. ಕೆಲವರ ಬಳಿ5 ಅಧ್ಯಾಯಗಳಿದ್ದರೆ ಮತ್ತೆ ಕೆಲವರ ಬಳಿ 15ಅಧ್ಯಾಯಗಳಿದ್ದವು. ಕೆಲವರು ಕುರ್‌ಆನಿನ ಮೂಲ ವಾಕ್ಯಗಳ ಜೊತೆಗೆ, ಆ ಕುರಿತು ಟಿಪ್ಪಣಿಗಳನ್ನೂ ಬರೆದಿದ್ದರು. ಆದ್ದರಿಂದ ಪ್ರವಾದಿವರ್ಯ(ಸ)ರ ಬಳಿಕ ಮುಸ್ಲಿಮ್ ಸಮುದಾಯದ ನಾಯಕರಾಗಿ ನಿಯುಕ್ತರಾದ ಅಬೂಬಕರ್ ಸಿದ್ದೀಕ್(ರ)ರ ಆಡಳಿತಾವಧಿಯಲ್ಲಿ ಪ್ರಸ್ತುತ ಭಾಗಗಳನ್ನೆಲ್ಲಾ ಒಂದುಗೂಡಿಸಿ, ಒಂದು ಅಧಿಕೃತ ಪ್ರತಿಯನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು.

ಈ ಕಾರ್ಯಾಚರಣೆಯ ಉಸ್ತುವಾರಿಯನ್ನು ಝೈದ್‌ಬಿನ್ ಸಾಬಿತ್(ರ) ರಿಗೆ ವಹಿಸಿ ಕೊಡಲಾಯಿತು. ಅವರು ಸ್ವತಃ ಕುರ್‌ಆನ್ ಕಂಠಪಾಠವಿರುವ ಹಾಫಿಝ್ ಆಗಿದ್ದರು. ಅಲ್ಲದೆ ಪ್ರವಾದಿವರ್ಯ(ಸ)ರ ಕಾಲದಲ್ಲಿ,ಕುರ್‌ಆನಿನ ವಾಕ್ಯಗಳನ್ನು ಬರೆದಿಡುವ ಕಾಯಕದಲ್ಲಿ ಸಕ್ರಿಯವಾಗಿ ಪಾಲುಗೊಂಡ ಅನುಭವವೂ ಅವರಿಗಿತ್ತು. ಅವರು ಕೇವಲ ತಮ್ಮ ನೆನಪಿನ ಆಧಾರದಲ್ಲಿ ಅಥವಾ ಆ ಕಾಲದಲ್ಲಿ ಅವರಿಗೆ ಸುಲಭವಾಗಿ ಲಭ್ಯವಾಗಿದ್ದ ಕುರ್‌ಆನಿನ ಹಲವು ಸಂಪೂರ್ಣ ಲಿಖಿತ ಪ್ರತಿಗಳ ಪೈಕಿ ಯಾವುದಾದರೂ ಒಂದು ಅಥವಾ ಎರಡು ಪ್ರತಿಗಳನ್ನು ಆಧಾರವಾಗಿಟ್ಟು ಈ ಕಾರ್ಯವನ್ನು ನೆರವೇರಿಸಬಹುದಾಗಿತ್ತು. ಆದರೆ ಅವರು ಈ ವಿಷಯದಲ್ಲಿ ಇಂತಹ ಯಾವುದಾದರೂ ಒಂದೆರಡು ಮೂಲಗಳನ್ನು ಮಾತ್ರ ಅವಲಂಬಿಸುವ ಬದಲು, ಬಹಳ ಸಮಗ್ರವಾದ ಹಾಗೂ ಪ್ರಮಾದಗಳಿಗೆ ಅವಕಾಶವೇ ಇಲ್ಲದ ವಿಧಾನವೊಂದನ್ನು ಅನುಸರಿಸಿದರು.

ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ,ಅಬೂಬಕರ್ ಸಿದ್ದೀಕ್(ರ) ಅವರು ಉಮರ್ ಬಿನ್ ಖತ್ತಾಬ್(ರ)ರನ್ನು, ಝೈದ್(ರ)ರ ಸಹಾಯಕರಾಗಿ ನೇಮಿಸಿದರು. ಉಮರ್(ರ) ಸ್ವತಃ ಹಾಫಿಝ್ ಆಗಿದ್ದರು ಹಾಗೂ ಕುರ್‌ಆನಿನ ಒಂದೊಂದು ವಾಕ್ಯದ ಕುರಿತೂ ಸಾಕ್ಷಾತ್ ಪ್ರವಾದಿವರ್ಯ(ಸ)ರ ಜೊತೆ ಚರ್ಚಿಸಿ ಆ ಕುರಿತು ತಿಳುವಳಿಕೆ ಪಡೆದವರಾಗಿದ್ದರು. ಎರಡನೆಯ ಹೆಜ್ಜೆಯಾಗಿ,ಯಾರೆಲ್ಲರ ಬಳಿ ಕುರ್‌ಆನನ್ನು ಬರೆದಿಟ್ಟ ಫಲಕ, ಹಾಳೆ ಇತ್ಯಾದಿಗಳಿವೆಯೋ ಅವರೆಲ್ಲಾ ಅವುಗಳನ್ನು ತಂದೊಪ್ಪಿಸಬೇಕೆಂದು ಸಾರ್ವಜನಿಕರಿಗೆ ಕರೆ ನೀಡಲಾಯಿತು. ಆ ಪ್ರಕಾರ ಜನರು ತಂದು ಕೊಡುತ್ತಿದ್ದ ಪ್ರತಿಗಳನ್ನು ಝೈದ್(ರ) ಹಾಗೂ ಉಮರ್(ರ) ಜಂಟಿಯಾಗಿ ಸ್ವೀಕರಿಸುತ್ತಿದ್ದರು ಹಾಗೂ ಅವರಿಬ್ಬರೂ ಜೊತೆಯಾಗಿ ತಮ್ಮ ನೆನಪಿನ ಹಾಗೂ ಅದಾಗಲೇ ಲಭ್ಯವಿದ್ದ ವಿಶ್ವಸನೀಯ ಪ್ರತಿಗಳ ಆಧಾರದಲ್ಲಿ ಅವುಗಳ ಪರಿಶೀಲನೆ ನಡೆಸುತ್ತಿದ್ದರು. ಮೂರನೆಯದಾಗಿ, ಲಭ್ಯ ಲಿಖಿತ ಪ್ರತಿಗಳನ್ನು ಪರಿಶೀಲನೆಗಾಗಿ ಸ್ವೀಕರಿಸುವ ಮುನ್ನ,ಅವುಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿತ್ತು. ಅದಕ್ಕಾಗಿ,ಯಾವುದೇ ಪ್ರತಿಯ ಪರವಾಗಿ, ಅದನ್ನು ಪ್ರವಾದಿವರ್ಯ(ಸ)ರ ಬದುಕಿನ ಕೊನೆಯ ವರ್ಷದಲ್ಲಿ ಪ್ರವಾದಿವರ್ಯರ(ಸ) ಮುಂದೆ ಓದಿ ಕೇಳಿಸಲಾಗಿತ್ತು ಹಾಗೂ ಅವರು ಅದನ್ನು ಅನುಮೋದಿಸಿದ್ದರೆಂದು ಇಬ್ಬರು ನಂಬಲರ್ಹ ವ್ಯಕ್ತಿಗಳು ಸಾಕ್ಷಿ ಹೇಳಿದ ಬಳಿಕ ಮಾತ್ರ ಅಂತಹ ಪ್ರತಿಯನ್ನು ಪರಿಶೀಲನೆಗೆ ತೆಗೆದು ಕೊಳ್ಳಲಾಗುತ್ತಿತ್ತು. ನಾಲ್ಕನೆಯದಾಗಿ, ಇಂತಹ ಎಲ್ಲ ಬಿಡಿ ಪ್ರತಿಗಳಲ್ಲಿದ್ದ ಬರಹಗಳನ್ನು,ಸಾಕ್ಷಾತ್ ಪ್ರವಾದಿವರ್ಯ(ಸ)ರ ಸಮಕ್ಷಮ ಅವರ ಸಂಗಾತಿಗಳು ಬರೆದಿಟ್ಟಿದ್ದ ಪೂರ್ಣ ಪ್ರತಿಗಳೊಂದಿಗೆ ಹೋಲಿಸಿ ನೋಡಲಾಗುತ್ತಿತ್ತು. ಇಷ್ಟಾದ ಬಳಿಕ ಪ್ರತಿಯೊಂದು ಅಧ್ಯಾಯವನ್ನು ಪ್ರತ್ಯೇಕ ಕಾಗದಗಳಲ್ಲಿ ಬರೆದು ದಾಖಲಿಸಲಾಯಿತು. ಈ ಸಂಗ್ರಹವನ್ನು ಜನರು ‘ಉಮ್ಮ್’ (ಮಾತೃ ಪ್ರತಿ) ಎಂದು ಕರೆಯುತ್ತಿದ್ದರು. ಈ ಸಂಗ್ರಹದಲ್ಲಿ ಕುರ್‌ಆನಿನ ಎಲ್ಲ ವಚನಗಳನ್ನು ಪ್ರವಾದಿ(ಸ) ಸೂಚಿಸಿದ್ದ ಕ್ರಮಾನುಸಾರವೇ ದಾಖಲಿಸಲಾಗಿತ್ತು. ಆದರೆ ಅಧ್ಯಾಯಗಳನ್ನು ಮಾತ್ರ ಪ್ರತ್ಯ ಪ್ರತ್ಯೇಕ ಹಾಳೆಗಳಲ್ಲಿ ಬರೆಯಲಾಗಿತ್ತು. ಈ ಅಧ್ಯಾಯಗಳ ಸಂಗ್ರಹವು ಅಬೂಬಕರ್(ರ)ರ ಅಧಿಕಾರಾವಧಿಯಲ್ಲಿ ಅವರ ವಶದಲ್ಲಿತ್ತು ಮತ್ತು ಅವರ ನಿಧನಾನಂತರ ಉಮರ್(ರ)ರ ವಶದಲ್ಲಿತ್ತು. ಉಮರ್(ರ) ಹುತಾತ್ಮರಾದಾಗ ಅವರ ಉಪದೇಶಾನುಸಾರ ಅದನ್ನು ಪ್ರವಾದಿಪತ್ನಿ ಹಫ್ಸಾ(ರ)ರ ವಶಕ್ಕೆ ನೀಡಲಾಯಿತು.

ಕುರ್‌ಆನಿನ ಸಂಗ್ರಹ ಹಾಗೂ ಕ್ರೋಡೀಕರಣದ ನಿಟ್ಟಿನಲ್ಲಿ ಅಂತಿಮ ಕಾರ್ಯಾಚರಣೆಯು ತೃತೀಯ ಖಲೀಫಾ ಉಸ್ಮಾನ್ ಬಿನ್ ಅಫ್ಫಾನ್(ರ) ಅವರ ಆಡಳಿತಾವಧಿಯಲ್ಲಿ ನಡೆಯಿತು. ಆ ವೇಳೆಗಾಗಲೇ ಇಸ್ಲಾಮಿನ ಬೆಳಕು ಅರೇಬಿಯಾದ ಗಡಿಗಳನ್ನು ದಾಟಿ, ಇರಾನ್ ಸಹಿತ ದೂರದೂರದ ಹಲವಾರು ನಾಡುಗಳಲ್ಲಿ ಹಬ್ಬಿತ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಸಾಮೂಹಿಕವಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದ ಈ ನಾಡುಗಳಲ್ಲಿ,ಕುರ್‌ಆನನ್ನು ಯಾವ ಶೈಲಿಯಲ್ಲಿ ಓದಬೇಕೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಮೂಡತೊಡಗಿದವು. ಹಲವರಿಗೆ, ಪ್ರವಾದಿವರ್ಯರು(ಸ) ಅನುಮತಿಸಿದ ಕುರ್‌ಆನ್ ಪಠಣದ ಏಳು ವಿಭಿನ್ನ ಶೈಲಿಗಳ ಅರಿವು ಇರಲಿಲ್ಲ. ಆದ್ದರಿಂದ ಕೆಲವರು, ತಾವು ಓದುವ ಶೈಲಿ ಮಾತ್ರ ಸರಿ,ಇತರರ ಶೈಲಿ ಸರಿಯಲ್ಲ ಎಂದು ಪಟ್ಟು ಹಿಡಿಯಲಾರಂಭಿಸಿದರು. ಈ ಸನ್ನಿವೇಶಕ್ಕೆ ಒಂದು ಶಾಶ್ವತ ಪರಿಹಾರ ಒದಗಿಸಲು ನಿರ್ಧರಿಸಿದ ಉಸ್ಮಾನ್(ರ), ಈ ಹಿಂದೆ,ಅಬೂಬಕರ್ ಸಿದ್ದೀಕ್(ರ) ಅವರ ಕಾಲದಲ್ಲಿ ಕ್ರೋಢೀಕರಿಸಲಾಗಿದ್ದ ಕುರ್‌ಆನಿನ ‘ಮಾತೃ ಪ್ರತಿ’ ಯ ನಕಲು ಪ್ರತಿಗಳನ್ನು ತಯಾರಿಸಿ ಅವುಗಳನ್ನು ಎಲ್ಲ ಪ್ರದೇಶಗಳಿಗೆ ರವಾನಿಸಿ ಕೊಡಲು ನಿರ್ಧರಿಸಿದರು. ಈ ನಿಟ್ಟಿನಲ್ಲಿ ಅವರು ಪ್ರಥಮವಾಗಿ, ಹಫ್ಸಾ(ರ)ರಿಗೆ ಸಂದೇಶ ಕಳಿಸಿ ‘ಮಾತೃಪ್ರತಿ’ಯನ್ನು ತಮ್ಮ ಬಳಿಗೆ ತರಿಸಿಕೊಂಡರು.

ಎರಡನೆಯದಾಗಿ, ಈ ಹಿಂದೆ ಅಬೂಬಕರ್(ರ)ರ ಕಾಲದಲ್ಲಿ‘ಮಾತೃಪ್ರತಿ’ಯನ್ನು ಕ್ರೋಡೀಕರಿಸುವ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಝೈದ್ ಬಿನ್ ಸಾಬಿತ್(ರ)ರ ಸಹಿತ ನಾಲ್ವರು ಹಿರಿಯ ಸಹಾಬಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದರು ಮತ್ತು‘ಮಾತೃಪ್ರತಿ’ಯ ನಕಲು ಪ್ರತಿಗಳನ್ನು ತಯಾರಿಸುವ ಹೊಣೆಗಾರಿಕೆಯನ್ನು ಆ ಸಮಿತಿಗೆ ವಹಿಸಿಕೊಟ್ಟರು. ಜೊತೆಗೆ,ಸುಮಾರು ಹನ್ನೆರಡು ಮಂದಿ ಹಿರಿಯ ಸಹಾಬಿಗಳ ತಂಡವೊಂದನ್ನು ಆ ಸಮಿತಿಯ ನೆರವಿಗಾಗಿ ನೇಮಿಸಿದರು. ಪ್ರಸ್ತುತ ಸಮಿತಿಯು, ಮತ್ತೆ ಅಬೂಬಕರ್ ಸಿದ್ದೀಕ್(ರ)ರ ಕಾಲದಲ್ಲಿ ಅನುಸರಿಸಲಾಗಿದ್ದ ಕ್ರಮವನ್ನೇ ಅನುಸರಿಸಿ, ಜನರ ಬಳಿ ಇದ್ದ ವಿವಿಧ ಲಿಖಿತ ಪ್ರತಿಗಳನ್ನು ತರಿಸಿ ಹೋಲಿಸಿ ನೋಡಿದ ಬಳಿಕ ಮಾತೃಪ್ರತಿಯ ಪರಿಪೂರ್ಣತೆಯನ್ನು ಮತ್ತೆ ಅನುಮೋದಿಸಿ,ಅದರ ನಕಲು ಪ್ರತಿಗಳನ್ನು ರಚಿಸಿತು.

ಈ ಸಮಿತಿಯು ‘ಮಾತೃಪ್ರತಿ’ಯಲ್ಲಿ ಪ್ರತ್ಯ ಪ್ರತ್ಯೇಕವಾಗಿ ಬರೆದಿಡಲಾಗಿದ್ದ ಎಲ್ಲ ಅಧ್ಯಾಯಗಳನ್ನು ಕ್ರಮಬದ್ಧವಾಗಿ ಒಂದೇ ಪ್ರತಿಯಲ್ಲಿ ಕ್ರೋಡೀಕರಿಸಿ, ಅದರ ಹಲವು ನಕಲು ಪ್ರತಿಗಳನ್ನು ರಚಿಸಿತು. ಆ ಪ್ರತಿಗಳನ್ನು ಮಕ್ಕಃ, ಬಹ್ರೈನ್, ಯಮನ್, ಕೂಫಾ,ಸಿರಿಯಾ, ಬಸ್ರಾ ಮುಂತಾದೆಡೆಗಳಿಗೆ ರವಾನಿಸಿ, ಒಂದು ಪ್ರತಿಯನ್ನು ಮದೀನಾದಲ್ಲಿ ಇಟ್ಟುಕೊಳ್ಳಲಾಯಿತು.


 ‘ಮುಸ್‌ಹಫ್ ಉಸ್ಮಾನ್’ ಎಂದು ಗುರುತಿಸಲಾಗುವ ಆ ಪ್ರತಿಗೆ ಸಮುದಾಯದ ಎಲ್ಲ ವಲಯಗಳಿಂದ ವ್ಯಾಪಕ ಮನ್ನಣೆ ದೊರಕಿತು. ಆ ಪೀಳಿಗೆಯ ಹಾಗೂ ಅದರ ಅನಂತರದ ಪೀಳಿಗೆಯ ಎಲ್ಲರೂ ಆ ಪ್ರತಿಗಳನ್ನೇ ಮಾನದಂಡವಾಗಿ ಅಂಗೀಕರಿಸಿ ಅವುಗಳ ನಕಲು ಪ್ರತಿಗಳನ್ನೇ ಬಳಸುತ್ತಿದ್ದರು. ಆದರೆ, ಆ ಪ್ರತಿಗಳಲ್ಲಿನ ಬರಹದಲ್ಲಿ,ಅಕ್ಷರಗಳ ಜೊತೆಗೆ ಚುಕ್ಕೆಗಳಾಗಲಿ, ಅ ಕಾರ,ಈ ಕಾರ, ಉ ಕಾರ ಇತ್ಯಾದಿಗಳನ್ನು ಸೂಚಿಸುವ ಸಂಕೇತಗಳಾಗಲಿ ಇರಲಿಲ್ಲ. ಆ ಸ್ಥಿತಿಯಲ್ಲಿದ್ದ ಬರಹಗಳನ್ನು ಅರಬಿ ಮಾತೃಭಾಷೆಯ ಮಂದಿ ಸುಲಭವಾಗಿ ಓದುತ್ತಿದ್ದರು. ಆದರೆ, ಅರಬಿ ಭಾಷೆಯ ಹೆಚ್ಚಿನ ಜ್ಞಾನ ಇಲ್ಲದವರು ಮಾತ್ರ ಅವುಗಳನ್ನು ಓದಲು ಪ್ರಯಾಸ ಪಡಬೇಕಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ, ಉಚ್ಚಾರ ಹಾಗೂ ಪಠನಕ್ಕೆ ನೆರವಾಗುವಂತೆ, ಅಕ್ಷರಗಳಿಗೆ ಚುಕ್ಕೆಗಳನ್ನು,ಸ್ವರಸಂಕೇತಗಳನ್ನು ಮತ್ತು ವಾಕ್ಯಗಳ ವಿವಿಧ ನಿಯಮಗಳನ್ನು ಸೂಚಿಸುವ ಲಾಂಛನಗಳನ್ನು ಸೇರಿಸುವ ಪ್ರಕ್ರಿಯೆಯು ಅಲೀ ಬಿನ್ ಅಬೀ ತಾಲಿಬ್(ರ)ರ ಕಾಲಾನಂತರ ಆರಂಭವಾಗಿ, ಹಿಜರಿ ಮೂರನೇ ಶತಮಾನದ ವೇಳೆಗೆ ಪೂರ್ತಿಗೊಂಡಿತು.

ಕೃತಕ ಅವಯವಗಳ ಜೋಡಣೆ ಇಸ್ಲಾಮಿನಲ್ಲಿ.

ಶೈಖ್ ಇಬ್ನ್ ಉಸೈಮೀನ್(ರಹಿಮಹುಲ್ಲಾಹ್) ರೊಂದಿಗೆ ಕೇಳಲಾಯಿತು: ಒಬ್ಬ ವ್ಯಕ್ತಿಯ ನೈಸರ್ಗಿಕವಾದ ಹಲ್ಲುಗಳು ಉದುರಿದ ನಂತರ ಅಲ್ಲಿ ಕೃತಕ ಹಲ್ಲುಗಳ ಜೋಡಣೆ ಇಸ್ಲಾಮಿನಲ್ಲಿ ಸಮ್ಮತಾರ್ಹವೇ..??

ಶೈಖ್: ಇದು ಸಮ್ಮತಾರ್ಹವಾಗಿದೆ. ಒಬ್ಬ ವ್ಯಕ್ತಿಯ ಹಲ್ಲುಗಳು ಉದುರಿದ್ದು, ಆತನಿಗೆ ಕೃತಕ ಹಲ್ಲುಗಳ ಜೋಡಣೆ ಇದು ಆ ವ್ಯಕ್ತಿಯು ಅನುಭವಿಸುತ್ತಿರುವ ತೊಂದರೆಯನ್ನು ದೂರಮಾಡುವ ಸಲುವಾಗಿದೆ. ಅಲ್ಲಾಹನ ಸಂದೇಶವಾಹಕರು(ಸ.ಅ) ಓರ್ವ ಸಹಾಬಿಯ ಮೂಗು ತುಂಡರಿಸಿ ಹೋದಾಗ ಆವ್ಯಕ್ತಿಗೆ ಕೃತಕ ಬೆಳ್ಳಿ ಮೂಗಿನ ಜೋಡಣೆಗೆ ಅನುಮತಿ ನೀಡಿದ್ದರು. ತದನಂತರ ಆ ಮೂಗಿನಿಂದಾಗಿ ಆ ಸಹಾಬಿಗೆ ದುರ್ವಾಸಣೆ ಅನುಭವವಾದಾಗ ಬಂಗಾರದ ಮೂಗಿನ ಜೋಡಣೆಗೆ ಅನುಮತಿಸಿದ್ದರು. ಅದೇ ರೀತಿ ಇಲ್ಲಿ ಒಬ್ಬ ವ್ಯಕ್ತಿಯ ನೈಸರ್ಗಿಕವಾದ ಹಲ್ಲುಗಳು ಉದುರಿಹೋದಾಗ ಅದರ ಬದಲಿಗೆ ಕೃತಕ ಹಲ್ಲಿನ ಜೋಡಣೆ ಸಮ್ಮತಾರ್ಹವಾಗಿದೆ.

[ಫತ್ವ ನೂರ್ ಅಲಾ ಅಲ್ ದರ್ಬ್]






ಸಲಾಮ್ ಹೇಳುವುದು.

ಅಬೂ ಹುರೈರಾ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ಕಿರಿಯವನು ಹಿರಿಯವನಿಗೆ,  ನಡೆಯುವವನು ಕೂತವನಿಗೆ ಮತ್ತು ಸಣ್ಣ ತಂಡ ದೊಡ್ಡ ತಂಡಕ್ಕೆ ಸಲಾಮ್ ಹೇಳಬೇಕು.
ಇನ್ನೊಂದು ವರದಿಯಲ್ಲಿ ಅವರು ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು: ವಾಹನದಲ್ಲಿರುವವನು ನಡೆಯುವವನಿಗೆ, ನಡೆಯುವವನು ಕೂತವನಿಗೆ ಮತ್ತು ಸಣ್ಣ ತಂಡ ದೊಡ್ಡ ತಂಡಕ್ಕೆ ಸಲಾಮ್ ಹೇಳಬೇಕು.
[ಸಹೀಹ್ ಬುಖಾರಿ, ಅಧ್ಯಾಯ ಅನುಮತಿ ಕೇಳುವುದು]

ಜ್ಞಾನ ಸಂಪಾದನೆ ಸಲಫುಸ್ಸಾಲಿಹೀಗಳ ಮಾರ್ಗದಲ್ಲಿ.



1.ಇಲ್ಮ್ (ಜ್ಞಾನ)  ಕಲಿಯುವುದು:

ಇದು ಸಲಫುಸ್ಸಾಲಿಹೀನ್'ಗಳಿಗೆ ತುಂಬಾ ಇಷ್ಟವಾದಂತಹ ಕೆಲಸ. ಇದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ. ಜನರ ಪೈಕಿ ಅಲ್ಲಾಹನನ್ನು ಭಯ ಪಡುವವರು ಅರಿವುಳ್ಳವರು ಮಾತ್ರ ಎಂದು ಪ್ರವಾದಿ (ಸ) ಹೇಳಿರುವರು. ಅರಿವುಳ್ಳವರು ಮತ್ತು ಅರಿವಿಲ್ಲದವರು ಸಮಾನರಲ್ಲ ಎಂದು ಅಲ್ಲಾಹ್ ಕುರ್ ಆನ್ ನಲ್ಲಿ ಹೇಳಿದ್ದಾನೆ.

ಇಮಾಮ್ ಇಬ್ನ್ ರಜಬ್  ತಮ್ಮ ಫಲ್'ಳು ಇಲ್ಮ್ ಸಲಫಿಯ್ಯ ಎಂಬ ಗ್ರಂಥದಲ್ಲಿ ಹೇಳಿರುವರು- ಇಲ್ಮ್ ನಲ್ಲಿ ಎರಡು ವಿಧ ಇದೆ.
1.) ಇಲ್ಮ್ ನಾಫಿಅ
2.) ಇಲ್ಮ್ ಗೈರ್ ನಾಫಿಅ

ಇಲ್ಮ್ ನಾಫಿಅ ಅಂದರೆ ಪ್ರವಾದಿ (ಸ) ರು ಹೇಳಿದಂತಹ ವಿಷಯ. ಸಹಾಬಿಗಳು ಕಲಿತಿರುವಂತಹ ವಿಷಯ ತಾಬಿಅ ತಬಿವುತ್ತಾಬಿವೂನ್ ಗಳು ಅರ್ಥ ಮಾಡಿದಂತೆ ಕಲಿಯುವುದು ಇಲ್ಮ್ ನಾಫಿಅ (ಉಪಕಾರ ಕೊಡುವ ಇಲ್ಮ್).

ಇನ್ನೊಂದು ಇಲ್ಮ್ ಗೈರ್ ಇಲ್ಮ್ ನಾಫಿಅ ಅಂದರೆ ಉಪಕಾರವಿಲ್ಲದ ಇಲ್ಮ್.


ಈ ಸಂದರ್ಭ ಕಳೆದ ಶತಮಾನದಲ್ಲಿ ನಮ್ಮ ನಡುವೆ ಜೀವಿಸಿದ್ದ ಶೈಕ್ ನಾಸಿರುದ್ಧೀನ್ ಅಲ್ಬಾನಿ  ರಹಿಮಹುಲ್ಲಾಹ್ ರ ಒಂದು ಸಣ್ಣ ವೃತ್ತಾಂತ ನೆನಪಿಗೆ ಬರುತ್ತೆ. ಶೈಕ್ ಅಲ್ಬಾನಿ ಯವರು ದಿನಕ್ಕೆ 9 ರಿಂದ 10 ಗಂಟೆಗಳಕಾಲ ಓದುತ್ತಿದ್ದರಂತೆ. ಒಮ್ಮೆ ಅವರಿಗೆ ಕಣ್ಣು ನೋವು ಬಾಧಿಸಿದಾಗ ವೈದ್ಯರ ಬಳಿ ಹೋಗುತ್ತಾರೆ. ಕಣ್ಣು ಪರೀಕ್ಷೆ ಮಾಡಿದ ವೈದ್ಯರು ಹೇಳುತ್ತಾರೆ ಇನ್ನು ನೀವು ಮೊದಲಿನ ಹಾಗೆ ಓದು ಮುಂದುವರಿಸಿದರೆ ನಿಮ್ಮ ದೃಷ್ಟಿ ನಷ್ಟಗೊಳ್ಳುವ ಸಾಧ್ಯತೆ ಇದೆ ಎಂದು. ಇದನ್ನು ಕೇಳಿ ನಿರಾಸರಾದ ಶೈಕ್ ಕೊನೆಗೆ ವೈದ್ಯರ ಬಳಿ ದಿನಕ್ಕೆ ಮೂರು ಪುಟವಾದರೂ ಓದಬಹುದೇ ಎಂದು ಅನುಮತಿ ಕೇಳಿದರಂತೆ. ಹೀಗೆ ವೈದ್ಯರ ಅನುಮತಿಯೊಂದಿಗೆ ದಿನಕ್ಕೆ ಮೂರು ಪುಟದಂತೆ ಓದುತ್ತಿದ್ದ ಶೈಕ್ ರಲ್ಲಿ ಒಂದು ದಿನ ಅವರ ಶಿಷ್ಯರೊಬ್ಬರು ಹೇಳುತ್ತಾರೆ ಇಂತಹ ಪುಸ್ತಕದ ಇಂತಹ ಪುಟಗಳು ಕಾಣೆಯಾಗಿದೆ ಎಂದು. ಅದು ಶೈಕ್ ಅವರಿಗೆ ತುಂಬಾ ಮುಖ್ಯವಾದ ಪುಸ್ತಕ ವಾಗಿತ್ತು.  ಪುನಃ ವೈದ್ಯರ ಬಳಿಹೋಗಿ  ನಂಗೇನು ತುಂಬಾ ಮುಖ್ಯವಾದ ವಿಷ್ಯವೊಂದನ್ನು ಗ್ರಂಥಾಲಯದಲ್ಲಿ ಹುಡುಕಬೇಕಾಗಿದೆ ಇದರಿಂದ ನನ್ನ ಕಣ್ಣಿಗೇನಾದರೂ ತೊಂದರೆ ಇದೆಯೇ ಎಂದು ಕೇಳುತ್ತಾರೆ. ವೈದ್ಯರ ಅನುಮತಿಯೊಂದಿಗೆ ಆ ವಿಷಯವನ್ನು ಹುಡುಕಲು  ಹೊರಟ ಶೈಕ್ ಹುಡುಕಿ ಹುಡುಕಿ ಕೊನೆಗಾಗುವಾಗ ಪ್ರಸಿದ್ಧ ಮಖ್ತಬತುಳ್ವಾಹಿರಿಯ್ಯ ಆ ಬಹುದೊಡ್ಡ ಗ್ರಂಥಾಲಯದ ಭಾಗಶಃ ಗ್ರಂಥಗಳನ್ನೆಲ್ಲಾ ಓದಿಮುಗಿಸಿದ್ದರಂತೆ. ಇದಾಗಿದೆ ಇಲ್ಮ್ ಕಲಿಯುವವನ  ಗುಣ. ಆತ ಎಂದಿಗೂ ಹಿಂದೆ ಸರಿಯಲಾರ.

2.ಪಡೆದಂತಹ ಇಲ್ಮನ್ನು ಆರಾಧನೆಯಾಗಿಸುವುದು:

ಅಂದರೆ ಪ್ರವಾದಿ (ಸ) ರು ಈ ರೀತಿ ಮಾಡಿದ್ದಾರೆ ಎಂದು ವಿಸ್ವಸ್ಥ ಮೂಲಗಳಿಂದ ನಮಗೆ ದೊರೆತ ಇಲ್ಮನ್ನು ನಮ್ಮ ಜೀವನದಲ್ಲಿ ಪಾಲಿಸುವುದು.

3.ಆ ಇಲ್ಮನ್ನು ಇತರರಿಗೆ ದಾವಾ ಮಾಡುವುದು:

ಅಂದರೆ ನಾವು ಕಲಿತಂತಹ ಮತ್ತು ನಾವು ನಮ್ಮ ಜೀವನದಲ್ಲಿ ಪಾಲಿಸುತ್ತಿರುವ ಆ ಇಲ್ಮನ್ನು ಇತರರಿಗೆ ದಾವಾ ಮಾಡುವುದು. ಅವರಿಗೂ ಕೂಡ ಅದನ್ನು ಮಾಡಲು ಪ್ರೇರೇಪಿಸುದು. ಮೇಲೆ ವಿವರಿಸಿದ ಎರಡನೇ ಕಾರ್ಯ ನಾವು ಮಾಡಿದರೆ ಮಾತ್ರ ಇದು ಸಾಧ್ಯ. ಅಂದರೆ ನಮ್ಮ ಜೀವನದಲ್ಲಿ  ಆ ಇಲ್ಮನ್ನು ಪಾಲಿಸಿದರೆ ಮಾತ್ರ ನಾವು ಇತರರಿಗೆ ಅದನ್ನು ಹೇಳಬಹುದು.

4.ಸಹನೆ:

ಅಂದರೆ ಈ ಮೇಲೆ ತಿಳಿಸಿದಂತಹ ಮೂರು ಕಾರ್ಯದಲ್ಲೂ ಸಹನೆ ವಹಿಸುವುದು. ಸಹನೆ ಇಲ್ಲದೆ ನಮಗೆ ಏನನ್ನೂ ಕಲಿಯಲು, ಕಲಿಸಲು ಅಥವಾ ಅದನ್ನು ನಮ್ಮ ಜೀವನದಲ್ಲಿ ಪಾಲಿಸಿಕೊಂಡು ಬರಲು ಸಾಧ್ಯವಿಲ್ಲ.