1 May 2018

ಯಾರು ಶೈಖುಲ್ ಇಸ್ಲಾಮ್ ಇಬ್ನ್ ತೈಮೀಯಾ ರಹಿಮಹುಲ್ಲಾಹ್..?

ಯಾರು ಶೈಖುಲ್ ಇಸ್ಲಾಮ್ ಇಬ್ನ್ ತೈಮೀಯಾ ರಹಿಮಹುಲ್ಲಾಹ್..?


ಅಲ್ಲಾಹನು ತನ್ನ ದೀನನ್ನು ಸಂರಕ್ಷಿಸಲು ಕಾಲಕಾಲಕ್ಕೆ ಕೆಲವು ಕುತುಬುಝ್ಝಮಾನ್ ಗಳನ್ನು ಕಳುಹಿಸುತ್ತಾನೆ. ಅಂತಹ ಅನೇಕ ವ್ಯಕ್ತಿತ್ವಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದಾಗಿದೆ. ಅಂತಹ ವ್ಯಕ್ತಿತ್ವಗಳ ಸಾಲಿನಲ್ಲಿ ಶೈಖುಲ್ ಇಸ್ಲಾಮ್ ಇಬ್ನ್ ತೈಮೀಯಾ ರಹಿಮಹುಲ್ಲಾಹ್ ಪ್ರಮುಖರು. ಹಿಜಿರ 661 ರಲ್ಲಿ ಈಗ ಟರ್ಕಿ ದೇಶದಲ್ಲಿರುವ ಹರ್ರಾನ್ ನಲ್ಲಿ ಅಲ್ಲಿಯ ಖಾಝಿ ಹಾಗೂ ಇಮಾಮ್ ಆಗಿದ್ದ ಅಬ್ದುಲ್ ಹಲೀಮ್ ಎಂಬವರ ಮಗನಾಗಿ ಜನಿಸಿದರು. ಇವರ ನಸದ್ ಪ್ರಕಾರ ಪೂರ್ಣ ಹೆಸರು ಅಬುಲ್ ಅಬ್ಬಾಸ್ ಅಹ್ಮದ್ ಇಬ್ನ್ ಅಬ್ದುಲ್ ಹಲೀಮ್ ಇಬ್ನ್ ಅಬ್ದುಸ್ಸಲಾಮ್ ಇಬ್ನ್ ಅಬ್ದುಲ್ಲಾಹ್ ಇಬ್ನ್ ಖಲ್'ರ್ ಇಬ್ನ್ ಮುಹಮ್ಮದ್ ಇಬ್ನ್ ತೈಮೀಯತುಲ್ ಹರ್ರಾನ್ ಎಂದಾಗಿತ್ತು. ಇವರು ಜನಿಸಿದ ಕುಟುಂಬ ವಿದ್ವಾಂಸರ ಕುಟುಂಬವಾಗಿತ್ತು. ಇವರ ತಾತ ಇಮಾಮ್ ಮಜ್ದುದ್ಧೀನ್ ಅಬ್ದುಲ್ ಸಲಾಮ್ ಇಬ್ನ್ ತೈಮೀಯಾ ಓರ್ವ ಪ್ರಗಲ್ಬ ಹಂಬಲೀ ಮದ್ಹಬಿನ ವಿದ್ವಾಂಸರಾಗಿದ್ದರು. ಇವರ ತಾಯಿ ಸಿತ್ತುನಿಅಮ್ ಬಿಂತ್ ಅಬ್ದುಲ್ ರಹ್ಮಾನ್ ಇವರೂ ಕೂಡ ಓರ್ವ ಆಲಿಮಾ ವನಿತೆಯಾಗಿದ್ದರು. ಇಮಾಮ್ ಇಬ್ನ್ ತೈಮೀಯಾ ರವರು ಕಿಶೋರ ಪ್ರಾಯದಲ್ಲೇ ಇಮಾಮ್ ಹುಮೈದಿಯವರ ಮುತ್ತಫಕುನ್ ಅಲೈಹಿ ಹದೀಸ್ ಗಳ "ಅಲ್ ಜಂಹು ಬಯ್ಯಿನ ಸ್ವಹೀಹೈನ್" ಎಂಬ ಗ್ರಂಥವನ್ನು ಕಂಠಪಾಠ ಮಾಡಿದ್ದರು. ಆ ಕಾಲದಲ್ಲಿ ಪ್ರಗಲ್ಬರಾಗಿದ್ದ ಸುಮಾರು 200 ವಿದ್ವಾಂಸರ ಬಳಿ ಇಮಾಮ್ ತೈಮೀಯಾ ರವರು ಧಾರ್ಮಿಕ ಶಿಕ್ಷಣ ಪಡೆದಿದ್ದರು.
"ಫತುಹುಲ್ ಬಾರಿ"ಯ ಕರ್ತೃ ಇಮಾಮ್ ಇಬ್ನ್ ಹಜರ್ ಅಲ್ ಅಸ್ಕಲಾನಿ ಯವರು ತಮ್ಮ "ಅದ್ದುರುರುಲ್ ಕಾಮಿನ" ಎಂಬ ಗ್ರಂಥದಲ್ಲಿ ಹೇಳುತ್ತಾರೆ "ಶೈಖುಲ್ ಇಸ್ಲಾಮರು ಒಂದು ಗ್ರಂಥವನ್ನು ಒಂದು ಬಾರಿ ಪಠಿಸಿದರೆ ಅದರ ಅರ್ಥ ಮತ್ತು ಪದವನ್ನು ತಪ್ಪದೇ ವಿವರಿಸಿಕೊಡುತ್ತಿದ್ದರು."
ಶೈಖುಲ್ ಇಸ್ಲಾಮರು ತಮ್ಮ 17ನೇ ವಯಸ್ಸಿನಲ್ಲಿಯೇ ಫತ್ವ ಕೊಡುತ್ತಿದ್ದರು. ಆ ಕಾಲದ ಶಾಫೀ ಮದ್ ಹಬಿನ ಪ್ರಸಿದ್ಧ ವಿದ್ವಾಂಸರೂ ಇಮಾಮ್ ಇಬ್ನ್ ತೈಮೀಯಾರೊಡನೆ ವಾದ ಪ್ರತಿವಾದವನ್ನೂ ನಡೆಸುತ್ತಿದ್ದ ಇಮಾಮ್ ಸಮ್ಲಕ್ ಹೇಳುತ್ತಾರೆ " ಎಲ್ಲಾ ಶಾಸ್ತ್ರ ದಲ್ಲೂ ಅವರಿಗೆ ಪಾಂಡಿತ್ಯವಿತ್ತು ಕರ್ಮಶಾಸ್ತ್ರಕ್ಕೆ ಸಂಬಂಧಪಟ್ಟ 4 ಮದ್ಹಬ್ ಗಳಲ್ಲಿ ಕೂಡ ಅವರು ಪಾಂಡಿತ್ಯವನ್ನು ಹೊಂದಿದ್ದರು. ಮದ್ಹಬಿಗೆ ಸಂಭಂಧಪಟ್ಟ ಚರ್ಚೆಯಲ್ಲಿ ಭಾಗವಹಿಸುವ ಮದ್ಹಬಿನ ವಿದ್ವಾಂಸರಿಗೆ ತಿಳಿದಿರದಂತಹ ಕೆಲವು ವಿಷಯಗಳನ್ನು ಅವರು ಶೈಖುಲ್ ಇಸ್ಲಾಮ್ ರಿಂದ ಕಲಿಯುತ್ತಿದ್ದರು." ಇನ್ನು ಅವರು ಪ್ರಸಿದ್ಧ ಕುರ್ ಆನ್ ವ್ಯಾಖ್ಯಾನ ಕಾರರೂ ಆಗಿದ್ದರು. ಶೈಖುಲ್ ಇಸ್ಲಾಮ್ ಮರಣ ಹೊಂದಿದಾಗ ಅವರ ಗಾಯಿಬ್ ಆದ ಜನಾಝ ನಮಾಝ್ ಗಾಗಿ ಚೈನಾದಲ್ಲಿ ಕುರ್ಆನ್ ವ್ಯಾಖ್ಯಾನ ಕಾರನ ಜನಾಝ ನಮಾಝ್ ನಿರ್ವಹಿಸಿ ಎಂದು ಕರೆ ನೀಡಲಾಗಿತ್ತು ಎಂಬುದನ್ನು ಯಾತ್ರಿಕರು ಕಂಡಿದ್ದಾರೆ. ಶೈಖುಲ್ ಇಸ್ಲಾಮ್ ರ ಪಾಂಡಿತ್ಯ ಅಷ್ಟು ಸುಪ್ರಸಿದ್ಧವಾಗಿತ್ತು. ಇನ್ನು ಹದೀಸ್ ಬಗ್ಗೆ ಅವರ ಜ್ಞಾನ ಅದ್ಭುತ. ಅವರ ಶಿಷ್ಯರಾದ ಇಮಾಮ್ ಸಂಶುದ್ಧೀನ್ ಝಹಬಿ ಹೇಳುತ್ತಾರೆ, ಶೈಖುಲ್ ಇಸ್ಲಾಮರು ಒಂದು ಹದೀಸ್ ಕಲಿಯಬೇಕಾದರೆ ಅದರ ವರದಿಗಾರರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಿದ್ದರು. ಎಷ್ಟರವರೆಗೆಂದರೆ ಅವರಿಗೆ ತಿಳಿದಿರದ ಹದೀಸೇ ಇಲ್ಲ ಅನ್ನುವಷ್ಟರ ಮಟ್ಟಿಗೆ.
ಶೈಖುಲ್ ಇಸ್ಲಾಮರು ಕುಟುಂಬ ಮೂಲತಃ ಹಂಬಲೀ ಮದ್ಹಬ್ ಗಾರನಾದರೂ, ಕೆಲವು ವಿಷಯಗಳಲ್ಲಿ ಅವರು ಪುರಾವೆಗಳ ಆಧಾರದಲ್ಲಿ ಹಂಬಲೀ ಸಹಿತ ಇತರ ಮದ್ಹಬ್ ಗಳಲ್ಲಿರುವ ನ್ಯೂನ್ಯತೆಗಳನ್ನು ಎತ್ತಿ ತೋರಿಸುತ್ತಿದ್ದರು. ಇದರಿಂದಾಗಿ ಅವರಿಗೆ ಶತ್ರುಗಳು ಹುಟ್ಟಿಕೊಂಡರು. ಕೆಲವು ವಿಷಯಗಳಲ್ಲಿ ಅವರಿಗೆ ಜೈಲು ವಾಸವೂ ಅನುಭವಿಸಬೇಕಾಗಿ ಬಂತು. ಅವರು ಯಾರನ್ನೂ ಅಂಧವಾಗಿ ಅನುಸರಿಸುತ್ತಿರಲಿಲ್ಲ, ಉದಾಹರಣೆಗೆ ಆಗಿನ ಕಾಲದಲ್ಲಿ ಹಲವು ವಿದ್ವಾಂಸರು ಬರೆದಿಟ್ಟಿದ್ದ ಪ್ರವಾದಿ(ಸ.ಅ)ರ ಕಬರ್ ಸಂದರ್ಶನಕ್ಕಾಗಿ (ಝಿಯಾರತ್) ಯಾತ್ರೆ ಮಾಡಬಹುದು ಎಂದು. ಆದರೆ ಶೈಖುಲ್ ಇಸ್ಲಾಮರು ಪುರಾವೆಗಳ ಆಧಾರದಲ್ಲಿ ಪ್ರವಾದಿ(ಸ.ಅ) ಕಬರ್ ಸಂದರ್ಶನ ಮಾಡಬಹುದು, ಆದರೆ ಅದಕ್ಕಾಗಿ ಪ್ರತ್ಯೇಕವಾಗಿ ಯಾತ್ರೆ ಮಾಡಬಾರದು ಎಂದು ಫತ್ವ ಕೊಟ್ಟರು. ಇನ್ನು ಮೂರು ತ್ವಲಾಖ್ ಗಳನ್ನು ಒಟ್ಟಿಗೆ ಹೇಳಿದರೆ ಮೂರೂ ಕೂಡ ಸ್ವೀಕಾರವೇ ಎಂಬ ವಿಷಯದಲ್ಲೂ ಫತ್ವ ಕೊಟ್ಟರು. ಹೀಗೆ ಮುಂಗಾಮಿಗಳಾದ ಸಲಫುಸ್ಸಾಲಿಹೀನ್ ಗಳ ಅಹ್ಲುಸ್ಸುನ್ನತಿ ವಲ್ ಜಮಾಅದ ಆದರ್ಶಕ್ಕೆ ಸಾಲವಾಗಿದ್ದ ಮುತಝಿಲಿಗಳ, ಸೂಫಿಗಳ,  ಶಿಯಾಗಳ ಸವಾಲನ್ನು ಸಂದಾಯಮಾಡಿದ್ದು ಶೈಖುಲ್ ಇಸ್ಲಾಮ್ ಇಬ್ನು ತೈಮಿಯಾರವರಾಗಿದ್ದಾರೆ.
ಇನ್ನು ಆ ಕಾಲದಲ್ಲಿ ಅಹ್ಲುಸ್ಸುನ್ನದ ಆದರ್ಶದವರು ಎಂದು ಸ್ವಯಂ ಹೇಳಿಕೊಳ್ಳುತ್ತಿದ್ದ ಅಶ್'ಹರಿಗಳ ವಿರುದ್ಧ ವಿಮರ್ಶಾಣಾತ್ಮಕ ಪ್ರಬಂಧ ಬರೆದಿದ್ದಾರೆ ಶೈಖುಲ್ ಇಸ್ಲಾಮರು. ಬುದ್ಧಿ ಮತ್ತು ಪ್ರಮಾಣದಲ್ಲಿ ವೈರುದ್ಧ್ಯ ಮೂಡಿದಾಗ ಬುದ್ಧಿಗೆ ಪ್ರಾಧಾನ್ಯತೆ ನೀಡಬೇಕು ಎಂಬುದು ಅಶ್'ಹರಿಗಳ ವಾದವಾಗಿತ್ತು. ಇದಕ್ಕೆ ಅಶ್'ಹರಿಗಳ ಶೈಖ್ ಇಮಾಮ್ ಫಕ್ರುದ್ಧೀನ್ ರಾಝಿ ಆಧಾರಗಳನ್ನು ಸಂಗ್ರಹಿಸಿ ಗ್ರಂಥ ಬರೆದಿದ್ದರು. ಇದನ್ನು ವಿಮರ್ಶಿಸಿ "ದರ್ ತ'ಆ ಅರುದ್ ಅಲ್ ಅಕ್'ಲ್ ವನ್ನಕ್'ಲ್" ಎಂಬ ಮಹಾ ಪ್ರಂಬಂಧವನ್ನು ಬರೆದರು. ಶೈಖ್ ಅಬ್ದುಲ್ ಕರೀಂ ಝಹೈರ್ ಹೇಳುತ್ತಾರೆ, ಹೆಚ್ಚಿನ ಎಲ್ಲಾ ವಿದ್ವಾಂಸರು ಈ ಗ್ರಂಥವನ್ನು 100 ಪುಟಗಳಿಗಿಂತ ಅಧಿಕ ಓದಿದವರಲ್ಲ ಅಷ್ಟೊಂದು ಕ್ಲಿಷ್ಟಕರವಾದ ಪ್ರಬಂಧಗಳ ಸರಮಾಲೆ ಇದಾಗಿದೆ. ಇಮಾಮ್ ಇಬ್ನ್ ಖಯ್ಯಿಮ್ ತಮ್ಮ "ನೂನಿಯ್ಯ್" ಎಂಬ ಗ್ರಂಥದಲ್ಲಿ ಹೇಳುತ್ತಾರೆ, "ದರ್ ತ'ಆ ಅರುದ್ ಅಲ್ ಅಕ್'ಲ್ ವನ್ನಕ್'ಲ್" ಎಂಬ ಗ್ರಂಥವನ್ನು ಓದಿದರೆ ಶೈಖುಲ್ ಇಸ್ಲಾಮ್ ಯಾರು, ಅವರ ಅರಿವಿನ ಅಗಾಧತೆ ಏನು ಎಂಬುದನ್ನು ಅರ್ಥೈಸಬಹುದು ಎಂದು. ಹಾಗೆ "ಮನ್ಹಜುಸ್ಸುನ್ನ ಅನ್ನಬವಿಯ್ಯ" ಎಂಬ ಗ್ರಂಥದ ಮೂಲಕ ಶಿಯಾಗಳ ಧಿಕ್ಕಾರಕ್ಕೆ ಮರುತ್ತರ ನೀಡಿದ್ದಾರೆ. ಬರ್ತ್ ಡೇ ಹಾಗೂ ಹೊಸವರ್ಷ ಆಚರಣೆಯ ವಿಚಾರದಲ್ಲಿ ಕ್ರೈಸ್ತರಿಗೂ ಉತ್ತರನೀಡಿದ್ದಾರೆ.
ಈ ರೀತಿ ಎಲ್ಲಾ ರೀತಿಯ ಧಿಕ್ಕಾರಿಗಳಿಗೂ ತಮ್ಮ ಫತ್ವದ ಮೂಲಕ ವಿಮರ್ಶೆಯ ಮೂಲಕ ಕೃತಿಗಳ ಮೂಲಕ ಶಕ್ತವಾದ ಉತ್ತರ ನೀಡುತ್ತಾ ಬಂದ ಶೈಖುಲ್ ಇಸ್ಲಾಮರನ್ನು ಅವರೊಂದಿಗೆ ತಾತ್ವಿಕ, ಸೈದ್ಧಾಂತಿಕ ಮತ್ತು ಆದರ್ಶಪರವಾದ ಭಿನ್ನಮತಗಳಿರುವ ಕೆಲವು ವಿದ್ವಾಂಸರು ಅವರನ್ನು ಕುಫ್ರ್ ಪ್ರಚಾರಕನೆಂದೂ, ಕಾಫಿರ್ ಎಂದೂ ಕರೆದರು. ಈ ಸಾಲಿನಲ್ಲಿ ಹಿಜರ 8 ನೇ ಶತಮಾನದಲ್ಲಿ ಬಂದ ಹನಫೀ ಸೂಫಿ ವಿದ್ವಾಂಸ "ಅಲ್ಲಾವುದ್ಧೀನ್ ಬುಖಾರಿ" ಎಂಬವರು ಇಬ್ನ್ ತೈಮೀಯಾರನ್ನು ಶೈಖುಲ್ ಇಸ್ಲಾಮ್ ಎಂದು ಕರೆದವರು ಕಾಫಿರ್ ಎಂದು ಫತ್ವ ಕೊಟ್ಟರು. ಇದಕ್ಕೆ ಇಮಾಮ್ ಇಬ್ನ್ ಹಜರ್ ಅಸ್ಕಲಾನಿಯವರ ಸ್ನೇಹಿತರೂ ಪ್ರಖ್ಯಾತ ವಿದ್ವಾಂಸರೂ ಆದ "ಇಮಾಮ್ ಇಬ್ನ್ ನಾಸಿರ್ ತಿಮಷ್ಕಿ" ಯವರು "ಅರ್ರದ್ದುಲ್ ವಾಫಿಲ್ ಅಲಾ ಮನ್ ಝಲಿಮ ಅನ್ನಹುಸ್ಸನ್ನ ಇಬ್ನ್ ತೈಮೀಯತ ಶೈಖುಲ್ ಇಸ್ಲಾಮ್ ಕಾಫಿರ್" ಎಂಬ ಗ್ರಂಥವನ್ನು ಬರೆದರು. ಇದರಲ್ಲಿ ಸುಮಾರು 90 ಕ್ಕಿಂತಲೂ ಹೆಚ್ಚಿನ ಪ್ರಖ್ಯಾತ ಶೈಖ್ ಗಳ ಸಾಕ್ಷ್ಯದೊಂದಿಗೆ ಅವರೆಲ್ಲರ ಅಭಿಪ್ರಾಯದೊಂದಿಗೆ ಇಮಾಮ್ ಇಬ್ನ್ ತೈಮೀಯ ಶೈಖುಲ್ ಇಸ್ಲಾಮ್ ಎಂಬುದಕ್ಕೆ ಸಾಕ್ಷ್ಯ ನೀಡಲಾಗಿತ್ತು.
ಶೈಖುಲ್ ಇಸ್ಲಾಮರು ಅನೇಕ ಶಿಷ್ಯರನ್ನು ಹೊಂದಿದ್ದರು, ಅವರಲ್ಲಿ ಅತ್ಯಂತ ಪ್ರಮುಖರಾದ ಖ್ಯಾತ ಕುರ್'ಆನ್ ವ್ಯಾಖ್ಯಾನವಾದ ಇಬ್ನ್ ಕಸೀರ್ ನ ಕರ್ತೃ ಇಮಾಮ್ ಇಬ್ನ್ ಕಸೀರ್ ಅವರು ಹೇಳುವ ಪ್ರಕಾರ ನನ್ನ ಜೀವಿತಾವಧಿಯಲ್ಲಿ ಅಷ್ಟೊಂದು ಪಾಂಡಿತ್ಯವಿರುವ ವಿದ್ವಾಂಸನನ್ನು ನಾನು ಕಂಡೇ ಇಲ್ಲ ಎಂದಾಗಿದೆ.
ಹಿಜಿರ 728 ರಲ್ಲಿ ತಮ್ಮ 67 ನೇ ವರ್ಷದಲ್ಲಿ ಶೈಖುಲ್ ಇಸ್ಲಾಮರು ಮರಣಹೊಂದುತ್ತಾರೆ. ಈ 67 ವರ್ಷಗಳ ಆಯುಷ್ಯದಲ್ಲಿ ಅವರು ಬಿದ'ಇ ಗಳ ವಿರುದ್ಧ ಶಿರ್ಕ್ ವಾದಿಗಳ ವಿರುದ್ಧ 1 ಸಾವಿರಕ್ಕಿಂತಲೂ ಅಧಿಕ ಪತ್ವಗಳನ್ನು ಕೃತಿಗಳನ್ನು ರಚಿಸಿದ್ದಾರೆ. ಕೆಲವು ವಿದ್ವಾಂಸರು ಹೇಳುವ ಪ್ರಕಾರ ಪವಿತ್ರ ಹರಮೈನನ್ನು ಹೊಂದಿರುವ ಸೌದಿ ಅರೇಬಿಯಾ ದೇಶದಲ್ಲಿ ಶೈಖುಲ್ ಇಸ್ಲಾಮರ ಗ್ರಂಥಗಳು ದೊರೆಯದ ಗ್ರಂಥಾಲಯಗಳೇ ಇಲ್ಲವಂತೆ. ಆದರೆ ತಮ್ಮ ದಾರಿತಪ್ಪಿದ ವಾದಗಳ ವಿರುದ್ಧ ಫತ್ವ ಕೊಟ್ಟು ಇಂದಿಗೂ ತಮಗೆ ತಲೆನೋವಾಗಿಯೇ ಇರುವ ಶೈಖುಲ್ ಇಸ್ಲಾಮರ ವಿರುದ್ಧ ಕೆಲವು ಬಿದ'ಅತ್ ನ ಕಕ್ಷಿಗಳು ಹಿಗ್ಗಾ ಮುಗ್ಗ ಅಪಪ್ರಚಾರಮಾಡುವುದು ಅವರ ಕಬರ್ ಎತ್ತರವಿದೆ ಎಂದು ಸುಳ್ಳು ಪೋಟೋ ತೋರಿಸಿ ಅವರನ್ನು ಹಣಿಯಲು ನಡೆಸುತ್ತಿರುವ ಪ್ರಯತ್ನಗಳು ಜಾರಿಯಲ್ಲಿದೆ.

📝 ಯಾತ್ರಿಕ.


ಅದೇ ರೀತಿ ನಿರಂತರವಾಗಿ ಸಲಫಿಗಳ ಮೇಲೆ ಸುಳ್ಳಾರೋಪ ಹೊರಿಸುತ್ತಿರುವುದು ಸಮಸ್ತದವರಿಗೆ ಮಾಮೂಲಾಗಿ ಬಿಟ್ಟಿದೆ.
ಶೈಖುಲ್ ಇಸ್ಲಾಂ ಎಂದೇ ಪ್ರಖ್ಯಾತ ರಾದ ಇಬ್ನ್ ತ್ಯೇಮಿಯ (ರ) ರವರು ಶೈಖುಲ್ ಇಸ್ಲಾಂ ಎಂಬುದಕ್ಕೆ ಸಮಸ್ತದವರು ಅಂಗೀಕರಿಸುವ,ಕೊಂಡಾಡುತ್ತಿರುವ,ಇಮಾಂ ಎಂದು ಅಂಗೀಕರಿಸುವ ಹಾಗೂ ಅವರ ಶೈಖ್ ಎಂದು ಪರಿಚಯಿಸುವ ಸಾಕ್ಷಾತ್  ಜಲಾಲುದ್ದೀನ್ ಸುಯೂತಿ ರವರು ಹೇಳುವುದನ್ನು  ನೋಡಿ.👇
ابن تيمية ، الشيخ ، الإمام ، العلامة ، الحافظ ، الناقد ، الفقيه ، المجتهد ، المفسر البارع ، شيخ الإسلام ، علَم الزهاد ، نادرة العصر ، تقي الدين أبو العباس أحمد المفتي شهاب الدين عبد الحليم بن الإمام المجتهد شيخ الإسلام مجد الدين عبد السلام بن عبد الله بن أبي القاسم الحراني .
أحد الأعلام ، ولد في ربيع الأول سنة إحدى وستين وستمائة ، وسمع ابن أبي اليسر ، وابن عبد الدائم ، وعدّة .
وعني بالحديث ، وخرَّج ، وانتقى ، وبرع في الرجال ، وعلل الحديث ، وفقهه ، وفي علوم الإسلام ، وعلم الكلام ، وغير ذلك .
وكان من بحور العلم ، ومن الأذكياء المعدودين ، والزهاد ، والأفراد ، ألَّف ثلاثمائة مجلدة ، وامتحن وأوذي مراراً .
مات في العشرين من ذي القعدة سنة ثمان وعشرين وسبعمائة .
الحافض جلال الدين السيوطي
" طبقات الحفاظ " ( ص 516 ، 517
ಮಹಾನರಾದ ಇಬ್ನು ತೈಮಿಯಾ (ರ) ರವರು ಓರ್ವ ಮಹಾನ್ ವಿದ್ವಾಂಸ, ಇಮಾಮ್, ಅಲ್ಲಾಮ,
*ಶೈಖುಲ್ ಇಸ್ಲಾಂ ಆಗಿದ್ದರು.
*ಹಾಫಿಲ್ ಆಗಿದ್ದರು
*ಕರ್ಮ ಶಾಸ್ತ್ರ ವಿದ್ವಾಂಸರಾಗಿದ್ದರು.
*ಅತೀ ದೊಡ್ಡ ಮುಫಸ್ಸಿರಾಗಿದ್ದರು.
*ಬೌತಿಕ ವಿಷಯದಲ್ಲು ಜ್ಞಾನವಿರುವ ವಿದ್ವಾಂಸರಾಗಿದ್ದರು.
*ದೀನಿನಲ್ಲಿ ತಕ್ವಾ ಇರುವ ಆಲಿಮ್ ಆಗಿದ್ದರು.
*ಹದೀಸ್'ನ ವಿಷಯದಲ್ಲಿ ತಖ್'ರೀಜ್ ನಡೆಸಿದ ಆಲಿಮ್ ಆಗಿದ್ದರು
*ಹದೀಸ್ ನಿವೇದನೆ ಮಾಡಿದವರನ್ನು ತಖ್'ರೀಜ್ ಮಾಡಿದ ಆಲಿಮ್
*ಅತೀ ಬುದ್ಧಿವಂತರಾಗಿದ್ದರು
*ನ್ಯೂನತೆ ಇರುವ ಹದೀಸ್'ನ ನ್ಯೂನತೆಯನ್ನು ವ್ಯಕ್ತಪಡಿಸಿದ ಮಹಾನುಭಾವರಾಗಿದ್ದರು.
ಇನ್ನು
ಶಾಫಿಈ ಮಝ್'ಬಹಬಿನ ಇಮಾಮಾದ ಇಬ್ನ್ ಹಜರ್ ಹೈತಮಿಯ ಶಿಷ್ಯರಾದ ಮುಲ್ಲಾ ಅಲಿಯ್ಯ್ ಖಾರೀ(ರ) ಹೇಳುತ್ತಾರೆ.
ಸಲಫಿ ನೇತಾರ ಇಬ್ನ್ ತ್ಯೆಮಿಯಾ (ರ)ರವರು ಮುಸ್ಲಿಂ ಉಮ್ಮತಿನ ವಲಿಯ್ಯ್ ಆಗಿದ್ದಾರೆ.
أَقُولُ: صَانَهُمَا اللَّهُ عَنْ هَذِهِ السِّمَةِ الشَّنِيعَةِ وَالنِّسْبَةِ الْفَظِيعَةِ، وَمَنْ طَالَعَ شَرْحَ مَنَازِلِ السَّائِرِينَ لِنَدِيمٍ الْبَارِيِّ الشَّيْخُ عَبْدُ اللَّهِ الْأَنْصَارِيُّ الْحَنْبَلِيُّ - قَدَّسَ اللَّهُ تَعَالَى سِرَّهُ الْجَلِيَّ - وَهُوَ شَيْخُ الْإِسْلَامِ عِنْدَ الصُّوفِيَّةِ حَالَ الْإِطْلَاقِ بِالِاتِّفَاقِ، تَبَيَّنَ لَهُ أَنَّهُمَا كَانَا مِنْ أَهْلِ السُّنَّةِ وَالْجَمَاعَةِ، بَلْ وَمِنْ أَوْلِيَاءِ هَذِهِ الْأُمَّةِ،

ಅದೇ ರೀತಿ
ಮಕ್ಕಾ ಹಾಗೂ ಮದೀನಾದ ವಿದ್ವಾಂಸರನ್ನು (ಶಿಯಾ ,ಕಾದಿಯಾನಿ,ಸೂಫಿಗಳ ಹೊರತು) ಇವತ್ತು ಮುಸ್ಲಿಂ ಉಮ್ಮತ್ ಅಂಗೀಕರಿಸುತ್ತಾರೆ.
ಹಜ್ಜ್ ತಿಂಗಳು ಅರಫಾ ಮೈದಾನದಲ್ಲಿ ಲಕ್ಷಗಟ್ಟಲೆ  ಮುಸ್ಲಿಂ ಹಾಜಿಗಳ ಮುಂದೆ ಪ್ರಬಾಷಣೆ ನಡೆಸುವುದು ಈಗಿನ ಸಲಫೀ ವಿದ್ವಾಂಸ ಮುಸ್ಲಿಂ ಜಗತ್ತಿನ ಗ್ರಾಂಡ್ ಮುಫ್ತಿ ಸೌದಿ ಅರೇಬಿಯಾದ ರ'ಈಸ್ ಆದ ಶೈಖ್ ಸ್ವಾಲಿಹ್ ಆಲು ಶೈಖ್ (ಹ)ರವರಾಗಿದ್ದಾರೆ.
ಈಗ ಹೇಳಿ ಇವರು ಮಾಸಿಕ ನೋಡಿ ಪುಸ್ತಕ ಓದಿ ದೀನ್ ಕಲಿತವರೇ?
ಸಲಫೀ ವಿದ್ವಾಂಸರ ಕುರಿತು ಆಕ್ಷೇಪಾರ್ಹ ನಿಲುವು ವ್ಯಕ್ತಪಡಿಸುವ ಕಾಂತಪುರಂ ,ಪೇರೋಡ್,ಅಹ್ಸನಿ,ಸಖಾಫಿಗಳು  ಕೂಡ  ಅರಫಾ ಮೈದಾನಕ್ಕೆ ಬಂದು ಸಲಫೀ ವಿದ್ವಾಂಸರ ಪ್ರಬಾಷಣೆ ಕೇಳುತ್ತಾರೆ.
ಊರಲ್ಲಿ ಬಂದರೆ ಅವರ ಪ್ರಬಾಷಣೆ ಕೇಳ್ಬೇಡಿ‌ ಎಂದು ಹೇಳ್ತಾರೆ.
ಮುಸ್ಲಿಂ ಸಮುದಾಯವನ್ನು ವಂಚಿಸುವವರು ಯಾರೆಂದು ತಿಳಿಯಲು ಇದಕ್ಕಿಂತ ಉದಾಹರಣೆ ಬೇರೆ ಬೇಕೆ?
ಚಿಂತಿಸಿರಿ ಸಮಸ್ತದವರೇ
ನೈಜ ಆಲಿಂಗಳು ಯಾರೆಂದು ತಿಳಿಯಿರಿ
ಅಲ್ಲಾಹನು ಹಿದಾಯತ್ ನೀಡಲಿ


ಇಬ್ನ್ ಅಬ್ದುರ್ರಹ್ಮಾನ್✍🏻🌹