1). ಇಸ್ಲಾಮೀ ಕರ್ಮ ಶಾಸ್ತ್ರದ ಮೂಲಾಧಾರಗಳು.
a).ಪವಿತ್ರ ಕುರಾನ್.
b).ಸುನ್ನತ್ (ಪ್ರವಾದಿ ಚರ್ಯೆ).
c).ಇಜ್ಮಾ (ಕುರಾನ್ ಮತ್ತು ಹದೀಸ್ ಗಳಲ್ಲಿ ಇತ್ಯರ್ಥವಾಗದ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಆ ಕಾಲದ ಪ್ರವಾದಿಯ ಉಮ್ಮತ್ತಿನಲ್ಲಿರುವ ಪಂಡಿತ ಶಿರೋಮಣಿಗಳ ಸಹಮತವನ್ನು “ಇಜ್ಮಾ” ಎನ್ನುತ್ತಾರೆ).
d).ಕಿಯಾಸ್ (ಕುರಾನ್ ಮತ್ತು ಹದೀಸ್ ಗಳಲ್ಲಿನೇರವಾಗಿ ಉಲ್ಲೇಖಿಸಲ್ಪಡದಿರುವ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಕುರಾನ್ ಮತ್ತು ಹದೀಸ್ ಗಳಲ್ಲಿಉಲ್ಲೇಖಿಸಲ್ಪಟ್ಟಿರುವ ಅದನ್ನು ಹೋಲುವ ಬೇರೊಂದು ಸಮಸ್ಯೆಯಿಂದ ಪರಿಹಾರವನ್ನು ಕಂಡು ಹಿಡಿಯುವುದನ್ನು “ಕಿಯಾಸ್” (ತುಲನೆ ಮಾಡುವುದು) ಎನ್ನುತ್ತಾರೆ.) ಈ ನಾಲ್ಕುಇಸ್ಲಾಮೀ ಕರ್ಮ ಶಾಸ್ತ್ರದ ಮೂಲಾಧಾರಗಳಾಗಿವೆ.
2). ಪ್ರವಾದಿ(ಸ) ಯವರ ಕಾಲದಲ್ಲಿ ಕರ್ಮ ಶಾಸ್ತ್ರ.⬇
ಪ್ರವಾದಿ(ಸ)ಯವರ ಕಾಲದಲ್ಲಿ ವಹ್ಯ್ ನ ಜ್ಞಾನವೇ ಕರ್ಮ ಶಾಸ್ತ್ರವಾಗಿತ್ತು. ಪವಿತ್ರ ಕುರಾನ್ ನೇರವಾಗಿ ಸಮಸ್ಯೆಗಳನ್ನು ಸೂಚಿಸಿ ಅವುಗಳ ಪರಿಹಾರವನ್ನೂ ಉಲ್ಲೇಖಿಸುತ್ತಿತ್ತು. ಇಲ್ಲವೆಂದಾದಲ್ಲಿ ಕುರಾನೇತರ ವಹ್ಯ್ ನ ಮೂಲಕ ಪ್ರವಾದಿ(ಸ) ಅವುಗಳಿಗೆ ಪರಿಹಾರವನ್ನು ಸೂಚಿಸುತ್ತಿದ್ದರು. ಇದನ್ನು ” ಫಿಕ್ಹುಲ್ ವಹ್ಯ್” ಎನ್ನಲಾಗುತ್ತದೆ.
3). ಪ್ರವಾದಿ(ಸ) ಯವರ ಸಹಚರರ (ಸಹಾಬಿಗಳ) ಮತ್ತವರ ಶಿಷ್ಯಂದಿರ (ತಾಬಿಈನ್ ಗಳ) ಕಾಲದ ಕರ್ಮ ಶಾಸ್ತ್ರ.⬇
ಇಸ್ಲಾಂ ಒಂದು ಸಾರ್ವ ಕಾಲಿಕ ಮತ್ತು ಸಕಲ ಮನುಕುಲದ ಧರ್ಮ. ಪ್ರವಾದಿ(ಸ)ಯವರ ಕಾಲಾನಂತರ ಇಸ್ಲಾಮೀ ಸಾಮ್ರಾಜ್ಯವು ವಿಸ್ತರಿಸಲಾರಂಭಿಸಿತು. ಹೊಸ ಹೊಸ ಜನ ಪ್ರದೇಶಗಳು ಇಸ್ಲಾಮೀ ಆಡಳಿತ ವ್ಯವಸ್ಥೆಯ ಅಧೀನದಲ್ಲಿ ಬರ ತೊಡಗಿದುವು ಮತ್ತಿದರಿಂದಾಗಿ ಕೆಲ ಹೊಸ ಹೊಸ ಸಮಸ್ಯೆಗಳೂ ಉದ್ಭವಿಸಿತ್ತು. ಹೀಗೆ ಹೊಸ ಪ್ರದೇಶ ಮತ್ತು ಹೊಸ ಕಾಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ವಿಧ್ವಾಂಸರು ಇಸ್ಲಾಮಿನ ಮೂಲ ಸಿದ್ಧಾಂತ ಮತ್ತು ಮೂಲಾಧಾರಗಳ ಗವೇಷಣೆ ನಡೆಸಿ ತಲೆದೋರಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿದರು. ಈ ಗವೇಷಣೆಯನ್ನೇ “ಇಜ್ತಿಹಾದ್” ಎಂದು ಕರೆಯಲಾಯಿತು. ಹೀಗೆ ಪ್ರವಾದಿ(ಸ) ಯವರ ಸಹಚರರ (ಸಹಾಬಿಗಳ) ಮತ್ತವರ ಶಿಷ್ಯಂದಿರ (ತಾಬಿಈನ್ ಗಳ) ಕಾಲದಲ್ಲಿ ” ಫಿಕ್ಹುಲ್ ವಹ್ಯ್” ನಂತೆಯೇ “ಅಲ್ ಫಿಕ್ಹುಲ್ ಇಜ್ತಿಹಾದೀ” (ಗವೇಷಣಾಧಾರಿತ ಕರ್ಮಶಾಸ್ತ್ರ) ಕೂಡಾ ಇಸ್ಲಾಮೀ ಕರ್ಮಶಾಸ್ತ್ರದ ಭಾಗವಾಗಿತ್ತು.
4). ತಾಬಿಈನ್ ರ ಕಾಲದ ಕೆಲವು ಪ್ರಸಿದ್ಧ ಕರ್ಮಶಾಸ್ತ್ರಜ್ಞರು⬇
ಇಮಾಮ್ ಅಬೂ ಹನೀಫ (ರ) (ನೂಮಾನ್ ಬಿನ್ ಸಾಬಿತ್)
ಜನನ : ಹಿಜರಿ 80 ಕ್ರಿ.ಪೂ 699 ಕೂಫಃ (ಇರಾಕ್).ಮರಣ : ಹಿಜರಿ 150 ಕ್ರಿ.ಪೂ 767 ಬಗ್ದಾದ್ (ಇರಾಕ್)
ಇಮಾಮ್ ಮಾಲಿಕ್ (ರ) (ಮಾಲಿಕ್ ಬಿನ್ ಅನಸ್)
ಜನನ : ಹಿಜರಿ 93 ಕ್ರಿ.ಪೂ 715 (ಮದೀನ). ಮರಣ : ಹಿಜರಿ 179 ಕ್ರಿ.ಪೂ 796 (ಮದೀನ)
ಇಮಾಮ್ ಶಾಫೀ (ರ) (ಮುಹಮ್ಮದ್ ಬಿನ್ ಇದ್ರೀಸ್)
ಜನನ : ಹಿಜರಿ 150 ಕ್ರಿ.ಪೂ 767 (ಅಸ್ಕಲಾನ್).ಮರಣ : ಹಿಜರಿ 204 ಕ್ರಿ.ಪೂ 820 ಬಗ್ದಾದ್ (ಇರಾಕ್)
ಇಮಾಮ್ ಅಹ್ಮದ್ ಬಿನ್ ಹಂಬಲ್ (ರ)
ಜನನ : ಹಿಜರಿ 164 ಕ್ರಿ.ಪೂ 780 ಬಗ್ದಾದ್ (ಇರಾಕ್).ಮರಣ : ಹಿಜರಿ 241 ಕ್ರಿ.ಪೂ 855 ಬಗ್ದಾದ್ (ಇರಾಕ್)
🔴 ಕುರಾನ್, ಸುನ್ನತ್, ಇಜ್ಮಾಅ ಮತ್ತು ಖಿಯಾಸ್ ಗೆ ಹೊರತಾಗಿರುವ ಯಾವುದೇ ಅಭಿಪ್ರಾಯಗಳನ್ನು ಕೊಟ್ಟರೂ ಅದು ಇಸ್ಲಾಮಿಗೆ ಪುರಾವೆಯಾಗುವುದಿಲ್ಲ.
الإسناد من الدين
ದೀನ್ ಗೆ ಪ್ರಮಾಣವು ಮುಖ್ಯವಾಗಿದೆ.
ಪ್ರಮಾಣವೆಂದರೆ ಅದು ಕುರಾನ್ ಮತ್ತು ಸುನ್ನತ್ತಿಗೆ ಹೊಂದಿಕೊಂಡಿರಬೇಕು. ಯಾಕೆಂದರೆ ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽
الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا
ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು. ನನ್ನ ಅನುಗ್ರಹವನ್ನು ನಾನು ನಿಮಗೆ ನೆರವೇರಿಸಿಕೊಟ್ಟಿರುವೆನು. ಇಸ್ಲಾಮನ್ನು ಧರ್ಮವಾಗಿ ನಾನು ನಿಮಗೆ ತೃಪ್ತಿಪಟ್ಟಿರುವೆನು.
[ಅಲ್-ಮಾ'ಇದಃ : 3]
ಪ್ರವಾದಿ ﷺ ರ ಕಾಲದ ನಂತರ ಬೇರೆ ಒಂದು ಇಸ್ಲಾಮ್ ಇಲ್ಲ. ಅಲ್ಲಾಹನು ಪ್ರವಾದಿ ﷺ ರ ಕಾಲದಲ್ಲಿಯೇ ಇಸ್ಲಾಮನ್ನು ಪೂರ್ಣಗೊಳಿಸಿದ್ದಾನೆ. ನಂತರ ಉದ್ಭವಿಸುವ ಯಾವುದೇ ಘಟನೆಗಳು ಇಸ್ಲಾಮಿಗೆ ಪುರಾವೆಯಲ್ಲ.
ಪ್ರವಾದಿ ﷺ ರು ಹೇಳುತ್ತಾರೆ : ನನ್ನ ಪೈಕಿ ನನ್ನ ನಂತರ ಜೀವಿಸುವವರು ಬಹಳಷ್ಟು ಭಿನ್ನಾಭಿಪ್ರಾಯವನ್ನು ಕಾಣಲಿರುವರು. ಆ ಸಂಧರ್ಭದಲ್ಲಿ ನೀವು ನನ್ನ ಮತ್ತು ನಾಲ್ವರು ಖಲೀಫರ ಸುನ್ನತ್ತನ್ನು ಬಲವಾಗಿ ಹಿಡಿದುಕೊಳ್ಳಿರಿ. ಯಾವುದೇ ಕಾರಣಕ್ಕೂ ಸುನ್ನತ್ತನ್ನು ಕೈಬಿಡದಿರಿ.
(ಅಬೂ ದಾವೂದ್ : 4607, ತಿರ್ಮಿದಿ :2676)
ಪ್ರವಾದಿ ﷺ ರು ಹೇಳಿದರು : ನನ್ನ ಮತ್ತು ನನ್ನ ಸಹಾಬಿಗಳ ಮಾರ್ಗದಲ್ಲಿ ಯಾರು ಇದ್ದಾರೆಯೇ ಅವರಾಗಿದ್ದಾರೆ ವಿಜಯಿಗಳು.
ಪ್ರವಾದಿ ﷺ ರು ಹೇಳಿದರು : ನಾನು ನಿಮಗೆ ಎರಡು ವಸ್ತುಗಳನ್ನು ಬಿಟ್ಟು ಹೋಗುತ್ತಿದ್ದೇನೆ (ಕುರಾನ್ ಮತ್ತು ಪ್ರವಾದಿ ಚರ್ಯೆ) ಅದನ್ನು ಗಟ್ಟಿಯಾಗಿ ಹಿಡಿಯುವ ವರೆಗೆ ನೀವು ದಾರಿ ತಪ್ಪಲಾರಿರಿ.
ಎಲ್ಲದಕ್ಕೂ ಪರ್ಯಾವಸಾನ ಇಲ್ಲಿದೆ.
ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽
يَا أَيُّهَا الَّذِينَ آمَنُوا أَطِيعُوا اللَّهَ وَأَطِيعُوا الرَّسُولَ وَأُولِي الْأَمْرِ مِنْكُمْ ۖ فَإِنْ تَنَازَعْتُمْ فِي شَيْءٍ فَرُدُّوهُ إِلَى اللَّهِ وَالرَّسُولِ إِنْ كُنْتُمْ تُؤْمِنُونَ بِاللَّهِ وَالْيَوْمِ الْآخِرِ ۚ ذَٰلِكَ خَيْرٌ وَأَحْسَنُ تَأْوِيلًا
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಅನುಸರಿಸಿರಿ. (ಅವನ) ಸಂದೇಶವಾಹಕರನ್ನೂ ನಿಮ್ಮಿಂದಲೇ ಇರುವ ಕಾರ್ಯನಿರ್ವಾಹಕರನ್ನೂ ಅನುಸರಿಸಿರಿ. ನೀವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಾದರೂ ಭಿನ್ನಾಭಿಪ್ರಾಯ ತಲೆದೋರಿದರೆ ನೀವದನ್ನು ಅಲ್ಲಾಹುವಿನೆಡೆಗೂ ಸಂದೇಶವಾಹಕರೆಡೆಗೂ ಮರಳಿಸಿರಿ. ಅದು ಅತ್ಯುತ್ತಮವಾದುದೂ ಅತಿಸೂಕ್ತ ಪರ್ಯಾವಸಾನವುಳ್ಳದ್ದೂ ಆಗಿದೆ.
[ಅನ್ನಿಸಾ'ಅ : 59]
a).ಪವಿತ್ರ ಕುರಾನ್.
b).ಸುನ್ನತ್ (ಪ್ರವಾದಿ ಚರ್ಯೆ).
c).ಇಜ್ಮಾ (ಕುರಾನ್ ಮತ್ತು ಹದೀಸ್ ಗಳಲ್ಲಿ ಇತ್ಯರ್ಥವಾಗದ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಆ ಕಾಲದ ಪ್ರವಾದಿಯ ಉಮ್ಮತ್ತಿನಲ್ಲಿರುವ ಪಂಡಿತ ಶಿರೋಮಣಿಗಳ ಸಹಮತವನ್ನು “ಇಜ್ಮಾ” ಎನ್ನುತ್ತಾರೆ).
d).ಕಿಯಾಸ್ (ಕುರಾನ್ ಮತ್ತು ಹದೀಸ್ ಗಳಲ್ಲಿನೇರವಾಗಿ ಉಲ್ಲೇಖಿಸಲ್ಪಡದಿರುವ ಯಾವುದೇ ಒಂದು ಸಮಸ್ಯೆಯ ಕುರಿತ ಪರಿಹಾರದ ಸಲುವಾಗಿ ಕುರಾನ್ ಮತ್ತು ಹದೀಸ್ ಗಳಲ್ಲಿಉಲ್ಲೇಖಿಸಲ್ಪಟ್ಟಿರುವ ಅದನ್ನು ಹೋಲುವ ಬೇರೊಂದು ಸಮಸ್ಯೆಯಿಂದ ಪರಿಹಾರವನ್ನು ಕಂಡು ಹಿಡಿಯುವುದನ್ನು “ಕಿಯಾಸ್” (ತುಲನೆ ಮಾಡುವುದು) ಎನ್ನುತ್ತಾರೆ.) ಈ ನಾಲ್ಕುಇಸ್ಲಾಮೀ ಕರ್ಮ ಶಾಸ್ತ್ರದ ಮೂಲಾಧಾರಗಳಾಗಿವೆ.
2). ಪ್ರವಾದಿ(ಸ) ಯವರ ಕಾಲದಲ್ಲಿ ಕರ್ಮ ಶಾಸ್ತ್ರ.⬇
ಪ್ರವಾದಿ(ಸ)ಯವರ ಕಾಲದಲ್ಲಿ ವಹ್ಯ್ ನ ಜ್ಞಾನವೇ ಕರ್ಮ ಶಾಸ್ತ್ರವಾಗಿತ್ತು. ಪವಿತ್ರ ಕುರಾನ್ ನೇರವಾಗಿ ಸಮಸ್ಯೆಗಳನ್ನು ಸೂಚಿಸಿ ಅವುಗಳ ಪರಿಹಾರವನ್ನೂ ಉಲ್ಲೇಖಿಸುತ್ತಿತ್ತು. ಇಲ್ಲವೆಂದಾದಲ್ಲಿ ಕುರಾನೇತರ ವಹ್ಯ್ ನ ಮೂಲಕ ಪ್ರವಾದಿ(ಸ) ಅವುಗಳಿಗೆ ಪರಿಹಾರವನ್ನು ಸೂಚಿಸುತ್ತಿದ್ದರು. ಇದನ್ನು ” ಫಿಕ್ಹುಲ್ ವಹ್ಯ್” ಎನ್ನಲಾಗುತ್ತದೆ.
3). ಪ್ರವಾದಿ(ಸ) ಯವರ ಸಹಚರರ (ಸಹಾಬಿಗಳ) ಮತ್ತವರ ಶಿಷ್ಯಂದಿರ (ತಾಬಿಈನ್ ಗಳ) ಕಾಲದ ಕರ್ಮ ಶಾಸ್ತ್ರ.⬇
ಇಸ್ಲಾಂ ಒಂದು ಸಾರ್ವ ಕಾಲಿಕ ಮತ್ತು ಸಕಲ ಮನುಕುಲದ ಧರ್ಮ. ಪ್ರವಾದಿ(ಸ)ಯವರ ಕಾಲಾನಂತರ ಇಸ್ಲಾಮೀ ಸಾಮ್ರಾಜ್ಯವು ವಿಸ್ತರಿಸಲಾರಂಭಿಸಿತು. ಹೊಸ ಹೊಸ ಜನ ಪ್ರದೇಶಗಳು ಇಸ್ಲಾಮೀ ಆಡಳಿತ ವ್ಯವಸ್ಥೆಯ ಅಧೀನದಲ್ಲಿ ಬರ ತೊಡಗಿದುವು ಮತ್ತಿದರಿಂದಾಗಿ ಕೆಲ ಹೊಸ ಹೊಸ ಸಮಸ್ಯೆಗಳೂ ಉದ್ಭವಿಸಿತ್ತು. ಹೀಗೆ ಹೊಸ ಪ್ರದೇಶ ಮತ್ತು ಹೊಸ ಕಾಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ವಿಧ್ವಾಂಸರು ಇಸ್ಲಾಮಿನ ಮೂಲ ಸಿದ್ಧಾಂತ ಮತ್ತು ಮೂಲಾಧಾರಗಳ ಗವೇಷಣೆ ನಡೆಸಿ ತಲೆದೋರಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿದರು. ಈ ಗವೇಷಣೆಯನ್ನೇ “ಇಜ್ತಿಹಾದ್” ಎಂದು ಕರೆಯಲಾಯಿತು. ಹೀಗೆ ಪ್ರವಾದಿ(ಸ) ಯವರ ಸಹಚರರ (ಸಹಾಬಿಗಳ) ಮತ್ತವರ ಶಿಷ್ಯಂದಿರ (ತಾಬಿಈನ್ ಗಳ) ಕಾಲದಲ್ಲಿ ” ಫಿಕ್ಹುಲ್ ವಹ್ಯ್” ನಂತೆಯೇ “ಅಲ್ ಫಿಕ್ಹುಲ್ ಇಜ್ತಿಹಾದೀ” (ಗವೇಷಣಾಧಾರಿತ ಕರ್ಮಶಾಸ್ತ್ರ) ಕೂಡಾ ಇಸ್ಲಾಮೀ ಕರ್ಮಶಾಸ್ತ್ರದ ಭಾಗವಾಗಿತ್ತು.
4). ತಾಬಿಈನ್ ರ ಕಾಲದ ಕೆಲವು ಪ್ರಸಿದ್ಧ ಕರ್ಮಶಾಸ್ತ್ರಜ್ಞರು⬇
ಇಮಾಮ್ ಅಬೂ ಹನೀಫ (ರ) (ನೂಮಾನ್ ಬಿನ್ ಸಾಬಿತ್)
ಜನನ : ಹಿಜರಿ 80 ಕ್ರಿ.ಪೂ 699 ಕೂಫಃ (ಇರಾಕ್).ಮರಣ : ಹಿಜರಿ 150 ಕ್ರಿ.ಪೂ 767 ಬಗ್ದಾದ್ (ಇರಾಕ್)
ಇಮಾಮ್ ಮಾಲಿಕ್ (ರ) (ಮಾಲಿಕ್ ಬಿನ್ ಅನಸ್)
ಜನನ : ಹಿಜರಿ 93 ಕ್ರಿ.ಪೂ 715 (ಮದೀನ). ಮರಣ : ಹಿಜರಿ 179 ಕ್ರಿ.ಪೂ 796 (ಮದೀನ)
ಇಮಾಮ್ ಶಾಫೀ (ರ) (ಮುಹಮ್ಮದ್ ಬಿನ್ ಇದ್ರೀಸ್)
ಜನನ : ಹಿಜರಿ 150 ಕ್ರಿ.ಪೂ 767 (ಅಸ್ಕಲಾನ್).ಮರಣ : ಹಿಜರಿ 204 ಕ್ರಿ.ಪೂ 820 ಬಗ್ದಾದ್ (ಇರಾಕ್)
ಇಮಾಮ್ ಅಹ್ಮದ್ ಬಿನ್ ಹಂಬಲ್ (ರ)
ಜನನ : ಹಿಜರಿ 164 ಕ್ರಿ.ಪೂ 780 ಬಗ್ದಾದ್ (ಇರಾಕ್).ಮರಣ : ಹಿಜರಿ 241 ಕ್ರಿ.ಪೂ 855 ಬಗ್ದಾದ್ (ಇರಾಕ್)
🔴 ಕುರಾನ್, ಸುನ್ನತ್, ಇಜ್ಮಾಅ ಮತ್ತು ಖಿಯಾಸ್ ಗೆ ಹೊರತಾಗಿರುವ ಯಾವುದೇ ಅಭಿಪ್ರಾಯಗಳನ್ನು ಕೊಟ್ಟರೂ ಅದು ಇಸ್ಲಾಮಿಗೆ ಪುರಾವೆಯಾಗುವುದಿಲ್ಲ.
الإسناد من الدين
ದೀನ್ ಗೆ ಪ್ರಮಾಣವು ಮುಖ್ಯವಾಗಿದೆ.
ಪ್ರಮಾಣವೆಂದರೆ ಅದು ಕುರಾನ್ ಮತ್ತು ಸುನ್ನತ್ತಿಗೆ ಹೊಂದಿಕೊಂಡಿರಬೇಕು. ಯಾಕೆಂದರೆ ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽
الْيَوْمَ أَكْمَلْتُ لَكُمْ دِينَكُمْ وَأَتْمَمْتُ عَلَيْكُمْ نِعْمَتِي وَرَضِيتُ لَكُمُ الْإِسْلَامَ دِينًا
ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು. ನನ್ನ ಅನುಗ್ರಹವನ್ನು ನಾನು ನಿಮಗೆ ನೆರವೇರಿಸಿಕೊಟ್ಟಿರುವೆನು. ಇಸ್ಲಾಮನ್ನು ಧರ್ಮವಾಗಿ ನಾನು ನಿಮಗೆ ತೃಪ್ತಿಪಟ್ಟಿರುವೆನು.
[ಅಲ್-ಮಾ'ಇದಃ : 3]
ಪ್ರವಾದಿ ﷺ ರ ಕಾಲದ ನಂತರ ಬೇರೆ ಒಂದು ಇಸ್ಲಾಮ್ ಇಲ್ಲ. ಅಲ್ಲಾಹನು ಪ್ರವಾದಿ ﷺ ರ ಕಾಲದಲ್ಲಿಯೇ ಇಸ್ಲಾಮನ್ನು ಪೂರ್ಣಗೊಳಿಸಿದ್ದಾನೆ. ನಂತರ ಉದ್ಭವಿಸುವ ಯಾವುದೇ ಘಟನೆಗಳು ಇಸ್ಲಾಮಿಗೆ ಪುರಾವೆಯಲ್ಲ.
ಪ್ರವಾದಿ ﷺ ರು ಹೇಳುತ್ತಾರೆ : ನನ್ನ ಪೈಕಿ ನನ್ನ ನಂತರ ಜೀವಿಸುವವರು ಬಹಳಷ್ಟು ಭಿನ್ನಾಭಿಪ್ರಾಯವನ್ನು ಕಾಣಲಿರುವರು. ಆ ಸಂಧರ್ಭದಲ್ಲಿ ನೀವು ನನ್ನ ಮತ್ತು ನಾಲ್ವರು ಖಲೀಫರ ಸುನ್ನತ್ತನ್ನು ಬಲವಾಗಿ ಹಿಡಿದುಕೊಳ್ಳಿರಿ. ಯಾವುದೇ ಕಾರಣಕ್ಕೂ ಸುನ್ನತ್ತನ್ನು ಕೈಬಿಡದಿರಿ.
(ಅಬೂ ದಾವೂದ್ : 4607, ತಿರ್ಮಿದಿ :2676)
ಪ್ರವಾದಿ ﷺ ರು ಹೇಳಿದರು : ನನ್ನ ಮತ್ತು ನನ್ನ ಸಹಾಬಿಗಳ ಮಾರ್ಗದಲ್ಲಿ ಯಾರು ಇದ್ದಾರೆಯೇ ಅವರಾಗಿದ್ದಾರೆ ವಿಜಯಿಗಳು.
ಪ್ರವಾದಿ ﷺ ರು ಹೇಳಿದರು : ನಾನು ನಿಮಗೆ ಎರಡು ವಸ್ತುಗಳನ್ನು ಬಿಟ್ಟು ಹೋಗುತ್ತಿದ್ದೇನೆ (ಕುರಾನ್ ಮತ್ತು ಪ್ರವಾದಿ ಚರ್ಯೆ) ಅದನ್ನು ಗಟ್ಟಿಯಾಗಿ ಹಿಡಿಯುವ ವರೆಗೆ ನೀವು ದಾರಿ ತಪ್ಪಲಾರಿರಿ.
ಎಲ್ಲದಕ್ಕೂ ಪರ್ಯಾವಸಾನ ಇಲ್ಲಿದೆ.
ಅಲ್ಲಾಹನು ಕುರಾನಿನಲ್ಲಿ ಹೇಳುತ್ತಾನೆ 🔽
يَا أَيُّهَا الَّذِينَ آمَنُوا أَطِيعُوا اللَّهَ وَأَطِيعُوا الرَّسُولَ وَأُولِي الْأَمْرِ مِنْكُمْ ۖ فَإِنْ تَنَازَعْتُمْ فِي شَيْءٍ فَرُدُّوهُ إِلَى اللَّهِ وَالرَّسُولِ إِنْ كُنْتُمْ تُؤْمِنُونَ بِاللَّهِ وَالْيَوْمِ الْآخِرِ ۚ ذَٰلِكَ خَيْرٌ وَأَحْسَنُ تَأْوِيلًا
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಅನುಸರಿಸಿರಿ. (ಅವನ) ಸಂದೇಶವಾಹಕರನ್ನೂ ನಿಮ್ಮಿಂದಲೇ ಇರುವ ಕಾರ್ಯನಿರ್ವಾಹಕರನ್ನೂ ಅನುಸರಿಸಿರಿ. ನೀವು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಾದರೂ ಭಿನ್ನಾಭಿಪ್ರಾಯ ತಲೆದೋರಿದರೆ ನೀವದನ್ನು ಅಲ್ಲಾಹುವಿನೆಡೆಗೂ ಸಂದೇಶವಾಹಕರೆಡೆಗೂ ಮರಳಿಸಿರಿ. ಅದು ಅತ್ಯುತ್ತಮವಾದುದೂ ಅತಿಸೂಕ್ತ ಪರ್ಯಾವಸಾನವುಳ್ಳದ್ದೂ ಆಗಿದೆ.
[ಅನ್ನಿಸಾ'ಅ : 59]
