ಪ್ರವಾದಿ ﷺ ಸಾಮಾನ್ಯ ಮನುಷ್ಯರೇ?
ಪ್ರವಾದಿ ﷺ ರು ಈ ಲೋಕದಲ್ಲಿರುವ ಬೇರೆ ಎಲ್ಲಾ ಸೃಷ್ಟಿಗಳಿಗಿಂತ ಅನೇಕ ವೈಶಿಷ್ಟತೆ ಮತ್ತು ಶ್ರೇಷ್ಟತೆಯಿರುವ ಮಹಾತ್ಮರಾಗಿದ್ದರು ಎಂದು ಇಸ್ಲಾಂ ಕಲಿಸುತ್ತದೆ. ನುಬುವ್ವತ್, ರಿಸಾಲತ್, ಮುಹ್'ಜಿಝತ್, ಪಾಪ ಸುರಕ್ಷತೆ.... ಮೊದಲಾದವುಗಳು ಕೆಲವು ಉದಾಹರಣೆಗಳಾಗಿವೆ. ಮಾತ್ರವಲ್ಲದೆ ಪ್ರವಾದಿ ﷺ ರಿಗೆ ಇತರ ಪ್ರವಾದಿಗಳಂತೆ ಪ್ರತ್ಯೇಕವಾದ ಬೇರೆ ಹಲವು ಪ್ರತ್ಯೇಕ ಶ್ರೇಷ್ಠತೆ ಕೂಡಾ ಇದೆ.
ಉದಾ:- ಪಪ್ರಪ್ರಥಮವಾಗಿ ಸ್ವರ್ಗ ಪ್ರವೇಶಿಸುವವರೂ, ಪರ ಲೋಕದಲ್ಲಿ ಶಫಾಅತ್ ಮಾಡಲು ಮೊದಲು ಅನುಮತಿ ಲಭಿಸುವವರೂ, ಹೌಲುಲ್ ಕೌಸರ್ ನಿಂದ ಪಾನೀಯ ಕೊಡುವ ಅರ್ಹತೆ ಲಭಿಸುವವರೂ ಪ್ರವಾದಿ ﷺ ಆಗಿರುವರು.
ಈ ವಾಸ್ತವಿಕತೆಯನ್ನು ಹೇಳುವವರನ್ನು ಮುಸ್ಲಿಯಾರ್ ಗಳು ಪ್ರವಾದಿ ﷺ ರನ್ನು ಸಾಮಾನ್ಯ ಮನುಷ್ಯರನ್ನಾಗಿ ಮಾಡುವವರು, ಅವರನ್ನು ಪ್ರೀತಿಸದವರು ಎಂದು ಅಪಪ್ರಚಾರ ನಡೆಸುತ್ತಾರೆ.
ಆದರೆ, ಕುರಾನ್ ಹೇಳುವುದನ್ನು ನೋಡಿ.
قُلْ إِنَّمَا أَنَا بَشَرٌ مِثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ ۖ فَمَنْ كَانَ يَرْجُو لِقَاءَ رَبِّهِ فَلْيَعْمَلْ عَمَلًا صَالِحًا وَلَا يُشْرِكْ بِعِبَادَةِ رَبِّهِ أَحَدًا
(ಓ ಪ್ರವಾದಿಯವರೇ!) ಹೇಳಿರಿ: ‘ನಾನು ನಿಮ್ಮಂತಿರುವ ಒಬ್ಬ ಮನುಷ್ಯನು ಮಾತ್ರವಾಗಿರುವೆನು.[559] ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಯಾರಾದರೂ ತನ್ನ ಪ್ರಭುವಿನ ಭೇಟಿಯನ್ನು ಆಶಿಸುವು ದಾದರೆ ಅವನು ಸತ್ಕರ್ಮವನ್ನು ಮಾಡಲಿ ಮತ್ತು ತನ್ನ ಪ್ರಭುವಿನ ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ’.
ಟಿಪ್ಪಣಿಗಳು :
[559] ಪ್ರವಾದಿ ಮುಹಮ್ಮದ್ ﷺ ರವರು ತಿನ್ನುವ, ಕುಡಿಯುವ, ಮಾಂಸ-ನೆತ್ತರುಗಳಿರುವ, ನೋವು-ನಲಿವುಗಳನ್ನು ಹೊಂದಿರುವ ಓರ್ವ ಮನುಷ್ಯರೇ ಆಗಿದ್ದರು. ಅಲ್ಲಾಹುವಿನಿಂದ ಅವರಿಗೆ ವಹ್ಯ್ ಲಭಿಸುತ್ತದೆ ಎಂಬುದು ಅವರನ್ನು ಇತರ ಜನಸಾಮಾನ್ಯರಿಂದ ಉನ್ನತಗೊಳಿಸುತ್ತದೆ.
[ಅಲ್-ಕಹ್'ಫ್ : 110]
قُلْ إِنَّمَا أَنَا بَشَرٌ مِثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ فَاسْتَقِيمُوا إِلَيْهِ وَاسْتَغْفِرُوهُ ۗ
ಹೇಳಿರಿ: ‘ನಾನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರವಾಗಿರುವೆನು. ನಿಮ್ಮ ಆರಾಧ್ಯನು ಏಕಮೇವ ಆರಾಧ್ಯ ನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಅವನೆಡೆಗಿರುವ ಮಾರ್ಗದಲ್ಲಿ ನೀವು ನೇರವಾಗಿ ನೆಲೆಗೊಳ್ಳಿರಿ. ಅವನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ.
[ಫುಸ್ಸಿಲತ್ : 6]
قَالَتْ لَهُمْ رُسُلُهُمْ إِنْ نَحْنُ إِلَّا بَشَرٌ مِثْلُكُمْ وَلَٰكِنَّ اللَّهَ يَمُنُّ عَلَىٰ مَنْ يَشَاءُ مِنْ عِبَادِهِ ۖ وَمَا كَانَ لَنَا أَنْ نَأْتِيَكُمْ بِسُلْطَانٍ إِلَّا بِإِذْنِ اللَّهِ ۚ وَعَلَى اللَّهِ فَلْيَتَوَكَّلِ الْمُؤْمِنُونَ
ಅವರೆಡೆಗೆ ಕಳುಹಿಸಲಾದ ಸಂದೇಶವಾಹಕರು ಅವರೊಂದಿಗೆ ಹೇಳಿದರು: ‘ನಾವು ನಿಮ್ಮಂತಿರುವ ಮನುಷ್ಯರು ಮಾತ್ರವಾಗಿರುವೆವು. ಆದರೆ ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಛಿಸುವವರ ಮೇಲೆ ಔದಾರ್ಯ ತೋರುವನು. ಅಲ್ಲಾಹುವಿನ ಅನುಮತಿಯ ವಿನಾ ನಿಮಗೆ ಯಾವುದಾದರೂ ಆಧಾರ ಪ್ರಮಾಣವನ್ನು ತಂದುಕೊಡಲು ನಮ್ಮಿಂದಾಗದು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆ ಭರವಸೆಯಿಡಲಿ.
[ಇಬ್ರಾಹೀಮ್ : 11]
أَوْ يَكُونَ لَكَ بَيْتٌ مِنْ زُخْرُفٍ أَوْ تَرْقَىٰ فِي السَّمَاءِ وَلَنْ نُؤْمِنَ لِرُقِيِّكَ حَتَّىٰ تُنَزِّلَ عَلَيْنَا كِتَابًا نَقْرَؤُهُ ۗ قُلْ سُبْحَانَ رَبِّي هَلْ كُنْتُ إِلَّا بَشَرًا رَسُولًا
ಅಥವಾ ತಮಗೆ ಒಂದು ಸ್ವರ್ಣ ಭವನ ವುಂಟಾಗುವ ತನಕ, ಅಥವಾ ತಾವು ಆಕಾಶಕ್ಕೆ ಏರಿ ಹೋಗುವ ತನಕ. ನಮಗೆ ಓದಬಹುದಾದ ಒಂದು ಗ್ರಂಥವನ್ನು ತಾವು ನಮ್ಮ ಬಳಿಗೆ ಇಳಿಸಿಕೊಡುವ ತನಕ ತಾವು ಏರಿ ಹೋಗಿರುವುದಾಗಿ ನಾವೆಂದೂ ವಿಶ್ವಾಸವಿಡಲಾರೆವು’. (ಓ ಪ್ರವಾದಿಯವರೇ!) ಹೇಳಿರಿ: ‘ನನ್ನ ಪ್ರಭು ಪರಮಪಾವನನು! ಸಂದೇಶ ವಾಹಕನಾಗಿರುವ ಒಬ್ಬ ಮಾನವ ಎಂಬುದರ ಹೊರತು ನಾನು ಇನ್ನೇನಾದರೂ ಆಗಿರುವೆನೇ?’[517]
ಟಿಪ್ಪಣಿಗಳು :
[517] ಹೇರಳವಾಗಿ ಅದ್ಭುತ ಕಾರ್ಯಗಳನ್ನು ತೋರಿಸುವ ಶಕ್ತಿ ಪ್ರವಾದಿಗಳಿಗಿಲ್ಲ. ಅಲ್ಲಾಹು ಅವರ ಮೂಲಕ ಅದ್ಭುತ ಕಾರ್ಯಗಳನ್ನು ಪ್ರಕಟಿಸಲು ಇಚ್ಛಿಸುವಾಗ ಅವು ಸಂಭವಿಸುತ್ತವೆ.
[ಅಲ್-ಇಸ್ರಾ'ಅ : 93]
ಇಲ್ಲಿ ನಾವು ತಿಳಿಯಬೇಕಾಗಿರುವುದು, ಪ್ರವಾದಿ ﷺ ರ ಕುರಿತು ಮನುಷ್ಯರ ಪರಮಾವಧಿ ತಿಳುವಳಿಕೆ ನಿಶ್ಚಯವಾಗಿಯೂ ತಾವೋರ್ವ ಮನುಷ್ಯರು ಹಾಗೂ ಅಲ್ಲಾಹನ ಸರ್ವ ಸೃಷ್ಟಿ ಗಳಲ್ಲಿ ಅತ್ಯುನ್ನತರು ಮಾತ್ರರಾಗಿದ್ದೀರಿ ಎಂದಾಗಿದೆ.
ಪ್ರವಾದಿ ﷺ ರ ಹಖೀಖತ್ತನ್ನು ತಿಳಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಎಷ್ಟು ಅಧ್ಯಯನ ನಡೆಸಿದರೂ ಮನುಷ್ಯರು ತಲುಪುವ ಪರಮಾವಧಿ ಜ್ಞಾನ ಪ್ರವಾದಿ ﷺ ರು ಇಲಾಹ್, ಅಥವಾ ಮಲಕ್ ಅಲ್ಲವೆಂದಾಗಿದೆ.
ಪ್ರತಿಯೊಬ್ಬ ಪ್ರವಾದಿಗಳಲ್ಲೂ ಸಾಧಾರಣತ್ವ, ಮತ್ತು ಅಸಾಧಾರಣತ್ವ ಇದೆ.
ಸಾಧಾರಣತ್ವ: ಎಂದರೆ ತಿನ್ನುವುದು, ಕುಡಿಯುವುದು, ನಿದ್ರಿಸುವುದು, ಮಾತನಾಡುವರು, ವ್ಯಾಪಾರ, ಪತಿ-ಪತ್ನಿ ಸಂಬಂಧ, ಮಲ ಮೂತ್ರ ವಿಸರ್ಜನೆ, ನೋವು ನಲಿವು, ಮಾಂಸ-ನೆತ್ತರುಗಳಿರುವ, ನಮ್ಮಂತೆಯೇ ರೂಪವಿರುವ ಸಾಮಾನ್ಯ ಮನುಷ್ಯರಾಗಿದ್ದಾರೆ.
ಅಸಾಧಾರಣತ್ವ: ಎಂದರೆ ಅಲ್ಲಾಹನಿಂದ ವಹೀಹ್ ಲಭಿಸುವವರೂ, ಪಪ್ರಪ್ರಥಮವಾಗಿ ಸ್ವರ್ಗ ಪ್ರವೇಶಿಸುವವರೂ, ಪರ ಲೋಕದಲ್ಲಿ ಶಫಾಅತ್ ಮಾಡಲು ಮೊದಲು ಅನುಮತಿ ಲಭಿಸುವವರೂ, ಹೌಲುಲ್ ಕೌಸರ್ ನಿಂದ ಪಾನೀಯ ಕೊಡುವ ಅರ್ಹತೆ ಲಭಿಸುವವರೂ, ಇತ್ಯಾದಿ... ಪ್ರವಾದಿ ﷺ ಆಗಿರುವರು. ಇದೆಲ್ಲವೂ ಅಸಾಧಾರಣ ವ್ಯಕ್ತಿತ್ವಕ್ಕೆ ಉದಾಹರಣೆಗಳಾಗಿವೆ.
ಎಂದರೆ, ಹೇರಳವಾಗಿ ಅದ್ಭುತ ಕಾರ್ಯಗಳನ್ನು ತೋರಿಸುವ ಶಕ್ತಿ ಪ್ರವಾದಿಗಳಿಗಿಲ್ಲ. ಅಲ್ಲಾಹುಅವರ ಮೂಲಕ ಅದ್ಭುತ ಕಾರ್ಯಗಳನ್ನು ಪ್ರಕಟಿಸಲು ಇಚ್ಛಿಸುವಾಗ ಅವು ಸಂಭವಿಸುತ್ತವೆ.
ಪ್ರತಿಯೊಬ್ಬ ಪ್ರವಾದಿಗಳನ್ನು ನಾವು ಗೌರವಿಸಬೇಕು, ಅವರು ನಡೆದು ಬಂದ ದಾರಿಯನ್ನು ನಾವು ಹಿಂಬಾಲಿಸಬೇಕು. ಆದರೆ ಯಹೂದಿ ಮತ್ತು ಕ್ರೈಸ್ತರಂತೆ ಪ್ರವಾದಿಗಳನ್ನು ದಿವ್ಯತ್ವಕ್ಕೇರಿಸುವುದು, ಹಾಗೂ ಸತ್ಯ ವಿಶ್ವಾಸಿಗಳನ್ನು ಅಪಮಾನಿಸಿ ತೇಜೋವಧೆ ಮಾಡುವುದು ಸಲ್ಲದು.
ಪ್ರವಾದಿಗಳ ಪದವಿಗೆ ನ್ಯೂನತೆಗಳನ್ನು ಉಂಟು ಮಾಡದೆ ಮಾನುಷಿಕ ಕಾರ್ಯಗಳೆಲ್ಲವೂ ಅವರಿಂದ ಸಂಭವಿಸುವುದರಲ್ಲಿ ವಿರೋಧವಿಲ್ಲ.
ಕುರಾನ್ ಹೇಳುವುದನ್ನು ನೋಡಿ.
وَمَا أَرْسَلْنَا قَبْلَكَ مِنَ الْمُرْسَلِينَ إِلَّا إِنَّهُمْ لَيَأْكُلُونَ الطَّعَامَ وَيَمْشُونَ فِي الْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا
ಆಹಾರವನ್ನು ಸೇವಿಸುವವರಾಗಿ ಮತ್ತು ಪೇಟೆಗಳಲ್ಲಿ ನಡೆಯುವವರಾಗಿ ಹೊರತು ತಮಗಿಂತ ಮುಂಚೆ ನಾವು ಸಂದೇಶವಾಹಕರ ಪೈಕಿ ಯಾರನ್ನೂ ಕಳುಹಿಸಿಲ್ಲ. ನೀವು ತಾಳ್ಮೆ ವಹಿಸುವಿರೋ ಎಂದು ನೋಡುವುದಕ್ಕಾಗಿ ನಿಮ್ಮಲ್ಲಿ ಕೆಲವರನ್ನು ನಾವು ಇತರ ಕೆಲವರಿಗೆ ಒಂದು ಪರೀಕ್ಷೆಯನ್ನಾಗಿ ಮಾಡಿರುವೆವು.[690] ತಮ್ಮ ಪ್ರಭು (ಎಲ್ಲವನ್ನೂ) ವೀಕ್ಷಿಸುವವನಾಗಿರುವನು.
ಟಿಪ್ಪಣಿಗಳು :
[690] ಅಲ್ಲಾಹು ಕೆಲವರಿಗೆ ಆಧ್ಯಾತ್ಮಿಕ ಪದವಿಗಳನ್ನು ನೀಡುತ್ತಾನೆ. ಕೆಲವರಿಗೆ ಲೌಕಿಕ ಸ್ಥಾನಮಾನಗಳನ್ನೂ ಸಮೃದ್ಧಿಯನ್ನೂ ನೀಡುತ್ತಾನೆ. ಕೆಲವರಿಗೆ ಏನನ್ನೂ ನೀಡುವುದಿಲ್ಲ. ಇವೆಲ್ಲವನ್ನೂ ಅಲ್ಲಾಹು ತನ್ನ ಯುಕ್ತಿಗನುಗುಣವಾಗಿಯೇ ಮಾಡುತ್ತಿದ್ದಾನೆ. ಅದನ್ನು ಅರ್ಥಮಾಡಿಕೊಂಡು ಕೃತಜ್ಞತಾಪೂರ್ವಕವಾಗಿ ಪ್ರತಿಕ್ರಿಯಿಸಲು ಮತ್ತು ಸಂಕಷ್ಟಗಳನ್ನು ತಾಳ್ಮೆಯೊಂದಿಗೆ ಎದುರಿಸಲು ಯಾರಿಗೆ ಸಾಧ್ಯವಾಗುತ್ತದೆ ಎಂದು ಅವನು ಪರೀಕ್ಷಿಸುತ್ತಾನೆ. ಪ್ರವಾದಿಯನ್ನು ಕಳುಹಿಸಿ ಅವರ ಬಗ್ಗೆ ನಿಮ್ಮ ನಿಲುವನ್ನೂ ಪರೀಕ್ಷಿಸುತ್ತಾನೆ. ನಿಮ್ಮ ವಿರೋಧಕ್ಕೆ ಪ್ರವಾದಿಯ ಪ್ರತಿಕ್ರಿಯೆ ಹೇಗಿರುತ್ತದೆಂಬುದನ್ನೂ ಪರೀಕ್ಷಿಸುತ್ತಾನೆ.
[ಅಲ್-ಫುರ್ಕಾನ್ : 20]
وَلَقَدْ أَرْسَلْنَا رُسُلًا مِنْ قَبْلِكَ وَجَعَلْنَا لَهُمْ أَزْوَاجًا وَذُرِّيَّةً ۚ وَمَا كَانَ لِرَسُولٍ أَنْ يَأْتِيَ بِآيَةٍ إِلَّا بِإِذْنِ اللَّهِ ۗ لِكُلِّ أَجَلٍ كِتَابٌ
ತಮಗಿಂತ ಮುಂಚೆಯೂ ನಾವು ಸಂದೇಶ ವಾಹಕರನ್ನು ಕಳುಹಿಸಿರುವೆವು. ಅವರಿಗೆ ನಾವು ಪತ್ನಿಯರನ್ನೂ ಸಂತತಿಗಳನ್ನೂ ಮಾಡಿಕೊಟ್ಟಿರುವೆವು. ಅಲ್ಲಾಹುವಿನ ಅನುಮತಿಯ ವಿನಾ ಯಾವುದೇ ಒಂದು ದೃಷ್ಟಾಂತವನ್ನು ತರಲು ಯಾವುದೇ ಸಂದೇಶವಾಹಕನಿಗೂ ಸಾಧ್ಯವಾಗಲಾರದು. ಪ್ರತಿಯೊಂದು ಕಾಲಕ್ಕೂ ಒಂದು (ಆಧಾರಪ್ರಮಾಣ) ಗ್ರಂಥವಿರುವುದು.
[ಅರ್ರ'ಅದ್ : 38]
ಪ್ರಮಾಣಗಳು ಪ್ರವಾದಿ ﷺ ರನ್ನು ಮೇಲಿನಂತೆ ಪರಿಚಯಿಸುತ್ತದೆ ಎನ್ನುವುದು ವ್ಯಕ್ತವಿದೆ. ಆದರೆ ಇಂದು ಸಮುದಾಯವು ಪ್ರವಾದಿ ﷺ ರ ಕುರಿತು ಇಸ್ಲಾಂ ಕಲಿಸದ ಕೆಲವು ವಿಶ್ವಾಸಗಳನ್ನು ಇಟ್ಟುಕೊಂಡಿರುವುದನ್ನು ನಾವು ನೋಡಬಹುದು.
ಉದಾ :- ಪ್ರವಾದಿಯವರಿಗೆ ನೆರಳಿಲ್ಲ, ಪ್ರವಾದಿಯವರ ಮೂತ್ರ ಶುದ್ದಿಯಾಗಿದೆ, ಅವರು ಆಧ್ಯಾತ್ಮಿಕವಾಗಿ ಮಲಕ್ ಆಗಿದ್ದಾರೆ, ಮುಂತಾದ ವಿಶ್ವಾಸಗಳು! ಇಂತಹ ಹಲವು ವಿಶ್ವಾಸಗಳನ್ನು ಸಮಸ್ತದವರು ಅವರ ಮದ್ರಸಾಗಳಲ್ಲಿ ಕೂಡಾ ಕಲಿಸಿ ಕೊಡುತ್ತಿದ್ದಾರೆ! ಆದರೆ ಇವುಗಳಿಗೆ ಇಸ್ಲಾಂನ ಪ್ರಮಾಣಗಳಲ್ಲಿ ಯಾವುದೇ ಆಧಾರಗಳಿಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರವಾದಿ ﷺ ರಿಗೆ ಧಾರಾಳ ವೈಶಿಷ್ಟತೆ ಇದ್ದರೂ ಮನುಷ್ಯ ಪ್ರಕೃತಿಯಲ್ಲಿ ಅವರು (ಹಸಿವು, ಬಾಯಾರಿಕೆ, ನೋವು, ದುಃಖ, ಭಾವನೆ, ವಿಚಾರ, ಮುಂತಾದ ಕಾರ್ಯಗಳಲ್ಲಿ) ನಮ್ಮಂತೆ ಓರ್ವ ಮನುಷ್ಯರಾಗಿದ್ದರು. ಅದೇ ಸಮಯ ನುಬುವತ್ ನ ಎಲ್ಲಾ ವೈಶಿಷ್ಟತೆಗಳು ಪ್ರವಾದಿ ﷺ ರಲ್ಲಿ ಮೇಳೈಸಿತ್ತು. ಆದರೆ ಅವರು ಇಚ್ಛಿಸುವಾಗ ಅತಿಮಾನುಷ ದೃಷ್ಟಾಂತಗಳನ್ನು ಪ್ರಕಟಿಸಲು, ಹಾಗೂ ಅಗೋಚರ ಕಾರ್ಯಗಳನ್ನು ತಿಳಿಯಲು ಅವರಿಗೆ ಸಾಧ್ಯವಿರಲಿಲ್ಲವೆಂದು ನಾವು ತಿಳಿದುಕೊಂಡೆವು. ಇದು ಈ ವಿಷಯದಲ್ಲಿ ಇಸ್ಲಾಂನ ನೈಜ ದೃಷ್ಟಿಕೋನವಾಗಿದೆ.
ಸಲಫಿಗಗಳು ಇದಕ್ಕಿಂತ ಭಿನ್ನವಾದ ವಿಶ್ವಾಸವನ್ನು ಯಾವತ್ತೂ ಇರಿಸಿಕೊಂಡವರಲ್ಲ. ಸಲಫಿಗಳ ಮಟ್ಟಿಗೆ ಹೇಳುವುದಾದರೆ ಕುರಾನ್ ಮತ್ತು ಸ್ವಹೀಹ್ ಆದ ಹದೀಸ್'ಗಳಲ್ಲಿ ಪ್ರವಾದಿ ﷺ ಹಾಗೂ ಇತರ ಪ್ರವಾದಿಗಳ ಕುರಿತು ಯಾವ ವೈಶಿಷ್ಟತೆಗಳನ್ನು ವಿವರಿಸಲಾಗಿದೆಯೋ ಅದರಲ್ಲಿ ಯಾವುದನ್ನೂ ನಿಷೇಧಿಸದೆ ಪ್ರತಿಯೊಂದನ್ನು ಯಥಾಪ್ರಕಾರ ಅಂಗೀಕರಿಸಿ ಪ್ರಚುರಪಡಿಸುವುದಾಗಿದೆ.
ಪ್ರವಾದಿ ﷺ ರು ಈ ಲೋಕದಲ್ಲಿರುವ ಬೇರೆ ಎಲ್ಲಾ ಸೃಷ್ಟಿಗಳಿಗಿಂತ ಅನೇಕ ವೈಶಿಷ್ಟತೆ ಮತ್ತು ಶ್ರೇಷ್ಟತೆಯಿರುವ ಮಹಾತ್ಮರಾಗಿದ್ದರು ಎಂದು ಇಸ್ಲಾಂ ಕಲಿಸುತ್ತದೆ. ನುಬುವ್ವತ್, ರಿಸಾಲತ್, ಮುಹ್'ಜಿಝತ್, ಪಾಪ ಸುರಕ್ಷತೆ.... ಮೊದಲಾದವುಗಳು ಕೆಲವು ಉದಾಹರಣೆಗಳಾಗಿವೆ. ಮಾತ್ರವಲ್ಲದೆ ಪ್ರವಾದಿ ﷺ ರಿಗೆ ಇತರ ಪ್ರವಾದಿಗಳಂತೆ ಪ್ರತ್ಯೇಕವಾದ ಬೇರೆ ಹಲವು ಪ್ರತ್ಯೇಕ ಶ್ರೇಷ್ಠತೆ ಕೂಡಾ ಇದೆ.
ಉದಾ:- ಪಪ್ರಪ್ರಥಮವಾಗಿ ಸ್ವರ್ಗ ಪ್ರವೇಶಿಸುವವರೂ, ಪರ ಲೋಕದಲ್ಲಿ ಶಫಾಅತ್ ಮಾಡಲು ಮೊದಲು ಅನುಮತಿ ಲಭಿಸುವವರೂ, ಹೌಲುಲ್ ಕೌಸರ್ ನಿಂದ ಪಾನೀಯ ಕೊಡುವ ಅರ್ಹತೆ ಲಭಿಸುವವರೂ ಪ್ರವಾದಿ ﷺ ಆಗಿರುವರು.
ಈ ವಾಸ್ತವಿಕತೆಯನ್ನು ಹೇಳುವವರನ್ನು ಮುಸ್ಲಿಯಾರ್ ಗಳು ಪ್ರವಾದಿ ﷺ ರನ್ನು ಸಾಮಾನ್ಯ ಮನುಷ್ಯರನ್ನಾಗಿ ಮಾಡುವವರು, ಅವರನ್ನು ಪ್ರೀತಿಸದವರು ಎಂದು ಅಪಪ್ರಚಾರ ನಡೆಸುತ್ತಾರೆ.
ಆದರೆ, ಕುರಾನ್ ಹೇಳುವುದನ್ನು ನೋಡಿ.
قُلْ إِنَّمَا أَنَا بَشَرٌ مِثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ ۖ فَمَنْ كَانَ يَرْجُو لِقَاءَ رَبِّهِ فَلْيَعْمَلْ عَمَلًا صَالِحًا وَلَا يُشْرِكْ بِعِبَادَةِ رَبِّهِ أَحَدًا
(ಓ ಪ್ರವಾದಿಯವರೇ!) ಹೇಳಿರಿ: ‘ನಾನು ನಿಮ್ಮಂತಿರುವ ಒಬ್ಬ ಮನುಷ್ಯನು ಮಾತ್ರವಾಗಿರುವೆನು.[559] ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಯಾರಾದರೂ ತನ್ನ ಪ್ರಭುವಿನ ಭೇಟಿಯನ್ನು ಆಶಿಸುವು ದಾದರೆ ಅವನು ಸತ್ಕರ್ಮವನ್ನು ಮಾಡಲಿ ಮತ್ತು ತನ್ನ ಪ್ರಭುವಿನ ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಲಿ’.
ಟಿಪ್ಪಣಿಗಳು :
[559] ಪ್ರವಾದಿ ಮುಹಮ್ಮದ್ ﷺ ರವರು ತಿನ್ನುವ, ಕುಡಿಯುವ, ಮಾಂಸ-ನೆತ್ತರುಗಳಿರುವ, ನೋವು-ನಲಿವುಗಳನ್ನು ಹೊಂದಿರುವ ಓರ್ವ ಮನುಷ್ಯರೇ ಆಗಿದ್ದರು. ಅಲ್ಲಾಹುವಿನಿಂದ ಅವರಿಗೆ ವಹ್ಯ್ ಲಭಿಸುತ್ತದೆ ಎಂಬುದು ಅವರನ್ನು ಇತರ ಜನಸಾಮಾನ್ಯರಿಂದ ಉನ್ನತಗೊಳಿಸುತ್ತದೆ.
[ಅಲ್-ಕಹ್'ಫ್ : 110]
قُلْ إِنَّمَا أَنَا بَشَرٌ مِثْلُكُمْ يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ فَاسْتَقِيمُوا إِلَيْهِ وَاسْتَغْفِرُوهُ ۗ
ಹೇಳಿರಿ: ‘ನಾನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರವಾಗಿರುವೆನು. ನಿಮ್ಮ ಆರಾಧ್ಯನು ಏಕಮೇವ ಆರಾಧ್ಯ ನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದ್ದರಿಂದ ಅವನೆಡೆಗಿರುವ ಮಾರ್ಗದಲ್ಲಿ ನೀವು ನೇರವಾಗಿ ನೆಲೆಗೊಳ್ಳಿರಿ. ಅವನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ.
[ಫುಸ್ಸಿಲತ್ : 6]
قَالَتْ لَهُمْ رُسُلُهُمْ إِنْ نَحْنُ إِلَّا بَشَرٌ مِثْلُكُمْ وَلَٰكِنَّ اللَّهَ يَمُنُّ عَلَىٰ مَنْ يَشَاءُ مِنْ عِبَادِهِ ۖ وَمَا كَانَ لَنَا أَنْ نَأْتِيَكُمْ بِسُلْطَانٍ إِلَّا بِإِذْنِ اللَّهِ ۚ وَعَلَى اللَّهِ فَلْيَتَوَكَّلِ الْمُؤْمِنُونَ
ಅವರೆಡೆಗೆ ಕಳುಹಿಸಲಾದ ಸಂದೇಶವಾಹಕರು ಅವರೊಂದಿಗೆ ಹೇಳಿದರು: ‘ನಾವು ನಿಮ್ಮಂತಿರುವ ಮನುಷ್ಯರು ಮಾತ್ರವಾಗಿರುವೆವು. ಆದರೆ ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಛಿಸುವವರ ಮೇಲೆ ಔದಾರ್ಯ ತೋರುವನು. ಅಲ್ಲಾಹುವಿನ ಅನುಮತಿಯ ವಿನಾ ನಿಮಗೆ ಯಾವುದಾದರೂ ಆಧಾರ ಪ್ರಮಾಣವನ್ನು ತಂದುಕೊಡಲು ನಮ್ಮಿಂದಾಗದು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆ ಭರವಸೆಯಿಡಲಿ.
[ಇಬ್ರಾಹೀಮ್ : 11]
أَوْ يَكُونَ لَكَ بَيْتٌ مِنْ زُخْرُفٍ أَوْ تَرْقَىٰ فِي السَّمَاءِ وَلَنْ نُؤْمِنَ لِرُقِيِّكَ حَتَّىٰ تُنَزِّلَ عَلَيْنَا كِتَابًا نَقْرَؤُهُ ۗ قُلْ سُبْحَانَ رَبِّي هَلْ كُنْتُ إِلَّا بَشَرًا رَسُولًا
ಅಥವಾ ತಮಗೆ ಒಂದು ಸ್ವರ್ಣ ಭವನ ವುಂಟಾಗುವ ತನಕ, ಅಥವಾ ತಾವು ಆಕಾಶಕ್ಕೆ ಏರಿ ಹೋಗುವ ತನಕ. ನಮಗೆ ಓದಬಹುದಾದ ಒಂದು ಗ್ರಂಥವನ್ನು ತಾವು ನಮ್ಮ ಬಳಿಗೆ ಇಳಿಸಿಕೊಡುವ ತನಕ ತಾವು ಏರಿ ಹೋಗಿರುವುದಾಗಿ ನಾವೆಂದೂ ವಿಶ್ವಾಸವಿಡಲಾರೆವು’. (ಓ ಪ್ರವಾದಿಯವರೇ!) ಹೇಳಿರಿ: ‘ನನ್ನ ಪ್ರಭು ಪರಮಪಾವನನು! ಸಂದೇಶ ವಾಹಕನಾಗಿರುವ ಒಬ್ಬ ಮಾನವ ಎಂಬುದರ ಹೊರತು ನಾನು ಇನ್ನೇನಾದರೂ ಆಗಿರುವೆನೇ?’[517]
ಟಿಪ್ಪಣಿಗಳು :
[517] ಹೇರಳವಾಗಿ ಅದ್ಭುತ ಕಾರ್ಯಗಳನ್ನು ತೋರಿಸುವ ಶಕ್ತಿ ಪ್ರವಾದಿಗಳಿಗಿಲ್ಲ. ಅಲ್ಲಾಹು ಅವರ ಮೂಲಕ ಅದ್ಭುತ ಕಾರ್ಯಗಳನ್ನು ಪ್ರಕಟಿಸಲು ಇಚ್ಛಿಸುವಾಗ ಅವು ಸಂಭವಿಸುತ್ತವೆ.
[ಅಲ್-ಇಸ್ರಾ'ಅ : 93]
ಇಲ್ಲಿ ನಾವು ತಿಳಿಯಬೇಕಾಗಿರುವುದು, ಪ್ರವಾದಿ ﷺ ರ ಕುರಿತು ಮನುಷ್ಯರ ಪರಮಾವಧಿ ತಿಳುವಳಿಕೆ ನಿಶ್ಚಯವಾಗಿಯೂ ತಾವೋರ್ವ ಮನುಷ್ಯರು ಹಾಗೂ ಅಲ್ಲಾಹನ ಸರ್ವ ಸೃಷ್ಟಿ ಗಳಲ್ಲಿ ಅತ್ಯುನ್ನತರು ಮಾತ್ರರಾಗಿದ್ದೀರಿ ಎಂದಾಗಿದೆ.
ಪ್ರವಾದಿ ﷺ ರ ಹಖೀಖತ್ತನ್ನು ತಿಳಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಎಷ್ಟು ಅಧ್ಯಯನ ನಡೆಸಿದರೂ ಮನುಷ್ಯರು ತಲುಪುವ ಪರಮಾವಧಿ ಜ್ಞಾನ ಪ್ರವಾದಿ ﷺ ರು ಇಲಾಹ್, ಅಥವಾ ಮಲಕ್ ಅಲ್ಲವೆಂದಾಗಿದೆ.
ಪ್ರತಿಯೊಬ್ಬ ಪ್ರವಾದಿಗಳಲ್ಲೂ ಸಾಧಾರಣತ್ವ, ಮತ್ತು ಅಸಾಧಾರಣತ್ವ ಇದೆ.
ಸಾಧಾರಣತ್ವ: ಎಂದರೆ ತಿನ್ನುವುದು, ಕುಡಿಯುವುದು, ನಿದ್ರಿಸುವುದು, ಮಾತನಾಡುವರು, ವ್ಯಾಪಾರ, ಪತಿ-ಪತ್ನಿ ಸಂಬಂಧ, ಮಲ ಮೂತ್ರ ವಿಸರ್ಜನೆ, ನೋವು ನಲಿವು, ಮಾಂಸ-ನೆತ್ತರುಗಳಿರುವ, ನಮ್ಮಂತೆಯೇ ರೂಪವಿರುವ ಸಾಮಾನ್ಯ ಮನುಷ್ಯರಾಗಿದ್ದಾರೆ.
ಅಸಾಧಾರಣತ್ವ: ಎಂದರೆ ಅಲ್ಲಾಹನಿಂದ ವಹೀಹ್ ಲಭಿಸುವವರೂ, ಪಪ್ರಪ್ರಥಮವಾಗಿ ಸ್ವರ್ಗ ಪ್ರವೇಶಿಸುವವರೂ, ಪರ ಲೋಕದಲ್ಲಿ ಶಫಾಅತ್ ಮಾಡಲು ಮೊದಲು ಅನುಮತಿ ಲಭಿಸುವವರೂ, ಹೌಲುಲ್ ಕೌಸರ್ ನಿಂದ ಪಾನೀಯ ಕೊಡುವ ಅರ್ಹತೆ ಲಭಿಸುವವರೂ, ಇತ್ಯಾದಿ... ಪ್ರವಾದಿ ﷺ ಆಗಿರುವರು. ಇದೆಲ್ಲವೂ ಅಸಾಧಾರಣ ವ್ಯಕ್ತಿತ್ವಕ್ಕೆ ಉದಾಹರಣೆಗಳಾಗಿವೆ.
ಎಂದರೆ, ಹೇರಳವಾಗಿ ಅದ್ಭುತ ಕಾರ್ಯಗಳನ್ನು ತೋರಿಸುವ ಶಕ್ತಿ ಪ್ರವಾದಿಗಳಿಗಿಲ್ಲ. ಅಲ್ಲಾಹುಅವರ ಮೂಲಕ ಅದ್ಭುತ ಕಾರ್ಯಗಳನ್ನು ಪ್ರಕಟಿಸಲು ಇಚ್ಛಿಸುವಾಗ ಅವು ಸಂಭವಿಸುತ್ತವೆ.
ಪ್ರತಿಯೊಬ್ಬ ಪ್ರವಾದಿಗಳನ್ನು ನಾವು ಗೌರವಿಸಬೇಕು, ಅವರು ನಡೆದು ಬಂದ ದಾರಿಯನ್ನು ನಾವು ಹಿಂಬಾಲಿಸಬೇಕು. ಆದರೆ ಯಹೂದಿ ಮತ್ತು ಕ್ರೈಸ್ತರಂತೆ ಪ್ರವಾದಿಗಳನ್ನು ದಿವ್ಯತ್ವಕ್ಕೇರಿಸುವುದು, ಹಾಗೂ ಸತ್ಯ ವಿಶ್ವಾಸಿಗಳನ್ನು ಅಪಮಾನಿಸಿ ತೇಜೋವಧೆ ಮಾಡುವುದು ಸಲ್ಲದು.
ಪ್ರವಾದಿಗಳ ಪದವಿಗೆ ನ್ಯೂನತೆಗಳನ್ನು ಉಂಟು ಮಾಡದೆ ಮಾನುಷಿಕ ಕಾರ್ಯಗಳೆಲ್ಲವೂ ಅವರಿಂದ ಸಂಭವಿಸುವುದರಲ್ಲಿ ವಿರೋಧವಿಲ್ಲ.
ಕುರಾನ್ ಹೇಳುವುದನ್ನು ನೋಡಿ.
وَمَا أَرْسَلْنَا قَبْلَكَ مِنَ الْمُرْسَلِينَ إِلَّا إِنَّهُمْ لَيَأْكُلُونَ الطَّعَامَ وَيَمْشُونَ فِي الْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا
ಆಹಾರವನ್ನು ಸೇವಿಸುವವರಾಗಿ ಮತ್ತು ಪೇಟೆಗಳಲ್ಲಿ ನಡೆಯುವವರಾಗಿ ಹೊರತು ತಮಗಿಂತ ಮುಂಚೆ ನಾವು ಸಂದೇಶವಾಹಕರ ಪೈಕಿ ಯಾರನ್ನೂ ಕಳುಹಿಸಿಲ್ಲ. ನೀವು ತಾಳ್ಮೆ ವಹಿಸುವಿರೋ ಎಂದು ನೋಡುವುದಕ್ಕಾಗಿ ನಿಮ್ಮಲ್ಲಿ ಕೆಲವರನ್ನು ನಾವು ಇತರ ಕೆಲವರಿಗೆ ಒಂದು ಪರೀಕ್ಷೆಯನ್ನಾಗಿ ಮಾಡಿರುವೆವು.[690] ತಮ್ಮ ಪ್ರಭು (ಎಲ್ಲವನ್ನೂ) ವೀಕ್ಷಿಸುವವನಾಗಿರುವನು.
ಟಿಪ್ಪಣಿಗಳು :
[690] ಅಲ್ಲಾಹು ಕೆಲವರಿಗೆ ಆಧ್ಯಾತ್ಮಿಕ ಪದವಿಗಳನ್ನು ನೀಡುತ್ತಾನೆ. ಕೆಲವರಿಗೆ ಲೌಕಿಕ ಸ್ಥಾನಮಾನಗಳನ್ನೂ ಸಮೃದ್ಧಿಯನ್ನೂ ನೀಡುತ್ತಾನೆ. ಕೆಲವರಿಗೆ ಏನನ್ನೂ ನೀಡುವುದಿಲ್ಲ. ಇವೆಲ್ಲವನ್ನೂ ಅಲ್ಲಾಹು ತನ್ನ ಯುಕ್ತಿಗನುಗುಣವಾಗಿಯೇ ಮಾಡುತ್ತಿದ್ದಾನೆ. ಅದನ್ನು ಅರ್ಥಮಾಡಿಕೊಂಡು ಕೃತಜ್ಞತಾಪೂರ್ವಕವಾಗಿ ಪ್ರತಿಕ್ರಿಯಿಸಲು ಮತ್ತು ಸಂಕಷ್ಟಗಳನ್ನು ತಾಳ್ಮೆಯೊಂದಿಗೆ ಎದುರಿಸಲು ಯಾರಿಗೆ ಸಾಧ್ಯವಾಗುತ್ತದೆ ಎಂದು ಅವನು ಪರೀಕ್ಷಿಸುತ್ತಾನೆ. ಪ್ರವಾದಿಯನ್ನು ಕಳುಹಿಸಿ ಅವರ ಬಗ್ಗೆ ನಿಮ್ಮ ನಿಲುವನ್ನೂ ಪರೀಕ್ಷಿಸುತ್ತಾನೆ. ನಿಮ್ಮ ವಿರೋಧಕ್ಕೆ ಪ್ರವಾದಿಯ ಪ್ರತಿಕ್ರಿಯೆ ಹೇಗಿರುತ್ತದೆಂಬುದನ್ನೂ ಪರೀಕ್ಷಿಸುತ್ತಾನೆ.
[ಅಲ್-ಫುರ್ಕಾನ್ : 20]
وَلَقَدْ أَرْسَلْنَا رُسُلًا مِنْ قَبْلِكَ وَجَعَلْنَا لَهُمْ أَزْوَاجًا وَذُرِّيَّةً ۚ وَمَا كَانَ لِرَسُولٍ أَنْ يَأْتِيَ بِآيَةٍ إِلَّا بِإِذْنِ اللَّهِ ۗ لِكُلِّ أَجَلٍ كِتَابٌ
ತಮಗಿಂತ ಮುಂಚೆಯೂ ನಾವು ಸಂದೇಶ ವಾಹಕರನ್ನು ಕಳುಹಿಸಿರುವೆವು. ಅವರಿಗೆ ನಾವು ಪತ್ನಿಯರನ್ನೂ ಸಂತತಿಗಳನ್ನೂ ಮಾಡಿಕೊಟ್ಟಿರುವೆವು. ಅಲ್ಲಾಹುವಿನ ಅನುಮತಿಯ ವಿನಾ ಯಾವುದೇ ಒಂದು ದೃಷ್ಟಾಂತವನ್ನು ತರಲು ಯಾವುದೇ ಸಂದೇಶವಾಹಕನಿಗೂ ಸಾಧ್ಯವಾಗಲಾರದು. ಪ್ರತಿಯೊಂದು ಕಾಲಕ್ಕೂ ಒಂದು (ಆಧಾರಪ್ರಮಾಣ) ಗ್ರಂಥವಿರುವುದು.
[ಅರ್ರ'ಅದ್ : 38]
ಪ್ರಮಾಣಗಳು ಪ್ರವಾದಿ ﷺ ರನ್ನು ಮೇಲಿನಂತೆ ಪರಿಚಯಿಸುತ್ತದೆ ಎನ್ನುವುದು ವ್ಯಕ್ತವಿದೆ. ಆದರೆ ಇಂದು ಸಮುದಾಯವು ಪ್ರವಾದಿ ﷺ ರ ಕುರಿತು ಇಸ್ಲಾಂ ಕಲಿಸದ ಕೆಲವು ವಿಶ್ವಾಸಗಳನ್ನು ಇಟ್ಟುಕೊಂಡಿರುವುದನ್ನು ನಾವು ನೋಡಬಹುದು.
ಉದಾ :- ಪ್ರವಾದಿಯವರಿಗೆ ನೆರಳಿಲ್ಲ, ಪ್ರವಾದಿಯವರ ಮೂತ್ರ ಶುದ್ದಿಯಾಗಿದೆ, ಅವರು ಆಧ್ಯಾತ್ಮಿಕವಾಗಿ ಮಲಕ್ ಆಗಿದ್ದಾರೆ, ಮುಂತಾದ ವಿಶ್ವಾಸಗಳು! ಇಂತಹ ಹಲವು ವಿಶ್ವಾಸಗಳನ್ನು ಸಮಸ್ತದವರು ಅವರ ಮದ್ರಸಾಗಳಲ್ಲಿ ಕೂಡಾ ಕಲಿಸಿ ಕೊಡುತ್ತಿದ್ದಾರೆ! ಆದರೆ ಇವುಗಳಿಗೆ ಇಸ್ಲಾಂನ ಪ್ರಮಾಣಗಳಲ್ಲಿ ಯಾವುದೇ ಆಧಾರಗಳಿಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರವಾದಿ ﷺ ರಿಗೆ ಧಾರಾಳ ವೈಶಿಷ್ಟತೆ ಇದ್ದರೂ ಮನುಷ್ಯ ಪ್ರಕೃತಿಯಲ್ಲಿ ಅವರು (ಹಸಿವು, ಬಾಯಾರಿಕೆ, ನೋವು, ದುಃಖ, ಭಾವನೆ, ವಿಚಾರ, ಮುಂತಾದ ಕಾರ್ಯಗಳಲ್ಲಿ) ನಮ್ಮಂತೆ ಓರ್ವ ಮನುಷ್ಯರಾಗಿದ್ದರು. ಅದೇ ಸಮಯ ನುಬುವತ್ ನ ಎಲ್ಲಾ ವೈಶಿಷ್ಟತೆಗಳು ಪ್ರವಾದಿ ﷺ ರಲ್ಲಿ ಮೇಳೈಸಿತ್ತು. ಆದರೆ ಅವರು ಇಚ್ಛಿಸುವಾಗ ಅತಿಮಾನುಷ ದೃಷ್ಟಾಂತಗಳನ್ನು ಪ್ರಕಟಿಸಲು, ಹಾಗೂ ಅಗೋಚರ ಕಾರ್ಯಗಳನ್ನು ತಿಳಿಯಲು ಅವರಿಗೆ ಸಾಧ್ಯವಿರಲಿಲ್ಲವೆಂದು ನಾವು ತಿಳಿದುಕೊಂಡೆವು. ಇದು ಈ ವಿಷಯದಲ್ಲಿ ಇಸ್ಲಾಂನ ನೈಜ ದೃಷ್ಟಿಕೋನವಾಗಿದೆ.
ಸಲಫಿಗಗಳು ಇದಕ್ಕಿಂತ ಭಿನ್ನವಾದ ವಿಶ್ವಾಸವನ್ನು ಯಾವತ್ತೂ ಇರಿಸಿಕೊಂಡವರಲ್ಲ. ಸಲಫಿಗಳ ಮಟ್ಟಿಗೆ ಹೇಳುವುದಾದರೆ ಕುರಾನ್ ಮತ್ತು ಸ್ವಹೀಹ್ ಆದ ಹದೀಸ್'ಗಳಲ್ಲಿ ಪ್ರವಾದಿ ﷺ ಹಾಗೂ ಇತರ ಪ್ರವಾದಿಗಳ ಕುರಿತು ಯಾವ ವೈಶಿಷ್ಟತೆಗಳನ್ನು ವಿವರಿಸಲಾಗಿದೆಯೋ ಅದರಲ್ಲಿ ಯಾವುದನ್ನೂ ನಿಷೇಧಿಸದೆ ಪ್ರತಿಯೊಂದನ್ನು ಯಥಾಪ್ರಕಾರ ಅಂಗೀಕರಿಸಿ ಪ್ರಚುರಪಡಿಸುವುದಾಗಿದೆ.
No comments:
Post a Comment