ಮಕ್ಕಾ ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಇದ್ದ ತರ್ಕ.
ಮಕ್ಕಾ ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಇದ್ದ ತರ್ಕ ಅಲ್ಲಾಹನ ವಹದಾನಿಯತ್ (ಅಲ್ಲಾಹನ ಏಕತ್ವ) ವಿಷಯದಲ್ಲಾಗಿದೆ.
ಅಬ್ರಹತ್ ನ ಸೈನ್ಯವು ಕಅಬಾಲಯವನ್ನು ಒಡೆದು ಹಾಕಲು ಬರುವಾಗ ಕಅಬಾಲಯದ ಆಧಿಪತ್ಯವು ಮುಶ್ರಿಕ್ ಆದ ಅಬ್ದುಲ್ ಮುತ್ತಲಿಬ್ ನ ಕೈಯಲ್ಲಾಗಿತ್ತು. ಆ ಸಂಧರ್ಭದಲ್ಲಿ ಅಬ್ದುಲ್ ಮುತ್ತಲಿಬ್ ನ ಪ್ರಾರ್ಥನೆ ಈ ರೀತಿಯಾಗಿದೆ.
اللهم يا رب هاذ البيت
"ಈ ಮನೆಯ (ಕಅಬಾಲಯ) ಪರಿಪಾಲಕನಾದ ಓ ಅಲ್ಲಾಹನೇ" ಎಂದಾಗಿತ್ತು.
ಕಅಬಾಲಯವು ಅಲ್ಲಾಹನ ಭವನ ಇದನ್ನು ಅಲ್ಲಾಹನು ಸಂರಕ್ಷಿಸುತ್ತಾನೆ ಎಂದು ಮಕ್ಕಾ ಮುಶ್ರಿಕರಿಗೆ ಧೃಡ ವಿಶ್ವಾಸವಿತ್ತು. ಆದ್ದರಿಂದಲೇ ಅಬ್ದುಲ್ ಮುತ್ತಲಿಬ್ ಅಲ್ಲಾಹನನ್ನು ಕರೆದು ಪ್ರಾರ್ಥಿಸಿದ್ದು.
ಬದ್ರ್ ಯುದ್ಧದ ಸಂಧರ್ಭದಲ್ಲಿ ಅಬೂ ಜಹಲ್ ಕೂಡ ಯುದ್ಧಕ್ಕೆ ಹೊರಡುವ ಮುನ್ನ ಪವಿತ್ರ ಕ'ಅಬಾಲಯದ ಬಟ್ಟೆ ಹಿಡಿದು ಈ ಎರಡು ಗುಂಪುಗಳಲ್ಲಿ ಸತ್ಯ ಎಲ್ಲಿದೆಯೋ ಅಲ್ಲಿಗೇ ವಿಜಯ ಒಲಿದುಬರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರುವುದಾಗಿ ನಮಗೆ ಚರಿತ್ರೆಗಳಲ್ಲಿ ಕಾಣಬಹುದಾಗಿದೆ.
ಇನ್ನು ಮಕ್ಕಾ ಮುಶ್ರಿಕರ ವಿಶ್ವಾಸ ಮತ್ತು ನಾಮಧಾರಿ ಮುಸ್ಲಿಯಾರುಗಳ ವಿಶ್ವಾಸವನ್ನು ಪರಿಶೀಲಿಸೋಣ...
ಸ್ವಹೀಹ್ ಮುಸ್ಲಿಮ್ ನಲ್ಲಿರುವ ಒಂದು ಹದೀಸನ್ನು ಗಮನಿಸಿ. 🔽
كتاب الحج
باب التَّلْبِيَةِ وَصِفَتِهَا وَوَقْتِهَا
وَحَدَّثَنِي عَبَّاسُ بْنُ عَبْدِ الْعَظِيمِ الْعَنْبَرِيُّ، حَدَّثَنَا النَّضْرُ بْنُ مُحَمَّدٍ الْيَمَامِيُّ، حَدَّثَنَا عِكْرِمَةُ، - يَعْنِي ابْنَ عَمَّارٍ - حَدَّثَنَا أَبُو زُمَيْلٍ، عَنِ ابْنِ عَبَّاسٍ، - رضى الله عنهما - قَالَ كَانَ الْمُشْرِكُونَ يَقُولُونَ لَبَّيْكَ لاَ شَرِيكَ لَكَ - قَالَ - فَيَقُولُ رَسُولُ اللَّهِ صلى الله عليه وسلم " وَيْلَكُمْ قَدْ قَدْ " . فَيَقُولُونَ إِلاَّ شَرِيكًا هُوَ لَكَ تَمْلِكُهُ وَمَا مَلَكَ . يَقُولُونَ هَذَا وَهُمْ يَطُوفُونَ بِالْبَيْتِ .
Sahih Muslim 1185
ಮಕ್ಕಾ ಮುಶ್ರಿಕರು ಹಜ್ಜ್ ನಿರ್ವಹಿಸುವ ವೇಳೆ ಲಬ್ಬೈಕಲ್ಲಾಹುಮ್ಮ ಲಬ್ಬೈಕ್ ಎಂಬ ತಲ್ಬೀಯತ್ ಹೇಳುವ ಸಂಧರ್ಭದಲ್ಲಿ "ಲಬ್ಬೈಕ ಲಾ ಶರೀಕ ಲಕ" ಎಂಬಲ್ಲಿಗೆ ಮುಟ್ಟುವಾಗ ಪ್ರವಾದಿ ﷺ ರು ಮಕ್ಕಾ ಮುಶ್ರಿಕರನ್ನು "ನಿಲ್ಲಿಸಿ, ಸಾಕು ಸಾಕು ನಿಮಗೆ ನಾಶ" ಎಂದು ತಡೆಯುತ್ತಾರೆ. ಆದರೆ ಮಕ್ಕಾ ಮುಶ್ರಿಕರು ಅದನ್ನು ಲೆಕ್ಕಿಸದೆ ಅವರು ಶಿರ್ಕ್ ನ ಘೋಷಣೆಯನ್ನು ಮುಂದುವರಿಸುತ್ತಾರೆ. ಅದು ಈ ಕೆಳಗಿನ ರೀತಿಯಲ್ಲಾಗಿದೆ.
فَيَقُولُونَ إِلاَّ شَرِيكًا هُوَ لَكَ تَمْلِكُهُ وَمَا مَلَكَ
"ನಿನಗೆ (ಅಲ್ಲಾಹನಿಗೆ) ಕೆಲವು ಸಹಭಾಗಿಗಳಿದ್ದಾರೆ (ಆರಾಧ್ಯರು). ಅವರು ನೀನು (ಅಲ್ಲಾಹನು) ಕೊಟ್ಟಂತಹ ಸಾಮರ್ಥ್ಯ ದಿಂದಲ್ಲದೆ ಅವರಿಗೆ ಎನೂ ಮಾಡಲು ಸಾಧ್ಯವಿಲ್ಲ". ಇದಾಗಿದೆ ಮಕ್ಕಾ ಮುಶ್ರಿಕರ ವಿಶ್ವಾಸ.
ವಿಪರ್ಯಾಸವೇನೆಂದರೆ ಮುಸ್ಲಿಂ ನಾಮಧಾರಿ ಮುಸ್ಲಿಯಾರುಗಳು ಇದೇ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಮುಸ್ಲಿಯಾರುಗಳ ವಿಶ್ವಾಸ ಮರಣ ಹೊಂದಿದ ಔಲಿಯಾ, ಅಂಬಿಯಾ, ಶುಹದಾಗಳು ಅಲ್ಲಾಹನು ಕೊಟ್ಟಂತಹ ಸಾಮರ್ಥ್ಯದಿಂದ ಸಹಾಯವನ್ನು ಮಾಡುತ್ತಾರೆ ಎಂದಾಗಿದೆ. ಇದೇ ವಿಶ್ವಾಸವನ್ನು ಇಟ್ಟುಕೊಂಡ ಮಕ್ಕಾ ಮುಶ್ರಿಕರು ಇಸ್ಲಾಮಿನಿಂದ ಹೊರಗೂ ಮತ್ತು ಮುಸ್ಲಿಯಾರುಗಳು ಇಸ್ಲಾಮಿನ ಒಳಗೂ ಆಗುವುದಾದರೂ ಹೇಗೆ? ಎಂಬುವುದನ್ನು ಚಿಂತಿಸಬೇಕಾಗಿದೆ.
ಇಲ್ಲಿ ನಮಗೆ ತಿಳಿದು ಬರುವ ವ್ಯತ್ಯಾಸವೇನೆಂದರೆ ಸಮಸ್ತ ಮುಸ್ಲಿಯಾರುಗಳು ಅಲ್ಲಾಹನಿಗೆ ಸಹಭಾಗಿ ಇಲ್ಲ ಅಂತ ಹೇಳಿ ಮಹಾತ್ಮರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಮಕ್ಕಾ ಮುಶ್ರಿಕರು ಅಲ್ಲಾಹನಿಗೆ ಸಹಭಾಗಿ ಇದ್ದಾರೆ ಎಂದು ಹೇಳಿ ಮಹಾತ್ಮರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಎಂದರೆ ಮಕ್ಕಾ ಮುಶ್ರಿಕರ ವಿಶ್ವಾದಲ್ಲಿ ಸ್ಥಿರತೆ ಇದೆ. ಮುಸ್ಲಿಯಾರುಗಳ ವಿಶ್ವಾಸದಲ್ಲಿ ಸ್ಥಿರತೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ.
ಇನ್ನು ಮಕ್ಕಾ ಮುಶ್ರಿಕ್ ಗಳು ತಮ್ಮ ಕಷ್ಟಕಾಲದಲ್ಲಿ ಅಲ್ಲಾಹನೊಂದಿಗೆ ಮಾತ್ರ ಸಹಾಯ ಯಾಚಿಸಿದ್ದಾಗಿಯೂ ಆನಂತರ ಆ ಕಷ್ಟಗಳು ದೂರವಾಗಿ ಸುಖ ಬಂದಾಗ ತಮ್ಮ ಆರಾಧ್ಯರೆಡೆಗೆ ಮರಳಿದ್ದಾಗಿಯೂ ಕುರ್ ಆನ್ ಹೇಳುತ್ತೆ.
ಆದರೆ ಇಂದು ಈ ಮಕ್ಕಾ ಮುಶ್ರಿಕ್ ಗಳಿಗಿಂತಲೂ ಭೀಕರವಾದ ವಿಶ್ವಾಸವಿಟ್ಟು ನಮ್ಮ ನಡುವೆ ಮುಸ್ಲಿಮ್ ನಾಮಧಾರಿ ಮುಸ್ಲಿಯಾರುಗಳು ಬದುಕುತ್ತಿದ್ದಾರೆ. ನೀವೇ ಗಮನಿಸಿ ತಾಯಿಯು ತೊಟ್ಟಿಲು ತೂಗುವಾಗ "ಲಾಹಿಲಾಹ ಇಲ್ಲಲ್ಲಾಹು ಲಾಹಿಲಾಹ ಇಲ್ಲಲ್ಲಾ" ಎಂಬ ಹಾಡನ್ನು ಹಾಡುವುದಾದರೆ ಅದೇ ಮಗು ತೊಟ್ಟಿಲಿನಿಂದ ಕೆಳಗೆ ಬೀಳುವಾಗ ಕರೆಯುವುದು "ಯಾ ಬದರಿಂಙಳೇ, ಯಾ ಮುಹಿಯ್ಯದ್ಧಿ ಶೈಖೇ ಎಂದು. ಇದಾಗಿದೆ ಮುಸ್ಲಿಯಾರುಗಳು ತಮ್ಮ ಅನುಯಾಯಿಗಳಿಗೆ ಕಲಿಸಿ ಕೊಡುತ್ತಿರುವುದು. ಎಲ್ಲಿ ಹೋಯಿತು ವಿಶ್ವಾಸ...? ಇವರಾಗಿದ್ದಾರೆಯೇ "ಲಾಹಿಲಾಹ ಇಲ್ಲಲಾಹ್" ನಲ್ಲಿ ವಿಶ್ವಾಸವಿಡುವ ಮುಸಲ್ಮಾನರು...?
ಇಂತಹ ನಾಮಧಾರಿ ಪುರೋಹಿತರ ಕೆಡುಕಿನಿಂದ ನಮ್ಮನ್ನೂ ನಮ್ಮ ಕುಟುಂಬವನ್ನೂ ಅಲ್ಲಾಹನು ರಕ್ಷಿಸಲಿ.
✍🏼 Abu Muadh
ಮಕ್ಕಾ ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಇದ್ದ ತರ್ಕ ಅಲ್ಲಾಹನ ವಹದಾನಿಯತ್ (ಅಲ್ಲಾಹನ ಏಕತ್ವ) ವಿಷಯದಲ್ಲಾಗಿದೆ.
ಅಬ್ರಹತ್ ನ ಸೈನ್ಯವು ಕಅಬಾಲಯವನ್ನು ಒಡೆದು ಹಾಕಲು ಬರುವಾಗ ಕಅಬಾಲಯದ ಆಧಿಪತ್ಯವು ಮುಶ್ರಿಕ್ ಆದ ಅಬ್ದುಲ್ ಮುತ್ತಲಿಬ್ ನ ಕೈಯಲ್ಲಾಗಿತ್ತು. ಆ ಸಂಧರ್ಭದಲ್ಲಿ ಅಬ್ದುಲ್ ಮುತ್ತಲಿಬ್ ನ ಪ್ರಾರ್ಥನೆ ಈ ರೀತಿಯಾಗಿದೆ.
اللهم يا رب هاذ البيت
"ಈ ಮನೆಯ (ಕಅಬಾಲಯ) ಪರಿಪಾಲಕನಾದ ಓ ಅಲ್ಲಾಹನೇ" ಎಂದಾಗಿತ್ತು.
ಕಅಬಾಲಯವು ಅಲ್ಲಾಹನ ಭವನ ಇದನ್ನು ಅಲ್ಲಾಹನು ಸಂರಕ್ಷಿಸುತ್ತಾನೆ ಎಂದು ಮಕ್ಕಾ ಮುಶ್ರಿಕರಿಗೆ ಧೃಡ ವಿಶ್ವಾಸವಿತ್ತು. ಆದ್ದರಿಂದಲೇ ಅಬ್ದುಲ್ ಮುತ್ತಲಿಬ್ ಅಲ್ಲಾಹನನ್ನು ಕರೆದು ಪ್ರಾರ್ಥಿಸಿದ್ದು.
ಬದ್ರ್ ಯುದ್ಧದ ಸಂಧರ್ಭದಲ್ಲಿ ಅಬೂ ಜಹಲ್ ಕೂಡ ಯುದ್ಧಕ್ಕೆ ಹೊರಡುವ ಮುನ್ನ ಪವಿತ್ರ ಕ'ಅಬಾಲಯದ ಬಟ್ಟೆ ಹಿಡಿದು ಈ ಎರಡು ಗುಂಪುಗಳಲ್ಲಿ ಸತ್ಯ ಎಲ್ಲಿದೆಯೋ ಅಲ್ಲಿಗೇ ವಿಜಯ ಒಲಿದುಬರಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರುವುದಾಗಿ ನಮಗೆ ಚರಿತ್ರೆಗಳಲ್ಲಿ ಕಾಣಬಹುದಾಗಿದೆ.
ಇನ್ನು ಮಕ್ಕಾ ಮುಶ್ರಿಕರ ವಿಶ್ವಾಸ ಮತ್ತು ನಾಮಧಾರಿ ಮುಸ್ಲಿಯಾರುಗಳ ವಿಶ್ವಾಸವನ್ನು ಪರಿಶೀಲಿಸೋಣ...
ಸ್ವಹೀಹ್ ಮುಸ್ಲಿಮ್ ನಲ್ಲಿರುವ ಒಂದು ಹದೀಸನ್ನು ಗಮನಿಸಿ. 🔽
كتاب الحج
باب التَّلْبِيَةِ وَصِفَتِهَا وَوَقْتِهَا
وَحَدَّثَنِي عَبَّاسُ بْنُ عَبْدِ الْعَظِيمِ الْعَنْبَرِيُّ، حَدَّثَنَا النَّضْرُ بْنُ مُحَمَّدٍ الْيَمَامِيُّ، حَدَّثَنَا عِكْرِمَةُ، - يَعْنِي ابْنَ عَمَّارٍ - حَدَّثَنَا أَبُو زُمَيْلٍ، عَنِ ابْنِ عَبَّاسٍ، - رضى الله عنهما - قَالَ كَانَ الْمُشْرِكُونَ يَقُولُونَ لَبَّيْكَ لاَ شَرِيكَ لَكَ - قَالَ - فَيَقُولُ رَسُولُ اللَّهِ صلى الله عليه وسلم " وَيْلَكُمْ قَدْ قَدْ " . فَيَقُولُونَ إِلاَّ شَرِيكًا هُوَ لَكَ تَمْلِكُهُ وَمَا مَلَكَ . يَقُولُونَ هَذَا وَهُمْ يَطُوفُونَ بِالْبَيْتِ .
Sahih Muslim 1185
ಮಕ್ಕಾ ಮುಶ್ರಿಕರು ಹಜ್ಜ್ ನಿರ್ವಹಿಸುವ ವೇಳೆ ಲಬ್ಬೈಕಲ್ಲಾಹುಮ್ಮ ಲಬ್ಬೈಕ್ ಎಂಬ ತಲ್ಬೀಯತ್ ಹೇಳುವ ಸಂಧರ್ಭದಲ್ಲಿ "ಲಬ್ಬೈಕ ಲಾ ಶರೀಕ ಲಕ" ಎಂಬಲ್ಲಿಗೆ ಮುಟ್ಟುವಾಗ ಪ್ರವಾದಿ ﷺ ರು ಮಕ್ಕಾ ಮುಶ್ರಿಕರನ್ನು "ನಿಲ್ಲಿಸಿ, ಸಾಕು ಸಾಕು ನಿಮಗೆ ನಾಶ" ಎಂದು ತಡೆಯುತ್ತಾರೆ. ಆದರೆ ಮಕ್ಕಾ ಮುಶ್ರಿಕರು ಅದನ್ನು ಲೆಕ್ಕಿಸದೆ ಅವರು ಶಿರ್ಕ್ ನ ಘೋಷಣೆಯನ್ನು ಮುಂದುವರಿಸುತ್ತಾರೆ. ಅದು ಈ ಕೆಳಗಿನ ರೀತಿಯಲ್ಲಾಗಿದೆ.
فَيَقُولُونَ إِلاَّ شَرِيكًا هُوَ لَكَ تَمْلِكُهُ وَمَا مَلَكَ
"ನಿನಗೆ (ಅಲ್ಲಾಹನಿಗೆ) ಕೆಲವು ಸಹಭಾಗಿಗಳಿದ್ದಾರೆ (ಆರಾಧ್ಯರು). ಅವರು ನೀನು (ಅಲ್ಲಾಹನು) ಕೊಟ್ಟಂತಹ ಸಾಮರ್ಥ್ಯ ದಿಂದಲ್ಲದೆ ಅವರಿಗೆ ಎನೂ ಮಾಡಲು ಸಾಧ್ಯವಿಲ್ಲ". ಇದಾಗಿದೆ ಮಕ್ಕಾ ಮುಶ್ರಿಕರ ವಿಶ್ವಾಸ.
ವಿಪರ್ಯಾಸವೇನೆಂದರೆ ಮುಸ್ಲಿಂ ನಾಮಧಾರಿ ಮುಸ್ಲಿಯಾರುಗಳು ಇದೇ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಮುಸ್ಲಿಯಾರುಗಳ ವಿಶ್ವಾಸ ಮರಣ ಹೊಂದಿದ ಔಲಿಯಾ, ಅಂಬಿಯಾ, ಶುಹದಾಗಳು ಅಲ್ಲಾಹನು ಕೊಟ್ಟಂತಹ ಸಾಮರ್ಥ್ಯದಿಂದ ಸಹಾಯವನ್ನು ಮಾಡುತ್ತಾರೆ ಎಂದಾಗಿದೆ. ಇದೇ ವಿಶ್ವಾಸವನ್ನು ಇಟ್ಟುಕೊಂಡ ಮಕ್ಕಾ ಮುಶ್ರಿಕರು ಇಸ್ಲಾಮಿನಿಂದ ಹೊರಗೂ ಮತ್ತು ಮುಸ್ಲಿಯಾರುಗಳು ಇಸ್ಲಾಮಿನ ಒಳಗೂ ಆಗುವುದಾದರೂ ಹೇಗೆ? ಎಂಬುವುದನ್ನು ಚಿಂತಿಸಬೇಕಾಗಿದೆ.
ಇಲ್ಲಿ ನಮಗೆ ತಿಳಿದು ಬರುವ ವ್ಯತ್ಯಾಸವೇನೆಂದರೆ ಸಮಸ್ತ ಮುಸ್ಲಿಯಾರುಗಳು ಅಲ್ಲಾಹನಿಗೆ ಸಹಭಾಗಿ ಇಲ್ಲ ಅಂತ ಹೇಳಿ ಮಹಾತ್ಮರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಮಕ್ಕಾ ಮುಶ್ರಿಕರು ಅಲ್ಲಾಹನಿಗೆ ಸಹಭಾಗಿ ಇದ್ದಾರೆ ಎಂದು ಹೇಳಿ ಮಹಾತ್ಮರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಎಂದರೆ ಮಕ್ಕಾ ಮುಶ್ರಿಕರ ವಿಶ್ವಾದಲ್ಲಿ ಸ್ಥಿರತೆ ಇದೆ. ಮುಸ್ಲಿಯಾರುಗಳ ವಿಶ್ವಾಸದಲ್ಲಿ ಸ್ಥಿರತೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ.
ಇನ್ನು ಮಕ್ಕಾ ಮುಶ್ರಿಕ್ ಗಳು ತಮ್ಮ ಕಷ್ಟಕಾಲದಲ್ಲಿ ಅಲ್ಲಾಹನೊಂದಿಗೆ ಮಾತ್ರ ಸಹಾಯ ಯಾಚಿಸಿದ್ದಾಗಿಯೂ ಆನಂತರ ಆ ಕಷ್ಟಗಳು ದೂರವಾಗಿ ಸುಖ ಬಂದಾಗ ತಮ್ಮ ಆರಾಧ್ಯರೆಡೆಗೆ ಮರಳಿದ್ದಾಗಿಯೂ ಕುರ್ ಆನ್ ಹೇಳುತ್ತೆ.
ಆದರೆ ಇಂದು ಈ ಮಕ್ಕಾ ಮುಶ್ರಿಕ್ ಗಳಿಗಿಂತಲೂ ಭೀಕರವಾದ ವಿಶ್ವಾಸವಿಟ್ಟು ನಮ್ಮ ನಡುವೆ ಮುಸ್ಲಿಮ್ ನಾಮಧಾರಿ ಮುಸ್ಲಿಯಾರುಗಳು ಬದುಕುತ್ತಿದ್ದಾರೆ. ನೀವೇ ಗಮನಿಸಿ ತಾಯಿಯು ತೊಟ್ಟಿಲು ತೂಗುವಾಗ "ಲಾಹಿಲಾಹ ಇಲ್ಲಲ್ಲಾಹು ಲಾಹಿಲಾಹ ಇಲ್ಲಲ್ಲಾ" ಎಂಬ ಹಾಡನ್ನು ಹಾಡುವುದಾದರೆ ಅದೇ ಮಗು ತೊಟ್ಟಿಲಿನಿಂದ ಕೆಳಗೆ ಬೀಳುವಾಗ ಕರೆಯುವುದು "ಯಾ ಬದರಿಂಙಳೇ, ಯಾ ಮುಹಿಯ್ಯದ್ಧಿ ಶೈಖೇ ಎಂದು. ಇದಾಗಿದೆ ಮುಸ್ಲಿಯಾರುಗಳು ತಮ್ಮ ಅನುಯಾಯಿಗಳಿಗೆ ಕಲಿಸಿ ಕೊಡುತ್ತಿರುವುದು. ಎಲ್ಲಿ ಹೋಯಿತು ವಿಶ್ವಾಸ...? ಇವರಾಗಿದ್ದಾರೆಯೇ "ಲಾಹಿಲಾಹ ಇಲ್ಲಲಾಹ್" ನಲ್ಲಿ ವಿಶ್ವಾಸವಿಡುವ ಮುಸಲ್ಮಾನರು...?
ಇಂತಹ ನಾಮಧಾರಿ ಪುರೋಹಿತರ ಕೆಡುಕಿನಿಂದ ನಮ್ಮನ್ನೂ ನಮ್ಮ ಕುಟುಂಬವನ್ನೂ ಅಲ್ಲಾಹನು ರಕ್ಷಿಸಲಿ.
✍🏼 Abu Muadh
No comments:
Post a Comment